<p><strong>ಚಿಕ್ಕಮಗಳೂರು: </strong>ರಾಜ್ಯ ರಾಜಕಾರಣ ಮತ್ತು ಮುಂದಿನ ಚುನಾವಣೆಗಳಿಗೆ ದಿಕ್ಸೂಚಿ ಎಂದೇ ಪರಿಗಣಿಸಲ್ಪಟ್ಟಿದ್ದ ಉಡುಪಿ- ಚಿಕ್ಕಮಗಳೂರು ಲೋಕ ಸಭಾ ಉಪ ಚುನಾವಣೆಗೆ ಭಾನುವಾರ ನಡೆದ ಮತದಾನಕ್ಕೆ ಜಿಲ್ಲೆಯ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ಅಷ್ಟೇನು ಉತ್ಸಾಹ ತೋರಿಸಿದ್ದು ಕಂಡುಬರಲಿಲ್ಲ.<br /> <br /> ಕೆಲವು ಹಳ್ಳಿಗಳಲ್ಲಿ ಮತದಾನ ಬಹಿಷ್ಕರಿಸಿ ಸರ್ಕಾರ, ರಾಜಕೀಯ ಪಕ್ಷಗಳ ವಿರುದ್ಧ ಆಕ್ರೋಶ ತೀರಿಸಿಕೊಂಡ ಪ್ರಸಂಗಕ್ಕೂ ಉಪ ಚುನಾವಣೆ ಸಾಕ್ಷಿಯಾಯಿತು.ಚಿಕ್ಕಮಗಳೂರು, ಮೂಡಿಗೆರೆ, ತರೀಕೆರೆ ಹಾಗೂ ಶೃಂಗೇರಿ ಕ್ಷೇತ್ರಗಳಲ್ಲಿ ಮಧ್ಯಾಹ್ನ ಕಳೆದರೂ ಶೇ. 30ರಷ್ಟು ಮತದಾನ ನಡೆದಿರಲಿಲ್ಲ. <br /> <br /> ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯ ಆಲದಗುಡ್ಡೆ, ವಸ್ತಾರೆ, ವಳಗೇರಹಳ್ಳಿ, ನೆರಡಿ, ಅಚ್ಚಡಮನೆ, ಮಾಕೋನಹಳ್ಳಿ ಯಲ್ಲಿ ಮತದಾರರು ನಿರೀಕ್ಷಿತ ಸಂಖ್ಯೆ ಯಲ್ಲಿ ಮಧ್ಯಾಹ್ನ ಕಳೆದರೂ ಮುಖ ಹಾಕಿರಲಿಲ್ಲ. ಈ ಗ್ರಾಮಗಳಲ್ಲಿ ಸಂಜೆ ವೇಳೆಗೆ ಚುರುಕಿನ ಮತದಾನ ನಡೆಯಿತು. <br /> <br /> ಮತದಾರರು ಮನೆ ಬಿಟ್ಟು ಹೊರ ಬರಲು ಬಿಸಿಲಿನ ಝಳ ಹಿಂಜರಿಸಿದರೆ, ಬಹಳಷ್ಟು ಯುವಕರನ್ನು ಭಾರತ- ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಟಿ.ವಿ ಮುಂದೆ ಕಟ್ಟಿಹಾಕಿತ್ತು. <br /> ಮಧ್ಯಾಹ್ನ 12ಗಂಟೆವರೆಗೆ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು ಶೇ.21.35ರಷ್ಟು ಮತದಾನ ನಡೆದಿತ್ತು. ಮಧ್ಯಾಹ್ನದವರೆಗೆ ಅಷ್ಟೇನೂ ಬಿರುಸಿನ ಮತದಾನ ನಡೆದಿದ್ದು ಕಂಡುಬರಲಿಲ್ಲ.<br /> <br /> ಹುಕ್ಕುಂದದಲ್ಲಿ ನಿಧಾನಗತಿಯಲ್ಲಿ ಮತದಾನ ನಡೆದರೆ, ಜೋಳದಾಳ್ಗ್ರಾಮದಲ್ಲಿ ನಾಲ್ಕೈದು ಮಂದಿ ಮಾತ್ರ ಸರದಿ ಸಾಲಿನಲ್ಲಿ ನಿಂತಿದ್ದರು. ಆಣೂ ರಿನಲ್ಲಿ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಶೇ.36ರಷ್ಟು ಮತದಾನ ನಡೆದರೆ, ಆಲ್ದೂರಿನಲ್ಲಿ 1219 ಮತಗಳಿಗೆ 291ಮಂದಿ ಮಾತ್ರ ಮತ ಚಲಾಯಿಸಿದ್ದರು.<br /> <br /> ಚಿತ್ತುವಳ್ಳಿಯಲ್ಲಿ 503ಮತಗಳಿಗೆ 234 ಮತಗಳು 12 ಗಂಟೆ ಹೊತ್ತಿಗೆ ಚಲಾವಣೆಯಾಗಿದ್ದವು. ಚುನಾವಣೆ ಬಹಿಷ್ಕರಿಸಿ ಮತ್ತೆ ಹಿಂದಕ್ಕೆ ಪಡೆದಿದ್ದ ಕೂದುವಳ್ಳಿ ಗ್ರಾಮದಲ್ಲಿ ಶೇ.25ರಷ್ಟು ಮತದಾನವಾಗಿತ್ತು.<br /> ಮಧ್ಯಾಹ್ನದ ಹೊತ್ತಿಗೆ ಮಳಲೂರು ಗ್ರಾಮದಲ್ಲಿ ಶೇ.40ರಷ್ಟು ಮತದಾನ ವಾಗಿದ್ದರೆ, ಅಂಬಳೆ ಗ್ರಾಮದಲ್ಲಿ ಮತ ದಾರರು ಸರದಿಯಲ್ಲಿ ನಿಂತು ಮತಚಲಾಯಿಸುತ್ತಿದ್ದುದು ಕಂಡು ಬಂತು. 80 ವರ್ಷದ ರಂಗಮ್ಮ ಭಾವಚಿತ್ರ ಇರುವ ಮತದಾನ ಗುರುತಿನ ಚೀಟಿ ಹಿಡಿದು ಮತ ಚಲಾಯಿಸಲು ಉತ್ಸಾ ಹದಲ್ಲಿ ನಿಂತಿದ್ದರು.<br /> <br /> ಚಿಕ್ಕಮಗಳೂರು ನಗರದಲ್ಲಿ ಬೆಳಿಗ್ಗೆ ಬಸವನಹಳ್ಳಿ ಮತ್ತು ಮಾರ್ಕೆಟ್ ರಸ್ತೆಗಳಲ್ಲಿ ಸ್ವಲ್ಪ ಬಿರುಸಿನ ಮತದಾನ ನಡೆಯಿತು. ನಗರದ ಹೃದಯ ಭಾಗ ದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸ್ಥಾಪಿಸಿದ್ದ ಎರಡು ಮತಗಟ್ಟೆಗಳಲ್ಲಿ ಮಧ್ಯಾಹ್ನ 3 ಗಂಟೆವರೆಗೂ ಶೇ.30 ರಷ್ಟು ಮತದಾನ ಮಾತ್ರ ನಡೆದಿತ್ತು. ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಮತದಾರಲ್ಲಿ ಅಷ್ಟಾಗಿ ಉತ್ಸಾಹ ಕಂಡುಬರಲಿಲ್ಲ. <br /> <br /> ಗೋ ಪೂಜೆ ನಂತರ ಮತದಾನ: ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ತಮ್ಮ ಪತ್ನಿ ಅಚಲ ಅವರೊಂದಿಗೆ ಮತದಾನಕ್ಕೂ ಮೊದಲು ಗೋ ಪೂಜೆ ಮಾಡಿದರು.<br /> ನಂತರ ದಂಪತಿ ಸಮೇತ ನಗರದ ಹೊಸಮನೆ ಬಡಾವಣೆಯ ವಿಶ್ವವಿದ್ಯಾಲಯ ಶಾಲೆ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. <br /> <br /> ಶಾಸಕ ಸಿ.ಟಿ.ರವಿ ತಮ್ಮ ಪತ್ನಿ ಪಲ್ಲವಿ ಅವರೊಂದಿಗೆ ನಗರದ ವಿಜಯಪುರ ಬಡಾವಣೆಯ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ರಾಜ್ಯ ರಾಜಕಾರಣ ಮತ್ತು ಮುಂದಿನ ಚುನಾವಣೆಗಳಿಗೆ ದಿಕ್ಸೂಚಿ ಎಂದೇ ಪರಿಗಣಿಸಲ್ಪಟ್ಟಿದ್ದ ಉಡುಪಿ- ಚಿಕ್ಕಮಗಳೂರು ಲೋಕ ಸಭಾ ಉಪ ಚುನಾವಣೆಗೆ ಭಾನುವಾರ ನಡೆದ ಮತದಾನಕ್ಕೆ ಜಿಲ್ಲೆಯ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ಅಷ್ಟೇನು ಉತ್ಸಾಹ ತೋರಿಸಿದ್ದು ಕಂಡುಬರಲಿಲ್ಲ.<br /> <br /> ಕೆಲವು ಹಳ್ಳಿಗಳಲ್ಲಿ ಮತದಾನ ಬಹಿಷ್ಕರಿಸಿ ಸರ್ಕಾರ, ರಾಜಕೀಯ ಪಕ್ಷಗಳ ವಿರುದ್ಧ ಆಕ್ರೋಶ ತೀರಿಸಿಕೊಂಡ ಪ್ರಸಂಗಕ್ಕೂ ಉಪ ಚುನಾವಣೆ ಸಾಕ್ಷಿಯಾಯಿತು.ಚಿಕ್ಕಮಗಳೂರು, ಮೂಡಿಗೆರೆ, ತರೀಕೆರೆ ಹಾಗೂ ಶೃಂಗೇರಿ ಕ್ಷೇತ್ರಗಳಲ್ಲಿ ಮಧ್ಯಾಹ್ನ ಕಳೆದರೂ ಶೇ. 30ರಷ್ಟು ಮತದಾನ ನಡೆದಿರಲಿಲ್ಲ. <br /> <br /> ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯ ಆಲದಗುಡ್ಡೆ, ವಸ್ತಾರೆ, ವಳಗೇರಹಳ್ಳಿ, ನೆರಡಿ, ಅಚ್ಚಡಮನೆ, ಮಾಕೋನಹಳ್ಳಿ ಯಲ್ಲಿ ಮತದಾರರು ನಿರೀಕ್ಷಿತ ಸಂಖ್ಯೆ ಯಲ್ಲಿ ಮಧ್ಯಾಹ್ನ ಕಳೆದರೂ ಮುಖ ಹಾಕಿರಲಿಲ್ಲ. ಈ ಗ್ರಾಮಗಳಲ್ಲಿ ಸಂಜೆ ವೇಳೆಗೆ ಚುರುಕಿನ ಮತದಾನ ನಡೆಯಿತು. <br /> <br /> ಮತದಾರರು ಮನೆ ಬಿಟ್ಟು ಹೊರ ಬರಲು ಬಿಸಿಲಿನ ಝಳ ಹಿಂಜರಿಸಿದರೆ, ಬಹಳಷ್ಟು ಯುವಕರನ್ನು ಭಾರತ- ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಟಿ.ವಿ ಮುಂದೆ ಕಟ್ಟಿಹಾಕಿತ್ತು. <br /> ಮಧ್ಯಾಹ್ನ 12ಗಂಟೆವರೆಗೆ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು ಶೇ.21.35ರಷ್ಟು ಮತದಾನ ನಡೆದಿತ್ತು. ಮಧ್ಯಾಹ್ನದವರೆಗೆ ಅಷ್ಟೇನೂ ಬಿರುಸಿನ ಮತದಾನ ನಡೆದಿದ್ದು ಕಂಡುಬರಲಿಲ್ಲ.<br /> <br /> ಹುಕ್ಕುಂದದಲ್ಲಿ ನಿಧಾನಗತಿಯಲ್ಲಿ ಮತದಾನ ನಡೆದರೆ, ಜೋಳದಾಳ್ಗ್ರಾಮದಲ್ಲಿ ನಾಲ್ಕೈದು ಮಂದಿ ಮಾತ್ರ ಸರದಿ ಸಾಲಿನಲ್ಲಿ ನಿಂತಿದ್ದರು. ಆಣೂ ರಿನಲ್ಲಿ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಶೇ.36ರಷ್ಟು ಮತದಾನ ನಡೆದರೆ, ಆಲ್ದೂರಿನಲ್ಲಿ 1219 ಮತಗಳಿಗೆ 291ಮಂದಿ ಮಾತ್ರ ಮತ ಚಲಾಯಿಸಿದ್ದರು.<br /> <br /> ಚಿತ್ತುವಳ್ಳಿಯಲ್ಲಿ 503ಮತಗಳಿಗೆ 234 ಮತಗಳು 12 ಗಂಟೆ ಹೊತ್ತಿಗೆ ಚಲಾವಣೆಯಾಗಿದ್ದವು. ಚುನಾವಣೆ ಬಹಿಷ್ಕರಿಸಿ ಮತ್ತೆ ಹಿಂದಕ್ಕೆ ಪಡೆದಿದ್ದ ಕೂದುವಳ್ಳಿ ಗ್ರಾಮದಲ್ಲಿ ಶೇ.25ರಷ್ಟು ಮತದಾನವಾಗಿತ್ತು.<br /> ಮಧ್ಯಾಹ್ನದ ಹೊತ್ತಿಗೆ ಮಳಲೂರು ಗ್ರಾಮದಲ್ಲಿ ಶೇ.40ರಷ್ಟು ಮತದಾನ ವಾಗಿದ್ದರೆ, ಅಂಬಳೆ ಗ್ರಾಮದಲ್ಲಿ ಮತ ದಾರರು ಸರದಿಯಲ್ಲಿ ನಿಂತು ಮತಚಲಾಯಿಸುತ್ತಿದ್ದುದು ಕಂಡು ಬಂತು. 80 ವರ್ಷದ ರಂಗಮ್ಮ ಭಾವಚಿತ್ರ ಇರುವ ಮತದಾನ ಗುರುತಿನ ಚೀಟಿ ಹಿಡಿದು ಮತ ಚಲಾಯಿಸಲು ಉತ್ಸಾ ಹದಲ್ಲಿ ನಿಂತಿದ್ದರು.<br /> <br /> ಚಿಕ್ಕಮಗಳೂರು ನಗರದಲ್ಲಿ ಬೆಳಿಗ್ಗೆ ಬಸವನಹಳ್ಳಿ ಮತ್ತು ಮಾರ್ಕೆಟ್ ರಸ್ತೆಗಳಲ್ಲಿ ಸ್ವಲ್ಪ ಬಿರುಸಿನ ಮತದಾನ ನಡೆಯಿತು. ನಗರದ ಹೃದಯ ಭಾಗ ದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸ್ಥಾಪಿಸಿದ್ದ ಎರಡು ಮತಗಟ್ಟೆಗಳಲ್ಲಿ ಮಧ್ಯಾಹ್ನ 3 ಗಂಟೆವರೆಗೂ ಶೇ.30 ರಷ್ಟು ಮತದಾನ ಮಾತ್ರ ನಡೆದಿತ್ತು. ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಮತದಾರಲ್ಲಿ ಅಷ್ಟಾಗಿ ಉತ್ಸಾಹ ಕಂಡುಬರಲಿಲ್ಲ. <br /> <br /> ಗೋ ಪೂಜೆ ನಂತರ ಮತದಾನ: ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ತಮ್ಮ ಪತ್ನಿ ಅಚಲ ಅವರೊಂದಿಗೆ ಮತದಾನಕ್ಕೂ ಮೊದಲು ಗೋ ಪೂಜೆ ಮಾಡಿದರು.<br /> ನಂತರ ದಂಪತಿ ಸಮೇತ ನಗರದ ಹೊಸಮನೆ ಬಡಾವಣೆಯ ವಿಶ್ವವಿದ್ಯಾಲಯ ಶಾಲೆ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. <br /> <br /> ಶಾಸಕ ಸಿ.ಟಿ.ರವಿ ತಮ್ಮ ಪತ್ನಿ ಪಲ್ಲವಿ ಅವರೊಂದಿಗೆ ನಗರದ ವಿಜಯಪುರ ಬಡಾವಣೆಯ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>