<p><strong>ಗಂಗಾವತಿ: </strong>ದೂರದ ದುಬೈನಲ್ಲಿ ನೆಲೆಸಿರುವ ಭಾರಿ ಧನಿಕ ಇಲ್ಲಿ ಕೂಲಿ ಕಾರ್ಮಿಕ, ನಿತ್ಯ ಹತ್ತಾರು ಆಳುಗಳಿಂದ ಹೊಲ, ಮನಿ ಕೆಲಸ ಮಾಡಿಸುವ ಸಿರಿವಂತ ಇಲ್ಲಿ ಕಡು ಬಡವ, ಹತ್ತಾರು ಎಕರೆ ಜಮೀನಿನ ರೈತ ಕೂಡ ಇಲ್ಲಿ ಸರ್ಕಾರದ ಹಣಕ್ಕೆ ಅಂಗಲಾಚುವ ಕೂಲಿಕಾರ.<br /> <br /> ಇದು ವಿಚಿತ್ರ ಆದರೂ ಸತ್ಯ. ತಾಲ್ಲೂಕಿನ ಮಲ್ಲಾಪುರದಲ್ಲಿ ಕಂಡು ಬರುತ್ತಿರುವ ನೈಜ ಚಿತ್ರಣ. <br /> ಕೇವಲ ಹಣಕ್ಕಾಗಿ ಕೆಲ ಗ್ರಾಮ ಪಂಚಾಯಿತಿ ಸದಸ್ಯರು ಸಾರ್ವಜನಿಕ ಹಣಕ್ಕೆ ಕನ್ನ ಹಾಕಲು ಕಂಡುಕೊಂಡ ವಾಮ ಮಾರ್ಗ ಇದೀಗ ಬಯಲಾಗಿದೆ. <br /> <br /> ಸುಮಾರು ರೂ, 75ಲಕ್ಷ ಮೊತ್ತದ ಅನಧಿಕೃತ ಚೆಕ್ಡ್ಯಾಂ ನಿರ್ಮಾಣ, ಎನ್ಆರ್ಇಜಿಯ ಅವ್ಯವಹಾರದಿಂದ ಇತ್ತೀಚೆಗೆ ಜಿಲ್ಲೆಯಾದ್ಯಂತ ಸದ್ದು ಮಾಡಿದ ಮಲ್ಲಾಪುರ ಗ್ರಾಮದಲ್ಲಿ ಮತ್ತೀಗ ಅನರ್ಹ ಕೂಲಿಕಾರ್ಮಿಕರ ಸದ್ದು ಕೇಳಿ ಬರುತ್ತಿದೆ. ತನ್ನತ್ತ ಗಮನ ಸೆಳೆಯುತ್ತಿದೆ.<br /> <br /> <strong>ಸದಸ್ಯರ ಕೈಚಳಕ<br /> </strong>ಕೇಂದ್ರ ಸರ್ಕಾರದ ರಾಷ್ಟ್ರೀಯ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ಲಪಟಾಯಿಸಲು ಮಲ್ಲಾಪುರ ಗ್ರಾಮ ಪಂಚಾಯಿತಿಯ ಕೆಲ ಸದಸ್ಯರ ಕೈ ಚಳಕದಿಂದ ಸ್ವತಃ ಫಲಾನುಭವಿಗಳಿಗೇ ಗೊತ್ತಿಲ್ಲದೆ ಧನಿಕರು ಬಡವರಾಗಿ, ರೈತರು ನಿರ್ಗತಿಕರ ಅವತಾರ ಎತ್ತಿದ್ದಾರೆ. <br /> <br /> ಪಂಚಾಯಿತಿ ವ್ಯಾಪ್ತಿಯಲ್ಲಿ 2010-11 ಮತ್ತು 2011-12ನೇ ಸಾಲಿನಲ್ಲಿ ಕೈಗೊಂಡ ಎನ್ಆರ್ಇಜಿಯಲ್ಲಿ ಸುಮಾರು 80 ಲಕ್ಷ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಸ್ವತಃ ಗ್ರಾಮಸ್ಥರೇ ಇದೀಗ `ವ್ಯವಸ್ಥೆ~ಯ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. <br /> <br /> <strong>ದುಬೈ ಸಿರಿವಂತ<br /> </strong> ಕಳೆದ 14 ವರ್ಷದಿಂದ ದೂರದ ದುಬೈನಲ್ಲಿ ಸ್ಥಿರವಾಗಿ ನೆಲೆಸಿರುವ ಮಲ್ಲಾಪುರ ಪಂಚಾಯಿತಿ ವ್ಯಾಪ್ತಿಯ ರಾಂಪುರದ ನಿವಾಸಿ ಸತ್ಯಮಹೇಶ್ವರ ರೆಡ್ಡಿ ಸತ್ಯನಾರಾಯಣ ರೆಡ್ಡಿ ಎಂಬುವವರು ಪಂಚಾಯಿತಿ ಸದಸ್ಯರ ಪವಾಡದಿಂದ ಮಲ್ಲಾಪುರದಲ್ಲಿ ಕೂಲಿ ಕಾರ್ಮಿಕರಾಗಿದ್ದಾರೆ.<br /> <br /> ಅವರಷ್ಟೆ ಅಲ್ಲ ಗೊಬ್ಬರ ಅಂಗಡಿ ಹೊಂದಿದ, ಶ್ರೀಮಂತಿಕೆ, ಜಮೀನ್ದಾರಿ ಕುಟುಂಬ ಹಿನ್ನೆಲೆಯ ಸೋಮರೆಡ್ಡಿ, ನಾರಾಯಣರೆಡ್ಡಿ, ಶ್ರೀನಿವಾಸ ರೆಡ್ಡಿ, ಗೋವಿಂದರೆಡ್ಡಿ, ವಿಠ್ಠಲ, ಮಂಜುನಾಥ, ಕೆ. ಮಲ್ಲಿಕಾರ್ಜುನ, ಕರಿವೆಂಕಾರೆಡ್ಡಿ ಕೂಲಿಕಾರ್ಮಿಕರ ಪಟ್ಟಿಯಲ್ಲಿದ್ದಾರೆ. <br /> <br /> ನಿತ್ಯ ಹತ್ತಾರು ಆಳು-ಕಾಳುಗಳಿಂದ ಕೆಲಸ ಮಾಡಿಸುವ ಗಂಗಾರತ್ನಂ, ಸತ್ಯ ವೆಂಕಟೇಶ್ವರ ರೆಡ್ಡಿ, ಸತ್ಯ ಮಹೇಶ್ವರ ರೆಡ್ಡಿ, ಎನ್. ಸೂರ್ಯಕುಮಾರಿ, ಸತ್ಯಾರೆಡ್ಡಿ, ಸತ್ಯ ಸುಭಾಕರ ರೆಡ್ಡಿ, ಪೆದ್ದಾರೆಡ್ಡಿ, ಜಿ. ಸತ್ಯನಾರಾಯಣ ಕೂಲಿಗಳ ಹೆಸರಲ್ಲಿ ಲಕ್ಷಾಂತರ ರೂಪಾಯಿ ಬಾಚಿದ್ದಾರೆ.<br /> <br /> <strong>ಫಲಾನುಭವಿಗಳೇ ಗೊತ್ತಿಲ್ಲ<br /> </strong><br /> ಎನ್ಆರ್ಇಜಿಯಲ್ಲಿ ಕೂಲಿಕಾರ್ಮಿಕರ ಖಾತೆ ತೆಗೆದು ಈ ಫಲಾನಭವಿಗಳ ಗಮನಕ್ಕಿಲ್ಲದಂತೆಯೆ ಬ್ಯಾಂಕ್ ಖಾತೆಯಿಂದ ಒಬ್ಬೊಬ್ಬರ ಹೆಸರಲ್ಲಿ ಕನಿಷ್ಟ ರೂ, 2125ರಿಂದ ಗರಿಷ್ಠ ರೂ, 12125 ಹಣ ಅಕ್ರಮವಾಗಿ ಲೂಟಿ ಮಾಡಲಾಗಿದೆ ಎಂಬ ಆರೊಪ ವ್ಯಕ್ತವಾಗಿದೆ.<br /> <br /> ಮೇಲ್ಕಾಣಿಸಿದವರಿಗೆ ತಮ್ಮ ಹೆಸರು ಕೂಲಿಕಾರರ ಪಟ್ಟಿಯಲ್ಲಿ ಇದ್ದುದ್ದೆ ಗೊತ್ತಿಲ್ಲ ಎನ್ನಲಾಗಿದೆ.<br /> `ಪ್ರಜಾವಾಣಿ~ಗೆ ಲಭ್ಯವಾದ ಮಾಹಿತಿ ಪ್ರಕಾರ ಗ್ರಾಮದ ಒಂದು ವಾರ್ಡಿನ ಕೇವಲ 17 ಫಲಾನುಭವಿಗಳ ಹೆಸರಲ್ಲೆ 97,750 ಅಕ್ರಮ ಹಣ ಎತ್ತಲಾಗಿದೆ. ಇನ್ನು ಪಂಚಾಯಿತ ವ್ಯಾಪ್ತಿಯಲ್ಲಿ ನಡೆದ ವ್ಯವಹಾರ ಎಷ್ಟೆಂಬುವುದು ತನಿಖೆಯಿಂದ ಮಾತ್ರ ದೃಢಪಡಬೇಕಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ದೂರದ ದುಬೈನಲ್ಲಿ ನೆಲೆಸಿರುವ ಭಾರಿ ಧನಿಕ ಇಲ್ಲಿ ಕೂಲಿ ಕಾರ್ಮಿಕ, ನಿತ್ಯ ಹತ್ತಾರು ಆಳುಗಳಿಂದ ಹೊಲ, ಮನಿ ಕೆಲಸ ಮಾಡಿಸುವ ಸಿರಿವಂತ ಇಲ್ಲಿ ಕಡು ಬಡವ, ಹತ್ತಾರು ಎಕರೆ ಜಮೀನಿನ ರೈತ ಕೂಡ ಇಲ್ಲಿ ಸರ್ಕಾರದ ಹಣಕ್ಕೆ ಅಂಗಲಾಚುವ ಕೂಲಿಕಾರ.<br /> <br /> ಇದು ವಿಚಿತ್ರ ಆದರೂ ಸತ್ಯ. ತಾಲ್ಲೂಕಿನ ಮಲ್ಲಾಪುರದಲ್ಲಿ ಕಂಡು ಬರುತ್ತಿರುವ ನೈಜ ಚಿತ್ರಣ. <br /> ಕೇವಲ ಹಣಕ್ಕಾಗಿ ಕೆಲ ಗ್ರಾಮ ಪಂಚಾಯಿತಿ ಸದಸ್ಯರು ಸಾರ್ವಜನಿಕ ಹಣಕ್ಕೆ ಕನ್ನ ಹಾಕಲು ಕಂಡುಕೊಂಡ ವಾಮ ಮಾರ್ಗ ಇದೀಗ ಬಯಲಾಗಿದೆ. <br /> <br /> ಸುಮಾರು ರೂ, 75ಲಕ್ಷ ಮೊತ್ತದ ಅನಧಿಕೃತ ಚೆಕ್ಡ್ಯಾಂ ನಿರ್ಮಾಣ, ಎನ್ಆರ್ಇಜಿಯ ಅವ್ಯವಹಾರದಿಂದ ಇತ್ತೀಚೆಗೆ ಜಿಲ್ಲೆಯಾದ್ಯಂತ ಸದ್ದು ಮಾಡಿದ ಮಲ್ಲಾಪುರ ಗ್ರಾಮದಲ್ಲಿ ಮತ್ತೀಗ ಅನರ್ಹ ಕೂಲಿಕಾರ್ಮಿಕರ ಸದ್ದು ಕೇಳಿ ಬರುತ್ತಿದೆ. ತನ್ನತ್ತ ಗಮನ ಸೆಳೆಯುತ್ತಿದೆ.<br /> <br /> <strong>ಸದಸ್ಯರ ಕೈಚಳಕ<br /> </strong>ಕೇಂದ್ರ ಸರ್ಕಾರದ ರಾಷ್ಟ್ರೀಯ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ಲಪಟಾಯಿಸಲು ಮಲ್ಲಾಪುರ ಗ್ರಾಮ ಪಂಚಾಯಿತಿಯ ಕೆಲ ಸದಸ್ಯರ ಕೈ ಚಳಕದಿಂದ ಸ್ವತಃ ಫಲಾನುಭವಿಗಳಿಗೇ ಗೊತ್ತಿಲ್ಲದೆ ಧನಿಕರು ಬಡವರಾಗಿ, ರೈತರು ನಿರ್ಗತಿಕರ ಅವತಾರ ಎತ್ತಿದ್ದಾರೆ. <br /> <br /> ಪಂಚಾಯಿತಿ ವ್ಯಾಪ್ತಿಯಲ್ಲಿ 2010-11 ಮತ್ತು 2011-12ನೇ ಸಾಲಿನಲ್ಲಿ ಕೈಗೊಂಡ ಎನ್ಆರ್ಇಜಿಯಲ್ಲಿ ಸುಮಾರು 80 ಲಕ್ಷ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಸ್ವತಃ ಗ್ರಾಮಸ್ಥರೇ ಇದೀಗ `ವ್ಯವಸ್ಥೆ~ಯ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. <br /> <br /> <strong>ದುಬೈ ಸಿರಿವಂತ<br /> </strong> ಕಳೆದ 14 ವರ್ಷದಿಂದ ದೂರದ ದುಬೈನಲ್ಲಿ ಸ್ಥಿರವಾಗಿ ನೆಲೆಸಿರುವ ಮಲ್ಲಾಪುರ ಪಂಚಾಯಿತಿ ವ್ಯಾಪ್ತಿಯ ರಾಂಪುರದ ನಿವಾಸಿ ಸತ್ಯಮಹೇಶ್ವರ ರೆಡ್ಡಿ ಸತ್ಯನಾರಾಯಣ ರೆಡ್ಡಿ ಎಂಬುವವರು ಪಂಚಾಯಿತಿ ಸದಸ್ಯರ ಪವಾಡದಿಂದ ಮಲ್ಲಾಪುರದಲ್ಲಿ ಕೂಲಿ ಕಾರ್ಮಿಕರಾಗಿದ್ದಾರೆ.<br /> <br /> ಅವರಷ್ಟೆ ಅಲ್ಲ ಗೊಬ್ಬರ ಅಂಗಡಿ ಹೊಂದಿದ, ಶ್ರೀಮಂತಿಕೆ, ಜಮೀನ್ದಾರಿ ಕುಟುಂಬ ಹಿನ್ನೆಲೆಯ ಸೋಮರೆಡ್ಡಿ, ನಾರಾಯಣರೆಡ್ಡಿ, ಶ್ರೀನಿವಾಸ ರೆಡ್ಡಿ, ಗೋವಿಂದರೆಡ್ಡಿ, ವಿಠ್ಠಲ, ಮಂಜುನಾಥ, ಕೆ. ಮಲ್ಲಿಕಾರ್ಜುನ, ಕರಿವೆಂಕಾರೆಡ್ಡಿ ಕೂಲಿಕಾರ್ಮಿಕರ ಪಟ್ಟಿಯಲ್ಲಿದ್ದಾರೆ. <br /> <br /> ನಿತ್ಯ ಹತ್ತಾರು ಆಳು-ಕಾಳುಗಳಿಂದ ಕೆಲಸ ಮಾಡಿಸುವ ಗಂಗಾರತ್ನಂ, ಸತ್ಯ ವೆಂಕಟೇಶ್ವರ ರೆಡ್ಡಿ, ಸತ್ಯ ಮಹೇಶ್ವರ ರೆಡ್ಡಿ, ಎನ್. ಸೂರ್ಯಕುಮಾರಿ, ಸತ್ಯಾರೆಡ್ಡಿ, ಸತ್ಯ ಸುಭಾಕರ ರೆಡ್ಡಿ, ಪೆದ್ದಾರೆಡ್ಡಿ, ಜಿ. ಸತ್ಯನಾರಾಯಣ ಕೂಲಿಗಳ ಹೆಸರಲ್ಲಿ ಲಕ್ಷಾಂತರ ರೂಪಾಯಿ ಬಾಚಿದ್ದಾರೆ.<br /> <br /> <strong>ಫಲಾನುಭವಿಗಳೇ ಗೊತ್ತಿಲ್ಲ<br /> </strong><br /> ಎನ್ಆರ್ಇಜಿಯಲ್ಲಿ ಕೂಲಿಕಾರ್ಮಿಕರ ಖಾತೆ ತೆಗೆದು ಈ ಫಲಾನಭವಿಗಳ ಗಮನಕ್ಕಿಲ್ಲದಂತೆಯೆ ಬ್ಯಾಂಕ್ ಖಾತೆಯಿಂದ ಒಬ್ಬೊಬ್ಬರ ಹೆಸರಲ್ಲಿ ಕನಿಷ್ಟ ರೂ, 2125ರಿಂದ ಗರಿಷ್ಠ ರೂ, 12125 ಹಣ ಅಕ್ರಮವಾಗಿ ಲೂಟಿ ಮಾಡಲಾಗಿದೆ ಎಂಬ ಆರೊಪ ವ್ಯಕ್ತವಾಗಿದೆ.<br /> <br /> ಮೇಲ್ಕಾಣಿಸಿದವರಿಗೆ ತಮ್ಮ ಹೆಸರು ಕೂಲಿಕಾರರ ಪಟ್ಟಿಯಲ್ಲಿ ಇದ್ದುದ್ದೆ ಗೊತ್ತಿಲ್ಲ ಎನ್ನಲಾಗಿದೆ.<br /> `ಪ್ರಜಾವಾಣಿ~ಗೆ ಲಭ್ಯವಾದ ಮಾಹಿತಿ ಪ್ರಕಾರ ಗ್ರಾಮದ ಒಂದು ವಾರ್ಡಿನ ಕೇವಲ 17 ಫಲಾನುಭವಿಗಳ ಹೆಸರಲ್ಲೆ 97,750 ಅಕ್ರಮ ಹಣ ಎತ್ತಲಾಗಿದೆ. ಇನ್ನು ಪಂಚಾಯಿತ ವ್ಯಾಪ್ತಿಯಲ್ಲಿ ನಡೆದ ವ್ಯವಹಾರ ಎಷ್ಟೆಂಬುವುದು ತನಿಖೆಯಿಂದ ಮಾತ್ರ ದೃಢಪಡಬೇಕಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>