<p><strong>ಮುಂಬೈ:</strong> `ತವರಿನ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಪಂದ್ಯ ಆಡಬೇಕು ಎಂಬ ನನ್ನ ಹಲವು ವರ್ಷಗಳ ಕನಸು ನನಸಾಗಲು ಕಾಲ ಕೂಡಿ ಬಂದಿದೆ. ಈ ಅಂಗಳದಲ್ಲಿ ನಾನು ಒಮ್ಮೆ ಬಾಲ್ ಬಾಯ್ ಆಗಿದ್ದೆ. ಈಗ ಆಡಲು ಸಜ್ಜಾಗುತ್ತಿದ್ದೇನೆ. ಇದೊಂದು ಅಪೂರ್ವ ಕ್ಷಣ. ಜೊತೆಗೆ ಕೊಂಚ ಒತ್ತಡವೂ ಇದೆ~ ಎಂದು ಅಜಿಂಕ್ಯ ರಹಾನೆ ನುಡಿದರು.</p>.<p>ವಿಶೇಷವೆಂದರೆ ಸದ್ಯ ಭಾರತ ಕ್ರಿಕೆಟ್ ತಂಡದಲ್ಲಿ ಆಡುತ್ತಿರುವ ಮುಂಬೈನ ಏಕೈಕ ಆಟಗಾರ ರಹಾನೆ. 23 ವರ್ಷ ವಯಸ್ಸಿನ ಈ ಆಟಗಾರ ಇಂಗ್ಲೆಂಡ್ ಪ್ರವಾಸ ಹಾಗೂ ಈಗ ಸ್ವದೇಶದಲ್ಲಿ ನಡೆಯುತ್ತಿರುವ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿ ಭರವಸೆ ಮೂಡಿಸಿದ್ದಾರೆ.</p>.<p>ರಹಾನೆ 11 ವರ್ಷಗಳ ಹಿಂದೆ ಈ ಕ್ರೀಡಾಂಗಣದಲ್ಲಿ `ಬಾಲ್ ಬಾಯ್~ ಆಗಿದ್ದರು. ಅವರೀಗ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಮುಂಬೈನ 68ನೇ ಆಟಗಾರ ಕೂಡ. ಮೊಹಾಲಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ 91 ರನ್ ಗಳಿಸಿ `ಪಂದ್ಯ ಶ್ರೇಷ್ಠ~ ಗೌರವಕ್ಕೆ ಭಾಜನರಾಗಿದ್ದರು.</p>.<p>ಭಾನುವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಪಂದ್ಯಕ್ಕೆ ವಾಂಖೇಡೆ ಕ್ರೀಡಾಂಗಣದಲ್ಲಿ ಶನಿವಾರ ಬೆಳಿಗ್ಗೆ ಅಭ್ಯಾಸ ನಡೆಸಿದ ಬಳಿಕ ರಹಾನೆ ಹಲವು ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು.</p>.<p><span style="color: #ff0000"><strong>ತವರಿನ ಪಿಚ್ನಲ್ಲಿ ಮೊದಲ ಅಂತರರಾಷ್ಟ್ರೀಯ ಪಂದ್ಯವಿದು. ನಿಮ್ಮ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಗ್ಗೆ?</strong></span></p>.<p>ಇದೊಂದು ನನ್ನ ಪಾಲಿಗೆ ಹೆಮ್ಮೆಯ ಕ್ಷಣ. ಭಾರತ ಇದೇ ಕ್ರೀಡಾಂಗಣದಲ್ಲಿ ಏಕದಿನ ವಿಶ್ವ ಚಾಂಪಿಯನ್ ಆಗಿದೆ. ಹಾಗಾಗಿ ನನ್ನ ಮೇಲೆ ಮಾತ್ರವಲ್ಲ; ಪ್ರತಿಯೊಬ್ಬ ಆಟಗಾರನಿಂದಲೂ ಅಭಿಮಾನಿಗಳು ಉತ್ತಮ ಆಟದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ನಾನು ವಿಶ್ವ ಚಾಂಪಿಯನ್ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ ಎಂಬುದು ಮತ್ತೊಂದು ಖುಷಿಯ ವಿಚಾರ.</p>.<p><span style="color: #ff0000"><strong>ಭಾರತ 3-0ರಲ್ಲಿ ಸರಣಿ ಗೆದ್ದಾಗಿದೆ. ಹಾಗಾಗಿ ಈ ಪಂದ್ಯ ಮಹತ್ವ ಕಳೆದುಕೊಂಡಿದೆಯೇ?</strong></span></p>.<p>ಪ್ರತಿ ಅಂತರರಾಷ್ಟ್ರೀಯ ಪಂದ್ಯಕ್ಕೂ ತನ್ನದೇ ಆದ ಮಹತ್ವವಿದೆ. ಸರಣಿ ಗೆದ್ದ ಮಾತ್ರಕ್ಕೆ ಉಳಿದ ಪಂದ್ಯಗಳು ಅರ್ಥ ಕಳೆದುಕೊಳ್ಳುತ್ತವೆ ಎಂಬ ಮಾತಿಗೇ ಅರ್ಥವಿಲ್ಲ. ಸರಣಿ ಗೆದ್ದಿರುವುದನ್ನು ಸಮರ್ಥಿಸಿಕೊಳ್ಳಲು ಈ ಪಂದ್ಯ ನಮ್ಮ ಪಾಲಿಗೆ ಅತೀ ಮಹತ್ವದ್ದಾಗಿದೆ.</p>.<p><span style="color: #ff0000"><strong>5-0ರಲ್ಲಿ ಸರಣಿ ಗೆಲ್ಲಲು ತಂಡ ಎದುರು ನೋಡುತ್ತಿದೆಯೇ?</strong></span></p>.<p>ಆ ಬಗ್ಗೆ ನಾವು ಇನ್ನೂ ಚಿಂತಿಸಿಲ್ಲ. ಈಗ ನಮ್ಮ ಚಿತ್ತ ಏನಿದ್ದರೂ ಭಾನುವಾರದ ಪಂದ್ಯದತ್ತ ಮಾತ್ರ. ಬಳಿಕ ಕೊನೆಯ ಪಂದ್ಯದ ಬಗ್ಗೆ ಯೋಚಿಸುತ್ತೇವೆ.</p>.<p><span style="color: #ff0000"><strong>ಮೊಹಾಲಿ ಪಂದ್ಯದಲ್ಲಿ ಶತಕ ತಪ್ಪಿಸಿಕೊಂಡಿದ್ದೀರಾ. ಆ ಬಗ್ಗೆ ನಿರಾಶೆಯಾಯಿತೇ?</strong></span></p>.<p>ಹೌದು, ನನಗೆ ತುಂಬಾ ನಿರಾಶೆಯಾಯಿತು. ಆದರೆ ಆ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತು. ಹಾಗಾಗಿ ಆ ನಿರಾಶೆ ತುಂಬಾ ಹೊತ್ತು ಉಳಿಯಲಿಲ್ಲ.</p>.<p><span style="color: #ff0000"><strong>ಸಚಿನ್, ಸೆಹ್ವಾಗ್ ತಂಡಕ್ಕೆ ಹಿಂತಿರುಗಿದಾಗ ಸ್ಥಾನ ಕಳೆದುಕೊಳ್ಳುವ ಆತಂಕವಿದೆಯೇ?</strong></span></p>.<p>ಸಚಿನ್, ವೀರೂ ಶ್ರೇಷ್ಠ ಆಟಗಾರರು. ಆದರೆ ನಾನು ತಂಡದಲ್ಲಿರುವ ವಿಚಾರ ಆಯ್ಕೆದಾರರಿಗೆ ಬಿಟ್ಟಿದ್ದು. ಸ್ಥಾನ ಸಿಕ್ಕಿದಾಗ ಉತ್ತಮ ಪ್ರದರ್ಶನ ನೀಡುವುದು ನನ್ನ ಕೆಲಸ ಅಷ್ಟೆ.</p>.<p><span style="color: #ff0000"><strong>ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ನೀವು ವಿಫಲವಾಗಿದ್ದೀರಿ. ಈ ಬಗ್ಗೆ?</strong></span></p>.<p>ಆ ಪಂದ್ಯಗಳಲ್ಲಿ ಕೆಲ ಎಡವಟ್ಟು ಮಾಡಿಕೊಂಡೆ. ಅದು ನನ್ನಲ್ಲಿ ನಿರಾಶೆ ಉಂಟು ಮಾಡಿದ್ದು ನಿಜ. ಆದರೆ ಆ ತಪ್ಪುಗಳನ್ನು ಮತ್ತೆ ಮಾಡಬಾರದು ಎಂದು ಮನಸ್ಸಿನಲ್ಲಿಯೇ ತೀರ್ಮಾನಿಸಿದ್ದೆ. ಬಳಿಕದ ಪಂದ್ಯದಲ್ಲಿ 91 ರನ್ ಗಳಿಸಿದೆ.</p>.<p><span style="color: #ff0000"><strong>ಇಂಗ್ಲೆಂಡ್ ಪ್ರವಾಸದಲ್ಲಿ ತಂಡ ಪೂರ್ಣ ವೈಫಲ್ಯ ಅನುಭವಿಸಿತ್ತು. ಆದರೆ ಇಲ್ಲಿ ಉತ್ತಮ ಪ್ರದರ್ಶನ ಮೂಡಿ ಬರುತ್ತಿದೆ. ತಂಡದಲ್ಲಿ ಆಗಿರುವ ವ್ಯತ್ಯಾಸವೇನು?</strong></span></p>.<p>ಕೆಲ ಆಟಗಾರರು ಈಗ ತಂಡದಲ್ಲಿ ಇಲ್ಲ ಅಷ್ಟೇ. ಡ್ರೆಸ್ಸಿಂಗ್ ಕೊಠಡಿಯ ವಾತಾವರಣದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರತಿಯೊಬ್ಬರ ಯಶಸ್ಸನ್ನು ನಾವು ಪರಸ್ಪರ ಆನಂದಿಸುತ್ತಿದ್ದೇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> `ತವರಿನ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಪಂದ್ಯ ಆಡಬೇಕು ಎಂಬ ನನ್ನ ಹಲವು ವರ್ಷಗಳ ಕನಸು ನನಸಾಗಲು ಕಾಲ ಕೂಡಿ ಬಂದಿದೆ. ಈ ಅಂಗಳದಲ್ಲಿ ನಾನು ಒಮ್ಮೆ ಬಾಲ್ ಬಾಯ್ ಆಗಿದ್ದೆ. ಈಗ ಆಡಲು ಸಜ್ಜಾಗುತ್ತಿದ್ದೇನೆ. ಇದೊಂದು ಅಪೂರ್ವ ಕ್ಷಣ. ಜೊತೆಗೆ ಕೊಂಚ ಒತ್ತಡವೂ ಇದೆ~ ಎಂದು ಅಜಿಂಕ್ಯ ರಹಾನೆ ನುಡಿದರು.</p>.<p>ವಿಶೇಷವೆಂದರೆ ಸದ್ಯ ಭಾರತ ಕ್ರಿಕೆಟ್ ತಂಡದಲ್ಲಿ ಆಡುತ್ತಿರುವ ಮುಂಬೈನ ಏಕೈಕ ಆಟಗಾರ ರಹಾನೆ. 23 ವರ್ಷ ವಯಸ್ಸಿನ ಈ ಆಟಗಾರ ಇಂಗ್ಲೆಂಡ್ ಪ್ರವಾಸ ಹಾಗೂ ಈಗ ಸ್ವದೇಶದಲ್ಲಿ ನಡೆಯುತ್ತಿರುವ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿ ಭರವಸೆ ಮೂಡಿಸಿದ್ದಾರೆ.</p>.<p>ರಹಾನೆ 11 ವರ್ಷಗಳ ಹಿಂದೆ ಈ ಕ್ರೀಡಾಂಗಣದಲ್ಲಿ `ಬಾಲ್ ಬಾಯ್~ ಆಗಿದ್ದರು. ಅವರೀಗ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಮುಂಬೈನ 68ನೇ ಆಟಗಾರ ಕೂಡ. ಮೊಹಾಲಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ 91 ರನ್ ಗಳಿಸಿ `ಪಂದ್ಯ ಶ್ರೇಷ್ಠ~ ಗೌರವಕ್ಕೆ ಭಾಜನರಾಗಿದ್ದರು.</p>.<p>ಭಾನುವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಪಂದ್ಯಕ್ಕೆ ವಾಂಖೇಡೆ ಕ್ರೀಡಾಂಗಣದಲ್ಲಿ ಶನಿವಾರ ಬೆಳಿಗ್ಗೆ ಅಭ್ಯಾಸ ನಡೆಸಿದ ಬಳಿಕ ರಹಾನೆ ಹಲವು ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು.</p>.<p><span style="color: #ff0000"><strong>ತವರಿನ ಪಿಚ್ನಲ್ಲಿ ಮೊದಲ ಅಂತರರಾಷ್ಟ್ರೀಯ ಪಂದ್ಯವಿದು. ನಿಮ್ಮ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಗ್ಗೆ?</strong></span></p>.<p>ಇದೊಂದು ನನ್ನ ಪಾಲಿಗೆ ಹೆಮ್ಮೆಯ ಕ್ಷಣ. ಭಾರತ ಇದೇ ಕ್ರೀಡಾಂಗಣದಲ್ಲಿ ಏಕದಿನ ವಿಶ್ವ ಚಾಂಪಿಯನ್ ಆಗಿದೆ. ಹಾಗಾಗಿ ನನ್ನ ಮೇಲೆ ಮಾತ್ರವಲ್ಲ; ಪ್ರತಿಯೊಬ್ಬ ಆಟಗಾರನಿಂದಲೂ ಅಭಿಮಾನಿಗಳು ಉತ್ತಮ ಆಟದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ನಾನು ವಿಶ್ವ ಚಾಂಪಿಯನ್ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ ಎಂಬುದು ಮತ್ತೊಂದು ಖುಷಿಯ ವಿಚಾರ.</p>.<p><span style="color: #ff0000"><strong>ಭಾರತ 3-0ರಲ್ಲಿ ಸರಣಿ ಗೆದ್ದಾಗಿದೆ. ಹಾಗಾಗಿ ಈ ಪಂದ್ಯ ಮಹತ್ವ ಕಳೆದುಕೊಂಡಿದೆಯೇ?</strong></span></p>.<p>ಪ್ರತಿ ಅಂತರರಾಷ್ಟ್ರೀಯ ಪಂದ್ಯಕ್ಕೂ ತನ್ನದೇ ಆದ ಮಹತ್ವವಿದೆ. ಸರಣಿ ಗೆದ್ದ ಮಾತ್ರಕ್ಕೆ ಉಳಿದ ಪಂದ್ಯಗಳು ಅರ್ಥ ಕಳೆದುಕೊಳ್ಳುತ್ತವೆ ಎಂಬ ಮಾತಿಗೇ ಅರ್ಥವಿಲ್ಲ. ಸರಣಿ ಗೆದ್ದಿರುವುದನ್ನು ಸಮರ್ಥಿಸಿಕೊಳ್ಳಲು ಈ ಪಂದ್ಯ ನಮ್ಮ ಪಾಲಿಗೆ ಅತೀ ಮಹತ್ವದ್ದಾಗಿದೆ.</p>.<p><span style="color: #ff0000"><strong>5-0ರಲ್ಲಿ ಸರಣಿ ಗೆಲ್ಲಲು ತಂಡ ಎದುರು ನೋಡುತ್ತಿದೆಯೇ?</strong></span></p>.<p>ಆ ಬಗ್ಗೆ ನಾವು ಇನ್ನೂ ಚಿಂತಿಸಿಲ್ಲ. ಈಗ ನಮ್ಮ ಚಿತ್ತ ಏನಿದ್ದರೂ ಭಾನುವಾರದ ಪಂದ್ಯದತ್ತ ಮಾತ್ರ. ಬಳಿಕ ಕೊನೆಯ ಪಂದ್ಯದ ಬಗ್ಗೆ ಯೋಚಿಸುತ್ತೇವೆ.</p>.<p><span style="color: #ff0000"><strong>ಮೊಹಾಲಿ ಪಂದ್ಯದಲ್ಲಿ ಶತಕ ತಪ್ಪಿಸಿಕೊಂಡಿದ್ದೀರಾ. ಆ ಬಗ್ಗೆ ನಿರಾಶೆಯಾಯಿತೇ?</strong></span></p>.<p>ಹೌದು, ನನಗೆ ತುಂಬಾ ನಿರಾಶೆಯಾಯಿತು. ಆದರೆ ಆ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತು. ಹಾಗಾಗಿ ಆ ನಿರಾಶೆ ತುಂಬಾ ಹೊತ್ತು ಉಳಿಯಲಿಲ್ಲ.</p>.<p><span style="color: #ff0000"><strong>ಸಚಿನ್, ಸೆಹ್ವಾಗ್ ತಂಡಕ್ಕೆ ಹಿಂತಿರುಗಿದಾಗ ಸ್ಥಾನ ಕಳೆದುಕೊಳ್ಳುವ ಆತಂಕವಿದೆಯೇ?</strong></span></p>.<p>ಸಚಿನ್, ವೀರೂ ಶ್ರೇಷ್ಠ ಆಟಗಾರರು. ಆದರೆ ನಾನು ತಂಡದಲ್ಲಿರುವ ವಿಚಾರ ಆಯ್ಕೆದಾರರಿಗೆ ಬಿಟ್ಟಿದ್ದು. ಸ್ಥಾನ ಸಿಕ್ಕಿದಾಗ ಉತ್ತಮ ಪ್ರದರ್ಶನ ನೀಡುವುದು ನನ್ನ ಕೆಲಸ ಅಷ್ಟೆ.</p>.<p><span style="color: #ff0000"><strong>ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ನೀವು ವಿಫಲವಾಗಿದ್ದೀರಿ. ಈ ಬಗ್ಗೆ?</strong></span></p>.<p>ಆ ಪಂದ್ಯಗಳಲ್ಲಿ ಕೆಲ ಎಡವಟ್ಟು ಮಾಡಿಕೊಂಡೆ. ಅದು ನನ್ನಲ್ಲಿ ನಿರಾಶೆ ಉಂಟು ಮಾಡಿದ್ದು ನಿಜ. ಆದರೆ ಆ ತಪ್ಪುಗಳನ್ನು ಮತ್ತೆ ಮಾಡಬಾರದು ಎಂದು ಮನಸ್ಸಿನಲ್ಲಿಯೇ ತೀರ್ಮಾನಿಸಿದ್ದೆ. ಬಳಿಕದ ಪಂದ್ಯದಲ್ಲಿ 91 ರನ್ ಗಳಿಸಿದೆ.</p>.<p><span style="color: #ff0000"><strong>ಇಂಗ್ಲೆಂಡ್ ಪ್ರವಾಸದಲ್ಲಿ ತಂಡ ಪೂರ್ಣ ವೈಫಲ್ಯ ಅನುಭವಿಸಿತ್ತು. ಆದರೆ ಇಲ್ಲಿ ಉತ್ತಮ ಪ್ರದರ್ಶನ ಮೂಡಿ ಬರುತ್ತಿದೆ. ತಂಡದಲ್ಲಿ ಆಗಿರುವ ವ್ಯತ್ಯಾಸವೇನು?</strong></span></p>.<p>ಕೆಲ ಆಟಗಾರರು ಈಗ ತಂಡದಲ್ಲಿ ಇಲ್ಲ ಅಷ್ಟೇ. ಡ್ರೆಸ್ಸಿಂಗ್ ಕೊಠಡಿಯ ವಾತಾವರಣದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರತಿಯೊಬ್ಬರ ಯಶಸ್ಸನ್ನು ನಾವು ಪರಸ್ಪರ ಆನಂದಿಸುತ್ತಿದ್ದೇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>