<p><strong>ಸಮಗ್ರ ಮಾಹಿತಿ</strong><br /> ರಾಮನಗರ ಜಿಲ್ಲೆಯನ್ನು ಪರಿಚಯಿಸುವ ಲೇಖನಗಳು ಸಂಕ್ಷಿಪ್ತವಾಗಿವೆ ಅನ್ನಿಸಿದರೂ ಜಿಲ್ಲೆಯನ್ನು ಸೂಕ್ತವಾಗಿ ಪರಿಚಯಿಸಿವೆ. ಹೊಸ ಜಿಲ್ಲೆಯಲ್ಲಿ ಹೆಚ್ಚಿನ ವಿಶೇಷಗಳಿರುವ ಸಾಧ್ಯತೆ ಇಲ್ಲ ಎಂಬ ನನ್ನ ಅಭಿಪ್ರಾಯ ಲೇಖನ ಓದಿದ ಮೇಲೆ ಬದಲಾಯಿತು. ಶೀರ್ಷಿಕೆ ಸೂಚಿಸುವಂತೆ ರಾಮನಗರ ಸಮೃದ್ಧ ಇತಿಹಾಸದ ಶ್ರೀಮಂತ ಜಿಲ್ಲೆ.<br /> <strong> -ಶಾಮಣ್ಣ,ಬೆಂಗಳೂರು .-ರಾಮೇಗೌಡ, ಕಿರುಗಾವಲು.</strong></p>.<p><strong>ಸಮಯೋಚಿತ</strong><br /> ರಾಮನಗರ ಜಿಲ್ಲಾ ದರ್ಶನ (ಎಸ್.ಸಂಪತ್) ಲೇಖನ ಸಕಾಲಿಕ ಅನ್ನಿಸಿತು. ಈ ಪುಟ್ಟ ಜಿಲ್ಲೆ ಗ್ರಾನೈಟ್, ರೇಷ್ಮೆ, ಮಾವು ಹಾಗೂ ತರಕಾರಿ ಬೆಳೆಗಳಿಗೆ ಪ್ರಸಿದ್ಧಿಯಾಗಿದೆ. ಜಾನಪದ ಲೋಕ, ಚನ್ನಪಟ್ಟಣದ ಬೊಂಬೆಗಳು ಇತ್ಯಾದಿ ಕುರಿತ ಮಾಹಿತಿಗಳಿಂದ ಜಿಲ್ಲಾ ದರ್ಶನ ಇಷ್ಟವಾಯಿತು. <br /> <strong> -ಸಹನಾ ಚಂದ್ರಶೇಖರ್, ಚಿಕ್ಕಮಗಳೂರು <br /> <br /> ಸಂಸ್ಕತಿಗೆ ಒತ್ತು</strong><br /> ಇತ್ತೀಚಿನ ವರ್ಷಗಳಲ್ಲಿ ರಾಮನಗರ ಜಿಲ್ಲೆ ರಾಜಕೀಯ ವಿದ್ಯಮಾನಗಳಿಂದ ಸದಾ ಸುದ್ದಿಯಲ್ಲಿರುತ್ತದೆ. ಆದರೆ ಲೇಖನದಲ್ಲಿ ರಾಜಕೀಯ ಪ್ರಸ್ತಾಪಿಸದೇ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಇತಿಹಾಸದ ಮಾಹಿತಿಗಳಿಗೆ ಹೆಚ್ಚಿನ ಒತ್ತು ನೀಡಿದ ಲೇಖಕರ ಜಾಣ್ಮೆ ಇಷ್ಟವಾಯಿತು.<br /> <strong>-ಅಶ್ವಿನಿ, ತುಮಕೂರು<br /> <br /> ರೈತ ಮುಂದಾಳತ್ವ<br /> </strong>ಸಾವಯವದಲ್ಲಿ ಈರುಳ್ಳಿ ಬೆಳೆಯುವ ಮೂಲಕ ಕೊಟ್ಟೂರಿನ ಇಕ್ರಾ ಬಳಗದ ರೈತರು ಮಾದರಿಯಾಗಿದ್ದಾರೆ. ಪ್ರತಿಯೊಂದಕ್ಕೂ ಸರ್ಕಾರದ ಕಡೆಗೆ ನೋಡದೆ ರೈತರೇ ಮುಂದಾಳತ್ವ ವಹಿಸಿ ಹೊಸ ಬೇಸಾಯ ಕ್ರಮಗಳನ್ನು ರೂಢಿಸಿಕೊಳ್ಳುವ ಪ್ರವೃತ್ತಿ ನಿಜಕ್ಕೂ ಮಾದರಿ.<br /> <strong>-ನರಸಿಂಹಪ್ಪ ಬಳ್ಳಾರಿ<br /> <br /> ಮಾರ್ಗದರ್ಶಿ</strong><br /> ಸಾವಯವ ಹಾಗೂ ಸಹಜ ಕೃಷಿ ಪ್ರಯೋಗಗಳಲ್ಲಿ ಯಶಸ್ವಿಯಾದ ರೈತರನ್ನು ಪರಿಚಯಿಸುವ ‘ಕೃಷಿ ಪುರವಣಿ’ಯ ಲೇಖನಗಳು ರೈತರಿಗೆ ಮಾರ್ಗದರ್ಶಿಯಾಗಿವೆ. ಜಾಗತೀಕರಣದ ನಂತರ ಕೃಷಿ ಕ್ಷೇತ್ರ ಬದಲಾಗಿದೆ. ರೈತರೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.<br /> <strong>-ಸುರೇಶ ಪಾಟೀಲ, ಸಂಕೇಶ್ವರ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಮಗ್ರ ಮಾಹಿತಿ</strong><br /> ರಾಮನಗರ ಜಿಲ್ಲೆಯನ್ನು ಪರಿಚಯಿಸುವ ಲೇಖನಗಳು ಸಂಕ್ಷಿಪ್ತವಾಗಿವೆ ಅನ್ನಿಸಿದರೂ ಜಿಲ್ಲೆಯನ್ನು ಸೂಕ್ತವಾಗಿ ಪರಿಚಯಿಸಿವೆ. ಹೊಸ ಜಿಲ್ಲೆಯಲ್ಲಿ ಹೆಚ್ಚಿನ ವಿಶೇಷಗಳಿರುವ ಸಾಧ್ಯತೆ ಇಲ್ಲ ಎಂಬ ನನ್ನ ಅಭಿಪ್ರಾಯ ಲೇಖನ ಓದಿದ ಮೇಲೆ ಬದಲಾಯಿತು. ಶೀರ್ಷಿಕೆ ಸೂಚಿಸುವಂತೆ ರಾಮನಗರ ಸಮೃದ್ಧ ಇತಿಹಾಸದ ಶ್ರೀಮಂತ ಜಿಲ್ಲೆ.<br /> <strong> -ಶಾಮಣ್ಣ,ಬೆಂಗಳೂರು .-ರಾಮೇಗೌಡ, ಕಿರುಗಾವಲು.</strong></p>.<p><strong>ಸಮಯೋಚಿತ</strong><br /> ರಾಮನಗರ ಜಿಲ್ಲಾ ದರ್ಶನ (ಎಸ್.ಸಂಪತ್) ಲೇಖನ ಸಕಾಲಿಕ ಅನ್ನಿಸಿತು. ಈ ಪುಟ್ಟ ಜಿಲ್ಲೆ ಗ್ರಾನೈಟ್, ರೇಷ್ಮೆ, ಮಾವು ಹಾಗೂ ತರಕಾರಿ ಬೆಳೆಗಳಿಗೆ ಪ್ರಸಿದ್ಧಿಯಾಗಿದೆ. ಜಾನಪದ ಲೋಕ, ಚನ್ನಪಟ್ಟಣದ ಬೊಂಬೆಗಳು ಇತ್ಯಾದಿ ಕುರಿತ ಮಾಹಿತಿಗಳಿಂದ ಜಿಲ್ಲಾ ದರ್ಶನ ಇಷ್ಟವಾಯಿತು. <br /> <strong> -ಸಹನಾ ಚಂದ್ರಶೇಖರ್, ಚಿಕ್ಕಮಗಳೂರು <br /> <br /> ಸಂಸ್ಕತಿಗೆ ಒತ್ತು</strong><br /> ಇತ್ತೀಚಿನ ವರ್ಷಗಳಲ್ಲಿ ರಾಮನಗರ ಜಿಲ್ಲೆ ರಾಜಕೀಯ ವಿದ್ಯಮಾನಗಳಿಂದ ಸದಾ ಸುದ್ದಿಯಲ್ಲಿರುತ್ತದೆ. ಆದರೆ ಲೇಖನದಲ್ಲಿ ರಾಜಕೀಯ ಪ್ರಸ್ತಾಪಿಸದೇ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಇತಿಹಾಸದ ಮಾಹಿತಿಗಳಿಗೆ ಹೆಚ್ಚಿನ ಒತ್ತು ನೀಡಿದ ಲೇಖಕರ ಜಾಣ್ಮೆ ಇಷ್ಟವಾಯಿತು.<br /> <strong>-ಅಶ್ವಿನಿ, ತುಮಕೂರು<br /> <br /> ರೈತ ಮುಂದಾಳತ್ವ<br /> </strong>ಸಾವಯವದಲ್ಲಿ ಈರುಳ್ಳಿ ಬೆಳೆಯುವ ಮೂಲಕ ಕೊಟ್ಟೂರಿನ ಇಕ್ರಾ ಬಳಗದ ರೈತರು ಮಾದರಿಯಾಗಿದ್ದಾರೆ. ಪ್ರತಿಯೊಂದಕ್ಕೂ ಸರ್ಕಾರದ ಕಡೆಗೆ ನೋಡದೆ ರೈತರೇ ಮುಂದಾಳತ್ವ ವಹಿಸಿ ಹೊಸ ಬೇಸಾಯ ಕ್ರಮಗಳನ್ನು ರೂಢಿಸಿಕೊಳ್ಳುವ ಪ್ರವೃತ್ತಿ ನಿಜಕ್ಕೂ ಮಾದರಿ.<br /> <strong>-ನರಸಿಂಹಪ್ಪ ಬಳ್ಳಾರಿ<br /> <br /> ಮಾರ್ಗದರ್ಶಿ</strong><br /> ಸಾವಯವ ಹಾಗೂ ಸಹಜ ಕೃಷಿ ಪ್ರಯೋಗಗಳಲ್ಲಿ ಯಶಸ್ವಿಯಾದ ರೈತರನ್ನು ಪರಿಚಯಿಸುವ ‘ಕೃಷಿ ಪುರವಣಿ’ಯ ಲೇಖನಗಳು ರೈತರಿಗೆ ಮಾರ್ಗದರ್ಶಿಯಾಗಿವೆ. ಜಾಗತೀಕರಣದ ನಂತರ ಕೃಷಿ ಕ್ಷೇತ್ರ ಬದಲಾಗಿದೆ. ರೈತರೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.<br /> <strong>-ಸುರೇಶ ಪಾಟೀಲ, ಸಂಕೇಶ್ವರ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>