<p><strong>ಬೆಂಗಳೂರು:</strong> `ಬಟ್ಟೆಗೆ ಬಣ್ಣ ಹಾಕುವ ಸಣ್ಣ ಪ್ರಮಾಣದ ಕೈಗಾರಿಕೆಗಳಿಂದ ಆಗುವ ಮಾಲಿನ್ಯವನ್ನು ಸಂಗ್ರಹಿಸಲು ಲಾರಿ ವ್ಯವಸ್ಥೆ ಮಾಡಲಾಗುವುದು~ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್.ಸದಾಶಿವಯ್ಯ ಹೇಳಿದರು.<br /> <br /> ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬುಧವಾರ ಪರಿಸರ ಭವನದಲ್ಲಿ ಏರ್ಪಡಿಸಿದ್ದ ಬಟ್ಟೆಗೆ ಬಣ್ಣ ಹಾಕುವ ಸಣ್ಣ ಪ್ರಮಾಣದ ಕೈಗಾರಿಕೆಗಳಿಂದ ಆಗುವ ಮಾಲಿನ್ಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.<br /> <br /> `ಕಾಟನ್ ಪೇಟೆ, ರಾಜಾಜಿನಗರ, ಕಾಮಾಕ್ಷಿಪಾಳ್ಯ, ಸಂಪಂಗಿರಾಮನಗರ ಮುಂತಾದೆಡೆ ಬಟ್ಟೆಗೆ ಬಣ್ಣ ಹಾಕುವ ಸುಮಾರು 500 ಸಣ್ಣ ಪ್ರಮಾಣದ ಕೈಗಾರಿಕೆಗಳಿದ್ದು, ಪ್ರತಿ ನಿತ್ಯ ಏಳು ಲಕ್ಷ ಲೀಟರ್ನಷ್ಟು ಬಣ್ಣದ ಕಲುಷಿತ ತ್ಯಾಜ್ಯವನ್ನು ಇವು ಹೊರಬಿಡುತ್ತಿವೆ~ ಎಂದರು.<br /> <br /> `ಬಣ್ಣ ಹಚ್ಚುವ ಕೈಗಾರಿಕೆಗಳಿಂದ ಉಂಟಾಗುತ್ತಿರುವ ಮಾಲಿನ್ಯದ ಬಗ್ಗೆ ಮಂಡಳಿ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವಲ್ಲಿ ಹಿಂದೆ ನೋಡುವುದಿಲ್ಲ~ ಎಂದರು. <br /> <br /> ಕೇಂದ್ರೀಯ ರೇಷ್ಮೆ ತಾಂತ್ರಿಕ ಸಂಶೋಧನ ಸಂಸ್ಥೆಯ ಎಸ್.ಎ.ಹಿಪ್ಪರಗಿ ಮಾತನಾಡಿ, `ಬಣ್ಣ ಹಾಕುವ ಸಂದರ್ಭದಲ್ಲಿ ಸರಿಯಾದ ಪದ್ಧತಿ ಅನುಸರಿಸಿದರೆ ನೋಟಿಸ್ ಭಯ ತಪ್ಪುತ್ತದೆ~ ಎಂದರು.<br /> <br /> ನಂತರ ನಡೆದ ಸಂವಾದದಲ್ಲಿ ಒಂದು ಮೋಟಾರು ವಾಹನ ಹೋಗಲು ಆಸ್ಪದವಿಲ್ಲದ ಸ್ಥಳದಲ್ಲಿ ದೊಡ್ಡ ಲಾರಿ ತಂದು ತ್ಯಾಜ್ಯ ಸಂಗ್ರಹ ಮಾಡುವುದಕ್ಕಿಂತ, ಪೈಪ್ಲೈನ್ ಹಾಕಿಸಿ ಒಂದೆಡೆ ನೀರು ಶೇಖರಿಸಿದರೆ ಅನುಕೂಲ ಆಗುತ್ತದೆ~ ಎಂದು ಸುವರ್ಣ ಕರ್ನಾಟಕ ರೇಷ್ಮೆ ಗುಡಿ ಕೈಗಾರಿಕೆ ಮಾಲೀಕರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಕೋರಿದರು.<br /> <br /> ಸುವರ್ಣ ಕರ್ನಾಟಕ ರೇಷ್ಮೆ ಗುಡಿ ಕೈಗಾರಿಕೆ ಮಾಲೀಕರ ಸಂಘದ ಪದಾಧಿಕಾರಿ ರಾಜಗೋಪಾಲ್ `ಇಲ್ಲಿ ಕೆಲಸ ಮಾಡುವ ಜನರಿಗೆ ಶಿಕ್ಷಣವಿಲ್ಲ. ಅದಕ್ಕಾಗಿ ಅವರಿಗೆಲ್ಲ ತರಬೇತಿ ಕಾರ್ಯಕ್ರಮಗಳನ್ನು ನಡೆಸಬೇಕು~ ಎಂಬ ಮನವಿಗೆ ಸ್ಪಂದಿಸಿದ ಮಂಡಳಿಯ ಅಧ್ಯಕ್ಷರು ಕೈಗಾರಿಕೆಗಳ ಪ್ರದೇಶ ಅಥವಾ ಮಂಡಳಿಯಲ್ಲಿಯೇ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು~ ಎಂದರು.<br /> <br /> ಮಂಡಳಿಯ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ. ಜಯಪ್ರಕಾಶ್, ಹಿರಿಯ ಪರಿಸರ ಅಧಿಕಾರಿ ಕೆ.ಎಂ. ನಾಗರಾಜು, ರಾಷ್ಟ್ರೀಯ ಟೆಕ್ಸ್ಟೈಲ್ ನಿಗಮದ ಜಿ. ಮಹದೇವ್ ಮತ್ತಿತರರು ಇದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಬಟ್ಟೆಗೆ ಬಣ್ಣ ಹಾಕುವ ಸಣ್ಣ ಪ್ರಮಾಣದ ಕೈಗಾರಿಕೆಗಳಿಂದ ಆಗುವ ಮಾಲಿನ್ಯವನ್ನು ಸಂಗ್ರಹಿಸಲು ಲಾರಿ ವ್ಯವಸ್ಥೆ ಮಾಡಲಾಗುವುದು~ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್.ಸದಾಶಿವಯ್ಯ ಹೇಳಿದರು.<br /> <br /> ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬುಧವಾರ ಪರಿಸರ ಭವನದಲ್ಲಿ ಏರ್ಪಡಿಸಿದ್ದ ಬಟ್ಟೆಗೆ ಬಣ್ಣ ಹಾಕುವ ಸಣ್ಣ ಪ್ರಮಾಣದ ಕೈಗಾರಿಕೆಗಳಿಂದ ಆಗುವ ಮಾಲಿನ್ಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.<br /> <br /> `ಕಾಟನ್ ಪೇಟೆ, ರಾಜಾಜಿನಗರ, ಕಾಮಾಕ್ಷಿಪಾಳ್ಯ, ಸಂಪಂಗಿರಾಮನಗರ ಮುಂತಾದೆಡೆ ಬಟ್ಟೆಗೆ ಬಣ್ಣ ಹಾಕುವ ಸುಮಾರು 500 ಸಣ್ಣ ಪ್ರಮಾಣದ ಕೈಗಾರಿಕೆಗಳಿದ್ದು, ಪ್ರತಿ ನಿತ್ಯ ಏಳು ಲಕ್ಷ ಲೀಟರ್ನಷ್ಟು ಬಣ್ಣದ ಕಲುಷಿತ ತ್ಯಾಜ್ಯವನ್ನು ಇವು ಹೊರಬಿಡುತ್ತಿವೆ~ ಎಂದರು.<br /> <br /> `ಬಣ್ಣ ಹಚ್ಚುವ ಕೈಗಾರಿಕೆಗಳಿಂದ ಉಂಟಾಗುತ್ತಿರುವ ಮಾಲಿನ್ಯದ ಬಗ್ಗೆ ಮಂಡಳಿ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವಲ್ಲಿ ಹಿಂದೆ ನೋಡುವುದಿಲ್ಲ~ ಎಂದರು. <br /> <br /> ಕೇಂದ್ರೀಯ ರೇಷ್ಮೆ ತಾಂತ್ರಿಕ ಸಂಶೋಧನ ಸಂಸ್ಥೆಯ ಎಸ್.ಎ.ಹಿಪ್ಪರಗಿ ಮಾತನಾಡಿ, `ಬಣ್ಣ ಹಾಕುವ ಸಂದರ್ಭದಲ್ಲಿ ಸರಿಯಾದ ಪದ್ಧತಿ ಅನುಸರಿಸಿದರೆ ನೋಟಿಸ್ ಭಯ ತಪ್ಪುತ್ತದೆ~ ಎಂದರು.<br /> <br /> ನಂತರ ನಡೆದ ಸಂವಾದದಲ್ಲಿ ಒಂದು ಮೋಟಾರು ವಾಹನ ಹೋಗಲು ಆಸ್ಪದವಿಲ್ಲದ ಸ್ಥಳದಲ್ಲಿ ದೊಡ್ಡ ಲಾರಿ ತಂದು ತ್ಯಾಜ್ಯ ಸಂಗ್ರಹ ಮಾಡುವುದಕ್ಕಿಂತ, ಪೈಪ್ಲೈನ್ ಹಾಕಿಸಿ ಒಂದೆಡೆ ನೀರು ಶೇಖರಿಸಿದರೆ ಅನುಕೂಲ ಆಗುತ್ತದೆ~ ಎಂದು ಸುವರ್ಣ ಕರ್ನಾಟಕ ರೇಷ್ಮೆ ಗುಡಿ ಕೈಗಾರಿಕೆ ಮಾಲೀಕರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಕೋರಿದರು.<br /> <br /> ಸುವರ್ಣ ಕರ್ನಾಟಕ ರೇಷ್ಮೆ ಗುಡಿ ಕೈಗಾರಿಕೆ ಮಾಲೀಕರ ಸಂಘದ ಪದಾಧಿಕಾರಿ ರಾಜಗೋಪಾಲ್ `ಇಲ್ಲಿ ಕೆಲಸ ಮಾಡುವ ಜನರಿಗೆ ಶಿಕ್ಷಣವಿಲ್ಲ. ಅದಕ್ಕಾಗಿ ಅವರಿಗೆಲ್ಲ ತರಬೇತಿ ಕಾರ್ಯಕ್ರಮಗಳನ್ನು ನಡೆಸಬೇಕು~ ಎಂಬ ಮನವಿಗೆ ಸ್ಪಂದಿಸಿದ ಮಂಡಳಿಯ ಅಧ್ಯಕ್ಷರು ಕೈಗಾರಿಕೆಗಳ ಪ್ರದೇಶ ಅಥವಾ ಮಂಡಳಿಯಲ್ಲಿಯೇ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು~ ಎಂದರು.<br /> <br /> ಮಂಡಳಿಯ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ. ಜಯಪ್ರಕಾಶ್, ಹಿರಿಯ ಪರಿಸರ ಅಧಿಕಾರಿ ಕೆ.ಎಂ. ನಾಗರಾಜು, ರಾಷ್ಟ್ರೀಯ ಟೆಕ್ಸ್ಟೈಲ್ ನಿಗಮದ ಜಿ. ಮಹದೇವ್ ಮತ್ತಿತರರು ಇದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>