<p><strong>ಢಾಕಾ (ಪಿಟಿಐ): </strong>ಪ್ರಧಾನಿ ನರೇಂದ್ರ ಮೋದಿ ಅವರ ಚೊಚ್ಚಲ ಬಾಂಗ್ಲಾದೇಶ ಭೇಟಿಯ ವೇಳೆ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಭೂಗಡಿ ಒಪ್ಪಂದ ಸಾಕಾರಗೊಂಡ ಬೆನ್ನಲ್ಲೆ, ನೆರೆ ರಾಷ್ಟ್ರವು ಇದೀಗ ತೀಸ್ತಾ ನದಿ ನೀರು ಹಂಚಿಕೆ ಬಿಕ್ಕಟ್ಟು ಪರಿಹರಿಸಿಕೊಳ್ಳಲು ಉತ್ಸುಕತೆ ತೋರಿದೆ.</p>.<p>ಸುದ್ದಿ ಸಂಸ್ಥೆಗೆ ಜತೆಗೆ ಮಾತನಾಡಿದ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಎಚ್.ಮಹ್ಮೂದ್ ಅಲಿ, ‘ಇಲ್ಲಿ ಇತಿಹಾಸ ಸೃಷ್ಟಿಯಾಯಿತು’ ಎಂದು ಮಹತ್ವದ ಭೂಗಡಿ ಒಪ್ಪಂದದವನ್ನು ಉದ್ದೇಶಿಸಿ ನುಡಿದರು.</p>.<p>ಅಲ್ಲದೇ, ತೀಸ್ತಾ ವಿವಾದವೂ ಕೂಡ ಶೀಘ್ರವೆ ಪರಿಹಾರ ಕಾಣಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>‘ನಮಗೆ ತೀಸ್ತಾ ವಿವಾದ ಪರಿಹಾರವಾಗುವ ವಿಶ್ವಾಸವಿದೆ. ಮೋದಿ ಅವರ ಭೇಟಿಯ ವೇಳೆ ಏರ್ಪಟ್ಟಿರುವ ಸ್ನೇಹಪರತೆ ಹಾಗೂ ಮೈತ್ರಿಯನ್ನು ನಾವು ಮುಂದುವರಿಸಬೇಕಿದೆ. ಈ ನಿಟ್ಟಿನಲ್ಲಿ ನಿರಂತರವಾಗಿ ನಾವು ಕಾರ್ಯನಿರ್ವಹಿಸಲಿದ್ದೇವೆ’ ಎಂದು ನುಡಿದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ (ಪಿಟಿಐ): </strong>ಪ್ರಧಾನಿ ನರೇಂದ್ರ ಮೋದಿ ಅವರ ಚೊಚ್ಚಲ ಬಾಂಗ್ಲಾದೇಶ ಭೇಟಿಯ ವೇಳೆ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಭೂಗಡಿ ಒಪ್ಪಂದ ಸಾಕಾರಗೊಂಡ ಬೆನ್ನಲ್ಲೆ, ನೆರೆ ರಾಷ್ಟ್ರವು ಇದೀಗ ತೀಸ್ತಾ ನದಿ ನೀರು ಹಂಚಿಕೆ ಬಿಕ್ಕಟ್ಟು ಪರಿಹರಿಸಿಕೊಳ್ಳಲು ಉತ್ಸುಕತೆ ತೋರಿದೆ.</p>.<p>ಸುದ್ದಿ ಸಂಸ್ಥೆಗೆ ಜತೆಗೆ ಮಾತನಾಡಿದ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಎಚ್.ಮಹ್ಮೂದ್ ಅಲಿ, ‘ಇಲ್ಲಿ ಇತಿಹಾಸ ಸೃಷ್ಟಿಯಾಯಿತು’ ಎಂದು ಮಹತ್ವದ ಭೂಗಡಿ ಒಪ್ಪಂದದವನ್ನು ಉದ್ದೇಶಿಸಿ ನುಡಿದರು.</p>.<p>ಅಲ್ಲದೇ, ತೀಸ್ತಾ ವಿವಾದವೂ ಕೂಡ ಶೀಘ್ರವೆ ಪರಿಹಾರ ಕಾಣಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>‘ನಮಗೆ ತೀಸ್ತಾ ವಿವಾದ ಪರಿಹಾರವಾಗುವ ವಿಶ್ವಾಸವಿದೆ. ಮೋದಿ ಅವರ ಭೇಟಿಯ ವೇಳೆ ಏರ್ಪಟ್ಟಿರುವ ಸ್ನೇಹಪರತೆ ಹಾಗೂ ಮೈತ್ರಿಯನ್ನು ನಾವು ಮುಂದುವರಿಸಬೇಕಿದೆ. ಈ ನಿಟ್ಟಿನಲ್ಲಿ ನಿರಂತರವಾಗಿ ನಾವು ಕಾರ್ಯನಿರ್ವಹಿಸಲಿದ್ದೇವೆ’ ಎಂದು ನುಡಿದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>