<p>ತುಮಕೂರು: ದಾಳಿಂಬೆ ಬೆಳೆಗಾರರ ಸಾಲ ಮನ್ನಾ ಮಾಡಿ ಪರಿಹಾರ ಧನ ನೀಡಲು ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಪಾವಗಡ ತಾಲ್ಲೂಕು ದಾಳಿಂಬೆ ಬೆಳೆಗಾರರ ಸಂಘದ ಮುಖಂಡರು ಶುಕ್ರವಾರ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.<br /> <br /> ಜಿಲ್ಲಾಧಿಕಾರಿಯೊಂದಿಗೆ ತಮ್ಮ ಸದ್ಯದ ಸ್ಥಿತಿಗತಿ ಕುರಿತು ಚರ್ಚಿಸಿದ ರೈತರು, ದುಂಡಾಣು ರೋಗದಿಂದ ಪಾವಗಡ ತಾಲ್ಲೂಕಿನಲ್ಲಿ ದಾಳಿಂಬೆ ಬೆಳೆ ಸರ್ವನಾಶವಾಗಿದೆ ಎಂದು ಸಮಸ್ಯೆ ತೋಡಿಕೊಂಡರು.<br /> <br /> ಪಾವಗಡ ತಾಲ್ಲೂಕಿನಲ್ಲಿ ಕಳೆದ 20 ವರ್ಷಗಳಿಂದ ಸುಮಾರು 2000 ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದೆ. ಕಳೆದ 10 ವರ್ಷಗಳಿಂದ ದಾಳಿಂಬೆ ಬೆಳೆಯನ್ನು ದುಂಡಾಣು ರೋಗ ಬಾಧಿಸುತ್ತಿದೆ ಎಂದು ಸಂಘದ ಅಧ್ಯಕ್ಷ ವೀರಾಂಜನೇಯ ವಿವರಿಸಿದರು.<br /> <br /> ರೋಗಬಾಧೆಯಿಂದ ದಾಳಿಂಬೆ ತೋಟಗಳು ಸಂಪೂರ್ಣ ಹಾಳಾಗಿವೆ. ರೈತರು ಬ್ಯಾಂಕ್ಗಳಲ್ಲಿ ಪಡೆದಿರುವ ಸಾಲ ತೀರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿದ್ದ ಬಂಗಾರ ಬ್ಯಾಂಕ್ ಸೇರಿದೆ. ಯಾವ ಔಷಧಿ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಔಷಧಿ ಖರೀದಿಗೆ ಮಾಡಿದ ಸಾಲವೂ ವ್ಯರ್ಥವಾಗುತ್ತಿದೆ ಎಂದರು.<br /> </p>.<p>ತೋಟಗಾರಿಕಾ ಮಿಷನ್ ಸಹಾಯಧನ, ಉದ್ಯೋಗಖಾತರಿ, ಬ್ಯಾಂಕ್ ಸಾಲದ ಮೂಲಕ ದಾಳಿಂಬೆ ಬೆಳೆಯಲು ಯತ್ನಿಸಿ ಕೈಸುಟ್ಟುಕೊಂಡಿರುವ ರೈತರ ನೆರವಿಗೆ ಜಿಲ್ಲಾಡಳಿತ ತಕ್ಷಣ ಧಾವಿಸಬೇಕು. ರೈತರ ಸಾಲಮನ್ನಾ ಮಾಡಿ ಪರ್ಯಾಯ ಬೆಳೆಗೆ ಪರಿಹಾರ ಧನ ನೀಡಬೇಕೆಂದು ಕೋರಿದರು.<br /> <br /> ಮುಖಂಡರಾದ ಶಿವಪ್ರಸಾದ್, ಆಂಜಿನಪ್ಪರೆಡ್ಡಿ, ಸಿ.ಬಸವರಾಜು, ಎಸ್.ಡಿ.ವೀರಭದ್ರಪ್ಪ, ವಾಗೀಶ್, ವಾಲೆನಾಯ್ಕ, ಸುಬ್ಬರಾಯಪ್ಪ, ಮುದ್ದವೀರಪ್ಪ, ರಾಮಕೃಷ್ಣಪ್ಪ, ನರಸಿಂಹಪ್ಪ, ರಾಮದಾಸ್, ಮಂಜುನಾಥ್ಕುಮಾರ್, ರಾಜಶೇಖರ್, ಶಿವಕುಮಾರ್, ಹನುಮಂತರಾಯ ಇತರರು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ದಾಳಿಂಬೆ ಬೆಳೆಗಾರರ ಸಾಲ ಮನ್ನಾ ಮಾಡಿ ಪರಿಹಾರ ಧನ ನೀಡಲು ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಪಾವಗಡ ತಾಲ್ಲೂಕು ದಾಳಿಂಬೆ ಬೆಳೆಗಾರರ ಸಂಘದ ಮುಖಂಡರು ಶುಕ್ರವಾರ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.<br /> <br /> ಜಿಲ್ಲಾಧಿಕಾರಿಯೊಂದಿಗೆ ತಮ್ಮ ಸದ್ಯದ ಸ್ಥಿತಿಗತಿ ಕುರಿತು ಚರ್ಚಿಸಿದ ರೈತರು, ದುಂಡಾಣು ರೋಗದಿಂದ ಪಾವಗಡ ತಾಲ್ಲೂಕಿನಲ್ಲಿ ದಾಳಿಂಬೆ ಬೆಳೆ ಸರ್ವನಾಶವಾಗಿದೆ ಎಂದು ಸಮಸ್ಯೆ ತೋಡಿಕೊಂಡರು.<br /> <br /> ಪಾವಗಡ ತಾಲ್ಲೂಕಿನಲ್ಲಿ ಕಳೆದ 20 ವರ್ಷಗಳಿಂದ ಸುಮಾರು 2000 ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದೆ. ಕಳೆದ 10 ವರ್ಷಗಳಿಂದ ದಾಳಿಂಬೆ ಬೆಳೆಯನ್ನು ದುಂಡಾಣು ರೋಗ ಬಾಧಿಸುತ್ತಿದೆ ಎಂದು ಸಂಘದ ಅಧ್ಯಕ್ಷ ವೀರಾಂಜನೇಯ ವಿವರಿಸಿದರು.<br /> <br /> ರೋಗಬಾಧೆಯಿಂದ ದಾಳಿಂಬೆ ತೋಟಗಳು ಸಂಪೂರ್ಣ ಹಾಳಾಗಿವೆ. ರೈತರು ಬ್ಯಾಂಕ್ಗಳಲ್ಲಿ ಪಡೆದಿರುವ ಸಾಲ ತೀರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿದ್ದ ಬಂಗಾರ ಬ್ಯಾಂಕ್ ಸೇರಿದೆ. ಯಾವ ಔಷಧಿ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಔಷಧಿ ಖರೀದಿಗೆ ಮಾಡಿದ ಸಾಲವೂ ವ್ಯರ್ಥವಾಗುತ್ತಿದೆ ಎಂದರು.<br /> </p>.<p>ತೋಟಗಾರಿಕಾ ಮಿಷನ್ ಸಹಾಯಧನ, ಉದ್ಯೋಗಖಾತರಿ, ಬ್ಯಾಂಕ್ ಸಾಲದ ಮೂಲಕ ದಾಳಿಂಬೆ ಬೆಳೆಯಲು ಯತ್ನಿಸಿ ಕೈಸುಟ್ಟುಕೊಂಡಿರುವ ರೈತರ ನೆರವಿಗೆ ಜಿಲ್ಲಾಡಳಿತ ತಕ್ಷಣ ಧಾವಿಸಬೇಕು. ರೈತರ ಸಾಲಮನ್ನಾ ಮಾಡಿ ಪರ್ಯಾಯ ಬೆಳೆಗೆ ಪರಿಹಾರ ಧನ ನೀಡಬೇಕೆಂದು ಕೋರಿದರು.<br /> <br /> ಮುಖಂಡರಾದ ಶಿವಪ್ರಸಾದ್, ಆಂಜಿನಪ್ಪರೆಡ್ಡಿ, ಸಿ.ಬಸವರಾಜು, ಎಸ್.ಡಿ.ವೀರಭದ್ರಪ್ಪ, ವಾಗೀಶ್, ವಾಲೆನಾಯ್ಕ, ಸುಬ್ಬರಾಯಪ್ಪ, ಮುದ್ದವೀರಪ್ಪ, ರಾಮಕೃಷ್ಣಪ್ಪ, ನರಸಿಂಹಪ್ಪ, ರಾಮದಾಸ್, ಮಂಜುನಾಥ್ಕುಮಾರ್, ರಾಜಶೇಖರ್, ಶಿವಕುಮಾರ್, ಹನುಮಂತರಾಯ ಇತರರು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>