<p><strong>ಧಾರವಾಡ:</strong> ಜಿಲ್ಲೆಯ ಅಣ್ಣಿಗೇರಿಯಲ್ಲಿ ಪತ್ತೆಯಾಗಿದ್ದ ತಲೆ ಬುರುಡೆಗಳು 1792ರಿಂದ 1796ರವರೆಗೆ ಉಂಟಾದ `ಡೋಗಿ ಬರ~ದಿಂದ ಸಾಮೂಹಿಕವಾಗಿ ಅಸುನೀಗಿದ ಗ್ರಾಮಸ್ಥರದ್ದಾಗಿದೆ ಎನ್ನುವ ಅಂಶ ರಾಜ್ಯ ಪುರಾತತ್ವ ಇಲಾಖೆ ನಡೆಸಿದ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. <br /> <br /> 2010ರ ಆಗಸ್ಟ್ 28ರಂದು ಅಣ್ಣಿಗೇರಿಯಲ್ಲಿ ದೊರೆತ ತಲೆ ಬುರುಡೆಗಳು ದೇಶವ್ಯಾಪಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದ್ದವು. ಇಷ್ಟೊಂದು ತಲೆಬುರುಡೆಗಳು ಒಂದೆಡೆ ಇದ್ದಿದ್ದಾದರೂ ಹೇಗೆ ಎನ್ನುವ ಕುತೂಹಲ ಎಲ್ಲರನ್ನೂ ಕೆರಳಿಸಿತ್ತು. ಈ ವಿಷಯವಾಗಿ ಹಲವು ವಾದಗಳೂ ಮಂಡನೆಯಾಗಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಪುರಾತತ್ವ ಇಲಾಖೆ ನಡೆಸಿದ ಸಂಶೋಧನೆ ಮಹತ್ವ ಪಡೆದಿದೆ. ಬರುವ ಸೆಪ್ಟೆಂಬರ್ 15ರೊಳಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಂಶೋಧನಾ ವರದಿ ಸಲ್ಲಿಕೆ ಆಗಲಿದೆ.<br /> <br /> ಪುರಾತತ್ವ ಇಲಾಖೆಯ ನಿರ್ದೇಶಕ ಡಾ.ಆರ್.ಗೋಪಾಲ್, ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಎಸ್. ಕೃಷ್ಣಮೂರ್ತಿ ಹಾಗೂ ಇಲಾಖೆಯ ಹಂಪಿ ವಿಭಾಗದ ಉಪನಿರ್ದೇಶಕ ಗಂಗಾಧರ್ ಸಂಶೋಧನಾ ತಂಡದಲ್ಲಿದ್ದರು. ಆ ತಲೆಬುರುಡೆಗಳು 1792ರಿಂದ 1796ರವರೆಗೆ ಉಂಟಾದ `ಡೋಗಿ ಬರ~ದಿಂದ ಸತ್ತ ಜನರದ್ದಾಗಿವೆ ಎಂಬ ಅಭಿಪ್ರಾಯಕ್ಕೆ ಅವರು ಬಂದಿದ್ದಾರೆ. <br /> <br /> `ಅಣ್ಣಿಗೇರಿ, ಗದಗ, ಬಾಗಲಕೋಟೆ ಭಾಗದಲ್ಲಿ ಡೋಗಿ ಬರ ಬಂದು ಸಾಕಷ್ಟು ಮಂದಿ ಜೀವತೆತ್ತಿದ್ದರು. ಕುಡಿಯಲು ನೀರಿಲ್ಲದೆ, ತಿನ್ನಲು ಅನ್ನವಿಲ್ಲದೆ ಹುಳುಗಳಂತೆ ಜನರು ಸಾವಿಗೀಡಾದರು. ಪ್ರಾಣಿಗಳು ಮೃತದೇಹಗಳನ್ನು ತಿಂದು ತಲೆಬುರುಡೆಗಳನ್ನಷ್ಟೇ ಬಿಟ್ಟಿವೆ. ಅವುಗಳನ್ನು ಅಳಿದುಳಿದ ಜನರು ಒಂದೆಡೆ ಕ್ರೋಡೀಕರಿಸಿ ಹೂಳಿದ್ದಾರೆ~ ಎಂದು ಡಾ.ಗೋಪಾಲ್ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> `ಒಟ್ಟು 601 ತಲೆಬುರುಡೆಗಳು ಸಿಕ್ಕಿವೆ. ಅವುಗಳಲ್ಲಿ 6 ವರ್ಷದ ಮಕ್ಕಳಿಂದ 60 ವರ್ಷದ ಪುರುಷರ ಹಾಗೂ ಮಹಿಳೆಯರ ತಲೆಬುರುಡೆಗಳು ಸೇರಿವೆ. ಹಿರಿಯ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಅವರು, `ಇವು ಶಿರಚ್ಛೇದಗೊಂಡ ಉಗ್ರಪಂಥಕ್ಕೆ ಸೇರಿದ ವೀರ ಮಾಹೇಶ್ವರರ ತಲೆಬುರುಡೆಗಳಲ್ಲ. ಮಹಿಳೆಯರ ಬುರುಡೆಗಳೂ ಇರುವುದರಿಂದ ಉಗ್ರಪಂಥೀಯರ ಬುರುಡೆಗಳಲ್ಲ ಎಂಬುದಕ್ಕೆ ಪುಷ್ಟಿ ನೀಡಿದೆ~ ಎಂದು ವಿವರಿಸಿದರು.<br /> <br /> ಅಂದು ಬಾಂಬೆ ಪ್ರೆಸಿಡೆನ್ಸಿಗೆ ಸೇರಿದ ಈ ಪ್ರದೇಶದಲ್ಲಿ ವ್ಯಾಪಕ ಬರ ಬಿದ್ದುದರ ಬಗ್ಗೆಯೂ ಬಾಂಬೆ ಗೆಜೆಟ್ನಲ್ಲಿ ದಾಖಲಾಗಿದೆ. ಇವುಗಳನ್ನೆಲ್ಲ ತಾಳೆ ಹಾಕಿ ನೋಡಿದಾಗ ಬರದಿಂದ ಸತ್ತವರದ್ದು ಎಂಬುದು ಸಾಬೀತಾಗುತ್ತದೆ ಎಂದು ಹೇಳಿದರು. <br /> <br /> ತಲೆಬುರುಡೆ ರಹಸ್ಯಗಳನ್ನು ತಿಳಿಯುವುದಕ್ಕಾಗಿ ಭುವನೇಶ್ವರದ ಪ್ರಯೋಗಾಲಯದಲ್ಲಿ ಕಾರ್ಬನ್ ಡೇಟಿಂಗ್ ನಡೆಸಿದ ಬಳಿಕ ಇವು 638 ವರ್ಷಗಳಷ್ಟು ಹಳೆಯದಾಗಿವೆ ಎಂದು ತಿಳಿಸಲಾಗಿತ್ತು. ಆದರೆ ಪುರಾತತ್ವ ಇಲಾಖೆಯ ಈ ವರದಿ ಅದಕ್ಕೆ ತದ್ವಿರುದ್ಧವಾಗ್ದ್ದಿದು ಕುತೂಹಲ ಕೆರಳಿಸಿದೆ. <br /> <br /> ತಲೆಬುರುಡೆಯ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ ಕರ್ನಾಟಕ ವಿ.ವಿ. ಕನ್ನಡ ಸಂಶೋಧನಾ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ. ಆರ್.ಎಂ.ಷಡಕ್ಷರಯ್ಯ, `ತಲೆಬುರುಡೆಗಳ ರಹಸ್ಯದ ಬಗ್ಗೆ ಆಮೇಲೆ ಚರ್ಚೆ ಮಾಡಿದರಾಯಿತು. ತಲೆಬುರುಡೆಗಳಿಗೆ ಯಾವುದೇ ರಾಸಾಯನಿಕ ಸಿಂಪಡಿಸದೆ ಮುಚ್ಚಲಾಗಿದ್ದು, ಆ ಪ್ರದೇಶವೀಗ ಶೌಚಾಲಯವಾಗಿದೆ. ಪಕ್ಕದಲ್ಲೇ ಕೊಳಚೆ ನೀರೂ ಹರಿಯುತ್ತಿದೆ. ತಲೆಬುರುಡೆ ಸಿಕ್ಕಿರುವ ಸ್ಥಳವನ್ನು ರಕ್ಷಿಸುವ ಕೆಲಸ ಜಿಲ್ಲಾಡಳಿತದಿಂದ ಶೀಘ್ರವೇ ಆಗಬೇಕು~ ಎಂದರು. <br /> <br /> ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಮಾತನಾಡಿ, `ಮಂಗಳವಾರ (ಆ. 21) ಈ ಬಗ್ಗೆ ಸಮಗ್ರ ವರದಿ ತರಿಸಿಕೊಂಡು ರಾಜ್ಯ ಪುರಾತತ್ವ ಇಲಾಖೆಗೆ ಮಾಹಿತಿ ನೀಡುತ್ತೇವೆ~ ಎಂದು ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ಜಿಲ್ಲೆಯ ಅಣ್ಣಿಗೇರಿಯಲ್ಲಿ ಪತ್ತೆಯಾಗಿದ್ದ ತಲೆ ಬುರುಡೆಗಳು 1792ರಿಂದ 1796ರವರೆಗೆ ಉಂಟಾದ `ಡೋಗಿ ಬರ~ದಿಂದ ಸಾಮೂಹಿಕವಾಗಿ ಅಸುನೀಗಿದ ಗ್ರಾಮಸ್ಥರದ್ದಾಗಿದೆ ಎನ್ನುವ ಅಂಶ ರಾಜ್ಯ ಪುರಾತತ್ವ ಇಲಾಖೆ ನಡೆಸಿದ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. <br /> <br /> 2010ರ ಆಗಸ್ಟ್ 28ರಂದು ಅಣ್ಣಿಗೇರಿಯಲ್ಲಿ ದೊರೆತ ತಲೆ ಬುರುಡೆಗಳು ದೇಶವ್ಯಾಪಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದ್ದವು. ಇಷ್ಟೊಂದು ತಲೆಬುರುಡೆಗಳು ಒಂದೆಡೆ ಇದ್ದಿದ್ದಾದರೂ ಹೇಗೆ ಎನ್ನುವ ಕುತೂಹಲ ಎಲ್ಲರನ್ನೂ ಕೆರಳಿಸಿತ್ತು. ಈ ವಿಷಯವಾಗಿ ಹಲವು ವಾದಗಳೂ ಮಂಡನೆಯಾಗಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಪುರಾತತ್ವ ಇಲಾಖೆ ನಡೆಸಿದ ಸಂಶೋಧನೆ ಮಹತ್ವ ಪಡೆದಿದೆ. ಬರುವ ಸೆಪ್ಟೆಂಬರ್ 15ರೊಳಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಂಶೋಧನಾ ವರದಿ ಸಲ್ಲಿಕೆ ಆಗಲಿದೆ.<br /> <br /> ಪುರಾತತ್ವ ಇಲಾಖೆಯ ನಿರ್ದೇಶಕ ಡಾ.ಆರ್.ಗೋಪಾಲ್, ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಎಸ್. ಕೃಷ್ಣಮೂರ್ತಿ ಹಾಗೂ ಇಲಾಖೆಯ ಹಂಪಿ ವಿಭಾಗದ ಉಪನಿರ್ದೇಶಕ ಗಂಗಾಧರ್ ಸಂಶೋಧನಾ ತಂಡದಲ್ಲಿದ್ದರು. ಆ ತಲೆಬುರುಡೆಗಳು 1792ರಿಂದ 1796ರವರೆಗೆ ಉಂಟಾದ `ಡೋಗಿ ಬರ~ದಿಂದ ಸತ್ತ ಜನರದ್ದಾಗಿವೆ ಎಂಬ ಅಭಿಪ್ರಾಯಕ್ಕೆ ಅವರು ಬಂದಿದ್ದಾರೆ. <br /> <br /> `ಅಣ್ಣಿಗೇರಿ, ಗದಗ, ಬಾಗಲಕೋಟೆ ಭಾಗದಲ್ಲಿ ಡೋಗಿ ಬರ ಬಂದು ಸಾಕಷ್ಟು ಮಂದಿ ಜೀವತೆತ್ತಿದ್ದರು. ಕುಡಿಯಲು ನೀರಿಲ್ಲದೆ, ತಿನ್ನಲು ಅನ್ನವಿಲ್ಲದೆ ಹುಳುಗಳಂತೆ ಜನರು ಸಾವಿಗೀಡಾದರು. ಪ್ರಾಣಿಗಳು ಮೃತದೇಹಗಳನ್ನು ತಿಂದು ತಲೆಬುರುಡೆಗಳನ್ನಷ್ಟೇ ಬಿಟ್ಟಿವೆ. ಅವುಗಳನ್ನು ಅಳಿದುಳಿದ ಜನರು ಒಂದೆಡೆ ಕ್ರೋಡೀಕರಿಸಿ ಹೂಳಿದ್ದಾರೆ~ ಎಂದು ಡಾ.ಗೋಪಾಲ್ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> `ಒಟ್ಟು 601 ತಲೆಬುರುಡೆಗಳು ಸಿಕ್ಕಿವೆ. ಅವುಗಳಲ್ಲಿ 6 ವರ್ಷದ ಮಕ್ಕಳಿಂದ 60 ವರ್ಷದ ಪುರುಷರ ಹಾಗೂ ಮಹಿಳೆಯರ ತಲೆಬುರುಡೆಗಳು ಸೇರಿವೆ. ಹಿರಿಯ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಅವರು, `ಇವು ಶಿರಚ್ಛೇದಗೊಂಡ ಉಗ್ರಪಂಥಕ್ಕೆ ಸೇರಿದ ವೀರ ಮಾಹೇಶ್ವರರ ತಲೆಬುರುಡೆಗಳಲ್ಲ. ಮಹಿಳೆಯರ ಬುರುಡೆಗಳೂ ಇರುವುದರಿಂದ ಉಗ್ರಪಂಥೀಯರ ಬುರುಡೆಗಳಲ್ಲ ಎಂಬುದಕ್ಕೆ ಪುಷ್ಟಿ ನೀಡಿದೆ~ ಎಂದು ವಿವರಿಸಿದರು.<br /> <br /> ಅಂದು ಬಾಂಬೆ ಪ್ರೆಸಿಡೆನ್ಸಿಗೆ ಸೇರಿದ ಈ ಪ್ರದೇಶದಲ್ಲಿ ವ್ಯಾಪಕ ಬರ ಬಿದ್ದುದರ ಬಗ್ಗೆಯೂ ಬಾಂಬೆ ಗೆಜೆಟ್ನಲ್ಲಿ ದಾಖಲಾಗಿದೆ. ಇವುಗಳನ್ನೆಲ್ಲ ತಾಳೆ ಹಾಕಿ ನೋಡಿದಾಗ ಬರದಿಂದ ಸತ್ತವರದ್ದು ಎಂಬುದು ಸಾಬೀತಾಗುತ್ತದೆ ಎಂದು ಹೇಳಿದರು. <br /> <br /> ತಲೆಬುರುಡೆ ರಹಸ್ಯಗಳನ್ನು ತಿಳಿಯುವುದಕ್ಕಾಗಿ ಭುವನೇಶ್ವರದ ಪ್ರಯೋಗಾಲಯದಲ್ಲಿ ಕಾರ್ಬನ್ ಡೇಟಿಂಗ್ ನಡೆಸಿದ ಬಳಿಕ ಇವು 638 ವರ್ಷಗಳಷ್ಟು ಹಳೆಯದಾಗಿವೆ ಎಂದು ತಿಳಿಸಲಾಗಿತ್ತು. ಆದರೆ ಪುರಾತತ್ವ ಇಲಾಖೆಯ ಈ ವರದಿ ಅದಕ್ಕೆ ತದ್ವಿರುದ್ಧವಾಗ್ದ್ದಿದು ಕುತೂಹಲ ಕೆರಳಿಸಿದೆ. <br /> <br /> ತಲೆಬುರುಡೆಯ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ ಕರ್ನಾಟಕ ವಿ.ವಿ. ಕನ್ನಡ ಸಂಶೋಧನಾ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ. ಆರ್.ಎಂ.ಷಡಕ್ಷರಯ್ಯ, `ತಲೆಬುರುಡೆಗಳ ರಹಸ್ಯದ ಬಗ್ಗೆ ಆಮೇಲೆ ಚರ್ಚೆ ಮಾಡಿದರಾಯಿತು. ತಲೆಬುರುಡೆಗಳಿಗೆ ಯಾವುದೇ ರಾಸಾಯನಿಕ ಸಿಂಪಡಿಸದೆ ಮುಚ್ಚಲಾಗಿದ್ದು, ಆ ಪ್ರದೇಶವೀಗ ಶೌಚಾಲಯವಾಗಿದೆ. ಪಕ್ಕದಲ್ಲೇ ಕೊಳಚೆ ನೀರೂ ಹರಿಯುತ್ತಿದೆ. ತಲೆಬುರುಡೆ ಸಿಕ್ಕಿರುವ ಸ್ಥಳವನ್ನು ರಕ್ಷಿಸುವ ಕೆಲಸ ಜಿಲ್ಲಾಡಳಿತದಿಂದ ಶೀಘ್ರವೇ ಆಗಬೇಕು~ ಎಂದರು. <br /> <br /> ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಮಾತನಾಡಿ, `ಮಂಗಳವಾರ (ಆ. 21) ಈ ಬಗ್ಗೆ ಸಮಗ್ರ ವರದಿ ತರಿಸಿಕೊಂಡು ರಾಜ್ಯ ಪುರಾತತ್ವ ಇಲಾಖೆಗೆ ಮಾಹಿತಿ ನೀಡುತ್ತೇವೆ~ ಎಂದು ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>