<p>ಎರಡು ದಶಕಗಳ ಹಿಂದೆ ದೇಶದಲ್ಲಿ ಮುಕ್ತ ಆರ್ಥಿಕ ನೀತಿ ಜಾರಿಗೆ ಬಂದ ಮೇಲೆ ಭಾರತದ ಆರ್ಥಿಕ ರಂಗದಲ್ಲಿ ಬದಲಾವಣೆಯ ಚಿತ್ರ ಕಾಣುತ್ತಿದೆ. ಆದರೆ, ಈ ಬದಲಾವಣೆ ಬಡ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವಲ್ಲಿ ಕಂಡು ಬಂದಿಲ್ಲ. <br /> <br /> ಅಷ್ಟೇ ಅಲ್ಲ, ನಿರಾಶಾದಾಯಕವೂ ಆಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಮರು ಮತ್ತು ಸಾಮಾಜಿಕವಾಗಿ ಹಿಂದುಳಿದ ಜಾತಿಗಳ ಯುವಜನರಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚುತ್ತಿರುವುದು ಈ ಅವಧಿಯಲ್ಲಿ ಕಂಡ ವಿದ್ಯಮಾನ.<br /> <br /> ಪ್ರಸಕ್ತ ಸಾಲಿನ ಅಖಿಲ ಭಾರತ ಮಾನವ ಅಭಿವೃದ್ಧಿ ಕುರಿತ ವರದಿ ಈ ಬಗೆಗೆ ಹೆಚ್ಚು ಬೆಳಕು ಚೆಲ್ಲಿದ್ದು, ಅಭಿವೃದ್ಧಿ ಮತ್ತು ಆರ್ಥಿಕ ನೀತಿಯ ಫಲ ಸಮಾಜದ ಕಟ್ಟಕಡೆಯ ಜನರನ್ನು ಉದ್ಧರಿಸಲು ವಿಫಲವಾಗಿರುವ ಅಂಶ ಸ್ಪಷ್ಟವಾಗಿದೆ. ಇದನ್ನು ಗಮನಿಸಿದರೆ ಸರ್ಕಾರದ ಜನ ಕಲ್ಯಾಣದ ಯೋಜನೆಗಳು ನಿಷ್ಪ್ರಯೋಜಕ ಎಂದೇ ಭಾವಿಸಬೇಕಿದೆ. <br /> <br /> ಈ ವರದಿಯ ಬಗೆಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಪರಿಶಿಷ್ಟರಲ್ಲಿ ಮತ್ತಷ್ಟು ನಿರುದ್ಯೋಗ ಹೆಚ್ಚುವುದಾಗಿ ನುಡಿದಿರುವ ಭವಿಷ್ಯ ಆತಂಕಕಾರಿ ಸಂಗತಿ. <br /> <br /> ಯೋಜನಾ ಆಯೋಗದ ಮಾನವ ಅಭಿವೃದ್ಧಿಯ ವರದಿಯಂತೆ 2009-10ರಲ್ಲಿ ಪರಿಶಿಷ್ಟ ಜಾತಿಯ ಜನರಿಗೆ ನಗರ ಪ್ರದೇಶದಲ್ಲಿ ಶೇ 70 ರಷ್ಟು ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ 9.4 ನಿರುದ್ಯೋಗ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಪರಿಶಿಷ್ಟ ಪಂಗಡದಲ್ಲಿ ಕ್ರಮವಾಗಿ ಶೇ 6.3 ಮತ್ತು ಶೇ. 7.8 ನಿರುದ್ಯೋಗ ಕಾಣಿಸಿಕೊಂಡಿದೆ.<br /> <br /> ಈ ತಳಸಮುದಾಯಕ್ಕಿಂತ ಇತರೆ ಜಾತಿಗಳಲ್ಲಿನ ನಿರುದ್ಯೋಗ ಪ್ರಮಾಣ ಅಷ್ಟಾಗಿ ಕಳವಳಕಾರಿಯಾಗಿಲ್ಲ. ಈ ಸಾಮಾನ್ಯ ವರ್ಗದ ನಿರುದ್ಯೋಗ ಪ್ರಮಾಣ ನಗರಗಳಲ್ಲಿ ಶೇ 4.6 ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ 5.3 ಮಾತ್ರ ಇದೆ. <br /> <br /> ಆರ್ಥಿಕ ರಂಗದಲ್ಲಿ ಖಾಸಗೀಕರಣಕ್ಕೆ ಹೆಚ್ಚು ಒತ್ತು ಸಿಕ್ಕಿದಂತೆಲ್ಲ ಪರಿಶಿಷ್ಟ ವರ್ಗಕ್ಕೆ ಸೇರಿದ ವಿದ್ಯಾವಂತರಿಗೆ ಮೀಸಲಾಗಿರುವ ಸರ್ಕಾರಿ ಉದ್ಯೋಗಾವಕಾಶಗಳು ದಿನೇ ದಿನೇ ಕಡಿಮೆ ಆಗುತ್ತಾ ಬಂದಿವೆ. ಇದರಿಂದಾಗಿ ಪರಿಶಿಷ್ಟ ಜನರಿಗೂ ಸಮಾನ ಅವಕಾಶ ಸಿಗಬೇಕೆನ್ನುವ ಸಂವಿಧಾನದ ಆಶಯವೂ ವಿಫಲಗೊಳ್ಳುತ್ತಿದೆ.<br /> <br /> ಇದು ದುರದೃಷ್ಟಕರ ಬೆಳವಣಿಗೆ. ಮುಕ್ತ ಆರ್ಥಿಕ ಕಾರ್ಯಕ್ರಮಗಳಿಂದ ಉಳ್ಳವರಿಗೇ ಹೆಚ್ಚು ಅವಕಾಶಗಳು ಲಭ್ಯವಾಗಿರುವುದು ಈ ವರದಿಯಿಂದ ಸಾಬೀತಾದಂತಾಗಿದೆ. <br /> <br /> ಇದೇ ಸ್ಥಿತಿ ಮುಂದುವರಿದರೆ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಮತ್ತಷ್ಟು ಹೆಚ್ಚಲು ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. ತಳಸಮುದಾಯವನ್ನು ಗಮನದಲ್ಲಿಟ್ಟುಕೊಂಡು ರೂಪಿಸುವ ಯೋಜನೆಗಳು ಪ್ರಾಮಾಣಿಕವಾಗಿ ಜಾರಿಯಾಗದಿರುವುದು, ಹೆಚ್ಚುತ್ತಿರುವ ಜನಸಂಖ್ಯೆ, ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳೇ ಎಲ್ಲ ಅವಕಾಶಗಳನ್ನು ದುರುಪಯೋಗಪಡಿಸಿಕೊಳ್ಳುವುದು ಈ ವರ್ಗಗಳಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ಕಾರಣವಾಗಿರುವುದನ್ನು ತಳ್ಳಿಹಾಕಲಾಗದು.<br /> <br /> ಆದ್ದರಿಂದ ಯೋಜನಾ ಆಯೋಗ, ತಳ ಸಮುದಾಯವನ್ನು ಒಳಗೊಳ್ಳುವ ಮತ್ತು ಅವರ ಆರ್ಥಿಕಾಭಿವೃದ್ಧಿಗೆ ಸಹಾಯಕವಾಗುವಂತೆ ಯೋಜನೆಗಳನ್ನು ರೂಪಿಸಲು ಹೆಚ್ಚು ಗಮನ ನೀಡುವ ಅವಶ್ಯಕತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಎರಡು ದಶಕಗಳ ಹಿಂದೆ ದೇಶದಲ್ಲಿ ಮುಕ್ತ ಆರ್ಥಿಕ ನೀತಿ ಜಾರಿಗೆ ಬಂದ ಮೇಲೆ ಭಾರತದ ಆರ್ಥಿಕ ರಂಗದಲ್ಲಿ ಬದಲಾವಣೆಯ ಚಿತ್ರ ಕಾಣುತ್ತಿದೆ. ಆದರೆ, ಈ ಬದಲಾವಣೆ ಬಡ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವಲ್ಲಿ ಕಂಡು ಬಂದಿಲ್ಲ. <br /> <br /> ಅಷ್ಟೇ ಅಲ್ಲ, ನಿರಾಶಾದಾಯಕವೂ ಆಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಮರು ಮತ್ತು ಸಾಮಾಜಿಕವಾಗಿ ಹಿಂದುಳಿದ ಜಾತಿಗಳ ಯುವಜನರಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚುತ್ತಿರುವುದು ಈ ಅವಧಿಯಲ್ಲಿ ಕಂಡ ವಿದ್ಯಮಾನ.<br /> <br /> ಪ್ರಸಕ್ತ ಸಾಲಿನ ಅಖಿಲ ಭಾರತ ಮಾನವ ಅಭಿವೃದ್ಧಿ ಕುರಿತ ವರದಿ ಈ ಬಗೆಗೆ ಹೆಚ್ಚು ಬೆಳಕು ಚೆಲ್ಲಿದ್ದು, ಅಭಿವೃದ್ಧಿ ಮತ್ತು ಆರ್ಥಿಕ ನೀತಿಯ ಫಲ ಸಮಾಜದ ಕಟ್ಟಕಡೆಯ ಜನರನ್ನು ಉದ್ಧರಿಸಲು ವಿಫಲವಾಗಿರುವ ಅಂಶ ಸ್ಪಷ್ಟವಾಗಿದೆ. ಇದನ್ನು ಗಮನಿಸಿದರೆ ಸರ್ಕಾರದ ಜನ ಕಲ್ಯಾಣದ ಯೋಜನೆಗಳು ನಿಷ್ಪ್ರಯೋಜಕ ಎಂದೇ ಭಾವಿಸಬೇಕಿದೆ. <br /> <br /> ಈ ವರದಿಯ ಬಗೆಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಪರಿಶಿಷ್ಟರಲ್ಲಿ ಮತ್ತಷ್ಟು ನಿರುದ್ಯೋಗ ಹೆಚ್ಚುವುದಾಗಿ ನುಡಿದಿರುವ ಭವಿಷ್ಯ ಆತಂಕಕಾರಿ ಸಂಗತಿ. <br /> <br /> ಯೋಜನಾ ಆಯೋಗದ ಮಾನವ ಅಭಿವೃದ್ಧಿಯ ವರದಿಯಂತೆ 2009-10ರಲ್ಲಿ ಪರಿಶಿಷ್ಟ ಜಾತಿಯ ಜನರಿಗೆ ನಗರ ಪ್ರದೇಶದಲ್ಲಿ ಶೇ 70 ರಷ್ಟು ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ 9.4 ನಿರುದ್ಯೋಗ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಪರಿಶಿಷ್ಟ ಪಂಗಡದಲ್ಲಿ ಕ್ರಮವಾಗಿ ಶೇ 6.3 ಮತ್ತು ಶೇ. 7.8 ನಿರುದ್ಯೋಗ ಕಾಣಿಸಿಕೊಂಡಿದೆ.<br /> <br /> ಈ ತಳಸಮುದಾಯಕ್ಕಿಂತ ಇತರೆ ಜಾತಿಗಳಲ್ಲಿನ ನಿರುದ್ಯೋಗ ಪ್ರಮಾಣ ಅಷ್ಟಾಗಿ ಕಳವಳಕಾರಿಯಾಗಿಲ್ಲ. ಈ ಸಾಮಾನ್ಯ ವರ್ಗದ ನಿರುದ್ಯೋಗ ಪ್ರಮಾಣ ನಗರಗಳಲ್ಲಿ ಶೇ 4.6 ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ 5.3 ಮಾತ್ರ ಇದೆ. <br /> <br /> ಆರ್ಥಿಕ ರಂಗದಲ್ಲಿ ಖಾಸಗೀಕರಣಕ್ಕೆ ಹೆಚ್ಚು ಒತ್ತು ಸಿಕ್ಕಿದಂತೆಲ್ಲ ಪರಿಶಿಷ್ಟ ವರ್ಗಕ್ಕೆ ಸೇರಿದ ವಿದ್ಯಾವಂತರಿಗೆ ಮೀಸಲಾಗಿರುವ ಸರ್ಕಾರಿ ಉದ್ಯೋಗಾವಕಾಶಗಳು ದಿನೇ ದಿನೇ ಕಡಿಮೆ ಆಗುತ್ತಾ ಬಂದಿವೆ. ಇದರಿಂದಾಗಿ ಪರಿಶಿಷ್ಟ ಜನರಿಗೂ ಸಮಾನ ಅವಕಾಶ ಸಿಗಬೇಕೆನ್ನುವ ಸಂವಿಧಾನದ ಆಶಯವೂ ವಿಫಲಗೊಳ್ಳುತ್ತಿದೆ.<br /> <br /> ಇದು ದುರದೃಷ್ಟಕರ ಬೆಳವಣಿಗೆ. ಮುಕ್ತ ಆರ್ಥಿಕ ಕಾರ್ಯಕ್ರಮಗಳಿಂದ ಉಳ್ಳವರಿಗೇ ಹೆಚ್ಚು ಅವಕಾಶಗಳು ಲಭ್ಯವಾಗಿರುವುದು ಈ ವರದಿಯಿಂದ ಸಾಬೀತಾದಂತಾಗಿದೆ. <br /> <br /> ಇದೇ ಸ್ಥಿತಿ ಮುಂದುವರಿದರೆ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಮತ್ತಷ್ಟು ಹೆಚ್ಚಲು ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. ತಳಸಮುದಾಯವನ್ನು ಗಮನದಲ್ಲಿಟ್ಟುಕೊಂಡು ರೂಪಿಸುವ ಯೋಜನೆಗಳು ಪ್ರಾಮಾಣಿಕವಾಗಿ ಜಾರಿಯಾಗದಿರುವುದು, ಹೆಚ್ಚುತ್ತಿರುವ ಜನಸಂಖ್ಯೆ, ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳೇ ಎಲ್ಲ ಅವಕಾಶಗಳನ್ನು ದುರುಪಯೋಗಪಡಿಸಿಕೊಳ್ಳುವುದು ಈ ವರ್ಗಗಳಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ಕಾರಣವಾಗಿರುವುದನ್ನು ತಳ್ಳಿಹಾಕಲಾಗದು.<br /> <br /> ಆದ್ದರಿಂದ ಯೋಜನಾ ಆಯೋಗ, ತಳ ಸಮುದಾಯವನ್ನು ಒಳಗೊಳ್ಳುವ ಮತ್ತು ಅವರ ಆರ್ಥಿಕಾಭಿವೃದ್ಧಿಗೆ ಸಹಾಯಕವಾಗುವಂತೆ ಯೋಜನೆಗಳನ್ನು ರೂಪಿಸಲು ಹೆಚ್ಚು ಗಮನ ನೀಡುವ ಅವಶ್ಯಕತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>