<p><strong>ಮುಂಬೈ (ಪಿಟಿಐ, ಐಎಎನ್ಎಸ್): </strong>ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಸುಧಾರಣೆ ಕಂಡು ಬಂದಿದೆ. ಆದರೆ ಅವರ ಸ್ಥಿತಿ ಈಗಲೂ ಕಳವಳಕಾರಿಯಾಗಿಯೇ ಮುಂದುವರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.<br /> <br /> ಅವರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದೆ. ಜೀವ ರಕ್ಷಕ ಯಂತ್ರ (ವೆಂಟಿಲೇಟರ್) ತೆಗೆಯಲಾಗಿದೆ. <br /> <br /> ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಸಾವಿರಾರು ಕಾರ್ಯಕರ್ತರು ಬಾಂದ್ರಾ ಉಪನಗರದಲ್ಲಿನ ಠಾಕ್ರೆ ನಿವಾಸ `ಮಾತೋಶ್ರೀ~ ಮುಂದೆ ಸೇರಿ, `ಜೈ ಭವಾನಿ~, `ಜೈ ಶಿವಾಜಿ~ ಘೋಷಣೆಗಳನ್ನು ಹಾಕುತ್ತಿದ್ದಾರೆ. ನಿವಾಸದ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಭಾರಿ ಸಂಖ್ಯೆಯಲ್ಲಿ ಮಾಧ್ಯಮದವರು ಬೀಡು ಬಿಟ್ಟಿದ್ದಾರೆ.<br /> <br /> `ಸಹಸ್ರಾರು ಜನರ ಶುಭ ಹಾರೈಕೆ ಮತ್ತು ಪ್ರಾರ್ಥನೆಯಿಂದ ದಿನ ಕಳೆದಂತೆ ಠಾಕ್ರೆ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿದೆ~ ಎಂದು ಶಿವಸೇನೆ ಹಿರಿಯ ಮುಖಂಡ ಮತ್ತು ಲೋಕಸಭೆ ಮಾಜಿ ಅಧ್ಯಕ್ಷ ಮನೋಹರ್ ಜೋಷಿ ಸುದ್ದಿಗಾರರಿಗೆ ತಿಳಿಸಿದರು.<br /> <br /> `ಮಾತೋಶ್ರೀ~ಯ ಎರಡನೇ ಅಂತಸ್ತಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಠಾಕ್ರೆ ಅವರ ಕೋಣೆ ಪ್ರವೇಶಿಸಲು ಉದ್ಧವ್ ಠಾಕ್ರೆ, ಅವರ ಪತ್ನಿ ರಶ್ಮಿ ಮತ್ತು ಲೀಲಾವತಿ ಆಸ್ಪತ್ರೆಯ ವೈದ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.<br /> <br /> ಶಿವಸೇನೆ ಪ್ರಮುಖ ಮುಖಂಡರು, ಸಿನಿಮಾ ರಂಗದ ಗಣ್ಯರು ಮತ್ತು ಉದ್ಯಮಿಗಳು `ಮಾತೋಶ್ರೀ~ಗೆ ಶುಕ್ರವಾರ ಕೂಡ ಭೇಟಿ ನೀಡಿ ಠಾಕ್ರೆ ಆರೋಗ್ಯ ವಿಚಾರಿಸಿದರು. <br /> <br /> ಮಹಾರಾಷ್ಟ್ರ ರಾಜ್ಯಪಾಲ ಕೆ. ಶಂಕರನಾರಾಯಣನ್, ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್, ಬಾಬಾರಾಮ್ದೇವ್, ನಟರಾದ ಸುರೇಶ್ ಒಬೆರಾಯ್ ಮತ್ತು ಪುತ್ರ ವಿವೇಕ್ ಮುಂತಾದವರು ಇವರಲ್ಲಿ ಸೇರಿದ್ದರು.</p>.<p><strong>ಆರೋಗ್ಯ ಸ್ಥಿರ- ಉದ್ಧವ್: </strong>ಬಾಳ ಸಾಹೇಬ್ ಠಾಕ್ರೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿಯೇ ಇದೆ. ಅವರು ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಉದ್ಧವ್ ಠಾಕ್ರೆ ತಿಳಿಸಿದರು.</p>.<p><strong>ಮುಂಬೈ ಸಹಜ ಸ್ಥಿತಿಗೆ</strong><br /> ಠಾಕ್ರೆ ಅವರ ಆರೋಗ್ಯದಲ್ಲಿ ಶುಕ್ರವಾರ ಸ್ವಲ್ಪಮಟ್ಟಿನ ಸುಧಾರಣೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ನಗರ ಸಹಜ ಸ್ಥಿತಿಗೆ ಮರಳುತ್ತಿದೆ.</p>.<p> ಬುಧವಾರ ರಾತ್ರಿ ಠಾಕ್ರೆ ಅವರ ಆರೋಗ್ಯ ಕ್ಷೀಣಿಸಿದ ಬಳಿಕ ದಾದರ್ ಸೇರಿದಂತೆ ಮುಂಬೈನ ಪ್ರಮುಖ ಉಪನಗರಗಳಲ್ಲಿ ಅಂಗಡಿ ಮುಗ್ಗಟ್ಟುಗಳು ಮುಚ್ಚಿ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಬಾಲಿವುಡ್ನ ಚಿತ್ರೀಕರಣ ಸಂಪೂರ್ಣ ಸ್ಥಗಿತಗೊಂಡಿತ್ತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ, ಐಎಎನ್ಎಸ್): </strong>ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಸುಧಾರಣೆ ಕಂಡು ಬಂದಿದೆ. ಆದರೆ ಅವರ ಸ್ಥಿತಿ ಈಗಲೂ ಕಳವಳಕಾರಿಯಾಗಿಯೇ ಮುಂದುವರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.<br /> <br /> ಅವರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದೆ. ಜೀವ ರಕ್ಷಕ ಯಂತ್ರ (ವೆಂಟಿಲೇಟರ್) ತೆಗೆಯಲಾಗಿದೆ. <br /> <br /> ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಸಾವಿರಾರು ಕಾರ್ಯಕರ್ತರು ಬಾಂದ್ರಾ ಉಪನಗರದಲ್ಲಿನ ಠಾಕ್ರೆ ನಿವಾಸ `ಮಾತೋಶ್ರೀ~ ಮುಂದೆ ಸೇರಿ, `ಜೈ ಭವಾನಿ~, `ಜೈ ಶಿವಾಜಿ~ ಘೋಷಣೆಗಳನ್ನು ಹಾಕುತ್ತಿದ್ದಾರೆ. ನಿವಾಸದ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಭಾರಿ ಸಂಖ್ಯೆಯಲ್ಲಿ ಮಾಧ್ಯಮದವರು ಬೀಡು ಬಿಟ್ಟಿದ್ದಾರೆ.<br /> <br /> `ಸಹಸ್ರಾರು ಜನರ ಶುಭ ಹಾರೈಕೆ ಮತ್ತು ಪ್ರಾರ್ಥನೆಯಿಂದ ದಿನ ಕಳೆದಂತೆ ಠಾಕ್ರೆ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿದೆ~ ಎಂದು ಶಿವಸೇನೆ ಹಿರಿಯ ಮುಖಂಡ ಮತ್ತು ಲೋಕಸಭೆ ಮಾಜಿ ಅಧ್ಯಕ್ಷ ಮನೋಹರ್ ಜೋಷಿ ಸುದ್ದಿಗಾರರಿಗೆ ತಿಳಿಸಿದರು.<br /> <br /> `ಮಾತೋಶ್ರೀ~ಯ ಎರಡನೇ ಅಂತಸ್ತಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಠಾಕ್ರೆ ಅವರ ಕೋಣೆ ಪ್ರವೇಶಿಸಲು ಉದ್ಧವ್ ಠಾಕ್ರೆ, ಅವರ ಪತ್ನಿ ರಶ್ಮಿ ಮತ್ತು ಲೀಲಾವತಿ ಆಸ್ಪತ್ರೆಯ ವೈದ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.<br /> <br /> ಶಿವಸೇನೆ ಪ್ರಮುಖ ಮುಖಂಡರು, ಸಿನಿಮಾ ರಂಗದ ಗಣ್ಯರು ಮತ್ತು ಉದ್ಯಮಿಗಳು `ಮಾತೋಶ್ರೀ~ಗೆ ಶುಕ್ರವಾರ ಕೂಡ ಭೇಟಿ ನೀಡಿ ಠಾಕ್ರೆ ಆರೋಗ್ಯ ವಿಚಾರಿಸಿದರು. <br /> <br /> ಮಹಾರಾಷ್ಟ್ರ ರಾಜ್ಯಪಾಲ ಕೆ. ಶಂಕರನಾರಾಯಣನ್, ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್, ಬಾಬಾರಾಮ್ದೇವ್, ನಟರಾದ ಸುರೇಶ್ ಒಬೆರಾಯ್ ಮತ್ತು ಪುತ್ರ ವಿವೇಕ್ ಮುಂತಾದವರು ಇವರಲ್ಲಿ ಸೇರಿದ್ದರು.</p>.<p><strong>ಆರೋಗ್ಯ ಸ್ಥಿರ- ಉದ್ಧವ್: </strong>ಬಾಳ ಸಾಹೇಬ್ ಠಾಕ್ರೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿಯೇ ಇದೆ. ಅವರು ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಉದ್ಧವ್ ಠಾಕ್ರೆ ತಿಳಿಸಿದರು.</p>.<p><strong>ಮುಂಬೈ ಸಹಜ ಸ್ಥಿತಿಗೆ</strong><br /> ಠಾಕ್ರೆ ಅವರ ಆರೋಗ್ಯದಲ್ಲಿ ಶುಕ್ರವಾರ ಸ್ವಲ್ಪಮಟ್ಟಿನ ಸುಧಾರಣೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ನಗರ ಸಹಜ ಸ್ಥಿತಿಗೆ ಮರಳುತ್ತಿದೆ.</p>.<p> ಬುಧವಾರ ರಾತ್ರಿ ಠಾಕ್ರೆ ಅವರ ಆರೋಗ್ಯ ಕ್ಷೀಣಿಸಿದ ಬಳಿಕ ದಾದರ್ ಸೇರಿದಂತೆ ಮುಂಬೈನ ಪ್ರಮುಖ ಉಪನಗರಗಳಲ್ಲಿ ಅಂಗಡಿ ಮುಗ್ಗಟ್ಟುಗಳು ಮುಚ್ಚಿ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಬಾಲಿವುಡ್ನ ಚಿತ್ರೀಕರಣ ಸಂಪೂರ್ಣ ಸ್ಥಗಿತಗೊಂಡಿತ್ತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>