<p><strong>ಗಂಗಾವತಿ:</strong> ನಗರಸಭಾ ವ್ಯಾಪ್ತಿಯ ಹಿರೇಜಂತಕಲ್ಲಿನ ಐತಿಹಾಸಿಕ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಳದ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳ ಕೊರತೆ ಏರ್ಪಟ್ಟಿದ್ದು, ಸಮಸ್ಯೆ ಇತ್ಯಾರ್ಥದ ಭರವಸೆ ನೀಡಿದ್ದ ಅಧಿಕಾರಿಗಳು ಈಗ ಕೈಚೆಲ್ಲುವ ಹಂತಕ್ಕೆ ಬಂದಿದ್ದಾರೆ.<br /> <br /> ಇದರಿಂದಾಗಿ ಭೂಮಿ ಒತ್ತುವರಿ ಪ್ರಕರಣ ಮತ್ತೆ ತಿರುವು ಪಡೆದು ಎರಡು ಗುಂಪುಗಳ ಮಧ್ಯದ ವಿವಾದ ಸಂಘರ್ಷದಲ್ಲಿ ಕೊನೆಗೊಂಡರೂ ಆಶ್ಚರ್ಯ ಪಡಬೇಕಾಗಿಲ್ಲ. ಈಗಾಗಲೆ ಎರಡು ಕೋಮಿನ ಮಧ್ಯ ಭೂ ಒತ್ತುವರಿ ಪ್ರಕರಣ ಸಾಕಷ್ಟು ಬಿಸಿ ಚರ್ಚೆಗೆ ಕಾರಣವಾಗಿದೆ.<br /> <br /> ಈ ನಡುವೆ ವಿವಾದದ ಮಧ್ಯೆ ಪ್ರವೇಶಿಸಿದ್ದ ತಹಸೀಲ್ದಾರ ಎಲ್. ಭೀಮಾನಾಯ್ಕ್ ಎರಡು ದಿನದ ಕಾಲವಕಾಶ ಕೋರಿದ್ದರು. `ಸೂಕ್ತ ದಾಖಲಾತಿಗಳೊಂದಿಗೆ ಭೂಮಿ ಸರ್ವೇ ಮಾಡಿಸಿ, ಒತ್ತುವರಿಯಾದ ಎಲ್ಲ ಸ್ಥಳ ತೆರವು ಮಾಡಿ ದೇವಸ್ಥಾನ ಸಂರಕ್ಷಿಸಲಾಗುವುದು~ ಎಂದು ಭರವಸೆ ನೀಡಿದ್ದರು.<br /> <br /> ಅಲ್ಲಿಲ್ಲ, ಇಲ್ಲಿಯೂ ಇಲ್ಲ: ವಾಸ್ತವಿಕವಾಗಿ ಹಿರೇಜಂತಕಲ್ ನಗರಸಭೆ ವ್ಯಾಪ್ತಿಗೆ ಒಳಪಟ್ಟಿದೆ. ದೇವಸ್ಥಾನದ ಸಕಲ ದಾಖಲೆಗಳು ನಗರಸಭೆಯಲ್ಲಿರಬೇಕು. ಆದರೆ 1954ರಿಂದ ಇತ್ತೀಚಿನ ಯಾವ ದಾಖಲೆಗಳು ನಗರಸಭೆ ಸರಿಯಾಗಿ ನಿರ್ವಹಿಸಿಲ್ಲದಿರುವುದು ಸಮಸ್ಯೆಗೆ ಕಾರಣ ಎಂದು ಹೇಳಲಾಗಿದೆ.<br /> <br /> ತನ್ನ ವ್ಯಾಪ್ತಿಗೆ ಸಂಂಧಿಸಿದ್ದಲ್ಲ ಎಂದು ನಗರಸಭೆ ಕಂದಾಯ ಇಲಾಖೆಗೆ ಹಿಂಬರ ನೀಡಿದೆ. ಕಂದಾಯ ಇಲಾಖೆ ತನ್ನ ಕಚೇರಿಯಲ್ಲಿ ಎರಡು ದಿನಕಾಲ ಜಾಲಾಡಿದರೂ ದೇವಸ್ಥಾನದ ಭೂಮಿಗೆ ಸಂಬಂಧಿಸಿದ ಯಾವುದೆ ಸೂಕ್ತ ದಾಖಲಾತಿಗಳು ಲಭ್ಯವಾಗಿಲ್ಲ.<br /> <br /> <strong>ಪ್ರಾಚ್ಯವಸ್ತು ಇಲಾಖೆಗೆ:</strong> ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಳದ ಆಸ್ತಿ ಸಂರಕ್ಷಿಸುವ ಜವಾಬ್ದಾರಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರೂ ಆಗಿರುವ ತಹಸೀಲ್ದಾರ ಅವರಿಗೆ ಸೇರಿದೆ.ಕಂದಾಯ ಮತ್ತು ನಗರಸಭೆಯಲ್ಲಿ ಸೂಕ್ತ ಮಾಹಿತಿ ಲಭ್ಯವಿಲ್ಲದ್ದರಿಂದ ಅಧಿಕಾರಿ ಸಂದಿಗ್ಧತೆಗೆ ಸಿಲುಕಿದ್ದಾರೆ.<br /> <br /> ದಾರಿ ತೋರಿಸಿ ಎಂದು ತಹಸೀಲ್ದಾರ, ಪ್ರಾಚ್ಯವಸ್ತು ಇಲಾಖೆಗೆ ಪತ್ರ ಬರೆದಿದ್ದಾರೆ. ಅದರೆ ಕೇಂದ್ರ ಸರ್ಕಾರದ 1954ರ ಕಾಯ್ದೆಯಡಿ ಸಂರಕ್ಷಿತ ಸ್ಮಾರಕ ಪಟ್ಟಿಯಲ್ಲಿ ದೇವಸ್ಥಾನ ಬಾರದ್ದರಿಂದ ಮಾಹಿತಿ ಅಲಭ್ಯ ಎಂದು ಪ್ರಾಚ್ಯವಸ್ತು ಸ್ಪಷ್ಟಪಡಿಸಿದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ನಗರಸಭಾ ವ್ಯಾಪ್ತಿಯ ಹಿರೇಜಂತಕಲ್ಲಿನ ಐತಿಹಾಸಿಕ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಳದ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳ ಕೊರತೆ ಏರ್ಪಟ್ಟಿದ್ದು, ಸಮಸ್ಯೆ ಇತ್ಯಾರ್ಥದ ಭರವಸೆ ನೀಡಿದ್ದ ಅಧಿಕಾರಿಗಳು ಈಗ ಕೈಚೆಲ್ಲುವ ಹಂತಕ್ಕೆ ಬಂದಿದ್ದಾರೆ.<br /> <br /> ಇದರಿಂದಾಗಿ ಭೂಮಿ ಒತ್ತುವರಿ ಪ್ರಕರಣ ಮತ್ತೆ ತಿರುವು ಪಡೆದು ಎರಡು ಗುಂಪುಗಳ ಮಧ್ಯದ ವಿವಾದ ಸಂಘರ್ಷದಲ್ಲಿ ಕೊನೆಗೊಂಡರೂ ಆಶ್ಚರ್ಯ ಪಡಬೇಕಾಗಿಲ್ಲ. ಈಗಾಗಲೆ ಎರಡು ಕೋಮಿನ ಮಧ್ಯ ಭೂ ಒತ್ತುವರಿ ಪ್ರಕರಣ ಸಾಕಷ್ಟು ಬಿಸಿ ಚರ್ಚೆಗೆ ಕಾರಣವಾಗಿದೆ.<br /> <br /> ಈ ನಡುವೆ ವಿವಾದದ ಮಧ್ಯೆ ಪ್ರವೇಶಿಸಿದ್ದ ತಹಸೀಲ್ದಾರ ಎಲ್. ಭೀಮಾನಾಯ್ಕ್ ಎರಡು ದಿನದ ಕಾಲವಕಾಶ ಕೋರಿದ್ದರು. `ಸೂಕ್ತ ದಾಖಲಾತಿಗಳೊಂದಿಗೆ ಭೂಮಿ ಸರ್ವೇ ಮಾಡಿಸಿ, ಒತ್ತುವರಿಯಾದ ಎಲ್ಲ ಸ್ಥಳ ತೆರವು ಮಾಡಿ ದೇವಸ್ಥಾನ ಸಂರಕ್ಷಿಸಲಾಗುವುದು~ ಎಂದು ಭರವಸೆ ನೀಡಿದ್ದರು.<br /> <br /> ಅಲ್ಲಿಲ್ಲ, ಇಲ್ಲಿಯೂ ಇಲ್ಲ: ವಾಸ್ತವಿಕವಾಗಿ ಹಿರೇಜಂತಕಲ್ ನಗರಸಭೆ ವ್ಯಾಪ್ತಿಗೆ ಒಳಪಟ್ಟಿದೆ. ದೇವಸ್ಥಾನದ ಸಕಲ ದಾಖಲೆಗಳು ನಗರಸಭೆಯಲ್ಲಿರಬೇಕು. ಆದರೆ 1954ರಿಂದ ಇತ್ತೀಚಿನ ಯಾವ ದಾಖಲೆಗಳು ನಗರಸಭೆ ಸರಿಯಾಗಿ ನಿರ್ವಹಿಸಿಲ್ಲದಿರುವುದು ಸಮಸ್ಯೆಗೆ ಕಾರಣ ಎಂದು ಹೇಳಲಾಗಿದೆ.<br /> <br /> ತನ್ನ ವ್ಯಾಪ್ತಿಗೆ ಸಂಂಧಿಸಿದ್ದಲ್ಲ ಎಂದು ನಗರಸಭೆ ಕಂದಾಯ ಇಲಾಖೆಗೆ ಹಿಂಬರ ನೀಡಿದೆ. ಕಂದಾಯ ಇಲಾಖೆ ತನ್ನ ಕಚೇರಿಯಲ್ಲಿ ಎರಡು ದಿನಕಾಲ ಜಾಲಾಡಿದರೂ ದೇವಸ್ಥಾನದ ಭೂಮಿಗೆ ಸಂಬಂಧಿಸಿದ ಯಾವುದೆ ಸೂಕ್ತ ದಾಖಲಾತಿಗಳು ಲಭ್ಯವಾಗಿಲ್ಲ.<br /> <br /> <strong>ಪ್ರಾಚ್ಯವಸ್ತು ಇಲಾಖೆಗೆ:</strong> ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಳದ ಆಸ್ತಿ ಸಂರಕ್ಷಿಸುವ ಜವಾಬ್ದಾರಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರೂ ಆಗಿರುವ ತಹಸೀಲ್ದಾರ ಅವರಿಗೆ ಸೇರಿದೆ.ಕಂದಾಯ ಮತ್ತು ನಗರಸಭೆಯಲ್ಲಿ ಸೂಕ್ತ ಮಾಹಿತಿ ಲಭ್ಯವಿಲ್ಲದ್ದರಿಂದ ಅಧಿಕಾರಿ ಸಂದಿಗ್ಧತೆಗೆ ಸಿಲುಕಿದ್ದಾರೆ.<br /> <br /> ದಾರಿ ತೋರಿಸಿ ಎಂದು ತಹಸೀಲ್ದಾರ, ಪ್ರಾಚ್ಯವಸ್ತು ಇಲಾಖೆಗೆ ಪತ್ರ ಬರೆದಿದ್ದಾರೆ. ಅದರೆ ಕೇಂದ್ರ ಸರ್ಕಾರದ 1954ರ ಕಾಯ್ದೆಯಡಿ ಸಂರಕ್ಷಿತ ಸ್ಮಾರಕ ಪಟ್ಟಿಯಲ್ಲಿ ದೇವಸ್ಥಾನ ಬಾರದ್ದರಿಂದ ಮಾಹಿತಿ ಅಲಭ್ಯ ಎಂದು ಪ್ರಾಚ್ಯವಸ್ತು ಸ್ಪಷ್ಟಪಡಿಸಿದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>