<p><strong>ಹಿಸ್ಸಾರ್ (ಪಿಟಿಐ):</strong> ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ತಮ್ಮ ವಿರುದ್ಧ ಮಾಡಿರುವ ಆರೋಪ ಅತ್ಯಂತ ಕ್ರೂರ ಹಾಗೂ ಆಧಾರರಹಿತ ಎಂದು ಕಿಡಿಕಾರಿರುವ ಅಣ್ಣಾ ಹಜಾರೆ ತಂಡ, ತಾವು ನಡೆಸುತ್ತಿರುವ ಆಂದೋಲನಕ್ಕೂ ಯಾವುದೇ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.</p>.<p>`ಅಣ್ಣಾ ಕಾಂಗ್ರೆಸ್ ವಿರೋಧಿ ಪಕ್ಷಗಳ ಮುಖವಾಡ ಹಾಕಿಕೊಂಡಿದ್ದಾರೆ~ ಎಂದು ಸಿಂಗ್ ಭಾನುವಾರ ಲೇವಡಿ ಮಾಡಿದ್ದಕ್ಕೆ ತಂಡ ಈ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.</p>.<p>ಇಲ್ಲಿನ ಆರ್ಯ ನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್, `ನಮ್ಮದು ಮತ ಬ್ಯಾಂಕ್ ರಾಜಕೀಯವಲ್ಲ, ಜನರಿಗೆ ಸಂಬಂಧಿಸಿದ ರಾಜಕೀಯ. ನಮಗೂ ರಾಜಕೀಯ ಪಕ್ಷಕ್ಕೂ ಸಂಬಂಧವೇ ಇಲ್ಲ~ ಎಂದು ಹೇಳಿದರು.</p>.<p>`ಅವರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಮ್ಮದು ಜನರ ಚಳವಳಿಯಾಗಿದ್ದು ಅದು ಹಾಗೇ ಮುಂದುವರಿದುಕೊಂಡು ಹೋಗಲು ನಾವು ಬಯಸುತ್ತೇವೆ. ಜನಲೋಕಪಾಲ್ ಮಸೂದೆ ಮಂಡನೆಯಾಗುವಂತೆ ಮಾಡುವುದೇ ನಮ್ಮ ಮುಖ್ಯ ಗುರಿ. ಭ್ರಷ್ಟಾಚಾರ ತೊಲಗುವವರೆಗೂ ಹೋರಾಟ ಮುಂದುವರಿಸುತ್ತೇವೆ~ ಎಂದು ಅವರು ಒತ್ತಿ ಹೇಳಿದರು.</p>.<p><strong>ಮತ್ತೆ ಲೇವಡಿ<br /> ನವದೆಹಲಿ, (ಪಿಟಿಐ):</strong> ಸಮಾಜದ ದುರ್ಬಲ ವರ್ಗದವರ ವಿರುದ್ಧ ಸಾಗಿರುವವರು ಹಾಕಿಕೊಟ್ಟ ಹೂವಿನ ಹಾದಿಯನ್ನೇ ಅಣ್ಣಾ ಹಜಾರೆ ತಂಡ ಮುನ್ನಡೆಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮತ್ತೊಮ್ಮೆ ಲೇವಡಿ ಮಾಡಿದ್ದಾರೆ.</p>.<p>`ಕಾಂಗ್ರೆಸ್ನ ಸಿದ್ಧಾಂತಗಳನ್ನು ವಿರೋಧಿಸುವವರು ಮತ್ತು ದುರ್ಬಲ ವರ್ಗದವರ ವಿರೋಧಿಗಳಾಗಿರುವವರು ತೋರಿಸಿಕೊಟ್ಟ ಹೂವಿನ ಹಾದಿಯಲ್ಲೇ ಅಣ್ಣಾ ಸಾಗುತ್ತಿದ್ದಾರೆ. ಅವರ ತಂಡದ ಅರವಿಂದ್ ಕೇಜ್ರಿವಾಲ್ ಅವರು ಮೀಸಲಾತಿ ವಿರೋಧಿ ಧೋರಣೆಗೆ ಖ್ಯಾತಿ ಪಡೆದವರು ಎಂಬುದನ್ನು ನೆನಪಿಸಿಕೊಳ್ಳಬೇಕಾಗಿದೆ~ ಎಂದು ಹೇಳಿದ್ದಾರೆ. ಅಣ್ಣಾ ಆಂದೋಲನದಿಂದ ದೂರ ಸರಿಯಲು ನಿರ್ಧರಿಸಿರುವ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಕ್ರಮವನ್ನು ದಿಗ್ವಿಜಯ್ ಸ್ವಾಗತಿಸಿದ್ದಾರೆ. `ಹೆಗ್ಡೆ ಅವರ ಕ್ರಮಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅವರು ಅಣ್ಣಾ ತಂಡದಿಂದ ಅಂತರ ಕಾಪಾಡಿಕೊಳ್ಳಬೇಕು~ ಎಂದು ಸಲಹೆ ನೀಡಿದ್ದಾರೆ.</p>.<p><strong>ಸ್ಟೀವ್ ಜಾಬ್ಸ್ ಶ್ಲಾಘಿಸಿದ ಅಣ್ಣಾ<br /> ನವದೆಹಲಿ, (ಪಿಟಿಐ):</strong> `ಜನ ಲೋಕಪಾಲ್ ಮಸೂದೆಗಾಗಿ ನಡೆಸಿದ ಹೋರಾಟದ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಸಂಶೋಧಕ ಸ್ಟೀವ್ ಜಾಬ್ಸ್ ಅವರ ಸಂಶೋಧನೆಗಳು ನನಗೆ ಸಹಾಯ ಮಾಡಿವೆ~ ಎಂದು ಹೇಳುವ ಮೂಲಕ ಅಣ್ಣಾ ಹಜಾರೆ, ಆ್ಯಪಲ್ ಕಂಪೆನಿಯ ಸಹ ಸಂಸ್ಥಾಪಕನನ್ನು ನೆನೆದಿದ್ದಾರೆ.</p>.<p>ಇತ್ತೀಚೆಗೆ ತಾವು ನಡೆಸಿದ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ನಡೆದ ನಿರ್ಣಾಯಕ ಚರ್ಚೆಯನ್ನು ಅಣ್ಣಾ ಐಪಾಡ್ ಮೂಲಕ ವೀಕ್ಷಿಸಿದ್ದರು. ಐಪಾಡ್ ಅನ್ನು ಅಭಿವೃದ್ಧಿಪಡಿಸಿದ ಜಾಬ್ಸ್ ನ್ಯೂಯಾರ್ಕ್ನಲ್ಲಿ ಇತ್ತೀಚೆಗೆ ಮೃತರಾಗಿದ್ದಾರೆ.</p>.<p>`ತಾಂತ್ರಿಕ ಜಗತ್ತಿಗೆ ಅಸಾಧಾರಣ ಕೊಡುಗೆ ನೀಡಿದ್ದಕ್ಕಾಗಿ ಸ್ಟೀವ್ ಜಾಬ್ಸ್ ಯಾವಾಗಲೂ ನೆನಪಿನಲ್ಲಿರುತ್ತಾರೆ. ಅವರ ಸಾವಿನ ಸುದ್ದಿ ಬೇಸರ ಉಂಟು ಮಾಡುವಂಥದ್ದು~ ಎಂದು ಅಣ್ಣಾ ಬ್ಲಾಗ್ನಲ್ಲಿ ಬರೆದಿದ್ದಾರೆ.</p>.<p>`ಅನ್ಯಾಯ ಮತ್ತು ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕಾಗಿ ಜನರನ್ನು ಸಂಘಟಿಸಲು ತಂತ್ರಜ್ಞಾನ ಸಹಾಯಕ. ಜಾಬ್ಸ್ ಅವರ ಸಂಶೋಧನೆಗಳು ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿವೆ. ಜನ ಲೋಕಪಾಲ್ ಮಸೂದೆಗಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿ ಇದು ಖುದ್ದು ನನ್ನ ಅನುಭವಕ್ಕೆ ಬಂದಿದೆ~ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿಸ್ಸಾರ್ (ಪಿಟಿಐ):</strong> ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ತಮ್ಮ ವಿರುದ್ಧ ಮಾಡಿರುವ ಆರೋಪ ಅತ್ಯಂತ ಕ್ರೂರ ಹಾಗೂ ಆಧಾರರಹಿತ ಎಂದು ಕಿಡಿಕಾರಿರುವ ಅಣ್ಣಾ ಹಜಾರೆ ತಂಡ, ತಾವು ನಡೆಸುತ್ತಿರುವ ಆಂದೋಲನಕ್ಕೂ ಯಾವುದೇ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.</p>.<p>`ಅಣ್ಣಾ ಕಾಂಗ್ರೆಸ್ ವಿರೋಧಿ ಪಕ್ಷಗಳ ಮುಖವಾಡ ಹಾಕಿಕೊಂಡಿದ್ದಾರೆ~ ಎಂದು ಸಿಂಗ್ ಭಾನುವಾರ ಲೇವಡಿ ಮಾಡಿದ್ದಕ್ಕೆ ತಂಡ ಈ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.</p>.<p>ಇಲ್ಲಿನ ಆರ್ಯ ನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್, `ನಮ್ಮದು ಮತ ಬ್ಯಾಂಕ್ ರಾಜಕೀಯವಲ್ಲ, ಜನರಿಗೆ ಸಂಬಂಧಿಸಿದ ರಾಜಕೀಯ. ನಮಗೂ ರಾಜಕೀಯ ಪಕ್ಷಕ್ಕೂ ಸಂಬಂಧವೇ ಇಲ್ಲ~ ಎಂದು ಹೇಳಿದರು.</p>.<p>`ಅವರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಮ್ಮದು ಜನರ ಚಳವಳಿಯಾಗಿದ್ದು ಅದು ಹಾಗೇ ಮುಂದುವರಿದುಕೊಂಡು ಹೋಗಲು ನಾವು ಬಯಸುತ್ತೇವೆ. ಜನಲೋಕಪಾಲ್ ಮಸೂದೆ ಮಂಡನೆಯಾಗುವಂತೆ ಮಾಡುವುದೇ ನಮ್ಮ ಮುಖ್ಯ ಗುರಿ. ಭ್ರಷ್ಟಾಚಾರ ತೊಲಗುವವರೆಗೂ ಹೋರಾಟ ಮುಂದುವರಿಸುತ್ತೇವೆ~ ಎಂದು ಅವರು ಒತ್ತಿ ಹೇಳಿದರು.</p>.<p><strong>ಮತ್ತೆ ಲೇವಡಿ<br /> ನವದೆಹಲಿ, (ಪಿಟಿಐ):</strong> ಸಮಾಜದ ದುರ್ಬಲ ವರ್ಗದವರ ವಿರುದ್ಧ ಸಾಗಿರುವವರು ಹಾಕಿಕೊಟ್ಟ ಹೂವಿನ ಹಾದಿಯನ್ನೇ ಅಣ್ಣಾ ಹಜಾರೆ ತಂಡ ಮುನ್ನಡೆಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮತ್ತೊಮ್ಮೆ ಲೇವಡಿ ಮಾಡಿದ್ದಾರೆ.</p>.<p>`ಕಾಂಗ್ರೆಸ್ನ ಸಿದ್ಧಾಂತಗಳನ್ನು ವಿರೋಧಿಸುವವರು ಮತ್ತು ದುರ್ಬಲ ವರ್ಗದವರ ವಿರೋಧಿಗಳಾಗಿರುವವರು ತೋರಿಸಿಕೊಟ್ಟ ಹೂವಿನ ಹಾದಿಯಲ್ಲೇ ಅಣ್ಣಾ ಸಾಗುತ್ತಿದ್ದಾರೆ. ಅವರ ತಂಡದ ಅರವಿಂದ್ ಕೇಜ್ರಿವಾಲ್ ಅವರು ಮೀಸಲಾತಿ ವಿರೋಧಿ ಧೋರಣೆಗೆ ಖ್ಯಾತಿ ಪಡೆದವರು ಎಂಬುದನ್ನು ನೆನಪಿಸಿಕೊಳ್ಳಬೇಕಾಗಿದೆ~ ಎಂದು ಹೇಳಿದ್ದಾರೆ. ಅಣ್ಣಾ ಆಂದೋಲನದಿಂದ ದೂರ ಸರಿಯಲು ನಿರ್ಧರಿಸಿರುವ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಕ್ರಮವನ್ನು ದಿಗ್ವಿಜಯ್ ಸ್ವಾಗತಿಸಿದ್ದಾರೆ. `ಹೆಗ್ಡೆ ಅವರ ಕ್ರಮಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅವರು ಅಣ್ಣಾ ತಂಡದಿಂದ ಅಂತರ ಕಾಪಾಡಿಕೊಳ್ಳಬೇಕು~ ಎಂದು ಸಲಹೆ ನೀಡಿದ್ದಾರೆ.</p>.<p><strong>ಸ್ಟೀವ್ ಜಾಬ್ಸ್ ಶ್ಲಾಘಿಸಿದ ಅಣ್ಣಾ<br /> ನವದೆಹಲಿ, (ಪಿಟಿಐ):</strong> `ಜನ ಲೋಕಪಾಲ್ ಮಸೂದೆಗಾಗಿ ನಡೆಸಿದ ಹೋರಾಟದ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಸಂಶೋಧಕ ಸ್ಟೀವ್ ಜಾಬ್ಸ್ ಅವರ ಸಂಶೋಧನೆಗಳು ನನಗೆ ಸಹಾಯ ಮಾಡಿವೆ~ ಎಂದು ಹೇಳುವ ಮೂಲಕ ಅಣ್ಣಾ ಹಜಾರೆ, ಆ್ಯಪಲ್ ಕಂಪೆನಿಯ ಸಹ ಸಂಸ್ಥಾಪಕನನ್ನು ನೆನೆದಿದ್ದಾರೆ.</p>.<p>ಇತ್ತೀಚೆಗೆ ತಾವು ನಡೆಸಿದ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ನಡೆದ ನಿರ್ಣಾಯಕ ಚರ್ಚೆಯನ್ನು ಅಣ್ಣಾ ಐಪಾಡ್ ಮೂಲಕ ವೀಕ್ಷಿಸಿದ್ದರು. ಐಪಾಡ್ ಅನ್ನು ಅಭಿವೃದ್ಧಿಪಡಿಸಿದ ಜಾಬ್ಸ್ ನ್ಯೂಯಾರ್ಕ್ನಲ್ಲಿ ಇತ್ತೀಚೆಗೆ ಮೃತರಾಗಿದ್ದಾರೆ.</p>.<p>`ತಾಂತ್ರಿಕ ಜಗತ್ತಿಗೆ ಅಸಾಧಾರಣ ಕೊಡುಗೆ ನೀಡಿದ್ದಕ್ಕಾಗಿ ಸ್ಟೀವ್ ಜಾಬ್ಸ್ ಯಾವಾಗಲೂ ನೆನಪಿನಲ್ಲಿರುತ್ತಾರೆ. ಅವರ ಸಾವಿನ ಸುದ್ದಿ ಬೇಸರ ಉಂಟು ಮಾಡುವಂಥದ್ದು~ ಎಂದು ಅಣ್ಣಾ ಬ್ಲಾಗ್ನಲ್ಲಿ ಬರೆದಿದ್ದಾರೆ.</p>.<p>`ಅನ್ಯಾಯ ಮತ್ತು ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕಾಗಿ ಜನರನ್ನು ಸಂಘಟಿಸಲು ತಂತ್ರಜ್ಞಾನ ಸಹಾಯಕ. ಜಾಬ್ಸ್ ಅವರ ಸಂಶೋಧನೆಗಳು ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿವೆ. ಜನ ಲೋಕಪಾಲ್ ಮಸೂದೆಗಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿ ಇದು ಖುದ್ದು ನನ್ನ ಅನುಭವಕ್ಕೆ ಬಂದಿದೆ~ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>