<p>ಉತ್ತರ ಕರ್ನಾಟಕದ ಕೆಲವು ಕಡೆ ಕಾರಹುಣ್ಣಿಮೆಯಂದು ಹೋರಿ ಬೆದರಿಸುವ ಸ್ಪರ್ಧೆ ನಡೆದರೆ, ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಇದು ದೀಪಾವಳಿಯಿಂದ ಆರಂಭಗೊಂಡು ಮೂರ್ನಾಲ್ಕು ತಿಂಗಳ ಕಾಲ ನಡೆಯುತ್ತದೆ. ರೈತರಿಗೆ ಖುಷಿ ಕೊಡುವ ಸಂಭ್ರಮವಾಗಿದ್ದ ಆಚರಣೆ ಈಗ ಜೀವ ತೆಗೆಯುವ ಸ್ಪರ್ಧೆಯಾಗಿ ಮಾರ್ಪಟ್ಟಿದೆ. <br /> <br /> ಕಳೆದ ವರ್ಷದ ನವೆಂಬರ್ನಲ್ಲಿ ಹಾನಗಲ್ ತಾಲ್ಲೂಕಿನಲ್ಲಿ ಐದು ಸಾವುಗಳು ಸಂಭವಿಸಿವೆ. ಗ್ರಾಮೀಣ ಜನತೆಯ ಮನರಂಜನೆಗೆ ಸೀಮಿತವಾಗಿದ್ದ ಈ ಕ್ರೀಡೆ ಇಂದು ರಾಜಕೀಯ ವೈಷಮ್ಯ, ಕೋಮುಗಲಭೆ, ಜೀವಹಾನಿ ಅಲ್ಲದೆ ಹಣ ಮಾಡುವ ದಂಧೆಯಾಗಿದೆ. ದಾರಿ ತಪ್ಪಿದ ಈ ಹಬ್ಬದ ಆಚರಣೆಯಲ್ಲಿ ಸೂಕ್ತ ಬದಲಾವಣೆಯಾಗಬೇಕು.<br /> <br /> ತಮಿಳುನಾಡಿನಲ್ಲಿ ಇದೇ ರೀತಿ ನಡೆಯುತ್ತಿದ್ದ `ಜಲ್ಲಿಕಟ್ಟು~ ಕ್ರೀಡೆಯಲ್ಲಿ ಜೀವಹಾನಿ ಸಂಭವಿಸಿದ್ದಾಗ ಅದನ್ನು ಕೋರ್ಟ್ ನಿಷೇಧಿಸಿತ್ತು. ನಂತರ ಜನರ ಒತ್ತಾಯಕ್ಕೆ ಮಣಿದು ಆಮೂಲಾಗ್ರ ಮಾರ್ಪಾಡು ಮಾಡಿ ಪ್ರಾಣಿ ದಯಾಸಂಘದ ಕಟ್ಟೆಚ್ಚರದಲ್ಲಿ ಕ್ರೀಡೆ ನಡೆಸಲು ಅನುಮತಿ ನೀಡಿದೆ. <br /> <br /> ಕರ್ನಾಟಕದಲ್ಲಿಯೂ ಈ ಮಾದರಿ ಅನುಸರಿಸಬೇಕು. ಕ್ರೀಡೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಒಂದು ಗ್ರಾಮದಲ್ಲಿ ಒಮ್ಮೆ ಮಾತ್ರ ಕ್ರೀಡೆ ನಡೆಯಲಿ. ಹಣದ-ಜೂಜಿನ ವ್ಯವಹಾರಗಳು ನಡೆಯದಿರಲಿ. ಸ್ಪರ್ಧೆ ನಡೆಯುವಾಗ ವೈದ್ಯಕೀಯ ಹಾಗೂ ಪಶು ವೈದ್ಯಕೀಯ ಸೌಲಭ್ಯಗಳಿರಲಿ.<br /> <br /> ಗ್ರಾಮೀಣ ಕ್ರೀಡೆಗಳ ಉದ್ದೇಶವೇ ಖರ್ಚಿಲ್ಲದ ಮನರಂಜನೆ. ಇದರಲ್ಲಿ ಜೀವಹಾನಿ- ಜೂಜು ನಡೆಯುತ್ತಿದ್ದರೆ ಅದನ್ನು ಸರ್ಕಾರ ತಡೆಯಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉತ್ತರ ಕರ್ನಾಟಕದ ಕೆಲವು ಕಡೆ ಕಾರಹುಣ್ಣಿಮೆಯಂದು ಹೋರಿ ಬೆದರಿಸುವ ಸ್ಪರ್ಧೆ ನಡೆದರೆ, ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಇದು ದೀಪಾವಳಿಯಿಂದ ಆರಂಭಗೊಂಡು ಮೂರ್ನಾಲ್ಕು ತಿಂಗಳ ಕಾಲ ನಡೆಯುತ್ತದೆ. ರೈತರಿಗೆ ಖುಷಿ ಕೊಡುವ ಸಂಭ್ರಮವಾಗಿದ್ದ ಆಚರಣೆ ಈಗ ಜೀವ ತೆಗೆಯುವ ಸ್ಪರ್ಧೆಯಾಗಿ ಮಾರ್ಪಟ್ಟಿದೆ. <br /> <br /> ಕಳೆದ ವರ್ಷದ ನವೆಂಬರ್ನಲ್ಲಿ ಹಾನಗಲ್ ತಾಲ್ಲೂಕಿನಲ್ಲಿ ಐದು ಸಾವುಗಳು ಸಂಭವಿಸಿವೆ. ಗ್ರಾಮೀಣ ಜನತೆಯ ಮನರಂಜನೆಗೆ ಸೀಮಿತವಾಗಿದ್ದ ಈ ಕ್ರೀಡೆ ಇಂದು ರಾಜಕೀಯ ವೈಷಮ್ಯ, ಕೋಮುಗಲಭೆ, ಜೀವಹಾನಿ ಅಲ್ಲದೆ ಹಣ ಮಾಡುವ ದಂಧೆಯಾಗಿದೆ. ದಾರಿ ತಪ್ಪಿದ ಈ ಹಬ್ಬದ ಆಚರಣೆಯಲ್ಲಿ ಸೂಕ್ತ ಬದಲಾವಣೆಯಾಗಬೇಕು.<br /> <br /> ತಮಿಳುನಾಡಿನಲ್ಲಿ ಇದೇ ರೀತಿ ನಡೆಯುತ್ತಿದ್ದ `ಜಲ್ಲಿಕಟ್ಟು~ ಕ್ರೀಡೆಯಲ್ಲಿ ಜೀವಹಾನಿ ಸಂಭವಿಸಿದ್ದಾಗ ಅದನ್ನು ಕೋರ್ಟ್ ನಿಷೇಧಿಸಿತ್ತು. ನಂತರ ಜನರ ಒತ್ತಾಯಕ್ಕೆ ಮಣಿದು ಆಮೂಲಾಗ್ರ ಮಾರ್ಪಾಡು ಮಾಡಿ ಪ್ರಾಣಿ ದಯಾಸಂಘದ ಕಟ್ಟೆಚ್ಚರದಲ್ಲಿ ಕ್ರೀಡೆ ನಡೆಸಲು ಅನುಮತಿ ನೀಡಿದೆ. <br /> <br /> ಕರ್ನಾಟಕದಲ್ಲಿಯೂ ಈ ಮಾದರಿ ಅನುಸರಿಸಬೇಕು. ಕ್ರೀಡೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಒಂದು ಗ್ರಾಮದಲ್ಲಿ ಒಮ್ಮೆ ಮಾತ್ರ ಕ್ರೀಡೆ ನಡೆಯಲಿ. ಹಣದ-ಜೂಜಿನ ವ್ಯವಹಾರಗಳು ನಡೆಯದಿರಲಿ. ಸ್ಪರ್ಧೆ ನಡೆಯುವಾಗ ವೈದ್ಯಕೀಯ ಹಾಗೂ ಪಶು ವೈದ್ಯಕೀಯ ಸೌಲಭ್ಯಗಳಿರಲಿ.<br /> <br /> ಗ್ರಾಮೀಣ ಕ್ರೀಡೆಗಳ ಉದ್ದೇಶವೇ ಖರ್ಚಿಲ್ಲದ ಮನರಂಜನೆ. ಇದರಲ್ಲಿ ಜೀವಹಾನಿ- ಜೂಜು ನಡೆಯುತ್ತಿದ್ದರೆ ಅದನ್ನು ಸರ್ಕಾರ ತಡೆಯಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>