<p><strong>ಕೋಲಾರ:</strong> ಜಿಲ್ಲೆಯ ದರ್ವೇಶ್ ಜನಾಂಗದ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ದರ್ವೇಶ್ ಅಭಿವೃದ್ಧಿ ಸಂಘದ ಸದಸ್ಯರು ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.<br /> <br /> ಜಿಲ್ಲೆಯಲ್ಲಿ ಸುಮಾರು 5 ಸಾವಿರದಷ್ಟಿರುವ ದರ್ವೇಶ್ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗ ಸೌಕರ್ಯ ಕಲ್ಪಿಸುವಲ್ಲಿ ವಿಶೇಷ ಯೋಜನೆ ರೂಪಿಸಬೇಕು. ಕಲಾವಿದರಿಗೆ ನೀಡುವ ಸ್ಥಾನಮಾನವನ್ನೇ ದರ್ವೇಶ್ ಸಮುದಾಯದ `ಸಮಾ' ಗಾಯಕರಿಗೆ ಮತ್ತು `ದಫ್' ನುಡಿಸುವವರಿಗೆ ನೀಡಬೇಕು. ಮಾಸಾಶನ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.<br /> <br /> ದರ್ಗಾಗಳ ನಿರ್ವಹಣೆಗೆ ಸರ್ಕಾರ ನೀಡುತ್ತಿರುವ ಚಿರಾಗ್ ಬತ್ತಿ ವೆಚ್ಚವನ್ನು 1 ಸಾವಿರ ರೂಪಾಯಿಗೆ ಏರಿಸಬೇಕು. ಇತರೆ ಪರಿಶಿಷ್ಟ ಪಂಗಡಗಳಿಗೆ ನೀಡುವ ರೀತಿಯಲ್ಲೇ ವಸತಿ, ಸಮುದಾಯ ಭವನ ಸೌಲಭ್ಯ ಕಲ್ಪಿಸಬೇಕು. ಜೀವನೋಪಾಯಕ್ಕೆ ಬೇಕಾದ ಹಾರ್ಮೊನಿಯಂ, ತಬಲ, ಶಹನಾಯಿ, ಢೋಲಕ್, ದಫ್ ವಾದ್ಯಗಳನ್ನು ಉಚಿತವಾಗಿ ನೀಡಿ ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದರು.<br /> <br /> ಬೆಳ್ಳಿ ಬೆಳಕು ಕಾರ್ಯಕ್ರಮದ ಅಡಿಯಲ್ಲಿ ಪ್ರವರ್ಗ 1ರ ದರ್ವೇಶ್ ಸಮುದಾಯಕ್ಕೆ ಶೌಚಾಲಯ, ರಸ್ತೆ, ಚರಂಡಿ, ದಾರಿದೀಪ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.<br /> <br /> ದರ್ಗಾ ಮತ್ತು ಮಸೀದಿಗಳಲ್ಲಿ ಪ್ರಾರ್ಥನೆ, ಬೋಧನೆ ಮಾಡುತ್ತಾ, ಶಾಂತಿ, ಸೌಹಾರ್ದ ಬಾಳ್ವೆಯ ಬಗ್ಗೆ ಮುಸ್ಲಿಂರಲ್ಲಿ ಜಾಗೃತಿ ಮೂಡಿಸುತ್ತಿರುವ ದರ್ವೇಶ್ಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯೂ ಅವರಿಗಿಲ್ಲ ಎಂದು ಹೇಳಿದರು.<br /> <br /> ಸಂಘದ ಪ್ರಮುಖರಾದ ಸೈಯದ್ ಆರೀಫುಲ್ಲಾ ಷಾ ನಸೀರಿ, ಅನಿಸ್ಪಾಷಾ, ಫಕ್ರುದ್ದೀನ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ಜಿಲ್ಲೆಯ ದರ್ವೇಶ್ ಜನಾಂಗದ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ದರ್ವೇಶ್ ಅಭಿವೃದ್ಧಿ ಸಂಘದ ಸದಸ್ಯರು ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.<br /> <br /> ಜಿಲ್ಲೆಯಲ್ಲಿ ಸುಮಾರು 5 ಸಾವಿರದಷ್ಟಿರುವ ದರ್ವೇಶ್ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗ ಸೌಕರ್ಯ ಕಲ್ಪಿಸುವಲ್ಲಿ ವಿಶೇಷ ಯೋಜನೆ ರೂಪಿಸಬೇಕು. ಕಲಾವಿದರಿಗೆ ನೀಡುವ ಸ್ಥಾನಮಾನವನ್ನೇ ದರ್ವೇಶ್ ಸಮುದಾಯದ `ಸಮಾ' ಗಾಯಕರಿಗೆ ಮತ್ತು `ದಫ್' ನುಡಿಸುವವರಿಗೆ ನೀಡಬೇಕು. ಮಾಸಾಶನ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.<br /> <br /> ದರ್ಗಾಗಳ ನಿರ್ವಹಣೆಗೆ ಸರ್ಕಾರ ನೀಡುತ್ತಿರುವ ಚಿರಾಗ್ ಬತ್ತಿ ವೆಚ್ಚವನ್ನು 1 ಸಾವಿರ ರೂಪಾಯಿಗೆ ಏರಿಸಬೇಕು. ಇತರೆ ಪರಿಶಿಷ್ಟ ಪಂಗಡಗಳಿಗೆ ನೀಡುವ ರೀತಿಯಲ್ಲೇ ವಸತಿ, ಸಮುದಾಯ ಭವನ ಸೌಲಭ್ಯ ಕಲ್ಪಿಸಬೇಕು. ಜೀವನೋಪಾಯಕ್ಕೆ ಬೇಕಾದ ಹಾರ್ಮೊನಿಯಂ, ತಬಲ, ಶಹನಾಯಿ, ಢೋಲಕ್, ದಫ್ ವಾದ್ಯಗಳನ್ನು ಉಚಿತವಾಗಿ ನೀಡಿ ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದರು.<br /> <br /> ಬೆಳ್ಳಿ ಬೆಳಕು ಕಾರ್ಯಕ್ರಮದ ಅಡಿಯಲ್ಲಿ ಪ್ರವರ್ಗ 1ರ ದರ್ವೇಶ್ ಸಮುದಾಯಕ್ಕೆ ಶೌಚಾಲಯ, ರಸ್ತೆ, ಚರಂಡಿ, ದಾರಿದೀಪ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.<br /> <br /> ದರ್ಗಾ ಮತ್ತು ಮಸೀದಿಗಳಲ್ಲಿ ಪ್ರಾರ್ಥನೆ, ಬೋಧನೆ ಮಾಡುತ್ತಾ, ಶಾಂತಿ, ಸೌಹಾರ್ದ ಬಾಳ್ವೆಯ ಬಗ್ಗೆ ಮುಸ್ಲಿಂರಲ್ಲಿ ಜಾಗೃತಿ ಮೂಡಿಸುತ್ತಿರುವ ದರ್ವೇಶ್ಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯೂ ಅವರಿಗಿಲ್ಲ ಎಂದು ಹೇಳಿದರು.<br /> <br /> ಸಂಘದ ಪ್ರಮುಖರಾದ ಸೈಯದ್ ಆರೀಫುಲ್ಲಾ ಷಾ ನಸೀರಿ, ಅನಿಸ್ಪಾಷಾ, ಫಕ್ರುದ್ದೀನ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>