<p><strong>ಬರ್ಲಿನ್ (ಪಿಟಿಐ): </strong>ಜರ್ಮನಿಯಲ್ಲಿ ನವ ನಾಝಿ ಘಟಕ 10 ವರ್ಷಗಳ ಹಿಂದೆ ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಎಸಗಿದ್ದ ಹತ್ಯೆ ಪ್ರಕರಣಗಳ ಕುರಿತ ತನಿಖೆಗೆ ರಚಿಸಲಾಗಿರುವ ಸಂಸದೀಯ ತನಿಖಾ ಸಮಿತಿಯ ನೇತೃತ್ವವನ್ನು ಭಾರತೀಯ ಮೂಲದ ಸಂಸದ ಸೆಬಸ್ಟಿಯಾನ್ ಎಡಥಿ ವಹಿಸಲಿದ್ದಾರೆ. <br /> <br /> ಹತ್ಯೆ ನಡೆದು ದಶಕ ಕಳೆದರೂ ಕೊಲೆಗಾರರ ಸುಳಿವು ಪತ್ತೆ ಹಚ್ಚುವಲ್ಲಿ ತನಿಖಾ ತಂಡಗಳು ವಿಫಲವಾಗಿರುವುದರಿಂದ, 11 ಸದಸ್ಯರ ಸಮಿತಿ ರಚನೆಗೆ ಎಲ್ಲ ಪಕ್ಷಗಳ ಪ್ರತಿನಿಧಿಗಳು ಸಂಸತ್ತಿನ ಕೆಳಮನೆ ಬಂಡೆಸ್ಟಾಗ್ನಲ್ಲಿ ಒಮ್ಮತದ ಒಪ್ಪಿಗೆ ಸೂಚಿಸಿದ್ದಾರೆ.<br /> <br /> ಒಂಬತ್ತು ಟರ್ಕಿಗಳು, ಗ್ರೀಕ್ ಉದ್ಯಮಿಗಳು, ಮಹಿಳಾ ಪೊಲೀಸ್ ಅಧಿಕಾರಿ ಹತ್ಯೆಗೀಡಾದ ಪ್ರಕರಣಗಳು ಸೇರಿದಂತೆ ಹಲವು ಪ್ರಕರಣಗಳ ಬಗ್ಗೆ ಸಮಿತಿ ತನಿಖೆ ನಡೆಸಲಿದೆ. <br /> <br /> ಜರ್ಮನಿಯ ಥುರಿಂಜಿಯಾದಲ್ಲಿರುವ ಬಲಪಂಥೀಯ ತೀವ್ರಗಾಮಿ ಗುಂಪು `ನ್ಯಾಷನಲ್ ಸೋಷಲಿಸ್ಟ್ ಅಂಡರ್ಗ್ರೌಂಡ್~ ತನ್ನ ಸುಳಿವು ಬಹಿರಂಗ ಪಡಿಸದೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಬಗ್ಗೆಯೂ ಸಮಿತಿ ತನಿಖೆ ನಡೆಸುವ ನಿರೀಕ್ಷೆ ಇದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬರ್ಲಿನ್ (ಪಿಟಿಐ): </strong>ಜರ್ಮನಿಯಲ್ಲಿ ನವ ನಾಝಿ ಘಟಕ 10 ವರ್ಷಗಳ ಹಿಂದೆ ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಎಸಗಿದ್ದ ಹತ್ಯೆ ಪ್ರಕರಣಗಳ ಕುರಿತ ತನಿಖೆಗೆ ರಚಿಸಲಾಗಿರುವ ಸಂಸದೀಯ ತನಿಖಾ ಸಮಿತಿಯ ನೇತೃತ್ವವನ್ನು ಭಾರತೀಯ ಮೂಲದ ಸಂಸದ ಸೆಬಸ್ಟಿಯಾನ್ ಎಡಥಿ ವಹಿಸಲಿದ್ದಾರೆ. <br /> <br /> ಹತ್ಯೆ ನಡೆದು ದಶಕ ಕಳೆದರೂ ಕೊಲೆಗಾರರ ಸುಳಿವು ಪತ್ತೆ ಹಚ್ಚುವಲ್ಲಿ ತನಿಖಾ ತಂಡಗಳು ವಿಫಲವಾಗಿರುವುದರಿಂದ, 11 ಸದಸ್ಯರ ಸಮಿತಿ ರಚನೆಗೆ ಎಲ್ಲ ಪಕ್ಷಗಳ ಪ್ರತಿನಿಧಿಗಳು ಸಂಸತ್ತಿನ ಕೆಳಮನೆ ಬಂಡೆಸ್ಟಾಗ್ನಲ್ಲಿ ಒಮ್ಮತದ ಒಪ್ಪಿಗೆ ಸೂಚಿಸಿದ್ದಾರೆ.<br /> <br /> ಒಂಬತ್ತು ಟರ್ಕಿಗಳು, ಗ್ರೀಕ್ ಉದ್ಯಮಿಗಳು, ಮಹಿಳಾ ಪೊಲೀಸ್ ಅಧಿಕಾರಿ ಹತ್ಯೆಗೀಡಾದ ಪ್ರಕರಣಗಳು ಸೇರಿದಂತೆ ಹಲವು ಪ್ರಕರಣಗಳ ಬಗ್ಗೆ ಸಮಿತಿ ತನಿಖೆ ನಡೆಸಲಿದೆ. <br /> <br /> ಜರ್ಮನಿಯ ಥುರಿಂಜಿಯಾದಲ್ಲಿರುವ ಬಲಪಂಥೀಯ ತೀವ್ರಗಾಮಿ ಗುಂಪು `ನ್ಯಾಷನಲ್ ಸೋಷಲಿಸ್ಟ್ ಅಂಡರ್ಗ್ರೌಂಡ್~ ತನ್ನ ಸುಳಿವು ಬಹಿರಂಗ ಪಡಿಸದೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಬಗ್ಗೆಯೂ ಸಮಿತಿ ತನಿಖೆ ನಡೆಸುವ ನಿರೀಕ್ಷೆ ಇದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>