<p>ಬೆಂಗಳೂರಿನ ಕನ್ನಡಿಗರ ಸಮುದಾಯದಲ್ಲಿ ಸಮಾರಾಧನೆಗಳು ಹೆಚ್ಚು. ಹಬ್ಬ ಹರಿದಿನಗಳ ಸಂಭ್ರಮ ಬಿಡಿ. ಬೇರೆ ದಿನಗಳಲ್ಲೂ ಒಂದಲ್ಲ ಒಂದು ಕಾರಣಕ್ಕೆ ಬಂಧು ಬಳಗವನ್ನು ಔತಣಕ್ಕೆ ಕರೆಯುವುದು ನಮ್ಮಲ್ಲಿ ಸಾಮಾನ್ಯ. <br /> <br /> ಮದುವೆ, ಮುಂಜಿ, ಸೀಮಂತ, ನಾಮಕರಣ, ಚೌಲ, ಶಷ್ಟ್ಯಬ್ಧಿ ಪೂರ್ತಿ, ವೈಕುಂಠ ಸಮಾರಾಧನೆ... ಇವ್ಯಾವುದೂ ಇಲ್ಲದಿದ್ದಾಗ ಸತ್ಯನಾರಾಯಣ ಪೂಜೆಗೆ ಮಧ್ಯಮ ವರ್ಗದ ಕುಟುಂಬಗಳಿಂದ ಆಹ್ವಾನ ಬರುತ್ತಲೇ ಇರುತ್ತದೆ. ಇಂಥ ಸಮಾರಂಭಗಳಲ್ಲಿ ಆತಿಥ್ಯ ಚೆನ್ನಾಗಿ ಮಾಡಬೇಕು ಎಂಬ ಆಯಾ ಮನೆಯವರ ಉಮೇದು ಗಮನಿಸಿರುತ್ತೀರಿ.<br /> <br /> ಆದರೆ ಇನ್ನೊಂದು ಸಂಗತಿ ಗಮನಿಸಿದ್ದೀರಾ? ಇಂಥ ಸಮಾರಂಭಕ್ಕೆ ಬರುವ ಐದು ಹಿರಿಯರಲ್ಲಿ ಒಬ್ಬರಿಗಾದರೂ ಸಿಹಿ ತಿನಿಸುಗಳನ್ನು ತಿನ್ನಲಾರದ ಕಷ್ಟ ಇರುತ್ತದೆ. ಬೇಕಾದವರು ಕರೆದಿದ್ದಾರೆ ಎಂದು ಹೋಗಿ, ಭಕ್ಷ್ಯಗಳನ್ನು ತಿನ್ನದಿರಲು ಪ್ರಯತ್ನಿಸುತ್ತಿರುತ್ತಾರೆ. ಅತಿಥೇಯರು ಬಿಡುವುದಿಲ್ಲ.<br /> <br /> `ಬೇಡ~ ಎಂದು ಅತಿಥಿಗಳು ಹೇಳಿದರೆ `ಯಾಕೆ ಬೇಡ?~ ಎಂದು ಕೇಳಿ, ಸಾರ್ವಜನಿಕವಾಗಿ ಅವರ ಆರೋಗ್ಯದ ಸಂಕಟಗಳನ್ನು ಚರ್ಚೆ ಮಾಡಲು ಶುರು ಮಾಡುತ್ತಾರೆ. ಇಂಥ ಔಷಧ ತೊಗೊಳ್ಳಿ, ಅಂಥ ಡಾಕ್ಟರ್ ಹತ್ತಿರ ಹೋಗಿ ಎಂದು ಸಲಹೆ ಕೊಡಲು ಮುಂದಾಗುತ್ತಾರೆ.<br /> <br /> ಈ ಮುಜುಗರ ಸಾಲದು ಎಂಬಂತೆ `ಒಂದು ಲಾಡು ತಿಂದುಬಿಡಿ, ಏನಾಗಲ್ಲ...~, `ಪ್ರಸಾದ ಬೇಡ ಅನ್ನಬಾರದು~ ಅನ್ನುವಂಥ ಅಕ್ಕರೆ ತೋರಿಸುವ, ತೀರ ಬೇಜವಾಬ್ದಾರಿಯ ಮಾತು ಆಡುತ್ತಾರೆ. ಊಟದಲ್ಲಿ ಮಿತಿ ಪ್ರಯೋಗಿಸುವವರೆಲ್ಲ ಸಂಕೋಚ ಪಡುತ್ತಿದ್ದಾರೆ ಎಂದು ಅಪಾರ್ಥ ಮಾಡಿಕೊಂಡು ಬಲವಂತ ಮಾಡುತ್ತಾರೆ.<br /> <br /> ಈ ಹರಟೆ ಸಾಕುಮಾಡುವುದು ಹೇಗೆ ಎಂದು ತೋರದೆ, ಭಕ್ಷ್ಯಗಳನ್ನು ತಿನ್ನಬೇಕಾದ ಅನಿವಾರ್ಯ ಅತಿಥಿಗಳಿಗೆ ಒದಗಿಬರುತ್ತದೆ. ಕೆಲವರು ಈ ಹಿಂಸೆ ತಾಳಲಾರದೆ ಏನೋ ಸಬೂಬು ಹೇಳಿ ಸಮಾರಾಧನೆಗಳಿಗೆ ಹೋಗುವುದನ್ನೇ ತಪ್ಪಿಸಿಕೊಳ್ಳುತ್ತಾರೆ. ಒತ್ತಾಯಕ್ಕೆ ಒಬ್ಬಟ್ಟು, ಚಿರೋಟಿ, ಜಿಲೇಬಿ ತಿನ್ನುವವರು ಎಂಥೆಂಥ ಕಷ್ಟ ಅನುಭವಿಸುತ್ತಾರೆ ಎಂದು ಬಲವಂತ ಮಾಡಿ ತಿನಿಸಿದವರ ಗಮನಕ್ಕೆ ಬರುವುದೇ ಇಲ್ಲ. <br /> <br /> ಕೆಲವು ಡಯಾಬಿಟಿಸ್ ಪೀಡಿತರು ಸಿಹಿ ತಿಂಡಿ ತಿನ್ನಲು ಸಮಾರಾಧನೆಯ ನೆಪಕ್ಕಾಗಿ ಕಾಯುವುದು ನಿಜ. ಆದರೆ ಅತಿಥಿಗಳ ವೈದ್ಯಕೀಯ ಸಂಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ, ಇರಿಸುಮುರುಸು ಮಾಡದ ಸೂಕ್ಷ್ಮ ಸಮಾರಾಧನೆ ಮಾಡುವವರಿಗೆ ಇರಬೇಡವೇ?<br /> <br /> ಬೆಂಗಳೂರಿನ ಎಷ್ಟೋ ಜನ ಒಂದಲ್ಲ ಒಂದು ಕಾರಣಕ್ಕೆ ಆಹಾರದಲ್ಲಿ ಏನೋ ಕಟ್ಟುನಿಟ್ಟು ಪಾಲಿಸಲು ಪ್ರಯತ್ನಿಸುತ್ತಿರುತ್ತಾರೆ. ಅದನ್ನು ಗೌರವಿಸುವುದು ಅಗತ್ಯವಲ್ಲವೇ? `ಕೊಲ್ಲು ಹುಡುಗಿ ಒಮ್ಮೆ ನನ್ನ, ಹಾಗೇ ಸುಮ್ಮನೆ~ ಅನ್ನುವ ಸಿನಿಮಾ ಹಾಡು ಕೇಳಿರುತ್ತೀರಿ. ಸಿಹಿ, ಅನ್ನ, ಮತ್ತು ಇತರ ಕಾರ್ಬೋಹೈಡ್ರೇಟ್ ಐಟಂಗಳನ್ನು ತಿನ್ನಿಸಿ ಹಾಗೆ ಸುಮ್ಮನೆ ಕೊಲ್ಲುವ ಜನ ನಮ್ಮ ನಡುವೆ ವಿಪರೀತ ಇದ್ದಾರೆ!<br /> <br /> ಭಾರತ ವಿಶ್ವದ ಡಯಾಬಿಟಿಸ್ ರಾಜಧಾನಿ ಎಂದು ಕರೆಸಿಕೊಳ್ಳುತ್ತದೆ. ಇಲ್ಲಿ ನಾಲ್ಕು ಕೋಟಿ (ಹೌದು, ನಾಲ್ಕು ಕೋಟಿ!) ಜನರನ್ನು ಮಧುಮೇಹ ಬಾಧಿಸುತ್ತದಂತೆ. ಬೆಂಗಳೂರಿನ ವಯಸ್ಕರಲ್ಲಿ ಶೇಕಡಾ 15ರಷ್ಟು ಜನರಿಗೆ ಈ ತೊಂದರೆ ಇದೆ. ಇದು ಎಷ್ಟು ದೊಡ್ಡ ಸಮಸ್ಯೆ ಎಂದು ನಮಗೆ ಸಾಮಾಜಿಕ ಮಟ್ಟದಲ್ಲಿ ಅರಿವಾದಂತಿಲ್ಲ.<br /> <br /> ಬೆಂಗಳೂರಿನ ಜೀವನದ ಒತ್ತಡ, ಆಹಾರದ ಕಲಬೆರಕೆ, ಅಹೋರಾತ್ರಿ ಕೆಲಸ ಮಾಡುವ ಅಭ್ಯಾಸ, ಸಂಬಂಧಗಳ ಗೋಜಲು, ಹುಚ್ಚು ಹಿಡಿಸುವ ಟ್ರಾಫಿಕ್, ವ್ಯಾಯಾಮದ ಕೊರತೆ... ಇವೆಲ್ಲ ಸೇರಿ ಡಯಾಬಿಟಿಸ್ ನಮ್ಮೂರಿನಲ್ಲಿ ರಾರಾಜಿಸುವಂತೆ ಮಾಡಿವೆ ಎಂದು ವೈದ್ಯರ ಅಂದಾಜು.<br /> <br /> ವೈದ್ಯರು ಆಹಾರದ ಬಗ್ಗೆ ಹೇಳಬಲ್ಲರೇ ಹೊರತು ಸಮಾರಾಧನೆಯಲ್ಲಿ ಅತಿಥೇಯರು ಹೇಗೆ ನಡೆದುಕೊಳ್ಳಬೇಕು ಎಂದು ಹೇಳಲಾರರು. ಡಯಾಬಿಟಿಸ್ ಎಂಬ ಭಯಂಕರ ರಾಕ್ಷಸ ಅಟ್ಟಹಾಸದಿಂದ ನಮ್ಮೆದುರೇ ಕೇಕೆ ಹಾಕುತ್ತಿದ್ದರೂ ಬಂಧು ಬಳಗಕ್ಕೆ ಬಲವಂತವಾಗಿ ಲಾಡು ತಿನ್ನಿಸುವ ನಮ್ಮ ಉತ್ಸಾಹವನ್ನು ನಾವೇ ಹತ್ತಿಕ್ಕಿಕೊಳ್ಳಬೇಕು!<br /> <br /> <strong>ಕನ್ನಡದಲ್ಲಿ ಮತ್ತೆ ಶೇಕ್ಸ್ಪಿಯರ್</strong><br /> ನೀನಾಸಂ ತಂಡ ಹೋದ ಬುಧವಾರ ಬೆಂಗಳೂರಿಗೆ ಬಂದು `ಶಿಶಿರ ವಸಂತ~ ಎಂಬ ನಾಟಕವನ್ನು ಆಡಿತು. ಇದು ಶೇಕ್ಸ್ಪಿಯರ್ನ `ವಿಂಟರ್ಸ್ ಟೇಲ್~ ನಾಟಕದ ಅನುವಾದ. ಕೆ.ವಿ.ಅಕ್ಷರ ಅವರ ಅನುಭವಸ್ಥ ನಿರ್ದೇಶನದಲ್ಲಿ ಹೆಗ್ಗೋಡಿನ ಸ್ಥಳೀಯರೇ ಆಡಿದ ಈ ಆಟ ಪಳಗಿದ ವೃತ್ತಿಪರರು ಆಡಿದಷ್ಟು ಸರಾಗವಾಗಿ ಸಾಗಿತು. ಇಂಥ ದೊಡ್ಡ ಪ್ರಮಾಣದ ಪ್ರಯೋಗ ನೋಡುವುದೇ ಈಚೆಗೆ ಅಪರೂಪವಾಗಿದೆ. ತಂಡವನ್ನು ಇಲ್ಲಿ ಕರೆಸಿದವರು ಬೆಂಗಳೂರಿನ ಸಂಚಯ ನಾಟಕ ವೃಂದದವರು. <br /> <br /> ಮೈಕ್ ಸಹಕರಿಸದ ಕಾರಣ ಮೊದಲ ಅರ್ಧ ಕೆಲವು ಪ್ರೇಕ್ಷಕರಿಗೆ ಕಷ್ಟವಾಯಿತು. ಮಧ್ಯಂತರದ ನಂತರ ನಾಟಕ ಚುರುಕಾಗಿ, ಹಾಡು ಕುಣಿತದಿಂದ ರಂಜಿಸಿತು. ಶೇಕ್ಸ್ಪಿಯರ್ನ ಮಹಾನ್ ದುರಂತ ನಾಟಕಗಳಾದ ಹ್ಯಾಮ್ಲೆಟ್, ಮ್ಯೋಕ್ಬೆತ್ಗೆ ಹೋಲಿಸಿದರೆ ಇದು ಪ್ರಸಿದ್ಧವಲ್ಲದ ನಾಟಕ. <br /> <br /> ಆದರೆ ಇದರಲ್ಲಿ ಕಾಳಿದಾಸನ ಶಾಕುಂತಲ ನಾಟಕದ ಮಾದರಿಯ, ಘರ್ಷಣೆಯನ್ನು ಸಾಮರಸ್ಯದಲ್ಲಿ ಅಂತ್ಯಗೊಳಿಸುವ ಭಾರತೀಯ ನಾಟ್ಯಶಾಸ್ತ್ರದ ಆಶಯವನ್ನು ಕಂಡೆ ಎಂದು ಅಕ್ಷರ ಹೇಳಿಕೊಂಡಿದ್ದಾರೆ. `ನಾಟಕವನ್ನು ಹೊಸದಾಗಿ ಅರ್ಥೈಸುವುದಕ್ಕೆ ಹೋಗದೆ ಕಥೆಯನ್ನು ಮಾತ್ರ ಹೇಳಿದ್ದೇನೆ~ ಎಂದಿದ್ದಾರೆ.<br /> <br /> ನನಗನ್ನಿಸಿದ್ದು: ನಾಟಕ ಆ ಕಾರಣಕ್ಕೆ ಸ್ವಲ್ಪ ಕುಂಟಿತೋ ಏನೋ? `ಶೇಕ್ಸ್ಪಿಯರ್ ಇನ್ ಲವ್~ ಎಂಬ 1990ರ ದಶಕದ ಸಿನಿಮಾ ಆ ಮಹಾನ್ ನಾಟಕಕಾರನ ಜೀವನವನ್ನು ಈ ಕಾಲದ ಯುವ ಪ್ರಣಯದ ಚಿತ್ರದಂತೆ, ಎಗ್ಗಿಲ್ಲದೆ ಬಿಂಬಿಸಿದೆ. ಶೇಕ್ಸ್ಪಿಯರ್ನಂಥ ಜನಪ್ರಿಯ ಬರಹಗಾರನ ರಂಜನೀಯ ಗುಣ ಮತ್ತು ಸಮಕಾಲೀನ ಅರ್ಥಸಾಧ್ಯತೆಗಳನ್ನು ಸ್ವಲ್ಪ ಸಾರಿಯೇ ಹೇಳುವುದು ತಪ್ಪಾಗಲಾರದೇನೋ?<br /> <br /> <strong>ಕ್ರಿಕೆಟ್ ಜಾತ್ರೆಯ ತಮಾಷೆಗಳು</strong><br /> ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ನೋಡಲು ಬಿಟ್ಟಿ ಟಿಕೆಟ್ ಸಿಗಲಿಲ್ಲ ಎಂದು ಉಪ ಮೇಯರ್ ಮತ್ತು ನಮ್ಮ ಘನ ಕೌನ್ಸಿಲರ್ಗಳು ಮುನಿಸಿಕೊಂಡಿದ್ದಾರೆ. ಅದೊಂದು ಪ್ರೈವೇಟ್ ವ್ಯಾಪಾರ, ಹಾಗೆಲ್ಲ ತಮ್ಮ ಹಕ್ಕು ಎಂಬಂತೆ ವಸೂಲಿಬಾಜಿ ಮಾಡಬಾರದು ಎನ್ನುವ ಸಂಕೋಚ ನಮ್ಮ ಪ್ರತಿನಿಧಿಗಳಲ್ಲಿ ಕಾಣುತ್ತಿಲ್ಲ. <br /> <br /> ಪಂದ್ಯ ನಡೆದಾಗ ಬಂದೋಬಸ್ತ್ ಮಾಡುವುದಕ್ಕೆ 1,200 ಪೊಲೀಸರು ತೊಡಗಿರುತ್ತಾರಂತೆ. ಪೊಲೀಸ್ ಇಲಾಖೆ ಇಂಥ ಖಾಸಗಿ ಇವೆಂಟ್ಗೆ ಸಮಯ ವ್ಯಯ ಮಾಡುತ್ತಿರುವುದರಿಂದ ವ್ಯವಸ್ಥಾಪಕರನ್ನು ಶುಲ್ಕ ಕೇಳುವುದು ತಪ್ಪಲ್ಲ. <br /> <br /> ಅದಿರಲಿ. ಈ ಸರ್ತಿ, ಕೊಲ್ಕತ್ತಾ ನೈಟ್ ರೈಡರ್ಸ್ನ ಚಿಯರ್ ಗರ್ಲ್ಸ್ (ಪತ್ರಕರ್ತ-ಮಿತ್ರ ಕರಿಸ್ವಾಮಿ ಅವರ ಅನುವಾದ: ಹುರಿದುಂಬಿಗಳು) ಚಡ್ಡಿ ಟಾಪ್ ಬಿಟ್ಟು ಸಾರಿ ಉಡುತ್ತಾರೆ. ಒಂದು ಪ್ರಶ್ನೆ- ಹಾಗಾದರೆ ಅವರ ಘೋಷ ಗೀತೆ `ಸಾರಿ ಜಹಾಂ ಸೆ ಅಚ್ಛಾ~ ಆಗುತ್ತಾ?<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರಿನ ಕನ್ನಡಿಗರ ಸಮುದಾಯದಲ್ಲಿ ಸಮಾರಾಧನೆಗಳು ಹೆಚ್ಚು. ಹಬ್ಬ ಹರಿದಿನಗಳ ಸಂಭ್ರಮ ಬಿಡಿ. ಬೇರೆ ದಿನಗಳಲ್ಲೂ ಒಂದಲ್ಲ ಒಂದು ಕಾರಣಕ್ಕೆ ಬಂಧು ಬಳಗವನ್ನು ಔತಣಕ್ಕೆ ಕರೆಯುವುದು ನಮ್ಮಲ್ಲಿ ಸಾಮಾನ್ಯ. <br /> <br /> ಮದುವೆ, ಮುಂಜಿ, ಸೀಮಂತ, ನಾಮಕರಣ, ಚೌಲ, ಶಷ್ಟ್ಯಬ್ಧಿ ಪೂರ್ತಿ, ವೈಕುಂಠ ಸಮಾರಾಧನೆ... ಇವ್ಯಾವುದೂ ಇಲ್ಲದಿದ್ದಾಗ ಸತ್ಯನಾರಾಯಣ ಪೂಜೆಗೆ ಮಧ್ಯಮ ವರ್ಗದ ಕುಟುಂಬಗಳಿಂದ ಆಹ್ವಾನ ಬರುತ್ತಲೇ ಇರುತ್ತದೆ. ಇಂಥ ಸಮಾರಂಭಗಳಲ್ಲಿ ಆತಿಥ್ಯ ಚೆನ್ನಾಗಿ ಮಾಡಬೇಕು ಎಂಬ ಆಯಾ ಮನೆಯವರ ಉಮೇದು ಗಮನಿಸಿರುತ್ತೀರಿ.<br /> <br /> ಆದರೆ ಇನ್ನೊಂದು ಸಂಗತಿ ಗಮನಿಸಿದ್ದೀರಾ? ಇಂಥ ಸಮಾರಂಭಕ್ಕೆ ಬರುವ ಐದು ಹಿರಿಯರಲ್ಲಿ ಒಬ್ಬರಿಗಾದರೂ ಸಿಹಿ ತಿನಿಸುಗಳನ್ನು ತಿನ್ನಲಾರದ ಕಷ್ಟ ಇರುತ್ತದೆ. ಬೇಕಾದವರು ಕರೆದಿದ್ದಾರೆ ಎಂದು ಹೋಗಿ, ಭಕ್ಷ್ಯಗಳನ್ನು ತಿನ್ನದಿರಲು ಪ್ರಯತ್ನಿಸುತ್ತಿರುತ್ತಾರೆ. ಅತಿಥೇಯರು ಬಿಡುವುದಿಲ್ಲ.<br /> <br /> `ಬೇಡ~ ಎಂದು ಅತಿಥಿಗಳು ಹೇಳಿದರೆ `ಯಾಕೆ ಬೇಡ?~ ಎಂದು ಕೇಳಿ, ಸಾರ್ವಜನಿಕವಾಗಿ ಅವರ ಆರೋಗ್ಯದ ಸಂಕಟಗಳನ್ನು ಚರ್ಚೆ ಮಾಡಲು ಶುರು ಮಾಡುತ್ತಾರೆ. ಇಂಥ ಔಷಧ ತೊಗೊಳ್ಳಿ, ಅಂಥ ಡಾಕ್ಟರ್ ಹತ್ತಿರ ಹೋಗಿ ಎಂದು ಸಲಹೆ ಕೊಡಲು ಮುಂದಾಗುತ್ತಾರೆ.<br /> <br /> ಈ ಮುಜುಗರ ಸಾಲದು ಎಂಬಂತೆ `ಒಂದು ಲಾಡು ತಿಂದುಬಿಡಿ, ಏನಾಗಲ್ಲ...~, `ಪ್ರಸಾದ ಬೇಡ ಅನ್ನಬಾರದು~ ಅನ್ನುವಂಥ ಅಕ್ಕರೆ ತೋರಿಸುವ, ತೀರ ಬೇಜವಾಬ್ದಾರಿಯ ಮಾತು ಆಡುತ್ತಾರೆ. ಊಟದಲ್ಲಿ ಮಿತಿ ಪ್ರಯೋಗಿಸುವವರೆಲ್ಲ ಸಂಕೋಚ ಪಡುತ್ತಿದ್ದಾರೆ ಎಂದು ಅಪಾರ್ಥ ಮಾಡಿಕೊಂಡು ಬಲವಂತ ಮಾಡುತ್ತಾರೆ.<br /> <br /> ಈ ಹರಟೆ ಸಾಕುಮಾಡುವುದು ಹೇಗೆ ಎಂದು ತೋರದೆ, ಭಕ್ಷ್ಯಗಳನ್ನು ತಿನ್ನಬೇಕಾದ ಅನಿವಾರ್ಯ ಅತಿಥಿಗಳಿಗೆ ಒದಗಿಬರುತ್ತದೆ. ಕೆಲವರು ಈ ಹಿಂಸೆ ತಾಳಲಾರದೆ ಏನೋ ಸಬೂಬು ಹೇಳಿ ಸಮಾರಾಧನೆಗಳಿಗೆ ಹೋಗುವುದನ್ನೇ ತಪ್ಪಿಸಿಕೊಳ್ಳುತ್ತಾರೆ. ಒತ್ತಾಯಕ್ಕೆ ಒಬ್ಬಟ್ಟು, ಚಿರೋಟಿ, ಜಿಲೇಬಿ ತಿನ್ನುವವರು ಎಂಥೆಂಥ ಕಷ್ಟ ಅನುಭವಿಸುತ್ತಾರೆ ಎಂದು ಬಲವಂತ ಮಾಡಿ ತಿನಿಸಿದವರ ಗಮನಕ್ಕೆ ಬರುವುದೇ ಇಲ್ಲ. <br /> <br /> ಕೆಲವು ಡಯಾಬಿಟಿಸ್ ಪೀಡಿತರು ಸಿಹಿ ತಿಂಡಿ ತಿನ್ನಲು ಸಮಾರಾಧನೆಯ ನೆಪಕ್ಕಾಗಿ ಕಾಯುವುದು ನಿಜ. ಆದರೆ ಅತಿಥಿಗಳ ವೈದ್ಯಕೀಯ ಸಂಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ, ಇರಿಸುಮುರುಸು ಮಾಡದ ಸೂಕ್ಷ್ಮ ಸಮಾರಾಧನೆ ಮಾಡುವವರಿಗೆ ಇರಬೇಡವೇ?<br /> <br /> ಬೆಂಗಳೂರಿನ ಎಷ್ಟೋ ಜನ ಒಂದಲ್ಲ ಒಂದು ಕಾರಣಕ್ಕೆ ಆಹಾರದಲ್ಲಿ ಏನೋ ಕಟ್ಟುನಿಟ್ಟು ಪಾಲಿಸಲು ಪ್ರಯತ್ನಿಸುತ್ತಿರುತ್ತಾರೆ. ಅದನ್ನು ಗೌರವಿಸುವುದು ಅಗತ್ಯವಲ್ಲವೇ? `ಕೊಲ್ಲು ಹುಡುಗಿ ಒಮ್ಮೆ ನನ್ನ, ಹಾಗೇ ಸುಮ್ಮನೆ~ ಅನ್ನುವ ಸಿನಿಮಾ ಹಾಡು ಕೇಳಿರುತ್ತೀರಿ. ಸಿಹಿ, ಅನ್ನ, ಮತ್ತು ಇತರ ಕಾರ್ಬೋಹೈಡ್ರೇಟ್ ಐಟಂಗಳನ್ನು ತಿನ್ನಿಸಿ ಹಾಗೆ ಸುಮ್ಮನೆ ಕೊಲ್ಲುವ ಜನ ನಮ್ಮ ನಡುವೆ ವಿಪರೀತ ಇದ್ದಾರೆ!<br /> <br /> ಭಾರತ ವಿಶ್ವದ ಡಯಾಬಿಟಿಸ್ ರಾಜಧಾನಿ ಎಂದು ಕರೆಸಿಕೊಳ್ಳುತ್ತದೆ. ಇಲ್ಲಿ ನಾಲ್ಕು ಕೋಟಿ (ಹೌದು, ನಾಲ್ಕು ಕೋಟಿ!) ಜನರನ್ನು ಮಧುಮೇಹ ಬಾಧಿಸುತ್ತದಂತೆ. ಬೆಂಗಳೂರಿನ ವಯಸ್ಕರಲ್ಲಿ ಶೇಕಡಾ 15ರಷ್ಟು ಜನರಿಗೆ ಈ ತೊಂದರೆ ಇದೆ. ಇದು ಎಷ್ಟು ದೊಡ್ಡ ಸಮಸ್ಯೆ ಎಂದು ನಮಗೆ ಸಾಮಾಜಿಕ ಮಟ್ಟದಲ್ಲಿ ಅರಿವಾದಂತಿಲ್ಲ.<br /> <br /> ಬೆಂಗಳೂರಿನ ಜೀವನದ ಒತ್ತಡ, ಆಹಾರದ ಕಲಬೆರಕೆ, ಅಹೋರಾತ್ರಿ ಕೆಲಸ ಮಾಡುವ ಅಭ್ಯಾಸ, ಸಂಬಂಧಗಳ ಗೋಜಲು, ಹುಚ್ಚು ಹಿಡಿಸುವ ಟ್ರಾಫಿಕ್, ವ್ಯಾಯಾಮದ ಕೊರತೆ... ಇವೆಲ್ಲ ಸೇರಿ ಡಯಾಬಿಟಿಸ್ ನಮ್ಮೂರಿನಲ್ಲಿ ರಾರಾಜಿಸುವಂತೆ ಮಾಡಿವೆ ಎಂದು ವೈದ್ಯರ ಅಂದಾಜು.<br /> <br /> ವೈದ್ಯರು ಆಹಾರದ ಬಗ್ಗೆ ಹೇಳಬಲ್ಲರೇ ಹೊರತು ಸಮಾರಾಧನೆಯಲ್ಲಿ ಅತಿಥೇಯರು ಹೇಗೆ ನಡೆದುಕೊಳ್ಳಬೇಕು ಎಂದು ಹೇಳಲಾರರು. ಡಯಾಬಿಟಿಸ್ ಎಂಬ ಭಯಂಕರ ರಾಕ್ಷಸ ಅಟ್ಟಹಾಸದಿಂದ ನಮ್ಮೆದುರೇ ಕೇಕೆ ಹಾಕುತ್ತಿದ್ದರೂ ಬಂಧು ಬಳಗಕ್ಕೆ ಬಲವಂತವಾಗಿ ಲಾಡು ತಿನ್ನಿಸುವ ನಮ್ಮ ಉತ್ಸಾಹವನ್ನು ನಾವೇ ಹತ್ತಿಕ್ಕಿಕೊಳ್ಳಬೇಕು!<br /> <br /> <strong>ಕನ್ನಡದಲ್ಲಿ ಮತ್ತೆ ಶೇಕ್ಸ್ಪಿಯರ್</strong><br /> ನೀನಾಸಂ ತಂಡ ಹೋದ ಬುಧವಾರ ಬೆಂಗಳೂರಿಗೆ ಬಂದು `ಶಿಶಿರ ವಸಂತ~ ಎಂಬ ನಾಟಕವನ್ನು ಆಡಿತು. ಇದು ಶೇಕ್ಸ್ಪಿಯರ್ನ `ವಿಂಟರ್ಸ್ ಟೇಲ್~ ನಾಟಕದ ಅನುವಾದ. ಕೆ.ವಿ.ಅಕ್ಷರ ಅವರ ಅನುಭವಸ್ಥ ನಿರ್ದೇಶನದಲ್ಲಿ ಹೆಗ್ಗೋಡಿನ ಸ್ಥಳೀಯರೇ ಆಡಿದ ಈ ಆಟ ಪಳಗಿದ ವೃತ್ತಿಪರರು ಆಡಿದಷ್ಟು ಸರಾಗವಾಗಿ ಸಾಗಿತು. ಇಂಥ ದೊಡ್ಡ ಪ್ರಮಾಣದ ಪ್ರಯೋಗ ನೋಡುವುದೇ ಈಚೆಗೆ ಅಪರೂಪವಾಗಿದೆ. ತಂಡವನ್ನು ಇಲ್ಲಿ ಕರೆಸಿದವರು ಬೆಂಗಳೂರಿನ ಸಂಚಯ ನಾಟಕ ವೃಂದದವರು. <br /> <br /> ಮೈಕ್ ಸಹಕರಿಸದ ಕಾರಣ ಮೊದಲ ಅರ್ಧ ಕೆಲವು ಪ್ರೇಕ್ಷಕರಿಗೆ ಕಷ್ಟವಾಯಿತು. ಮಧ್ಯಂತರದ ನಂತರ ನಾಟಕ ಚುರುಕಾಗಿ, ಹಾಡು ಕುಣಿತದಿಂದ ರಂಜಿಸಿತು. ಶೇಕ್ಸ್ಪಿಯರ್ನ ಮಹಾನ್ ದುರಂತ ನಾಟಕಗಳಾದ ಹ್ಯಾಮ್ಲೆಟ್, ಮ್ಯೋಕ್ಬೆತ್ಗೆ ಹೋಲಿಸಿದರೆ ಇದು ಪ್ರಸಿದ್ಧವಲ್ಲದ ನಾಟಕ. <br /> <br /> ಆದರೆ ಇದರಲ್ಲಿ ಕಾಳಿದಾಸನ ಶಾಕುಂತಲ ನಾಟಕದ ಮಾದರಿಯ, ಘರ್ಷಣೆಯನ್ನು ಸಾಮರಸ್ಯದಲ್ಲಿ ಅಂತ್ಯಗೊಳಿಸುವ ಭಾರತೀಯ ನಾಟ್ಯಶಾಸ್ತ್ರದ ಆಶಯವನ್ನು ಕಂಡೆ ಎಂದು ಅಕ್ಷರ ಹೇಳಿಕೊಂಡಿದ್ದಾರೆ. `ನಾಟಕವನ್ನು ಹೊಸದಾಗಿ ಅರ್ಥೈಸುವುದಕ್ಕೆ ಹೋಗದೆ ಕಥೆಯನ್ನು ಮಾತ್ರ ಹೇಳಿದ್ದೇನೆ~ ಎಂದಿದ್ದಾರೆ.<br /> <br /> ನನಗನ್ನಿಸಿದ್ದು: ನಾಟಕ ಆ ಕಾರಣಕ್ಕೆ ಸ್ವಲ್ಪ ಕುಂಟಿತೋ ಏನೋ? `ಶೇಕ್ಸ್ಪಿಯರ್ ಇನ್ ಲವ್~ ಎಂಬ 1990ರ ದಶಕದ ಸಿನಿಮಾ ಆ ಮಹಾನ್ ನಾಟಕಕಾರನ ಜೀವನವನ್ನು ಈ ಕಾಲದ ಯುವ ಪ್ರಣಯದ ಚಿತ್ರದಂತೆ, ಎಗ್ಗಿಲ್ಲದೆ ಬಿಂಬಿಸಿದೆ. ಶೇಕ್ಸ್ಪಿಯರ್ನಂಥ ಜನಪ್ರಿಯ ಬರಹಗಾರನ ರಂಜನೀಯ ಗುಣ ಮತ್ತು ಸಮಕಾಲೀನ ಅರ್ಥಸಾಧ್ಯತೆಗಳನ್ನು ಸ್ವಲ್ಪ ಸಾರಿಯೇ ಹೇಳುವುದು ತಪ್ಪಾಗಲಾರದೇನೋ?<br /> <br /> <strong>ಕ್ರಿಕೆಟ್ ಜಾತ್ರೆಯ ತಮಾಷೆಗಳು</strong><br /> ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ನೋಡಲು ಬಿಟ್ಟಿ ಟಿಕೆಟ್ ಸಿಗಲಿಲ್ಲ ಎಂದು ಉಪ ಮೇಯರ್ ಮತ್ತು ನಮ್ಮ ಘನ ಕೌನ್ಸಿಲರ್ಗಳು ಮುನಿಸಿಕೊಂಡಿದ್ದಾರೆ. ಅದೊಂದು ಪ್ರೈವೇಟ್ ವ್ಯಾಪಾರ, ಹಾಗೆಲ್ಲ ತಮ್ಮ ಹಕ್ಕು ಎಂಬಂತೆ ವಸೂಲಿಬಾಜಿ ಮಾಡಬಾರದು ಎನ್ನುವ ಸಂಕೋಚ ನಮ್ಮ ಪ್ರತಿನಿಧಿಗಳಲ್ಲಿ ಕಾಣುತ್ತಿಲ್ಲ. <br /> <br /> ಪಂದ್ಯ ನಡೆದಾಗ ಬಂದೋಬಸ್ತ್ ಮಾಡುವುದಕ್ಕೆ 1,200 ಪೊಲೀಸರು ತೊಡಗಿರುತ್ತಾರಂತೆ. ಪೊಲೀಸ್ ಇಲಾಖೆ ಇಂಥ ಖಾಸಗಿ ಇವೆಂಟ್ಗೆ ಸಮಯ ವ್ಯಯ ಮಾಡುತ್ತಿರುವುದರಿಂದ ವ್ಯವಸ್ಥಾಪಕರನ್ನು ಶುಲ್ಕ ಕೇಳುವುದು ತಪ್ಪಲ್ಲ. <br /> <br /> ಅದಿರಲಿ. ಈ ಸರ್ತಿ, ಕೊಲ್ಕತ್ತಾ ನೈಟ್ ರೈಡರ್ಸ್ನ ಚಿಯರ್ ಗರ್ಲ್ಸ್ (ಪತ್ರಕರ್ತ-ಮಿತ್ರ ಕರಿಸ್ವಾಮಿ ಅವರ ಅನುವಾದ: ಹುರಿದುಂಬಿಗಳು) ಚಡ್ಡಿ ಟಾಪ್ ಬಿಟ್ಟು ಸಾರಿ ಉಡುತ್ತಾರೆ. ಒಂದು ಪ್ರಶ್ನೆ- ಹಾಗಾದರೆ ಅವರ ಘೋಷ ಗೀತೆ `ಸಾರಿ ಜಹಾಂ ಸೆ ಅಚ್ಛಾ~ ಆಗುತ್ತಾ?<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>