<p>ದಟ್ಟಕಾಡಿನ ನಡುವೆ ತೊರೆಗಳ ನಿನಾದ. ಹೆಜ್ಜೆಹೆಜ್ಜೆಗೂ ಕಾಣಸಿಗುವ ವಿವಿಧ ಪ್ರಾಣಿಗಳು. ಧುತ್ತನೆ ಎದುರಾಗುವ ಕ್ರೂರ ಮೃಗಗಳು. ಇದು ಮಹಾರಾಷ್ಟ್ರದ ಬೊರ್ ಧಾಮ. ವಾರ್ಧಾ ಜಿಲ್ಲೆಯ ಸೆಲು ತಾಲ್ಲೂಕಿಗೆ ಸೇರಿದ ಬೊರ್ ಧಾಮದಲ್ಲಿ ವನ್ಯಜೀವಿ ಸಂರಕ್ಷಣಾ ವಲಯ ಇದೆ. <br /> <br /> 1970ರಲ್ಲಿ ಈ ಕಾಡನ್ನು ರಕ್ಷಿತ ಅರಣ್ಯ ಎಂದು ಗುರುತಿಸಿ ಸರ್ಕಾರದ ಒಡೆತನಕ್ಕೆ ತೆಗೆದುಕೊಳ್ಳಲಾಯಿತು. ಇಲ್ಲಿ ಹರಿಯುವ ಬೊರ್ ನದಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಲಾಗಿದೆ.<br /> <br /> ಅದರ ಎದುರು ಸುಂದರ ಉದ್ಯಾನವನ ಇದೆ. ಅದನ್ನು ಪ್ರವಾಸಿಸ್ನೇಹಿಯಾಗಿ ರೂಪಿಸಲಾಗಿದ್ದು, ಸುತ್ತಮುತ್ತ ಇರುವ ರಕ್ಷಿತ ಅರಣ್ಯ ಪ್ರದೇಶಕ್ಕೂ ಪ್ರವಾಸಿಗರು ಭೇಟಿ ನೀಡಲು ಅನುವು ಮಾಡಿಕೊಡಲಾಗಿದೆ.<br /> <br /> ಜಲಾಶಯ ನೋಡಿಕೊಂಡು, ಉದ್ಯಾನವನದಲ್ಲಿ ಸುತ್ತಿ, ಕಾಡಿನ ಸೌಂದರ್ಯವನ್ನು ನೋಡಲು ಹೋದವರಿಗೆ ಬೊಗಳುವ ಜಿಂಕೆಯ ದರ್ಶನವಾಗುತ್ತದೆ. ಈ ಕಾಡಿನಲ್ಲಿ ವಿಶೇಷವಾಗಿ ಕಾಣಸಿಗುವ ವಿಶೇಷ ಪ್ರಾಣಿ, ಈ ಬೊಗಳುವ ಜಿಂಕೆ. ಇದರೊಂದಿಗೆ ಚುಕ್ಕೆ ಜಿಂಕೆ, ನೀಲಗಾಯ್ಗಳು ಕೂಡ ಅಲ್ಲಿವೆ. ಚಿರತೆ, ಹುಲಿ, ಲೆಪಾರ್ಡ್, ಕಾಡು ನಾಯಿ, ಕಾಡು ಹಂದಿ, ಕಾಡು ಬೆಕ್ಕುಗಳಷ್ಟೇ ಅಲ್ಲದೇ ನವಿಲುಗಳ ಹಿಂಡೂ ಕಾಣಸಿಗುತ್ತದೆ. <br /> <br /> ಮಳೆಗಾಲ ಹೊರತುಪಡಿಸಿ ಉಳಿದೆಲ್ಲಾ ಕಾಲದಲ್ಲೂ ಇಲ್ಲಿಗೆ ಭೇಟಿ ನೀಡಬಹುದು. ಸರ್ಕಾರಿ ವಸತಿ ಗೃಹಗಳೊಂದಿಗೆ ಖಾಸಗಿ ರೆಸಾರ್ಟ್ಗಳು ಸಾಕಷ್ಟಿವೆ. ಇಲ್ಲಿಗೆ ನಾಗ್ಪುರ ಹತ್ತಿರದ ವಿಮಾನ ನಿಲ್ದಾಣ (80 ಕಿ.ಮೀ.). ವಾರ್ಧಾ ಹತ್ತಿರದ ರೈಲ್ವೆ ನಿಲ್ದಾಣ (35 ಕಿ.ಮೀ.).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಟ್ಟಕಾಡಿನ ನಡುವೆ ತೊರೆಗಳ ನಿನಾದ. ಹೆಜ್ಜೆಹೆಜ್ಜೆಗೂ ಕಾಣಸಿಗುವ ವಿವಿಧ ಪ್ರಾಣಿಗಳು. ಧುತ್ತನೆ ಎದುರಾಗುವ ಕ್ರೂರ ಮೃಗಗಳು. ಇದು ಮಹಾರಾಷ್ಟ್ರದ ಬೊರ್ ಧಾಮ. ವಾರ್ಧಾ ಜಿಲ್ಲೆಯ ಸೆಲು ತಾಲ್ಲೂಕಿಗೆ ಸೇರಿದ ಬೊರ್ ಧಾಮದಲ್ಲಿ ವನ್ಯಜೀವಿ ಸಂರಕ್ಷಣಾ ವಲಯ ಇದೆ. <br /> <br /> 1970ರಲ್ಲಿ ಈ ಕಾಡನ್ನು ರಕ್ಷಿತ ಅರಣ್ಯ ಎಂದು ಗುರುತಿಸಿ ಸರ್ಕಾರದ ಒಡೆತನಕ್ಕೆ ತೆಗೆದುಕೊಳ್ಳಲಾಯಿತು. ಇಲ್ಲಿ ಹರಿಯುವ ಬೊರ್ ನದಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಲಾಗಿದೆ.<br /> <br /> ಅದರ ಎದುರು ಸುಂದರ ಉದ್ಯಾನವನ ಇದೆ. ಅದನ್ನು ಪ್ರವಾಸಿಸ್ನೇಹಿಯಾಗಿ ರೂಪಿಸಲಾಗಿದ್ದು, ಸುತ್ತಮುತ್ತ ಇರುವ ರಕ್ಷಿತ ಅರಣ್ಯ ಪ್ರದೇಶಕ್ಕೂ ಪ್ರವಾಸಿಗರು ಭೇಟಿ ನೀಡಲು ಅನುವು ಮಾಡಿಕೊಡಲಾಗಿದೆ.<br /> <br /> ಜಲಾಶಯ ನೋಡಿಕೊಂಡು, ಉದ್ಯಾನವನದಲ್ಲಿ ಸುತ್ತಿ, ಕಾಡಿನ ಸೌಂದರ್ಯವನ್ನು ನೋಡಲು ಹೋದವರಿಗೆ ಬೊಗಳುವ ಜಿಂಕೆಯ ದರ್ಶನವಾಗುತ್ತದೆ. ಈ ಕಾಡಿನಲ್ಲಿ ವಿಶೇಷವಾಗಿ ಕಾಣಸಿಗುವ ವಿಶೇಷ ಪ್ರಾಣಿ, ಈ ಬೊಗಳುವ ಜಿಂಕೆ. ಇದರೊಂದಿಗೆ ಚುಕ್ಕೆ ಜಿಂಕೆ, ನೀಲಗಾಯ್ಗಳು ಕೂಡ ಅಲ್ಲಿವೆ. ಚಿರತೆ, ಹುಲಿ, ಲೆಪಾರ್ಡ್, ಕಾಡು ನಾಯಿ, ಕಾಡು ಹಂದಿ, ಕಾಡು ಬೆಕ್ಕುಗಳಷ್ಟೇ ಅಲ್ಲದೇ ನವಿಲುಗಳ ಹಿಂಡೂ ಕಾಣಸಿಗುತ್ತದೆ. <br /> <br /> ಮಳೆಗಾಲ ಹೊರತುಪಡಿಸಿ ಉಳಿದೆಲ್ಲಾ ಕಾಲದಲ್ಲೂ ಇಲ್ಲಿಗೆ ಭೇಟಿ ನೀಡಬಹುದು. ಸರ್ಕಾರಿ ವಸತಿ ಗೃಹಗಳೊಂದಿಗೆ ಖಾಸಗಿ ರೆಸಾರ್ಟ್ಗಳು ಸಾಕಷ್ಟಿವೆ. ಇಲ್ಲಿಗೆ ನಾಗ್ಪುರ ಹತ್ತಿರದ ವಿಮಾನ ನಿಲ್ದಾಣ (80 ಕಿ.ಮೀ.). ವಾರ್ಧಾ ಹತ್ತಿರದ ರೈಲ್ವೆ ನಿಲ್ದಾಣ (35 ಕಿ.ಮೀ.).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>