<p><strong>ವಿಜಾಪುರ: </strong>ಸಂಖ್ಯಾಶಾಸ್ತ್ರ ವಿಷಯವು ಗಣಕಯಂತ್ರ ಮತ್ತು ಮಾಹಿತಿ ತಂತ್ರಜ್ಞಾನ ವಿಷಯಕ್ಕೆ ಪೂರಕವಾಗಿದ್ದು, ಉನ್ನತ ಶಿಕ್ಷಣದಲ್ಲಿ ಸಂಖ್ಯಾಶಾಸ್ತ್ರ ವಿಷಯದ ಕಲಿಕೆ ಅವಶ್ಯವಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಸಂಖ್ಯಾಶಾಸ್ತ್ರ ವಿಭಾಗದ ನಿವೃತ ಮುಖ್ಯಸ್ಥ ಡಾ. ಎಂ.ಎಸ್. ಚಿಕ್ಕಗೌಡರ ಅಭಿಪ್ರಾಯಪಟ್ಟರು.<br /> <br /> ತಿಕೋಟಾ ಗ್ರಾಮದಲ್ಲಿನ ಬಿ.ಎಲ್.ಡಿ.ಇ. ಸಂಸ್ಥೆಯ ನೂತನ ಕಲಾ ಮಹಾವಿದ್ಯಾಲಯದಲ್ಲಿ ಯುಜಿಸಿ ಪ್ರಾಯೋಜಕತ್ವದಲ್ಲಿ ಭಾನುವಾರ ನಡೆದ ಉನ್ನತ ಶಿಕ್ಷಣದಲ್ಲಿ ಸಂಖ್ಯಾಶಾಸ್ತ್ರದ ಅವಶ್ಯಕತೆ ಕುರಿತ ರಾಷ್ಟೀಯ ವಿಚಾರ ಸಂಕಿರಣ ಉದ್ಘಾಟಿಸಿದರು.<br /> <br /> ಗಣಕಯಂತ್ರದ ಉಪಯೋಗದಿಂದ ಸಂಖ್ಯಾಶಾಸ್ತ್ರದ ಬಳಕೆಯಲ್ಲಿ ಕ್ರಾಂತಿಯಾಗಿದೆ. ಗಣತಿ ಸೇರಿದಂತೆ ಅನೇಕ ವಿಷಯಗಳ ಮಾಹಿತಿಯನ್ನು ನೀಡುವ ಸಂಖ್ಯಾಶಾಸ್ತ್ರ, ವಿಷಯ ಸಂಗ್ರಹಣೆ ಕಾಲ್ಪನಿಕವಾಗಿರದೆ ನೈಜವಾಗಿರಬೇಕು. ಈ ಹಿನ್ನೆಲೆಯಲ್ಲಿ ಸಂಖ್ಯಾಶಾಸ್ತ್ರದ ಅಭ್ಯಾಸ ಅವಶ್ಯವಾಗಿದೆ ಎಂದರು.<br /> <br /> ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಎಲ್.ಡಿ.ಇ ಸಂಸ್ಥೆಯ ಕುಲಪತಿ ಬಿ.ಜಿ. ಮೂಲಿಮನಿ ಭಾಷೆಗಳಂತೆ ಸಂಖ್ಯಾಶಾಸ್ತ್ರದ ಜ್ಞಾನವೂ ಅವಶ್ಯ. ಇದು ಇತರ ವಿಷಯಗಳ ಅಧ್ಯಯನಕ್ಕೂ ಆಧಾರವಾಗಿದೆ ಎಂದರು.<br /> <br /> ಕವಿವಿ ಸಂಖ್ಯಾಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಡಾ ಎಂ.ವಿ. ಮುದ್ದಾಪುರ, ಬಿ.ಎಲ್.ಡಿ.ಇ. ಸಂಸ್ಥೆಯ ಆಡಳಿತಾಧಿಕಾರಿಗಳಾದ ಪ್ರೊ. ಎಸ್.ಎಚ್. ಲಗಳಿ, ಪ್ರೊ. ಕೆ.ಎಸ್. ಬಿರಾದಾರ, ನಿವೃತ್ತ ಪ್ರಾಚಾರ್ಯ ಎಸ್.ಸಿ. ಹಿರೇಮಠ, ಪ್ರಾಚಾರ್ಯ ಎಸ್.ಜಿ. ಗಣಿ, ಕೆ.ಎಂ. ಲಮಾಣಿ ಉಪಸ್ಥಿತರಿದ್ದರು.<br /> <br /> ಪ್ರೊ. ಸಿದ್ದಕ್ ಪ್ರಾರ್ಥನೆ ಗೀತೆ ಹಾಡಿದರು. ಪ್ರಾಚಾರ್ಯ ಎಸ್.ಜಿ. ಗಣಿ ಸ್ವಾಗತಿಸಿದರು. ಎಲ್.ಎಂ. ಮುಂಡಾಸನವರ ನಿರೂಪಿಸಿದರು. ಕೆ.ಎಂ. ಲಮಾಣಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಾಪುರ: </strong>ಸಂಖ್ಯಾಶಾಸ್ತ್ರ ವಿಷಯವು ಗಣಕಯಂತ್ರ ಮತ್ತು ಮಾಹಿತಿ ತಂತ್ರಜ್ಞಾನ ವಿಷಯಕ್ಕೆ ಪೂರಕವಾಗಿದ್ದು, ಉನ್ನತ ಶಿಕ್ಷಣದಲ್ಲಿ ಸಂಖ್ಯಾಶಾಸ್ತ್ರ ವಿಷಯದ ಕಲಿಕೆ ಅವಶ್ಯವಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಸಂಖ್ಯಾಶಾಸ್ತ್ರ ವಿಭಾಗದ ನಿವೃತ ಮುಖ್ಯಸ್ಥ ಡಾ. ಎಂ.ಎಸ್. ಚಿಕ್ಕಗೌಡರ ಅಭಿಪ್ರಾಯಪಟ್ಟರು.<br /> <br /> ತಿಕೋಟಾ ಗ್ರಾಮದಲ್ಲಿನ ಬಿ.ಎಲ್.ಡಿ.ಇ. ಸಂಸ್ಥೆಯ ನೂತನ ಕಲಾ ಮಹಾವಿದ್ಯಾಲಯದಲ್ಲಿ ಯುಜಿಸಿ ಪ್ರಾಯೋಜಕತ್ವದಲ್ಲಿ ಭಾನುವಾರ ನಡೆದ ಉನ್ನತ ಶಿಕ್ಷಣದಲ್ಲಿ ಸಂಖ್ಯಾಶಾಸ್ತ್ರದ ಅವಶ್ಯಕತೆ ಕುರಿತ ರಾಷ್ಟೀಯ ವಿಚಾರ ಸಂಕಿರಣ ಉದ್ಘಾಟಿಸಿದರು.<br /> <br /> ಗಣಕಯಂತ್ರದ ಉಪಯೋಗದಿಂದ ಸಂಖ್ಯಾಶಾಸ್ತ್ರದ ಬಳಕೆಯಲ್ಲಿ ಕ್ರಾಂತಿಯಾಗಿದೆ. ಗಣತಿ ಸೇರಿದಂತೆ ಅನೇಕ ವಿಷಯಗಳ ಮಾಹಿತಿಯನ್ನು ನೀಡುವ ಸಂಖ್ಯಾಶಾಸ್ತ್ರ, ವಿಷಯ ಸಂಗ್ರಹಣೆ ಕಾಲ್ಪನಿಕವಾಗಿರದೆ ನೈಜವಾಗಿರಬೇಕು. ಈ ಹಿನ್ನೆಲೆಯಲ್ಲಿ ಸಂಖ್ಯಾಶಾಸ್ತ್ರದ ಅಭ್ಯಾಸ ಅವಶ್ಯವಾಗಿದೆ ಎಂದರು.<br /> <br /> ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಎಲ್.ಡಿ.ಇ ಸಂಸ್ಥೆಯ ಕುಲಪತಿ ಬಿ.ಜಿ. ಮೂಲಿಮನಿ ಭಾಷೆಗಳಂತೆ ಸಂಖ್ಯಾಶಾಸ್ತ್ರದ ಜ್ಞಾನವೂ ಅವಶ್ಯ. ಇದು ಇತರ ವಿಷಯಗಳ ಅಧ್ಯಯನಕ್ಕೂ ಆಧಾರವಾಗಿದೆ ಎಂದರು.<br /> <br /> ಕವಿವಿ ಸಂಖ್ಯಾಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಡಾ ಎಂ.ವಿ. ಮುದ್ದಾಪುರ, ಬಿ.ಎಲ್.ಡಿ.ಇ. ಸಂಸ್ಥೆಯ ಆಡಳಿತಾಧಿಕಾರಿಗಳಾದ ಪ್ರೊ. ಎಸ್.ಎಚ್. ಲಗಳಿ, ಪ್ರೊ. ಕೆ.ಎಸ್. ಬಿರಾದಾರ, ನಿವೃತ್ತ ಪ್ರಾಚಾರ್ಯ ಎಸ್.ಸಿ. ಹಿರೇಮಠ, ಪ್ರಾಚಾರ್ಯ ಎಸ್.ಜಿ. ಗಣಿ, ಕೆ.ಎಂ. ಲಮಾಣಿ ಉಪಸ್ಥಿತರಿದ್ದರು.<br /> <br /> ಪ್ರೊ. ಸಿದ್ದಕ್ ಪ್ರಾರ್ಥನೆ ಗೀತೆ ಹಾಡಿದರು. ಪ್ರಾಚಾರ್ಯ ಎಸ್.ಜಿ. ಗಣಿ ಸ್ವಾಗತಿಸಿದರು. ಎಲ್.ಎಂ. ಮುಂಡಾಸನವರ ನಿರೂಪಿಸಿದರು. ಕೆ.ಎಂ. ಲಮಾಣಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>