<p><strong>ಕೋಲಾರ: </strong>ಜಿಲ್ಲೆಯ ಕೆಜಿಎಫ್ನ ಕೆನಡೀಸ್ ಲೈನಿನ 6ನೇ ಬ್ಲಾಕ್ಗೆ ಸೇರಿದ ತೆಲುಗು ಲೈನ್ನಲ್ಲಿ ಸೂತಕದ ಛಾಯೆ ಆವರಿಸಿದೆ. ಇಡೀ ನಗರವು ದೀಪಾವಳಿ ಸಂಭ್ರಮದಲ್ಲಿದ್ದರೆ ಈ ಲೈನ್ನ ನಿವಾಸಿಗಳಲ್ಲಿ ದುಃಖ ಹೆಪ್ಪುಗಟ್ಟಿದೆ. <br /> <br /> ದೀಪಾವಳಿಗೆ ಮುನ್ನಾದಿನವಾದ ಸೋಮವಾರ ಅಶೋಕ ನಗರದಲ್ಲಿ ಮಲದಗುಂಡಿ ಸ್ವಚ್ಛಗೊಳಿಸಲು ಇಳಿದು ದುರ್ಮರಣಕ್ಕೀಡಾದ ನಾಗೇಂದ್ರಬಾಬು, ಪ್ರಸಾದ್ಕುಟ್ಟಿ ಮತ್ತು ರವಿ ಇದೇ ಲೈನ್ನಲ್ಲಿ ವಾಸವಿದ್ದವರು.</p>.<p>ಮೂರು ತಿಂಗಳ ಹಿಂದೆ ನಗರಸಭೆಯು ತಾತ್ಕಾಲಿಕ ಅವಧಿಯಲ್ಲಿ 140 ಮಂದಿಗೆ ನೀಡಿದ್ದ ಗುತ್ತಿಗೆ ಕೆಲಸಕ್ಕಾಗಿ ಈ ಮೂವರು ಸೇರಿದಂತೆ ಈ ಲೈನಿನ 29 ಮಂದಿ ಆಯ್ಕೆಯಾಗಿದ್ದರು. ಗುತ್ತಿಗೆ ಅವಧಿ ಮುಗಿದು ಕೈ ಬರಿದಾದ ಕಾರಣ ಈ ಮೂವರು ಮಲದಗುಂಡಿ ಸ್ವಚ್ಛಗೊಳಿಸುವ ಕೆಲಸಕ್ಕೆ ಇಳಿದಿದ್ದರು.</p>.<p>ಲೈನ್ನಲ್ಲಿರುವ ಬಹುತೇಕರು ಸಂಬಂಧಿಕರೇ ಆಗಿರುವುದರಿಂಧ ಈಗ ಈ ಮೂವರ ಮನೆಯಷ್ಟೆ ಅಲ್ಲದೇ ಇಡೀ ಲೈನ್ನಲ್ಲಿ ಶೋಕ ಮಡುಗಟ್ಟಿದೆ. ಮಕ್ಕಳು ಮಾತ್ರ ಸೂತಕದ ಅರಿವಿಲ್ಲದೆ ಇದ್ದಾರೆ.<br /> <br /> ಯುವಕ ನಾಗೇಂದ್ರ ಬಾಬು (26) ಅವರ ಮನೆಯಲ್ಲಿ ಮಗು ಹುಟ್ಟಿದ ಸಂಭ್ರಮ ಬಹಳ ಬೇಗ ಕದಡಿ ಸಾವಿನ ದುಃಖ ಆವರಿಸಿದೆ. 11 ದಿನದ ಹಿಂದೆ ನಾಗೇಂದ್ರ ಬಾಬು ಹೆಣ್ಣುಮಗುವಿನ ತಂದೆಯಾಗಿದ್ದರು. ತಂದೆತನದ ಹೊಸ್ತಿಲಲ್ಲಿರುವಾಗಲೇ ಮಲದಗುಂಡಿ ಅವರನ್ನು ಬಲಿತೆಗೆದುಕೊಂಡಿದೆ.</p>.<p>ನಾಗೇಂದ್ರ ಅವರದು ಈ ಬಗೆಯ ದುರಂತವಾದರೆ, 29ರ ಹರೆಯದ ರವಿ ಅವರದು ಮತ್ತೊಂದು ಘೋರ ದುರಂತ. ಏಕೆಂದರೆ ಅವರ ಮದುವೆಯಾಗಿ ಕೇವಲ ಮೂರು ತಿಂಗಳಾಗಿತ್ತು. ನವದಾಂಪತ್ಯದ ಸಂಭ್ರಮ ಬಹಳ ಬೇಗ ಕೊನೆಯಾಗಿದೆ. <br /> <br /> ಮಲದ ಗುಂಡಿ ಸ್ವಚ್ಛಗೊಳಿಸುವ ಕುಶಲಕರ್ಮಿ ಎಂದೇ ಹೆಸರು ಪಡೆದಿದ್ದ ಪ್ರಸಾದ್ ಕುಟ್ಟಿಯವರ ಒಬ್ಬ ಮಗ ಅಜಿತ್ಕುಮಾರ್ 8ನೇ ತರಗತಿ ಮತ್ತು ಮತ್ತೊಬ್ಬ ಮಗ ನಿತೀಶ್ 3ನೇ ತರಗತಿಯಲ್ಲಿ ಓದುತ್ತಿದ್ದಾರೆ.</p>.<p>ಇಡೀ ಲೈನ್ನ ನಿವಾಸಿಗಳು ಪಡುತ್ತಿರುವ ದುಃಖ ಇನ್ನೂ ಆ ಮಕ್ಕಳ ಅನುಭವಕ್ಕೆ ಬಂದಿಲ್ಲ. ತಂದೆಯ ಸಾವು ಕೂಡ ಅವರಿಗೆ ಅರ್ಥವಾಗಿಲ್ಲ. ಬುಧವಾರ `ಪ್ರಜಾವಾಣಿ~ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸಹಜವಾಗಿ ತಮ್ಮ ಮನೆಯ ಆಚೀಚೆ ಓಡಾಡಿಕೊಂಡಿದ್ದರು. <br /> <br /> ಈ ಮಕ್ಕಳ ತಾಯಿ, ಪ್ರಸಾದ್ ಪತ್ನಿ ಕೂಡ ಮಲದಗುಂಡಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದು, ಈಗ ನಿಲ್ಲಿಸಿದ್ದಾರೆ. ಅದಕ್ಕೆ ಆ ಕೆಲಸದ ಪರಿಣಾಮವಾಗಿ ಎದುರಾಗಿರುವ ಕಾಯಿಲೆಯೇ ಕಾರಣ ಎಂಬುದು ಅವರ ನೆರೆಯವರ ಮಾತು. ನಗರಸಭೆ ಪೂರ್ಣಾವಧಿ ಕೆಲಸ ಮಾಡಿದರೆ ಮಾತ್ರ ತಮ್ಮ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದು ಅವರ ಒತ್ತಾಸೆಯ ನುಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ: </strong>ಜಿಲ್ಲೆಯ ಕೆಜಿಎಫ್ನ ಕೆನಡೀಸ್ ಲೈನಿನ 6ನೇ ಬ್ಲಾಕ್ಗೆ ಸೇರಿದ ತೆಲುಗು ಲೈನ್ನಲ್ಲಿ ಸೂತಕದ ಛಾಯೆ ಆವರಿಸಿದೆ. ಇಡೀ ನಗರವು ದೀಪಾವಳಿ ಸಂಭ್ರಮದಲ್ಲಿದ್ದರೆ ಈ ಲೈನ್ನ ನಿವಾಸಿಗಳಲ್ಲಿ ದುಃಖ ಹೆಪ್ಪುಗಟ್ಟಿದೆ. <br /> <br /> ದೀಪಾವಳಿಗೆ ಮುನ್ನಾದಿನವಾದ ಸೋಮವಾರ ಅಶೋಕ ನಗರದಲ್ಲಿ ಮಲದಗುಂಡಿ ಸ್ವಚ್ಛಗೊಳಿಸಲು ಇಳಿದು ದುರ್ಮರಣಕ್ಕೀಡಾದ ನಾಗೇಂದ್ರಬಾಬು, ಪ್ರಸಾದ್ಕುಟ್ಟಿ ಮತ್ತು ರವಿ ಇದೇ ಲೈನ್ನಲ್ಲಿ ವಾಸವಿದ್ದವರು.</p>.<p>ಮೂರು ತಿಂಗಳ ಹಿಂದೆ ನಗರಸಭೆಯು ತಾತ್ಕಾಲಿಕ ಅವಧಿಯಲ್ಲಿ 140 ಮಂದಿಗೆ ನೀಡಿದ್ದ ಗುತ್ತಿಗೆ ಕೆಲಸಕ್ಕಾಗಿ ಈ ಮೂವರು ಸೇರಿದಂತೆ ಈ ಲೈನಿನ 29 ಮಂದಿ ಆಯ್ಕೆಯಾಗಿದ್ದರು. ಗುತ್ತಿಗೆ ಅವಧಿ ಮುಗಿದು ಕೈ ಬರಿದಾದ ಕಾರಣ ಈ ಮೂವರು ಮಲದಗುಂಡಿ ಸ್ವಚ್ಛಗೊಳಿಸುವ ಕೆಲಸಕ್ಕೆ ಇಳಿದಿದ್ದರು.</p>.<p>ಲೈನ್ನಲ್ಲಿರುವ ಬಹುತೇಕರು ಸಂಬಂಧಿಕರೇ ಆಗಿರುವುದರಿಂಧ ಈಗ ಈ ಮೂವರ ಮನೆಯಷ್ಟೆ ಅಲ್ಲದೇ ಇಡೀ ಲೈನ್ನಲ್ಲಿ ಶೋಕ ಮಡುಗಟ್ಟಿದೆ. ಮಕ್ಕಳು ಮಾತ್ರ ಸೂತಕದ ಅರಿವಿಲ್ಲದೆ ಇದ್ದಾರೆ.<br /> <br /> ಯುವಕ ನಾಗೇಂದ್ರ ಬಾಬು (26) ಅವರ ಮನೆಯಲ್ಲಿ ಮಗು ಹುಟ್ಟಿದ ಸಂಭ್ರಮ ಬಹಳ ಬೇಗ ಕದಡಿ ಸಾವಿನ ದುಃಖ ಆವರಿಸಿದೆ. 11 ದಿನದ ಹಿಂದೆ ನಾಗೇಂದ್ರ ಬಾಬು ಹೆಣ್ಣುಮಗುವಿನ ತಂದೆಯಾಗಿದ್ದರು. ತಂದೆತನದ ಹೊಸ್ತಿಲಲ್ಲಿರುವಾಗಲೇ ಮಲದಗುಂಡಿ ಅವರನ್ನು ಬಲಿತೆಗೆದುಕೊಂಡಿದೆ.</p>.<p>ನಾಗೇಂದ್ರ ಅವರದು ಈ ಬಗೆಯ ದುರಂತವಾದರೆ, 29ರ ಹರೆಯದ ರವಿ ಅವರದು ಮತ್ತೊಂದು ಘೋರ ದುರಂತ. ಏಕೆಂದರೆ ಅವರ ಮದುವೆಯಾಗಿ ಕೇವಲ ಮೂರು ತಿಂಗಳಾಗಿತ್ತು. ನವದಾಂಪತ್ಯದ ಸಂಭ್ರಮ ಬಹಳ ಬೇಗ ಕೊನೆಯಾಗಿದೆ. <br /> <br /> ಮಲದ ಗುಂಡಿ ಸ್ವಚ್ಛಗೊಳಿಸುವ ಕುಶಲಕರ್ಮಿ ಎಂದೇ ಹೆಸರು ಪಡೆದಿದ್ದ ಪ್ರಸಾದ್ ಕುಟ್ಟಿಯವರ ಒಬ್ಬ ಮಗ ಅಜಿತ್ಕುಮಾರ್ 8ನೇ ತರಗತಿ ಮತ್ತು ಮತ್ತೊಬ್ಬ ಮಗ ನಿತೀಶ್ 3ನೇ ತರಗತಿಯಲ್ಲಿ ಓದುತ್ತಿದ್ದಾರೆ.</p>.<p>ಇಡೀ ಲೈನ್ನ ನಿವಾಸಿಗಳು ಪಡುತ್ತಿರುವ ದುಃಖ ಇನ್ನೂ ಆ ಮಕ್ಕಳ ಅನುಭವಕ್ಕೆ ಬಂದಿಲ್ಲ. ತಂದೆಯ ಸಾವು ಕೂಡ ಅವರಿಗೆ ಅರ್ಥವಾಗಿಲ್ಲ. ಬುಧವಾರ `ಪ್ರಜಾವಾಣಿ~ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸಹಜವಾಗಿ ತಮ್ಮ ಮನೆಯ ಆಚೀಚೆ ಓಡಾಡಿಕೊಂಡಿದ್ದರು. <br /> <br /> ಈ ಮಕ್ಕಳ ತಾಯಿ, ಪ್ರಸಾದ್ ಪತ್ನಿ ಕೂಡ ಮಲದಗುಂಡಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದು, ಈಗ ನಿಲ್ಲಿಸಿದ್ದಾರೆ. ಅದಕ್ಕೆ ಆ ಕೆಲಸದ ಪರಿಣಾಮವಾಗಿ ಎದುರಾಗಿರುವ ಕಾಯಿಲೆಯೇ ಕಾರಣ ಎಂಬುದು ಅವರ ನೆರೆಯವರ ಮಾತು. ನಗರಸಭೆ ಪೂರ್ಣಾವಧಿ ಕೆಲಸ ಮಾಡಿದರೆ ಮಾತ್ರ ತಮ್ಮ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದು ಅವರ ಒತ್ತಾಸೆಯ ನುಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>