<p><strong>ಹೈದರಾಬಾದ್ (ಪಿಟಿಐ): </strong>ಆಂಧ್ರ ಪ್ರದೇಶ ಪುನರ್ರಚನೆ ಕರಡು ಮಸೂ ದೆಯು ಇದೀಗ ತೆಲಂಗಾಣ ಪರ ಹಾಗೂ ವಿರೋಧಿ ಬಣದ ಶಾಸಕರ ಹಗ್ಗ ಜಗ್ಗಾಟಕ್ಕೂ ಅವಕಾಶ ಕಲ್ಪಿಸಿಕೊಟ್ಟಿದೆ.<br /> <br /> ಈ ವಿಷಯವಾಗಿ ತೆಲಂಗಾಣ ಹಾಗೂ ಸೀಮಾಂಧ್ರ ಶಾಸಕರು ಕೋಲಾ ಹಲ ಎಬ್ಬಿಸಿದ್ದರಿಂದ ಕರಡು ಮಸೂದೆಯು ವಿಧಾನಸಭೆಯಲ್ಲಿ ಶುಕ್ರವಾರ ಮಂಡನೆಯಾಗಲಿಲ್ಲ. ಸೋಮವಾರ ಮಂಡನೆಯಾಗುವ ನಿರೀಕ್ಷೆ ಇದೆ.<br /> <br /> ಕರಡು ಮಸೂದೆ ಮಂಡನೆ ಬಳಿಕ ಸ್ಪೀಕರ್, ಕಲಾಪ ಸಲಹಾ ಸಮಿತಿ ಸಭೆ ಕರೆಯಲಿದ್ದಾರೆ. ಈ ಸಭೆಯಲ್ಲಿ ಕರಡು ಮಸೂದೆ ಮೇಲಿನ ಚರ್ಚೆಯ ದಿನ ಗೊತ್ತುಪಡಿಸಲಾಗುತ್ತದೆ.<br /> <br /> ವಿಧಾನಸಭೆಯಲ್ಲಿ ಈ ಕೂಡಲೇ ಕರಡು ಮಸೂದೆ ಮಂಡಿಸಬೇಕು ಎನ್ನುವುದು ತೆಲಂಗಾಣ ಶಾಸಕರ ಪಟ್ಟು. ಇನ್ನೊಂದೆಡೆ ಸೀಮಾಂಧ್ರ ಶಾಸಕರು, ಮುಂದಿನ ತಿಂಗಳು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಈ ವಿಷಯ ಚರ್ಚೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಚರ್ಚೆಗೆ ಮುನ್ನ ಕರಡು ಮಸೂದೆಯನ್ನು ಇಂಗ್ಲಿಷ್ನಿಂದ ತೆಲುಗು ಹಾಗೂ ಉರ್ದು ಭಾಷೆಗಳಿಗೆ ತರ್ಜುಮೆ ಮಾಡಬೇಕು ಎಂದೂ ಆಗ್ರಹಿಸಿದ್ದಾರೆ.<br /> <br /> ಈ ಚಳಿಗಾಲದ ಅಧಿವೇಶನದಲ್ಲಿ ಕರಡು ಮಸೂದೆ ಮೇಲೆ ಚರ್ಚೆ ನಡೆಸುವುದಕ್ಕೆ ಮುಖ್ಯಮಂತ್ರಿ ಕಿರಣ್್ ಕುಮಾರ್್ ರೆಡ್ಡಿ ಹಾಗೂ ಸೀಮಾಂಧ್ರ ಶಾಸಕರಿಗೆ ಮನಸ್ಸಿಲ್ಲ.<br /> <br /> <strong>ಅವಿಶ್ವಾಸ ಗೊತ್ತುವಳಿ ಬೆದರಿಕೆ:</strong><br /> ಆದರೆ, ತೆಲಂಗಾಣ ಶಾಸಕರು ವಿಳಂಬ ತಂತ್ರಕ್ಕೆ ಅವಕಾಶ ಮಾಡಿ ಕೊಡಲು ತಯಾರಿಲ್ಲ. ತೆಲಂಗಾಣ ರಚನೆಗೆ ಅಡ್ಡಿಯಾಗುತ್ತಿರುವ ಮುಖ್ಯಮಂತ್ರಿ ವಿರುದ್ಧ ‘ಅವಿಶ್ವಾಸ ಗೊತ್ತುವಳಿ’ ಮಂಡಿಸುವುದಾಗಿ ಉಪಮುಖ್ಯಮಂತ್ರಿ ದಾಮೋದರ ರಾಜ ನರಸಿಂಹ ಬೆದರಿಕೆ ಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್ (ಪಿಟಿಐ): </strong>ಆಂಧ್ರ ಪ್ರದೇಶ ಪುನರ್ರಚನೆ ಕರಡು ಮಸೂ ದೆಯು ಇದೀಗ ತೆಲಂಗಾಣ ಪರ ಹಾಗೂ ವಿರೋಧಿ ಬಣದ ಶಾಸಕರ ಹಗ್ಗ ಜಗ್ಗಾಟಕ್ಕೂ ಅವಕಾಶ ಕಲ್ಪಿಸಿಕೊಟ್ಟಿದೆ.<br /> <br /> ಈ ವಿಷಯವಾಗಿ ತೆಲಂಗಾಣ ಹಾಗೂ ಸೀಮಾಂಧ್ರ ಶಾಸಕರು ಕೋಲಾ ಹಲ ಎಬ್ಬಿಸಿದ್ದರಿಂದ ಕರಡು ಮಸೂದೆಯು ವಿಧಾನಸಭೆಯಲ್ಲಿ ಶುಕ್ರವಾರ ಮಂಡನೆಯಾಗಲಿಲ್ಲ. ಸೋಮವಾರ ಮಂಡನೆಯಾಗುವ ನಿರೀಕ್ಷೆ ಇದೆ.<br /> <br /> ಕರಡು ಮಸೂದೆ ಮಂಡನೆ ಬಳಿಕ ಸ್ಪೀಕರ್, ಕಲಾಪ ಸಲಹಾ ಸಮಿತಿ ಸಭೆ ಕರೆಯಲಿದ್ದಾರೆ. ಈ ಸಭೆಯಲ್ಲಿ ಕರಡು ಮಸೂದೆ ಮೇಲಿನ ಚರ್ಚೆಯ ದಿನ ಗೊತ್ತುಪಡಿಸಲಾಗುತ್ತದೆ.<br /> <br /> ವಿಧಾನಸಭೆಯಲ್ಲಿ ಈ ಕೂಡಲೇ ಕರಡು ಮಸೂದೆ ಮಂಡಿಸಬೇಕು ಎನ್ನುವುದು ತೆಲಂಗಾಣ ಶಾಸಕರ ಪಟ್ಟು. ಇನ್ನೊಂದೆಡೆ ಸೀಮಾಂಧ್ರ ಶಾಸಕರು, ಮುಂದಿನ ತಿಂಗಳು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಈ ವಿಷಯ ಚರ್ಚೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಚರ್ಚೆಗೆ ಮುನ್ನ ಕರಡು ಮಸೂದೆಯನ್ನು ಇಂಗ್ಲಿಷ್ನಿಂದ ತೆಲುಗು ಹಾಗೂ ಉರ್ದು ಭಾಷೆಗಳಿಗೆ ತರ್ಜುಮೆ ಮಾಡಬೇಕು ಎಂದೂ ಆಗ್ರಹಿಸಿದ್ದಾರೆ.<br /> <br /> ಈ ಚಳಿಗಾಲದ ಅಧಿವೇಶನದಲ್ಲಿ ಕರಡು ಮಸೂದೆ ಮೇಲೆ ಚರ್ಚೆ ನಡೆಸುವುದಕ್ಕೆ ಮುಖ್ಯಮಂತ್ರಿ ಕಿರಣ್್ ಕುಮಾರ್್ ರೆಡ್ಡಿ ಹಾಗೂ ಸೀಮಾಂಧ್ರ ಶಾಸಕರಿಗೆ ಮನಸ್ಸಿಲ್ಲ.<br /> <br /> <strong>ಅವಿಶ್ವಾಸ ಗೊತ್ತುವಳಿ ಬೆದರಿಕೆ:</strong><br /> ಆದರೆ, ತೆಲಂಗಾಣ ಶಾಸಕರು ವಿಳಂಬ ತಂತ್ರಕ್ಕೆ ಅವಕಾಶ ಮಾಡಿ ಕೊಡಲು ತಯಾರಿಲ್ಲ. ತೆಲಂಗಾಣ ರಚನೆಗೆ ಅಡ್ಡಿಯಾಗುತ್ತಿರುವ ಮುಖ್ಯಮಂತ್ರಿ ವಿರುದ್ಧ ‘ಅವಿಶ್ವಾಸ ಗೊತ್ತುವಳಿ’ ಮಂಡಿಸುವುದಾಗಿ ಉಪಮುಖ್ಯಮಂತ್ರಿ ದಾಮೋದರ ರಾಜ ನರಸಿಂಹ ಬೆದರಿಕೆ ಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>