<p><strong>ರಾಯ್ಪುರ (ಪಿಟಿಐ):</strong> ಸುಕ್ಮಾ ಜಿಲ್ಲೆಯ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರ ಬಿಡುಗಡೆಗೆ ನಕ್ಸಲರು ಎರಡು ಪ್ರಮುಖ ಬೇಡಿಕೆಗಳನ್ನು ಭಾನುವಾರ ಸರ್ಕಾರದ ಮುಂದೆ ಇರಿಸಿದ್ದಾರೆ. ಜೈಲಿನಲ್ಲಿರುವ ತಮ್ಮ ಎಂಟು ಸಹಚರರನ್ನು ಏ. 25ರೊಳಗೆ ಬಿಡಬೇಕು ಮತ್ತು `ಗ್ರೀನ್ ಹಂಟ್~ ಕಾರ್ಯಾಚರಣೆ ನಿಲ್ಲಿಸುವಂತೆ ಷರತ್ತು ಹಾಕಿದ್ದಾರೆ. <br /> <br /> ಜೊತೆಗೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿರುವವರನ್ನೂ ಬಿಡುಗಡೆ ಮಾಡಬೇಕು ಎಂಬುದು ನಕ್ಸಲರ ಒತ್ತಾಯವಾಗಿದೆ.<br /> <br /> ನಕ್ಸಲರು ತಮ್ಮ ಬೇಡಿಕೆಯ ಧ್ವನಿ ಮುದ್ರಿಕೆಯನ್ನು ಕೆಲವು ಪತ್ರಕರ್ತರಿಗೆ ನೀಡಿದ್ದಾರೆ ಎಂದು ತಿಳಿಸಿರುವ ಛತ್ತೀಸ್ಗಡ ಪೊಲೀಸರು, ಮೆನನ್ ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ.<br /> <br /> ನಕ್ಸಲರು ಬಿಡುಗಡೆ ಮಾಡಲು ಹೇಳಿರುವ ತಮ್ಮ ಸಹಚರರ ಪಟ್ಟಿ ಇಂತಿದೆ -ಮರ್ಕಂ ಗೋಪಣ್ಣ ಅಲಿಯಾಸ್ ಸತ್ಯಂ ರೆಡ್ಡಿ, ನಿರ್ಮಾಲಾ ಅಕ್ಕ ಅಲಿಯಾಸ್ ವಿಜಯಲಕ್ಷ್ಮೀ, ದೇವಪಾಲ್ ಚಂದ್ರಶೇಖರ್ ರೆಡ್ಡಿ, ಶಾಂತಿಪ್ರಿಯ ರೆಡ್ಡಿ, ಮೀನಾ ಚೌಧರಿ, ಕೊರ್ಸಾ ಸನ್ನಿ, ಮರ್ಕಂ ಸನ್ನಿ ಮತ್ತು ಅಸಿತ್ ಕುಮಾರ್ ಸೆನ್.<br /> <br /> ಏ. 25ರೊಳಗೆ ತಮ್ಮ ಬೇಡಿಕೆ ಈಡೇರಿದರೆ ತದನಂತರ ಒತ್ತೆಯಾಳಾಗಿರುವ ಜಿಲ್ಲಾಧಿಕಾರಿ ಬಿಡುಗಡೆ ಕುರಿತ ನಿರ್ಧಾರವನ್ನು ಜನರ ನ್ಯಾಯಾಲಯ (ಜನ್ ಅದಾಲತ್)ನಲ್ಲಿ ಕೈಗೊಳ್ಳುವುದಾಗಿ ನಕ್ಸಲರು ತಿಳಿಸಿದ್ದಾರೆ ಎಂದು ನಕ್ಸಲ್ ನಿಗ್ರಹ ಪಡೆಯ ಮುಖ್ಯಸ್ಥರೂ ಆದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಮ್ ನಿವಾಸ್ ತಿಳಿಸಿದ್ದಾರೆ.<br /> <br /> ನಕ್ಸಲರು ಸರ್ಕಾರವನ್ನು ನೇರವಾಗಿ ಸಂಪರ್ಕಿಸಿಲ್ಲ ಮತ್ತು ಮಾಧ್ಯಮದವರ ಮೂಲಕ ದೊರಕಿರುವ ಧ್ವನಿ ಮುದ್ರಿಕೆಯು ನಕ್ಸಲರ ಮೂಲಕವೇ ಬಂದಿದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕಿದೆ. ಜೊತೆಗೆ ಜಿಲ್ಲಾಧಿಕಾರಿಗಳನ್ನು ಅಪಹರಿಸುವ ಗುಂಪು ಯಾವುದು ಎನ್ನುವುದು ಇನ್ನೂ ತಿಳಿದಿಲ್ಲ ಎಂದು ಅವರು ತಿಳಿಸಿದ್ದಾರೆ. <br /> <br /> ಈ ಮಧ್ಯೆ, ಮೆನನ್ ಅವರ ಬಿಡುಗಡೆಗಾಗಿ ನಕ್ಸಲರೊಂದಿಗೆ ಸಂಧಾನ ನಡೆಸುವ ಇಂಗಿತವನ್ನು ಸ್ವಾಮಿ ಅಗ್ನಿವೇಶ್ ವ್ಯಕ್ತಪಡಿಸಿ ಸುದ್ದಿಸಂಸ್ಥೆಗೆ ವ್ಯಕ್ತಪಡಿಸಿದ್ದರು.</p>.<p><strong>ಪತ್ನಿ, ತಂದೆ ಮೊರೆ</strong><br /> ಅಲೆಕ್ಸ್ ಪಾಲ್ ಮೆನನ್ ಅವರನ್ನು ಕೆಲವು ತಿಂಗಳ ಹಿಂದೆಯಷ್ಟೆ ವಿವಾಹವಾಗಿರುವ ಆಶಾ ಮೆನನ್ ತಮ್ಮ ಪತಿಯನ್ನು ಬಿಡುಗಡೆ ಮಾಡುವಮತೆ ನಕ್ಸಲರನ್ನು ಕೋರಿದ್ದಾರೆ. <br /> <br /> `ಅವರು (ಅಲೆಕ್ಸ್ ಪಾಲ್) ಆಸ್ತಮಾದಿಂದ ಬಳಲುತ್ತಿದ್ದಾರೆ. ಔಷಧ ತೆಗೆದುಕೊಳ್ಳದಿದ್ದರೆ ಅವರ ಆರೋಗ್ಯ ಹದಗೆಡುತ್ತದೆ. ಯಾತನೆಯನ್ನು ಅವರು ತಾಳಲಾರರು. ಜನರ ಸಂಕಷ್ಟಕ್ಕೆ ಆಗುವ ಮಾನವೀಯ ಗುಣ ಅವರದ್ದು. ಆದ್ದರಿಂದ ಅವರನ್ನು ಬಿಟ್ಟುಬಿಡಿ~ ಎಂದು ಆಶಾ ಅಂಗಲಾಚಿದ್ದಾರೆ. ಅಲೆಕ್ಸ್ ಮಾವೊವಾದಿಗಳ ಶತ್ರುವಲ್ಲ, ಆತನನ್ನು ಬಿಟ್ಟುಬಿಡಿ ಎಂದು ಅವರ ತಂದೆ ವರದಾಸ್ ನಕ್ಸಲರಿಗೆ ಚೆನ್ನೈನಲ್ಲಿ ಮನವಿ ಮಾಡಿಕೊಂಡಿದ್ದಾರೆ.<br /> <strong><br /> ಬಿಹಾರದಲ್ಲಿ ಕಟ್ಟೆಚ್ಚರ</strong><br /> ಛತ್ತೀಸ್ಗಡ ಮತ್ತು ಒಡಿಶಾದಲ್ಲಿ ಮಾವೊವಾದಿಗಳ ಚಟುವಟಿಕೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಬಿಹಾರದ ನಕ್ಸಲ್ ಪೀಡಿತ 33 ಜಿಲ್ಲೆಗಳಲ್ಲಿ ಕಟ್ಟೆಚ್ಚರದಿಂದ ಇರುವಂತೆ ಪೊಲೀಸರಿಗೆ ಸರ್ಕಾರ ಸೂಚಿಸಿದೆ.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯ್ಪುರ (ಪಿಟಿಐ):</strong> ಸುಕ್ಮಾ ಜಿಲ್ಲೆಯ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರ ಬಿಡುಗಡೆಗೆ ನಕ್ಸಲರು ಎರಡು ಪ್ರಮುಖ ಬೇಡಿಕೆಗಳನ್ನು ಭಾನುವಾರ ಸರ್ಕಾರದ ಮುಂದೆ ಇರಿಸಿದ್ದಾರೆ. ಜೈಲಿನಲ್ಲಿರುವ ತಮ್ಮ ಎಂಟು ಸಹಚರರನ್ನು ಏ. 25ರೊಳಗೆ ಬಿಡಬೇಕು ಮತ್ತು `ಗ್ರೀನ್ ಹಂಟ್~ ಕಾರ್ಯಾಚರಣೆ ನಿಲ್ಲಿಸುವಂತೆ ಷರತ್ತು ಹಾಕಿದ್ದಾರೆ. <br /> <br /> ಜೊತೆಗೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿರುವವರನ್ನೂ ಬಿಡುಗಡೆ ಮಾಡಬೇಕು ಎಂಬುದು ನಕ್ಸಲರ ಒತ್ತಾಯವಾಗಿದೆ.<br /> <br /> ನಕ್ಸಲರು ತಮ್ಮ ಬೇಡಿಕೆಯ ಧ್ವನಿ ಮುದ್ರಿಕೆಯನ್ನು ಕೆಲವು ಪತ್ರಕರ್ತರಿಗೆ ನೀಡಿದ್ದಾರೆ ಎಂದು ತಿಳಿಸಿರುವ ಛತ್ತೀಸ್ಗಡ ಪೊಲೀಸರು, ಮೆನನ್ ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ.<br /> <br /> ನಕ್ಸಲರು ಬಿಡುಗಡೆ ಮಾಡಲು ಹೇಳಿರುವ ತಮ್ಮ ಸಹಚರರ ಪಟ್ಟಿ ಇಂತಿದೆ -ಮರ್ಕಂ ಗೋಪಣ್ಣ ಅಲಿಯಾಸ್ ಸತ್ಯಂ ರೆಡ್ಡಿ, ನಿರ್ಮಾಲಾ ಅಕ್ಕ ಅಲಿಯಾಸ್ ವಿಜಯಲಕ್ಷ್ಮೀ, ದೇವಪಾಲ್ ಚಂದ್ರಶೇಖರ್ ರೆಡ್ಡಿ, ಶಾಂತಿಪ್ರಿಯ ರೆಡ್ಡಿ, ಮೀನಾ ಚೌಧರಿ, ಕೊರ್ಸಾ ಸನ್ನಿ, ಮರ್ಕಂ ಸನ್ನಿ ಮತ್ತು ಅಸಿತ್ ಕುಮಾರ್ ಸೆನ್.<br /> <br /> ಏ. 25ರೊಳಗೆ ತಮ್ಮ ಬೇಡಿಕೆ ಈಡೇರಿದರೆ ತದನಂತರ ಒತ್ತೆಯಾಳಾಗಿರುವ ಜಿಲ್ಲಾಧಿಕಾರಿ ಬಿಡುಗಡೆ ಕುರಿತ ನಿರ್ಧಾರವನ್ನು ಜನರ ನ್ಯಾಯಾಲಯ (ಜನ್ ಅದಾಲತ್)ನಲ್ಲಿ ಕೈಗೊಳ್ಳುವುದಾಗಿ ನಕ್ಸಲರು ತಿಳಿಸಿದ್ದಾರೆ ಎಂದು ನಕ್ಸಲ್ ನಿಗ್ರಹ ಪಡೆಯ ಮುಖ್ಯಸ್ಥರೂ ಆದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಮ್ ನಿವಾಸ್ ತಿಳಿಸಿದ್ದಾರೆ.<br /> <br /> ನಕ್ಸಲರು ಸರ್ಕಾರವನ್ನು ನೇರವಾಗಿ ಸಂಪರ್ಕಿಸಿಲ್ಲ ಮತ್ತು ಮಾಧ್ಯಮದವರ ಮೂಲಕ ದೊರಕಿರುವ ಧ್ವನಿ ಮುದ್ರಿಕೆಯು ನಕ್ಸಲರ ಮೂಲಕವೇ ಬಂದಿದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕಿದೆ. ಜೊತೆಗೆ ಜಿಲ್ಲಾಧಿಕಾರಿಗಳನ್ನು ಅಪಹರಿಸುವ ಗುಂಪು ಯಾವುದು ಎನ್ನುವುದು ಇನ್ನೂ ತಿಳಿದಿಲ್ಲ ಎಂದು ಅವರು ತಿಳಿಸಿದ್ದಾರೆ. <br /> <br /> ಈ ಮಧ್ಯೆ, ಮೆನನ್ ಅವರ ಬಿಡುಗಡೆಗಾಗಿ ನಕ್ಸಲರೊಂದಿಗೆ ಸಂಧಾನ ನಡೆಸುವ ಇಂಗಿತವನ್ನು ಸ್ವಾಮಿ ಅಗ್ನಿವೇಶ್ ವ್ಯಕ್ತಪಡಿಸಿ ಸುದ್ದಿಸಂಸ್ಥೆಗೆ ವ್ಯಕ್ತಪಡಿಸಿದ್ದರು.</p>.<p><strong>ಪತ್ನಿ, ತಂದೆ ಮೊರೆ</strong><br /> ಅಲೆಕ್ಸ್ ಪಾಲ್ ಮೆನನ್ ಅವರನ್ನು ಕೆಲವು ತಿಂಗಳ ಹಿಂದೆಯಷ್ಟೆ ವಿವಾಹವಾಗಿರುವ ಆಶಾ ಮೆನನ್ ತಮ್ಮ ಪತಿಯನ್ನು ಬಿಡುಗಡೆ ಮಾಡುವಮತೆ ನಕ್ಸಲರನ್ನು ಕೋರಿದ್ದಾರೆ. <br /> <br /> `ಅವರು (ಅಲೆಕ್ಸ್ ಪಾಲ್) ಆಸ್ತಮಾದಿಂದ ಬಳಲುತ್ತಿದ್ದಾರೆ. ಔಷಧ ತೆಗೆದುಕೊಳ್ಳದಿದ್ದರೆ ಅವರ ಆರೋಗ್ಯ ಹದಗೆಡುತ್ತದೆ. ಯಾತನೆಯನ್ನು ಅವರು ತಾಳಲಾರರು. ಜನರ ಸಂಕಷ್ಟಕ್ಕೆ ಆಗುವ ಮಾನವೀಯ ಗುಣ ಅವರದ್ದು. ಆದ್ದರಿಂದ ಅವರನ್ನು ಬಿಟ್ಟುಬಿಡಿ~ ಎಂದು ಆಶಾ ಅಂಗಲಾಚಿದ್ದಾರೆ. ಅಲೆಕ್ಸ್ ಮಾವೊವಾದಿಗಳ ಶತ್ರುವಲ್ಲ, ಆತನನ್ನು ಬಿಟ್ಟುಬಿಡಿ ಎಂದು ಅವರ ತಂದೆ ವರದಾಸ್ ನಕ್ಸಲರಿಗೆ ಚೆನ್ನೈನಲ್ಲಿ ಮನವಿ ಮಾಡಿಕೊಂಡಿದ್ದಾರೆ.<br /> <strong><br /> ಬಿಹಾರದಲ್ಲಿ ಕಟ್ಟೆಚ್ಚರ</strong><br /> ಛತ್ತೀಸ್ಗಡ ಮತ್ತು ಒಡಿಶಾದಲ್ಲಿ ಮಾವೊವಾದಿಗಳ ಚಟುವಟಿಕೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಬಿಹಾರದ ನಕ್ಸಲ್ ಪೀಡಿತ 33 ಜಿಲ್ಲೆಗಳಲ್ಲಿ ಕಟ್ಟೆಚ್ಚರದಿಂದ ಇರುವಂತೆ ಪೊಲೀಸರಿಗೆ ಸರ್ಕಾರ ಸೂಚಿಸಿದೆ.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>