<p>ನೀನಾಸಂ ತಿರುಗಾಟ ತಂಡ ಇತ್ತೀಚೆಗೆ ಡಾ.ಎಚ್ಚೆನ್ ಕಲಾ ಕ್ಷೇತ್ರದಲ್ಲಿ ಬೆಂಗಳೂರು ಲಲಿತ ಕಲಾ ಪರಿಷತ್ ಸಹಯೋಗದಲ್ಲಿ `ಕಂತು~ ಮತ್ತು `ನಮ್ಮಳಗಿನ ಬಶೀರ್~ ನಾಟಕಗಳನ್ನು ಮನೋಜ್ಞವಾಗಿ ಪ್ರದರ್ಶಿಸಿತು.<br /> <br /> ಸಾಹಿತಿ ವಿವೇಕ ಶಾನಭಾಗ ಅವರ ನೀಳ್ಗತೆ ಆಧರಿಸಿ ರೂಪಿಸಿದ ರಂಗಪ್ರಯೋಗ ಇದಾಗಿತ್ತು. ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಒಂದು ಪುಟ್ಟಹಳ್ಳಿ ಮಾವಿನೂರು. ಅಲ್ಲಿ ತುಂಬಿ ಹರಿಯುವ ನದಿಗೆ ಅಣೆಕಟ್ಟೆ ಕಟ್ಟಲಾಗುವುದೆಂಬ ಸುದ್ದಿ ಊರನ್ನು ಮುಳುಗಡೆ ಭೀತಿಗೆ ತಳ್ಳುತ್ತದೆ. <br /> <br /> ಇದೇ ಸಮಯಕ್ಕೆ ಸಂಭವಿಸುವ ಸೂರ್ಯಗ್ರಹಣದ ಕರಿ ನೆರಳು ಸಹ ಗ್ರಾಮಸ್ಥರನ್ನು ಆವರಿಸಿಕೊಳ್ಳುತ್ತದೆ. ಈ ಎರಡೂ ಘಟನೆಗಳ ಮೂಲಕ ಸಾಂಪ್ರದಾಯಿಕ ಹಾಗೂ ಆಧುನಿಕ ಮನೋಭಾವಗಳ ಸಂಘರ್ಷವನ್ನು ಬಿಂಬಿಸುವ ಪ್ರಯತ್ನ ಈ ನಾಟಕದಲ್ಲಿ ನಡೆದಿದೆ. ನೀಳ್ಗತೆಯನ್ನು ನಾಟಕವಾಗಿಸುವಲ್ಲಿ ನಿರ್ದೇಶಕ ಚನ್ನಕೇಶವ ಅವರ ಪ್ರಯತ್ನ ಅಭಿನಂದನಾರ್ಹ. <br /> <br /> ಮಲೆಯಾಳಂನ ಕಥೆಗಾರ ವೈಕಂ ಮಹಮದ್ ಬಶೀರ್ ಅವರ ಕಥೆ ಆಧರಿಸಿದ ಮತ್ತೊಂದು ನಾಟಕ `ನಮ್ಮಳಗಿನ ಬಶೀರ್~ ವಿನೂತನವಾಗಿ ಮೂಡಿಬಂದಿತು. ಅವರದೇ `ಅಮ್ಮ~, `ಟೈಗರ್ ಮತ್ತು ಗೋಡೆಗಳು~, `ವಿಶ್ವವಿಖ್ಯಾತವಾದ ಮೂಗು~, `ಪೂವನ್ ಫಳಮ್~, `ಸಂಧ್ಯಾಪ್ರಣಮಮ್~ ಕಥೆಗಳು ಇಲ್ಲಿ ನಾಟಕವಾಗಿ ಪ್ರಯೋಗ ಕಂಡಿದೆ.<br /> <br /> ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಜೈಲು ಸೇರಿದ ಬಶೀರ್ ಅವರು ನಿಜವಾದ ಸ್ವಾತಂತ್ರ್ಯದ ಪರಿಕಲ್ಪನೆಯ ಸುರುಳಿಯನ್ನು ನಮ್ಮ ಮುಂದೆ ಬಿಚ್ಚಿಡುತ್ತಾರೆ. ಇಲ್ಲಿ ಜೈಲಿನ ಬಲಿಷ್ಠ ಗೋಡೆಗಳು ಮನುಷ್ಯ ಮನುಷ್ಯರ ನಡುವಿನ ಎಲ್ಲಾ ಬಗೆಯ ಕಂದರಗಳ ಪ್ರತೀಕವಾಗಿ ಕಾಣಿಸಿಕೊಳ್ಳುತ್ತವೆ. <br /> <br /> ರಾಜೀವ್ ಕೃಷ್ಣನ್ ಅವರು ರಂಗಪ್ರಿಯರನ್ನು ತಲುಪುವಲ್ಲಿ ನಿರ್ದೇಶಕರಾಗಿ ಯಶಸ್ವಿಯಾಗಿದ್ದಾರೆ. ಎರಡೂ ನಾಟಕಗಳಲ್ಲಿ ಪ್ರತಿ ಪಾತ್ರಕ್ಕೂ ಜೀವತುಂಬುವಂತೆ ಅಭಿನಯಿಸಿದ ನೀನಾಸಂ ತಿರುಗಾಟ ತಂಡದ ಕಲಾವಿದರ ಪಾತ್ರವೂ ಇಲ್ಲಿ ಮುಖ್ಯವಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನೀನಾಸಂ ತಿರುಗಾಟ ತಂಡ ಇತ್ತೀಚೆಗೆ ಡಾ.ಎಚ್ಚೆನ್ ಕಲಾ ಕ್ಷೇತ್ರದಲ್ಲಿ ಬೆಂಗಳೂರು ಲಲಿತ ಕಲಾ ಪರಿಷತ್ ಸಹಯೋಗದಲ್ಲಿ `ಕಂತು~ ಮತ್ತು `ನಮ್ಮಳಗಿನ ಬಶೀರ್~ ನಾಟಕಗಳನ್ನು ಮನೋಜ್ಞವಾಗಿ ಪ್ರದರ್ಶಿಸಿತು.<br /> <br /> ಸಾಹಿತಿ ವಿವೇಕ ಶಾನಭಾಗ ಅವರ ನೀಳ್ಗತೆ ಆಧರಿಸಿ ರೂಪಿಸಿದ ರಂಗಪ್ರಯೋಗ ಇದಾಗಿತ್ತು. ಉತ್ತರ ಕನ್ನಡ ಜಿಲ್ಲೆಗೆ ಸೇರಿದ ಒಂದು ಪುಟ್ಟಹಳ್ಳಿ ಮಾವಿನೂರು. ಅಲ್ಲಿ ತುಂಬಿ ಹರಿಯುವ ನದಿಗೆ ಅಣೆಕಟ್ಟೆ ಕಟ್ಟಲಾಗುವುದೆಂಬ ಸುದ್ದಿ ಊರನ್ನು ಮುಳುಗಡೆ ಭೀತಿಗೆ ತಳ್ಳುತ್ತದೆ. <br /> <br /> ಇದೇ ಸಮಯಕ್ಕೆ ಸಂಭವಿಸುವ ಸೂರ್ಯಗ್ರಹಣದ ಕರಿ ನೆರಳು ಸಹ ಗ್ರಾಮಸ್ಥರನ್ನು ಆವರಿಸಿಕೊಳ್ಳುತ್ತದೆ. ಈ ಎರಡೂ ಘಟನೆಗಳ ಮೂಲಕ ಸಾಂಪ್ರದಾಯಿಕ ಹಾಗೂ ಆಧುನಿಕ ಮನೋಭಾವಗಳ ಸಂಘರ್ಷವನ್ನು ಬಿಂಬಿಸುವ ಪ್ರಯತ್ನ ಈ ನಾಟಕದಲ್ಲಿ ನಡೆದಿದೆ. ನೀಳ್ಗತೆಯನ್ನು ನಾಟಕವಾಗಿಸುವಲ್ಲಿ ನಿರ್ದೇಶಕ ಚನ್ನಕೇಶವ ಅವರ ಪ್ರಯತ್ನ ಅಭಿನಂದನಾರ್ಹ. <br /> <br /> ಮಲೆಯಾಳಂನ ಕಥೆಗಾರ ವೈಕಂ ಮಹಮದ್ ಬಶೀರ್ ಅವರ ಕಥೆ ಆಧರಿಸಿದ ಮತ್ತೊಂದು ನಾಟಕ `ನಮ್ಮಳಗಿನ ಬಶೀರ್~ ವಿನೂತನವಾಗಿ ಮೂಡಿಬಂದಿತು. ಅವರದೇ `ಅಮ್ಮ~, `ಟೈಗರ್ ಮತ್ತು ಗೋಡೆಗಳು~, `ವಿಶ್ವವಿಖ್ಯಾತವಾದ ಮೂಗು~, `ಪೂವನ್ ಫಳಮ್~, `ಸಂಧ್ಯಾಪ್ರಣಮಮ್~ ಕಥೆಗಳು ಇಲ್ಲಿ ನಾಟಕವಾಗಿ ಪ್ರಯೋಗ ಕಂಡಿದೆ.<br /> <br /> ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಜೈಲು ಸೇರಿದ ಬಶೀರ್ ಅವರು ನಿಜವಾದ ಸ್ವಾತಂತ್ರ್ಯದ ಪರಿಕಲ್ಪನೆಯ ಸುರುಳಿಯನ್ನು ನಮ್ಮ ಮುಂದೆ ಬಿಚ್ಚಿಡುತ್ತಾರೆ. ಇಲ್ಲಿ ಜೈಲಿನ ಬಲಿಷ್ಠ ಗೋಡೆಗಳು ಮನುಷ್ಯ ಮನುಷ್ಯರ ನಡುವಿನ ಎಲ್ಲಾ ಬಗೆಯ ಕಂದರಗಳ ಪ್ರತೀಕವಾಗಿ ಕಾಣಿಸಿಕೊಳ್ಳುತ್ತವೆ. <br /> <br /> ರಾಜೀವ್ ಕೃಷ್ಣನ್ ಅವರು ರಂಗಪ್ರಿಯರನ್ನು ತಲುಪುವಲ್ಲಿ ನಿರ್ದೇಶಕರಾಗಿ ಯಶಸ್ವಿಯಾಗಿದ್ದಾರೆ. ಎರಡೂ ನಾಟಕಗಳಲ್ಲಿ ಪ್ರತಿ ಪಾತ್ರಕ್ಕೂ ಜೀವತುಂಬುವಂತೆ ಅಭಿನಯಿಸಿದ ನೀನಾಸಂ ತಿರುಗಾಟ ತಂಡದ ಕಲಾವಿದರ ಪಾತ್ರವೂ ಇಲ್ಲಿ ಮುಖ್ಯವಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>