<p><strong>ರಾಯ್ಪುರ (ಪಿಟಿಐ): </strong>ನಕ್ಸಲೀಯರಿಂದ ಶನಿವಾರ ಅಪಹರಣಕ್ಕೆ ಒಳಗಾಗಿರುವ ಛತ್ತೀಸ್ಗಡದ ಸುಕ್ಮಾ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವುಗಳು ಲಭ್ಯವಾಗಿವೆ ಎಂದು ಭಾನುವಾರ ಪೊಲೀಸರು ಹೇಳಿದ್ದಾರೆ.<br /> <br /> ಮೆನನ್ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಮಗೆ ಮಹತ್ವದ ಸುಳಿವುಗಳು ದೊರೆತಿವೆ ಎಂದು ಹೇಳಿರುವ ಹೆಚ್ಚುವರಿ ಪೊಲೀಸ್ ನಿರ್ದೇಶಕ (ನಕ್ಸಲ್ ನಿಗ್ರಹ ಕಾರ್ಯಾಚರಣೆ) ರಾಮ್ ನಿವಾಸ್ ಅವರು ಭದ್ರತಾ ವೈಫಲ್ಯದಿಂದ ಅಪಹರಣ ನಡೆದಿರುವ ವರದಿಯನ್ನು ತಳ್ಳಿಹಾಕಿದ್ದಾರೆ.<br /> <br /> ಮಜಿಪುರ ಗ್ರಾಮದಲ್ಲಿ ಮೆನನ್ ಅವರು ಹಮ್ಮಿಕೊಂಡಿದ್ದ `ಗ್ರಾಮ್ ಸೂರಜ್~ ಕಾರ್ಯಕ್ರಮಕ್ಕೆ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ರಾಮ್ ನಿವಾಸ್ ಹೇಳಿದರು.<br /> <br /> 2006ರ ತಂಡದ ಐಎಎಸ್ ಅಧಿಕಾರಿ ಮೆನನ್, ಶನಿವಾರ ಮಜಿಪುರ ಗ್ರಾಮದಲ್ಲಿ `ಗ್ರಾಮ್ ಸೂರಜ್~ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ಅಲ್ಲಿಗೆ ಮೋಟಾರ್ಬೈಕ್ಗಳಲ್ಲಿ ಬಂದ ಸುಮಾರು 20 ನಕ್ಸಲೀಯರು ಮೊದಲು ಜಿಲ್ಲಾಧಿಕಾರಿಯ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಗುಂಡಿಟ್ಟು ಹತ್ಯೆ ಮಾಡಿ, ನಂತರದಲ್ಲಿ ಮೆನನ್ ಅವರನ್ನು ಅಪಹರಿಸಿದ್ದಾರೆ.<br /> <br /> <strong>ಬಿಡುಗಡೆಗಾಗಿ ಪತ್ನಿ ಮನವಿ: </strong>ಅಪಹರಣದ ಸುದ್ಧಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಅಲೆಕ್ಸ್ ಅವರ ಪತ್ನಿ ಆಶಾ ಅವರು ನನ್ನ ಪತಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಔಷಧೋಪಚಾರದ ಅಗತ್ಯವಿದೆ ಆದ್ದರಿಂದ ಅವರನ್ನು ಮಾನವಿಯತೆಯ ದೃಷ್ಟಿಯಿಂದ ಬಿಡುಗಡೆಗೊಳಿಸುವಂತೆ ನಕ್ಸಲೀಯರಿಗೆ ಮನವಿ ಮಾಡಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯ್ಪುರ (ಪಿಟಿಐ): </strong>ನಕ್ಸಲೀಯರಿಂದ ಶನಿವಾರ ಅಪಹರಣಕ್ಕೆ ಒಳಗಾಗಿರುವ ಛತ್ತೀಸ್ಗಡದ ಸುಕ್ಮಾ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವುಗಳು ಲಭ್ಯವಾಗಿವೆ ಎಂದು ಭಾನುವಾರ ಪೊಲೀಸರು ಹೇಳಿದ್ದಾರೆ.<br /> <br /> ಮೆನನ್ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಮಗೆ ಮಹತ್ವದ ಸುಳಿವುಗಳು ದೊರೆತಿವೆ ಎಂದು ಹೇಳಿರುವ ಹೆಚ್ಚುವರಿ ಪೊಲೀಸ್ ನಿರ್ದೇಶಕ (ನಕ್ಸಲ್ ನಿಗ್ರಹ ಕಾರ್ಯಾಚರಣೆ) ರಾಮ್ ನಿವಾಸ್ ಅವರು ಭದ್ರತಾ ವೈಫಲ್ಯದಿಂದ ಅಪಹರಣ ನಡೆದಿರುವ ವರದಿಯನ್ನು ತಳ್ಳಿಹಾಕಿದ್ದಾರೆ.<br /> <br /> ಮಜಿಪುರ ಗ್ರಾಮದಲ್ಲಿ ಮೆನನ್ ಅವರು ಹಮ್ಮಿಕೊಂಡಿದ್ದ `ಗ್ರಾಮ್ ಸೂರಜ್~ ಕಾರ್ಯಕ್ರಮಕ್ಕೆ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ರಾಮ್ ನಿವಾಸ್ ಹೇಳಿದರು.<br /> <br /> 2006ರ ತಂಡದ ಐಎಎಸ್ ಅಧಿಕಾರಿ ಮೆನನ್, ಶನಿವಾರ ಮಜಿಪುರ ಗ್ರಾಮದಲ್ಲಿ `ಗ್ರಾಮ್ ಸೂರಜ್~ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ಅಲ್ಲಿಗೆ ಮೋಟಾರ್ಬೈಕ್ಗಳಲ್ಲಿ ಬಂದ ಸುಮಾರು 20 ನಕ್ಸಲೀಯರು ಮೊದಲು ಜಿಲ್ಲಾಧಿಕಾರಿಯ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಗುಂಡಿಟ್ಟು ಹತ್ಯೆ ಮಾಡಿ, ನಂತರದಲ್ಲಿ ಮೆನನ್ ಅವರನ್ನು ಅಪಹರಿಸಿದ್ದಾರೆ.<br /> <br /> <strong>ಬಿಡುಗಡೆಗಾಗಿ ಪತ್ನಿ ಮನವಿ: </strong>ಅಪಹರಣದ ಸುದ್ಧಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಅಲೆಕ್ಸ್ ಅವರ ಪತ್ನಿ ಆಶಾ ಅವರು ನನ್ನ ಪತಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಔಷಧೋಪಚಾರದ ಅಗತ್ಯವಿದೆ ಆದ್ದರಿಂದ ಅವರನ್ನು ಮಾನವಿಯತೆಯ ದೃಷ್ಟಿಯಿಂದ ಬಿಡುಗಡೆಗೊಳಿಸುವಂತೆ ನಕ್ಸಲೀಯರಿಗೆ ಮನವಿ ಮಾಡಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>