<p>ಈ ಬಾರಿ ಮುಂಗಾರು ತಡವಾಗಿ ಮತ್ತು ಅನಿಯಮಿತವಾಗಿ ಬರುತ್ತಿದೆ. ಮುಂಗಾರು ವಿಳಂಬವಾಗುವುದರಿಂದ ಕೃಷಿ ಮತ್ತು ಉದ್ಯಮ ವಲಯವಷ್ಟೇ ಅಪಾಯ ಎದುರಿಸುವುದಿಲ್ಲ. ಅದು ನಮ್ಮ ಆರೋಗ್ಯದ ವಿಚಾರಕ್ಕೂ ಅನ್ವಯವಾಗುತ್ತದೆ. <br /> <br /> ಅನಿರೀಕ್ಷಿತ ಹವಾಮಾನ ಬದಲಾವಣೆಯು ವೈರಲ್ ಜ್ವರ, ನಿರ್ಜಲೀಕರಣದಂತಹ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.<br /> <br /> ಬಿಸಿ ಮತ್ತು ಶುಷ್ಕ ಪ್ರದೇಶಗಳಲ್ಲಿ ಹವಾಮಾನ ಬದಲಾವಣೆಯಾದಾಗ ನಾವು ಹೈಪರ್ಥೆರ್ಮಿಯಾದಿಂದ ಬಳಲುವ ಅಪಾಯ ಇರುತ್ತದೆ. ಸಾಮಾನ್ಯವಾಗಿ ಇದನ್ನು `ಹೀಟ್ ಸ್ಟ್ರೋಕ್~ ಎನ್ನುತ್ತಾರೆ. ಹವಾಮಾನ ತಂಪಾಗಿದ್ದಾಗ ಜನ ನೀರು ಕುಡಿಯುವ ಅಗತ್ಯವಿದ್ದರೂ ಬಾಯಾರಿಕೆ ಆಗದಿರುವುದರಿಂದ ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಾರೆ. <br /> <br /> ಆದರೆ ಇದರಿಂದ ನಿರ್ಜಲೀಕರಣದ ಸಮಸ್ಯೆ ಎದುರಾಗಬಹುದು. ಮೋಡ ಮುಚ್ಚಿದ ವಾತಾವರಣ ಇದ್ದಾಗ ಮತ್ತು ತಂಪಾದ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಸಾಮಾನ್ಯವಾಗಿ ನಿರ್ಜಲೀಕರಣ ಕಂಡುಬರುತ್ತದೆ.<br /> <br /> ಈ ವರ್ಷ ಮುಂಗಾರು ಮಳೆ ಪ್ರಮಾಣ ಕಡಿವೆು ಆಗಿರುವುದರಿಂದ ರಾಜ್ಯದಲ್ಲಿ, ಅದರಲ್ಲೂ ಉತ್ತರ ಭಾಗದ ಒಣ ವಲಯಗಳಲ್ಲಿ ಜನ `ಹೀಟ್ ಸ್ಟ್ರೋಕ್~ನ ಆತಂಕ ಎದುರಿಸುತ್ತಾರೆ. <br /> <br /> ಹೀಗಾಗಿ ದೇಹಕ್ಕೆ ಅಗತ್ಯವಾದ ಜಲಸಂಚಯನಕ್ಕಾಗಿ ಸರಿಯಾದ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕಾಗುತ್ತದೆ. ವಾತಾವರಣ ಒಣ, ಬಿಸಿ, ತಂಪು ಅಥವಾ ಸೌಮ್ಯ ಹೇಗೇ ಇರಲಿ ಪ್ರತಿ ದಿನ ಕನಿಷ್ಠ 2 ಲೀಟರ್ ನೀರು ಶರೀರವನ್ನು ಸೇರಬೇಕು.<br /> <br /> <strong>`ಹೀಟ್ ಸ್ಟ್ರೋಕ್~ನ ಸಾಮಾನ್ಯ ಲಕ್ಷಣಗಳೆಂದರೆ:</strong> ವಾಕರಿಕೆ, ತಲೆನೋವು, ತಲೆಸುತ್ತುವಿಕೆ ಮತ್ತು ತೀವ್ರ ಬಳಲುವಿಕೆ.<br /> <br /> ಸೂಪ್, ನಿಂಬೆ ಶರಬತ್ತು, ಮಜ್ಜಿಗೆ, ಮೊಸರು, ಕಿತ್ತಳೆ, ಟೊಮ್ಯೋಟೊ ಮುಂತಾದ ಹಣ್ಣುಗಳ ಮೂಲಕವೂ ನೀರು ದೇಹ ಸೇರುವಂತೆ ನೋಡಿಕೊಳ್ಳಬಹುದು. ಇದರ ಜೊತೆಗೆ ಎಲೆಕ್ಟ್ರೋಲೈಟ್ ಪೇಯಗಳ ಸೇವನೆಯೂ ಶಕ್ತಿ ನೀಡುತ್ತದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಈ ಬಾರಿ ಮುಂಗಾರು ತಡವಾಗಿ ಮತ್ತು ಅನಿಯಮಿತವಾಗಿ ಬರುತ್ತಿದೆ. ಮುಂಗಾರು ವಿಳಂಬವಾಗುವುದರಿಂದ ಕೃಷಿ ಮತ್ತು ಉದ್ಯಮ ವಲಯವಷ್ಟೇ ಅಪಾಯ ಎದುರಿಸುವುದಿಲ್ಲ. ಅದು ನಮ್ಮ ಆರೋಗ್ಯದ ವಿಚಾರಕ್ಕೂ ಅನ್ವಯವಾಗುತ್ತದೆ. <br /> <br /> ಅನಿರೀಕ್ಷಿತ ಹವಾಮಾನ ಬದಲಾವಣೆಯು ವೈರಲ್ ಜ್ವರ, ನಿರ್ಜಲೀಕರಣದಂತಹ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.<br /> <br /> ಬಿಸಿ ಮತ್ತು ಶುಷ್ಕ ಪ್ರದೇಶಗಳಲ್ಲಿ ಹವಾಮಾನ ಬದಲಾವಣೆಯಾದಾಗ ನಾವು ಹೈಪರ್ಥೆರ್ಮಿಯಾದಿಂದ ಬಳಲುವ ಅಪಾಯ ಇರುತ್ತದೆ. ಸಾಮಾನ್ಯವಾಗಿ ಇದನ್ನು `ಹೀಟ್ ಸ್ಟ್ರೋಕ್~ ಎನ್ನುತ್ತಾರೆ. ಹವಾಮಾನ ತಂಪಾಗಿದ್ದಾಗ ಜನ ನೀರು ಕುಡಿಯುವ ಅಗತ್ಯವಿದ್ದರೂ ಬಾಯಾರಿಕೆ ಆಗದಿರುವುದರಿಂದ ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಾರೆ. <br /> <br /> ಆದರೆ ಇದರಿಂದ ನಿರ್ಜಲೀಕರಣದ ಸಮಸ್ಯೆ ಎದುರಾಗಬಹುದು. ಮೋಡ ಮುಚ್ಚಿದ ವಾತಾವರಣ ಇದ್ದಾಗ ಮತ್ತು ತಂಪಾದ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಸಾಮಾನ್ಯವಾಗಿ ನಿರ್ಜಲೀಕರಣ ಕಂಡುಬರುತ್ತದೆ.<br /> <br /> ಈ ವರ್ಷ ಮುಂಗಾರು ಮಳೆ ಪ್ರಮಾಣ ಕಡಿವೆು ಆಗಿರುವುದರಿಂದ ರಾಜ್ಯದಲ್ಲಿ, ಅದರಲ್ಲೂ ಉತ್ತರ ಭಾಗದ ಒಣ ವಲಯಗಳಲ್ಲಿ ಜನ `ಹೀಟ್ ಸ್ಟ್ರೋಕ್~ನ ಆತಂಕ ಎದುರಿಸುತ್ತಾರೆ. <br /> <br /> ಹೀಗಾಗಿ ದೇಹಕ್ಕೆ ಅಗತ್ಯವಾದ ಜಲಸಂಚಯನಕ್ಕಾಗಿ ಸರಿಯಾದ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕಾಗುತ್ತದೆ. ವಾತಾವರಣ ಒಣ, ಬಿಸಿ, ತಂಪು ಅಥವಾ ಸೌಮ್ಯ ಹೇಗೇ ಇರಲಿ ಪ್ರತಿ ದಿನ ಕನಿಷ್ಠ 2 ಲೀಟರ್ ನೀರು ಶರೀರವನ್ನು ಸೇರಬೇಕು.<br /> <br /> <strong>`ಹೀಟ್ ಸ್ಟ್ರೋಕ್~ನ ಸಾಮಾನ್ಯ ಲಕ್ಷಣಗಳೆಂದರೆ:</strong> ವಾಕರಿಕೆ, ತಲೆನೋವು, ತಲೆಸುತ್ತುವಿಕೆ ಮತ್ತು ತೀವ್ರ ಬಳಲುವಿಕೆ.<br /> <br /> ಸೂಪ್, ನಿಂಬೆ ಶರಬತ್ತು, ಮಜ್ಜಿಗೆ, ಮೊಸರು, ಕಿತ್ತಳೆ, ಟೊಮ್ಯೋಟೊ ಮುಂತಾದ ಹಣ್ಣುಗಳ ಮೂಲಕವೂ ನೀರು ದೇಹ ಸೇರುವಂತೆ ನೋಡಿಕೊಳ್ಳಬಹುದು. ಇದರ ಜೊತೆಗೆ ಎಲೆಕ್ಟ್ರೋಲೈಟ್ ಪೇಯಗಳ ಸೇವನೆಯೂ ಶಕ್ತಿ ನೀಡುತ್ತದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>