<p><strong>ನವದೆಹಲಿ</strong>: ಮಹಿಳೆಯರ ಬಗ್ಗೆ ರಾಜಕೀಯ ನಾಯಕರು ಅವಹೇಳನಕಾರಿಯಾಗಿ ಮಾತನಾಡುವುದು ಹೊಸದೇನಲ್ಲ. ಇದೀಗ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಇಂಥದ್ದೊಂದು ವಿವಾದದಲ್ಲಿ ಸಿಲುಕಿದ್ದಾರೆ.</p>.<p>ಪಕ್ಷದ ಸಂಸದೆ ಮೀನಾಕ್ಷಿ ನಟರಾಜನ್ ಅವರ ಪ್ರಾಮಾಣಿಕತೆಯನ್ನು ಹೊಗಳುವ ಭರದಲ್ಲಿ ಅವರು ಆಡಿದ ಮಾತು ಅಪಾರ್ಥಕ್ಕೆ ಎಡೆಮಾಡಿಕೊಟ್ಟಿದೆ.<br /> <br /> ಮಧ್ಯಪ್ರದೇಶದ ಮಂಡ್ಸೌರ್ ಪಟ್ಟಣದಲ್ಲಿ ಗುರುವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ದಿಗ್ವಿಜಯ್, `ನಮ್ಮ ಪಕ್ಷದ ಸಂಸದೆ ಮೀನಾಕ್ಷಿ ಅವರು ಗಾಂಧಿವಾದಿ. ಸರಳ ಹಾಗೂ ಪ್ರಾಮಾಣಿಕ ನಾಯಕಿ. ಅವರು ನೂರಕ್ಕೆ ನೂರು ಪರಿಶುದ್ಧರು (ಸೌ ತಾಂಚ್ ಖರಾ ಮಾಲ್)' ಎಂದಿದ್ದರು.<br /> <br /> `ನಾನು ರಾಜಕೀಯದಲ್ಲಿ ನುರಿತ ಆಭರಣಕಾರ ಇದ್ದಂತೆ. ಹಾಗಾಗಿಯೇ ಈ ಮಾತನ್ನು ಹೇಳುತ್ತಿದ್ದೇನೆ. ಮೀನಾಕ್ಷಿ ಅಪ್ಪಟ ಚಿನ್ನ' ಎಂದೂ ಹೊಗಳಿದ್ದರು.<br /> <br /> ಕಾಂಗ್ರೆಸ್ ಯುವಪಡೆಯಲ್ಲಿ ಒಬ್ಬರಾಗಿರುವ ಮೀನಾಕ್ಷಿ, ರಾಹುಲ್ ಗಾಂಧಿ ಅವರಿಗೆ ಆಪ್ತರು.<br /> <br /> ದಿಗ್ವಿಜಯ್ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ` ಇದು ಅಸಭ್ಯ ಹಾಗೂ ಅವಮಾನಕರ ಹೇಳಿಕೆ' ಎಂದು ಟೀಕಿಸಿದೆ. `ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯ ಬುದ್ಧಿ ಸ್ಥಿಮಿತದಲ್ಲಿ ಇಲ್ಲ. ಅವರನ್ನು ಕೂಡಲೇ ಮಾನಸಿಕ ಆಸ್ಪತ್ರೆಗೆ ದಾಖಲಿಸಬೇಕು' ಎಂದು ಬಿಜೆಪಿ ಹೇಳಿದೆ.<br /> <br /> `ಇದು ಕಾಂಗ್ರೆಸ್ನ ಆಂತರಿಕ ವಿಚಾರ. ಆದರೂ ನಾನು ಈ ಬಗ್ಗೆ ಮಾತನಾಡುತ್ತೇನೆ. ದಿಗ್ವಿಜಯ್ಗೆ ತಲೆ ಕೆಟ್ಟಿದೆ. ತುರ್ತಾಗಿ ಚಿಕಿತ್ಸೆ ಕೊಡಿಸಬೇಕು' ಎಂದು ಬಿಜೆಪಿ ಮುಖಂಡ ವಿನಯ್ ಕಟಿಯಾರ್ ಹೇಳಿದ್ದಾರೆ.<br /> <br /> `ಅವರನ್ನು ಆಸ್ಪತ್ರೆಗೆ ಸೇರಿಸಲು ಕಾಂಗ್ರೆಸ್ಗೆ ಆಗದಿದ್ದರೆ ನಾವು ಆ ಕೆಲಸ ಮಾಡುತ್ತೇವೆ' ಎಂದೂ ಅವರು ಹೇಳಿದ್ದಾರೆ. ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ಕೂಡ ಕಟಿಯಾರ್ ಟೀಕೆಗೆ ದನಿಗೂಡಿಸಿದ್ದಾರೆ. `ದಿಗ್ವಿಜಯ್ ಸಿಂಗ್ ಅವರನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ' ಎಂದಿದ್ದಾರೆ.<br /> <br /> <strong>ಮೀನಾಕ್ಷಿ ಪ್ರತಿಕ್ರಿಯೆ</strong>: `ಈ ಹೇಳಿಕೆಯನ್ನು ಸರಿಯಾಗಿ ಗ್ರಹಿಸಬೇಕು. ದಿಗ್ವಿಜಯ್ ನನ್ನ ಕೆಲಸವನ್ನು ಶ್ಲಾಘಿಸಿದ್ದಾರೆ. ಇದಕ್ಕೆ ನಾನು ಅಸಮಾಧಾನಗೊಂಡಿಲ್ಲ' ಎಂದು ಮೀನಾಕ್ಷಿ ಪ್ರತಿಕ್ರಿಯಿಸಿದ್ದಾರೆ.</p>.<p><strong>ಸಮರ್ಥನೆ</strong><br /> `ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮೀನಾಕ್ಷಿ ಅವರು ಅಪ್ಪಟ ಚಿನ್ನ ಎಂಬ ಅರ್ಥದಲ್ಲಿ ನಾನು ಮಾತನಾಡಿದ್ದೆ' ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.<br /> <br /> `ನನ್ನ ಹೇಳಿಕೆಗೆ ಅಪಾರ್ಥ ಕಲ್ಪಿಸಿ ಪ್ರಸಾರ ಮಾಡಿದ ಟಿ.ವಿ ವಾಹಿನಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ' ಎಂದೂ ಎಚ್ಚರಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಮಹಿಳೆಯರ ಬಗ್ಗೆ ರಾಜಕೀಯ ನಾಯಕರು ಅವಹೇಳನಕಾರಿಯಾಗಿ ಮಾತನಾಡುವುದು ಹೊಸದೇನಲ್ಲ. ಇದೀಗ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಇಂಥದ್ದೊಂದು ವಿವಾದದಲ್ಲಿ ಸಿಲುಕಿದ್ದಾರೆ.</p>.<p>ಪಕ್ಷದ ಸಂಸದೆ ಮೀನಾಕ್ಷಿ ನಟರಾಜನ್ ಅವರ ಪ್ರಾಮಾಣಿಕತೆಯನ್ನು ಹೊಗಳುವ ಭರದಲ್ಲಿ ಅವರು ಆಡಿದ ಮಾತು ಅಪಾರ್ಥಕ್ಕೆ ಎಡೆಮಾಡಿಕೊಟ್ಟಿದೆ.<br /> <br /> ಮಧ್ಯಪ್ರದೇಶದ ಮಂಡ್ಸೌರ್ ಪಟ್ಟಣದಲ್ಲಿ ಗುರುವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ದಿಗ್ವಿಜಯ್, `ನಮ್ಮ ಪಕ್ಷದ ಸಂಸದೆ ಮೀನಾಕ್ಷಿ ಅವರು ಗಾಂಧಿವಾದಿ. ಸರಳ ಹಾಗೂ ಪ್ರಾಮಾಣಿಕ ನಾಯಕಿ. ಅವರು ನೂರಕ್ಕೆ ನೂರು ಪರಿಶುದ್ಧರು (ಸೌ ತಾಂಚ್ ಖರಾ ಮಾಲ್)' ಎಂದಿದ್ದರು.<br /> <br /> `ನಾನು ರಾಜಕೀಯದಲ್ಲಿ ನುರಿತ ಆಭರಣಕಾರ ಇದ್ದಂತೆ. ಹಾಗಾಗಿಯೇ ಈ ಮಾತನ್ನು ಹೇಳುತ್ತಿದ್ದೇನೆ. ಮೀನಾಕ್ಷಿ ಅಪ್ಪಟ ಚಿನ್ನ' ಎಂದೂ ಹೊಗಳಿದ್ದರು.<br /> <br /> ಕಾಂಗ್ರೆಸ್ ಯುವಪಡೆಯಲ್ಲಿ ಒಬ್ಬರಾಗಿರುವ ಮೀನಾಕ್ಷಿ, ರಾಹುಲ್ ಗಾಂಧಿ ಅವರಿಗೆ ಆಪ್ತರು.<br /> <br /> ದಿಗ್ವಿಜಯ್ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ` ಇದು ಅಸಭ್ಯ ಹಾಗೂ ಅವಮಾನಕರ ಹೇಳಿಕೆ' ಎಂದು ಟೀಕಿಸಿದೆ. `ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯ ಬುದ್ಧಿ ಸ್ಥಿಮಿತದಲ್ಲಿ ಇಲ್ಲ. ಅವರನ್ನು ಕೂಡಲೇ ಮಾನಸಿಕ ಆಸ್ಪತ್ರೆಗೆ ದಾಖಲಿಸಬೇಕು' ಎಂದು ಬಿಜೆಪಿ ಹೇಳಿದೆ.<br /> <br /> `ಇದು ಕಾಂಗ್ರೆಸ್ನ ಆಂತರಿಕ ವಿಚಾರ. ಆದರೂ ನಾನು ಈ ಬಗ್ಗೆ ಮಾತನಾಡುತ್ತೇನೆ. ದಿಗ್ವಿಜಯ್ಗೆ ತಲೆ ಕೆಟ್ಟಿದೆ. ತುರ್ತಾಗಿ ಚಿಕಿತ್ಸೆ ಕೊಡಿಸಬೇಕು' ಎಂದು ಬಿಜೆಪಿ ಮುಖಂಡ ವಿನಯ್ ಕಟಿಯಾರ್ ಹೇಳಿದ್ದಾರೆ.<br /> <br /> `ಅವರನ್ನು ಆಸ್ಪತ್ರೆಗೆ ಸೇರಿಸಲು ಕಾಂಗ್ರೆಸ್ಗೆ ಆಗದಿದ್ದರೆ ನಾವು ಆ ಕೆಲಸ ಮಾಡುತ್ತೇವೆ' ಎಂದೂ ಅವರು ಹೇಳಿದ್ದಾರೆ. ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ಕೂಡ ಕಟಿಯಾರ್ ಟೀಕೆಗೆ ದನಿಗೂಡಿಸಿದ್ದಾರೆ. `ದಿಗ್ವಿಜಯ್ ಸಿಂಗ್ ಅವರನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ' ಎಂದಿದ್ದಾರೆ.<br /> <br /> <strong>ಮೀನಾಕ್ಷಿ ಪ್ರತಿಕ್ರಿಯೆ</strong>: `ಈ ಹೇಳಿಕೆಯನ್ನು ಸರಿಯಾಗಿ ಗ್ರಹಿಸಬೇಕು. ದಿಗ್ವಿಜಯ್ ನನ್ನ ಕೆಲಸವನ್ನು ಶ್ಲಾಘಿಸಿದ್ದಾರೆ. ಇದಕ್ಕೆ ನಾನು ಅಸಮಾಧಾನಗೊಂಡಿಲ್ಲ' ಎಂದು ಮೀನಾಕ್ಷಿ ಪ್ರತಿಕ್ರಿಯಿಸಿದ್ದಾರೆ.</p>.<p><strong>ಸಮರ್ಥನೆ</strong><br /> `ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮೀನಾಕ್ಷಿ ಅವರು ಅಪ್ಪಟ ಚಿನ್ನ ಎಂಬ ಅರ್ಥದಲ್ಲಿ ನಾನು ಮಾತನಾಡಿದ್ದೆ' ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.<br /> <br /> `ನನ್ನ ಹೇಳಿಕೆಗೆ ಅಪಾರ್ಥ ಕಲ್ಪಿಸಿ ಪ್ರಸಾರ ಮಾಡಿದ ಟಿ.ವಿ ವಾಹಿನಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ' ಎಂದೂ ಎಚ್ಚರಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>