ತೆಪ್ಪ ಮುಳುಗಿ ಐವರ ಸಾವು
ಕಲಘಟಗಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಕಂದ್ಲಿ ಗ್ರಾಮದ ತಟ್ಟಿಹಳ್ಳ ಜಲಾಶಯದಲ್ಲಿ ತೆಪ್ಪ ಮುಳುಗಿ ಒಂದೇ ಕುಟುಂಬದ ಮೂವರು ಸೇರಿ ಐವರು ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ 6 ಗಂಟೆ ವೇಳೆಗೆ ಸಂಭವಿಸಿದೆ.
ಸತ್ತವರಲ್ಲಿ ಇಬ್ಬರು ಮಹಿಳೆಯರು ಹಾಗೂ ಮೂವರು ವಿದ್ಯಾರ್ಥಿನಿಯರು. ಒಬ್ಬ ವಿದ್ಯಾರ್ಥಿ ಈಜಿ ಪಾರಾಗಿದ್ದಾನೆ. ತಟ್ಟಿಹಳ್ಳ ಜಲಾಯಶದ ಒಂದು ಬದಿಯಲ್ಲಿರುವ ಹೊಲದಲ್ಲಿನ ಹತ್ತಿಯ ಫಸಲನ್ನು ಬಿಡಿಸಿಕೊಂಡು ತೆಪ್ಪದಲ್ಲಿ ತೆಗೆದುಕೊಂಡು ಗ್ರಾಮಕ್ಕೆ ವಾಪಸ್ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಮೃತರನ್ನು ಜಾಯವ್ವ ಬಾಂದೇಕರ (40), ಸೇವಂತಿ ಬಾಬರಿ (35), ವಿದ್ಯಾರ್ಥಿನಿಯರಾದ ಗಿರಿಜಾ ಬಾಂದೇಕರ (13), ಚನ್ನವ್ವ ಬಾಬರಿ (14), ಅಕ್ಷತಾ ಬಾಂದೇಕರ (13) ಎಂದು ಗುರುತಿಸಲಾಗಿದೆ. ಕೃಷ್ಣಾ ಬಾಂದೇಕರ ಎಂಬ ಬಾಲಕ ಈಜಿ ದಡ ಸೇರಿಕೊಂಡಿದ್ದಾನೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.