<p><strong>ಕೊಳ್ಳೇಗಾಲ:</strong>ಮನೆ ಮುಂದೆಯೇ ನಿಂತು ಕೊಳೆತು ನಾರುವ ಕೊಚ್ಚೆಗುಂಡಿ, ಚರಂಡಿಯ ನೀರು ಹೊರ ಹೋಗಲು ಅವಕಾಶ ಇಲ್ಲದೇ ಕಸಕಡ್ಡಿಗಳಿಂದ ಭರ್ತಿಯಾಗಿ ಕೊಳೆತು ನಾರುವ ಚರಂಡಿ. ಇದು ಪಟ್ಟಣದ ಕೂಗಳತೆಯಲ್ಲಿರುವ ಲಿಂಗಣಾಪುರ ಗ್ರಾಮದ ದಲಿತರ ಬಡಾವಣೆಯ ದೃಶ್ಯ.<br /> <br /> ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಲಿಂಗಣಾಪುರ ಗ್ರಾಮದ ದಲಿತರ ಹಳೇ ಬೀದಿಗಳು ಮತ್ತು ಹೊಸ ಬಡಾವಣೆಯಲ್ಲಿ ಇಷ್ಟು ವರ್ಷ ಕಳೆದರೂ ಚರಂಡಿ ನಿರ್ಮಿಸಿಕೊಡಬೇಕು ಎಂಬ ಅರಿವು ಯಾರಿಗೂ ಬಂದಿಲ್ಲ.<br /> <br /> ಚರಂಡಿ ನಿರ್ಮಿಸದ ಕಾರಣ ಮನೆಯಲ್ಲಿ ಜನರು ಹೆಚ್ಚಾಗಿ ನೀರನ್ನು ಬಳಕೆ ಮಾಡಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಮನೆಬಳಕೆಯ ನೀರು ಮನೆ ಮುಂಭಾಗವೇ ನಿಂತು ಕೊಚ್ಚೆಗುಂಡಿಯಾಗಿ ಪರಿಣಮಿಸಿ ಬೀದಿ ಸೊಳ್ಳೆಗಳ ಅವಾಸಸ್ಥಾನವಾಗಿ ಪರಿಣಮಿಸಿದೆ.<br /> <br /> ಉದ್ಯೋಗ ಖಾತ್ರಿ ಯೋಜನೆ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಸೇರಿದಂತೆ ಹಲವಾರು ಕಡೆಗಳಿಂದ ಚರಂಡಿ ನಿರ್ಮಾಣ ಕಾಮಗಾರಿಗೆ ವಿಫುಲ ಅವಕಾಶಗಳು ಇದ್ದಾಗಲೂ ಕೂಡ ಈ ಗ್ರಾಮದ ದಲಿತರ ಬಡಾವಣೆಗೆ ಚರಂಡಿ ನಿರ್ಮಿಸಿಲ್ಲ ಎಂದು ಸಿಂಧು ಮಹಿಳಾ ಸ್ವಸಹಾಯ ಸಂಘದ ಸದಸ್ಯರು. ದೂರಿದ್ದಾರೆ.<br /> <br /> ಬಡಾವಣೆಯ ಎರಡು ಕಡೆಗಳಲ್ಲಿ ಚರಂಡಿ ನಿರ್ಮಿಸಿದ್ದು, ಇದು ಕೇವಲ ಗುತ್ತಿಗೆದಾರರ ಜೇಬು ತುಂಬಿಸುವ ಕೆಲಸ ಆಗಿದೆ. ಈ ಚರಂಡಿಯಿಂದ ಈ ಬಡಾವಣೆ ಜನತೆಗೆ ಮತ್ತಷ್ಟು ತೊಂದರೆಯಾಗಿದೆ. ಚರಂಡಿಯ್ಲ್ಲಲಿನ ನೀರು ಮುಂದೆ ಎಲ್ಲಿಯೂ ಹೋಗದ ಕಾರಣ ಚರಂಡಿ ಕಸಕಡ್ಡಿಗಳಿಂದ ತುಂಬಿ ದುರ್ನಾತ ಬೀರುವ ತೊಟ್ಟಿಯಾಗಿ ಪರಿಣಮಿಸಿ ಜನತೆಗೆ ರೋಗರುಜಿನ ತರುವ ಸ್ಥಿತಿ ನಿರ್ಮಾಣವಾಗಿದೆ.<br /> <br /> ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಡಾವಣೆಯಲ್ಲಿ ಚರಂಡಿಗಳನ್ನು ನಿರ್ಮಿಸಿ ಚರಂಡಿ ನೀರು ಸರಾಗವಾಗಿ ಹೊರ ಹೋಗುವ ವ್ಯವಸ್ಥೆ ಕಲ್ಪಿಸುವ ಬಗ್ಗೆ ಗಮನಹರಿಸಬೇಕು ಎಂದು ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳ್ಳೇಗಾಲ:</strong>ಮನೆ ಮುಂದೆಯೇ ನಿಂತು ಕೊಳೆತು ನಾರುವ ಕೊಚ್ಚೆಗುಂಡಿ, ಚರಂಡಿಯ ನೀರು ಹೊರ ಹೋಗಲು ಅವಕಾಶ ಇಲ್ಲದೇ ಕಸಕಡ್ಡಿಗಳಿಂದ ಭರ್ತಿಯಾಗಿ ಕೊಳೆತು ನಾರುವ ಚರಂಡಿ. ಇದು ಪಟ್ಟಣದ ಕೂಗಳತೆಯಲ್ಲಿರುವ ಲಿಂಗಣಾಪುರ ಗ್ರಾಮದ ದಲಿತರ ಬಡಾವಣೆಯ ದೃಶ್ಯ.<br /> <br /> ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಲಿಂಗಣಾಪುರ ಗ್ರಾಮದ ದಲಿತರ ಹಳೇ ಬೀದಿಗಳು ಮತ್ತು ಹೊಸ ಬಡಾವಣೆಯಲ್ಲಿ ಇಷ್ಟು ವರ್ಷ ಕಳೆದರೂ ಚರಂಡಿ ನಿರ್ಮಿಸಿಕೊಡಬೇಕು ಎಂಬ ಅರಿವು ಯಾರಿಗೂ ಬಂದಿಲ್ಲ.<br /> <br /> ಚರಂಡಿ ನಿರ್ಮಿಸದ ಕಾರಣ ಮನೆಯಲ್ಲಿ ಜನರು ಹೆಚ್ಚಾಗಿ ನೀರನ್ನು ಬಳಕೆ ಮಾಡಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಮನೆಬಳಕೆಯ ನೀರು ಮನೆ ಮುಂಭಾಗವೇ ನಿಂತು ಕೊಚ್ಚೆಗುಂಡಿಯಾಗಿ ಪರಿಣಮಿಸಿ ಬೀದಿ ಸೊಳ್ಳೆಗಳ ಅವಾಸಸ್ಥಾನವಾಗಿ ಪರಿಣಮಿಸಿದೆ.<br /> <br /> ಉದ್ಯೋಗ ಖಾತ್ರಿ ಯೋಜನೆ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಸೇರಿದಂತೆ ಹಲವಾರು ಕಡೆಗಳಿಂದ ಚರಂಡಿ ನಿರ್ಮಾಣ ಕಾಮಗಾರಿಗೆ ವಿಫುಲ ಅವಕಾಶಗಳು ಇದ್ದಾಗಲೂ ಕೂಡ ಈ ಗ್ರಾಮದ ದಲಿತರ ಬಡಾವಣೆಗೆ ಚರಂಡಿ ನಿರ್ಮಿಸಿಲ್ಲ ಎಂದು ಸಿಂಧು ಮಹಿಳಾ ಸ್ವಸಹಾಯ ಸಂಘದ ಸದಸ್ಯರು. ದೂರಿದ್ದಾರೆ.<br /> <br /> ಬಡಾವಣೆಯ ಎರಡು ಕಡೆಗಳಲ್ಲಿ ಚರಂಡಿ ನಿರ್ಮಿಸಿದ್ದು, ಇದು ಕೇವಲ ಗುತ್ತಿಗೆದಾರರ ಜೇಬು ತುಂಬಿಸುವ ಕೆಲಸ ಆಗಿದೆ. ಈ ಚರಂಡಿಯಿಂದ ಈ ಬಡಾವಣೆ ಜನತೆಗೆ ಮತ್ತಷ್ಟು ತೊಂದರೆಯಾಗಿದೆ. ಚರಂಡಿಯ್ಲ್ಲಲಿನ ನೀರು ಮುಂದೆ ಎಲ್ಲಿಯೂ ಹೋಗದ ಕಾರಣ ಚರಂಡಿ ಕಸಕಡ್ಡಿಗಳಿಂದ ತುಂಬಿ ದುರ್ನಾತ ಬೀರುವ ತೊಟ್ಟಿಯಾಗಿ ಪರಿಣಮಿಸಿ ಜನತೆಗೆ ರೋಗರುಜಿನ ತರುವ ಸ್ಥಿತಿ ನಿರ್ಮಾಣವಾಗಿದೆ.<br /> <br /> ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಡಾವಣೆಯಲ್ಲಿ ಚರಂಡಿಗಳನ್ನು ನಿರ್ಮಿಸಿ ಚರಂಡಿ ನೀರು ಸರಾಗವಾಗಿ ಹೊರ ಹೋಗುವ ವ್ಯವಸ್ಥೆ ಕಲ್ಪಿಸುವ ಬಗ್ಗೆ ಗಮನಹರಿಸಬೇಕು ಎಂದು ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>