<p>ತುಮಕೂರು: ತಾಲ್ಲೂಕಿನ ಗೂಳೂರು ಮತ್ತು ಹೆಬ್ಬೂರು ಹೋಬಳಿಗಳ ಪರಿಶಿಷ್ಟ ಜಾತಿ, ಪಂಗಡ ಘಟಕದ ಕಾರ್ಯಕರ್ತರ ಸಭೆ ಭಾನುವಾರ ಗೂಳೂರು ಹನುಮಂತರಾಯ ದೇಗುಲದಲ್ಲಿ ನಡೆಯಿತು.<br /> <br /> ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ನಿಂಗಪ್ಪ, ಪರಿಶಿಷ್ಟ ಜಾತಿಯ ಕಾರ್ಯಕರ್ತರು ರಾಜಕೀಯವಾಗಿ ಬೆಳೆಯಬೇಕು. ರಾಜಕೀಯದಲ್ಲಿ ಮೇಲುಗೈ ಸಾಧಿಸಿದಾಗ ಮಾತ್ರ ಜನಾಂಗದ ಅಭಿವೃದ್ಧಿಯಾಗುತ್ತದೆ. ಮೂಲ ಸೌಕರ್ಯಗಳ ಬಳಕೆಯಿಂದ ಮಾತ್ರ ಏಳ್ಗೆ ಸಾಧ್ಯ ಎಂದರು.<br /> <br /> ಆಡಳಿತಾರೂಢ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿ ಏಳುತ್ತಿದೆ. ಬಡವರು, ದಲಿತರು, ಹಿಂದುಳಿದ ವರ್ಗಗಳನ್ನು ನಿರ್ಲಕ್ಷಿಸಿರುವ ಸರ್ಕಾರದ ಸಚಿವರು ಒಬ್ಬೊಬ್ಬರಾಗಿ ಜೈಲು ಸೇರುತ್ತಿದ್ದಾರೆ ಎಂದರು.<br /> <br /> ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಹಿಂದಿನಿಂದಲೂ ಶೋಷಣೆಗೆ ಒಳಗಾಗಿರುವ ದಲಿತರು ರಾಜಕೀಯವಾಗಿ ಬೆಳೆದರೆ ಮಾತ್ರ ದೇಶ ಕಟ್ಟಲು ಸಾಧ್ಯ. ಅಂಬೇಡ್ಕರ್, ಬಸವಣ್ಣ, ದೇವರಾಜ ಅರಸು ವ್ಯಕ್ತಿತ್ವವನ್ನು ಅನುಸರಿಸಬೇಕೆಂದು ಸಲಹೆ ಮಾಡಿದರು.<br /> <br /> ಜೆಡಿಎಸ್ ಪರಿಶಿಷ್ಟರ ಘಟಕದ ವಿಭಾಗದ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ, ಜೆಡಿಎಸ್ನಿಂದ ಮಾತ್ರ ದಲಿತರ ಅಭಿವೃದ್ಧಿ ಸಾಧ್ಯ ಎಂದರು.<br /> <br /> ಮುಖಂಡರಾದ ಟಿ.ಎಚ್.ಕೃಷ್ಣಪ್ಪ, ಚಿಕ್ಕವೆಂಕಟಯ್ಯ, ವಿಜಯಕುಮಾರ್, ಸೋರೆಕುಂಟೆ ಕೃಷ್ಣಮೂರ್ತಿ, ಗೂಳೂರು ಕೃಷ್ಣಪ್ಪ, ಬಿ.ಎಲ್.ಮಂಜುನಾಥ್, ಎಲ್ಲಯ್ಯ, ಕೆಂಪನರಸಯ್ಯ, ರಾಮು, ಟಿ.ಆರ್.ನಾಗರಾಜು, ಎಚ್.ಮಲ್ಲಿಕಾರ್ಜುನ್ ಎಸ್.ರಂಗನಾಥ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ತಾಲ್ಲೂಕಿನ ಗೂಳೂರು ಮತ್ತು ಹೆಬ್ಬೂರು ಹೋಬಳಿಗಳ ಪರಿಶಿಷ್ಟ ಜಾತಿ, ಪಂಗಡ ಘಟಕದ ಕಾರ್ಯಕರ್ತರ ಸಭೆ ಭಾನುವಾರ ಗೂಳೂರು ಹನುಮಂತರಾಯ ದೇಗುಲದಲ್ಲಿ ನಡೆಯಿತು.<br /> <br /> ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ನಿಂಗಪ್ಪ, ಪರಿಶಿಷ್ಟ ಜಾತಿಯ ಕಾರ್ಯಕರ್ತರು ರಾಜಕೀಯವಾಗಿ ಬೆಳೆಯಬೇಕು. ರಾಜಕೀಯದಲ್ಲಿ ಮೇಲುಗೈ ಸಾಧಿಸಿದಾಗ ಮಾತ್ರ ಜನಾಂಗದ ಅಭಿವೃದ್ಧಿಯಾಗುತ್ತದೆ. ಮೂಲ ಸೌಕರ್ಯಗಳ ಬಳಕೆಯಿಂದ ಮಾತ್ರ ಏಳ್ಗೆ ಸಾಧ್ಯ ಎಂದರು.<br /> <br /> ಆಡಳಿತಾರೂಢ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿ ಏಳುತ್ತಿದೆ. ಬಡವರು, ದಲಿತರು, ಹಿಂದುಳಿದ ವರ್ಗಗಳನ್ನು ನಿರ್ಲಕ್ಷಿಸಿರುವ ಸರ್ಕಾರದ ಸಚಿವರು ಒಬ್ಬೊಬ್ಬರಾಗಿ ಜೈಲು ಸೇರುತ್ತಿದ್ದಾರೆ ಎಂದರು.<br /> <br /> ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಹಿಂದಿನಿಂದಲೂ ಶೋಷಣೆಗೆ ಒಳಗಾಗಿರುವ ದಲಿತರು ರಾಜಕೀಯವಾಗಿ ಬೆಳೆದರೆ ಮಾತ್ರ ದೇಶ ಕಟ್ಟಲು ಸಾಧ್ಯ. ಅಂಬೇಡ್ಕರ್, ಬಸವಣ್ಣ, ದೇವರಾಜ ಅರಸು ವ್ಯಕ್ತಿತ್ವವನ್ನು ಅನುಸರಿಸಬೇಕೆಂದು ಸಲಹೆ ಮಾಡಿದರು.<br /> <br /> ಜೆಡಿಎಸ್ ಪರಿಶಿಷ್ಟರ ಘಟಕದ ವಿಭಾಗದ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ, ಜೆಡಿಎಸ್ನಿಂದ ಮಾತ್ರ ದಲಿತರ ಅಭಿವೃದ್ಧಿ ಸಾಧ್ಯ ಎಂದರು.<br /> <br /> ಮುಖಂಡರಾದ ಟಿ.ಎಚ್.ಕೃಷ್ಣಪ್ಪ, ಚಿಕ್ಕವೆಂಕಟಯ್ಯ, ವಿಜಯಕುಮಾರ್, ಸೋರೆಕುಂಟೆ ಕೃಷ್ಣಮೂರ್ತಿ, ಗೂಳೂರು ಕೃಷ್ಣಪ್ಪ, ಬಿ.ಎಲ್.ಮಂಜುನಾಥ್, ಎಲ್ಲಯ್ಯ, ಕೆಂಪನರಸಯ್ಯ, ರಾಮು, ಟಿ.ಆರ್.ನಾಗರಾಜು, ಎಚ್.ಮಲ್ಲಿಕಾರ್ಜುನ್ ಎಸ್.ರಂಗನಾಥ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>