<p>ಧಾರವಾಡ ಹೈಕೋರ್ಟ್ ಬೆಂಚ್ (ಪೀಠ) ಸ್ಥಾಪನೆಯ ದಿವಸವಾದ ಜುಲೈ 4 ರಂದು ಉತ್ತರ ಕರ್ನಾಟಕದವರು ಹಿರಿಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಅವರನ್ನು ನೆನಪಿಸಿಕೊಳ್ಳಬೇಕು. ಅವರ ಧೀಮಂತಿಕೆಯಿಂದಾಗಿಯೇ ಇಲ್ಲಿ ಹೈಕೋರ್ಟ್ ಬೆಂಚ್ ಸ್ಥಾಪನೆಯಾಯ್ತು ಎಂಬುದನ್ನು ಮರೆಯಬಾರದು.<br /> <br /> ಪದೋನ್ನತಿ ಪಡೆದು ಸುಪ್ರೀಮ್ ಕೋರ್ಟಿಗೆ ಹೋಗುವ ಮೊದಲು ಅಂದರೆ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ಹುದ್ದೆಯನ್ನು ಬಿಟ್ಟುಕೊಡುವ ವೇಳೆ ಸಿರಿಯಾಕ್ ಜೋಸೆಫ್ ಅವರು ಈ ಭಾಗದ ದಶಕಗಳ ಒತ್ತಾಯದ ಕಡೆ ಗಮನ ಕೊಟ್ಟು ಹೈಕೋರ್ಟ್ ಬೆಂಚ್ ಸ್ಥಾಪಿಸಲೇಬೇಕು ಎಂಬ ಗಟ್ಟಿ ತೀರ್ಮಾನ ತೆಗೆದು ಕೊಂಡಿದ್ದರಿಂದಲೇ, ಈ ಭಾಗದವರ ಬೆಂಗಳೂರಿಗೆ ಎಡತಾಕುವ ತ್ರಾಸು ಕೊನೆಗೊಂಡಿತು. <br /> <br /> ಉತ್ತರ ಕರ್ನಾಟಕದವರು ಈಗಿರುವ ಸರ್ಕಿಟ್ ಬದಲು `ಪರ್ಮನೆಂಟ್ ಬೆಂಚ್~ಗೆ (ಕಾಯಂ ಪೀಠ) ಬೇಡಿಕೆಯಿಟ್ಟಿದ್ದಾರೆ ಎಂಬುದು ಇತ್ತೀಚಿನ ಸುದ್ದಿ. ಸರ್ಕಿಟ್ (ಸಂಚಾರಿ) ಮತ್ತು ಪರ್ಮನೆಂಟ್ ಬೆಂಚ್ ನಡುವೆ ಬಹಳ ಅಂತರವಿಲ್ಲ. <br /> <br /> ಕಂಪೆನಿ, ಪರಿಸರ, ಸಾರ್ವಜನಿಕ ಹಿತಾಸಕ್ತಿ ಇವೇ ಮೊದಲಾದ ಕೆಲವೇ ಕೆಲವು ಪ್ರಕರಣಗಳಿಗೆ ಸಂಬಂಧಿಸಿದ ಖಟ್ಲೆಗಳನ್ನು ಬಿಟ್ಟರೆ ಬಹುತೇಕ ಎಲ್ಲ ನಮೂನೆಯ ಖಟ್ಲೆಗಳನ್ನು ಸರ್ಕಿಟ್ ಬೆಂಚ್ನಲ್ಲೇ ದಾಖಲು ಮಾಡಿ ನ್ಯಾಯ ನಿರ್ಣಯ ಪಡೆಯಬಹುದು.<br /> <br /> ಕಂಪೆನಿ, ಪರಿಸರ, ಸಾರ್ವಜನಿಕ ಹಿತಾಸಕ್ತಿ ಮುಂತಾದ ವಿಷಯಗಳ ಮೇಲಿನ ಪ್ರಕರಣಗಳನ್ನು ಬೆಂಗಳೂರಿನ ಪ್ರಧಾನ ಪೀಠದಲ್ಲೇ ದಾಖಲಿಸಬೇಕಾಗುತ್ತದೆ ಮತ್ತು ಅವುಗಳ ವಿಚಾರಣೆ ಮತ್ತು ನ್ಯಾಯ ನಿರ್ಣಯ ಅಲ್ಲೇ ನಡೆಯುತ್ತದೆ.<br /> <br /> ಈಗಿನ ಸರ್ಕಿಟ್ ಹೋಗಿ ಪರ್ಮನೆಂಟ್ ಬೆಂಚ್ ಆದಮೇಲೂ ಇದಕ್ಕೆ ಧಾರವಾಡ ಹೈಕೋರ್ಟ್ ಅಂತ ಕರೆಯುವುದಿಲ್ಲ. ಈಗಿರುವ ಹೆಸರಿನಲ್ಲಿ `ಸರ್ಕಿಟ್~ ಮಾಯವಾಗಿ ಕರ್ನಾಟಕ ಹೈಕೋರ್ಟಿನ ಧಾರವಾಡ ಬೆಂಚ್ ಅಂತ ನಾಮಕರಣವಾಗುತ್ತದೆ. <br /> <br /> ಪರ್ಮನೆಂಟ್ ಬೆಂಚ್ ಬಂದರೂ ಕೂಡಾ ಇಲ್ಲಿ ಸ್ವತಂತ್ರ ಮುಖ್ಯ ನ್ಯಾಯಾಧೀಶರ ನೇಮಕ ಆಗುವುದಿಲ್ಲ. ಯಾಕೆಂದರೆ ಬೆಂಚ್ಗಳು ಒಂದಕ್ಕಿಂತ ಹೆಚ್ಚಿದ್ದರೂ ಒಂದು ರಾಜ್ಯಕ್ಕೆ ಒಬ್ಬರೇ ಮುಖ್ಯ ನ್ಯಾಯಾಧೀಶರು. ಈ ಹಿನ್ನೆಲೆಯಲ್ಲಿ ಪರ್ಮನೆಂಟ್ ಬೆಂಚ್ಗೆ ಒತ್ತಾಯ ಮಾಡುವ ಬದಲು ಬೆಂಗಳೂರಿನಲ್ಲಿರುವ ಪ್ರಧಾನ ಪೀಠವನ್ನೇ ಇಲ್ಲಿಗೆ ಸ್ಥಳಾಂತರಿಸಲು ಒತ್ತಾಯ ಪಡಿಸುವುದು ಹೆಚ್ಚು ಸೂಕ್ತ. <br /> <br /> ಬೆಂಗಳೂರು ಇವತ್ತು ಕೇವಲ ಕರ್ನಾಟಕ ರಾಜಧಾನಿಯಾಗಿ ಉಳಿದಿಲ್ಲ. ಐ.ಟಿ. ಕೈಗಾರಿಕೆ ವಿಸ್ತಾರಗೊಂಡಂತೆ ಹೊರ ರಾಜ್ಯ - ರಾಷ್ಟ್ರಗಳ ಜನರು ವಲಸೆ ಬಂದು ಇಲ್ಲೇ ಠಿಕಾಣಿ ಹೂಡಿದ್ದಾರೆ. ಸದಾ ಗಡಿಬಿಡಿ, ಒತ್ತಡ, ಗೊಂದಲ, ಹೆಚ್ಚುತ್ತಿರುವ ಅಪರಾಧಗಳು, ಮಲಿನತೆಯಿಂದ ವಿಪರೀತ ಯಾತನೆಗೀಡಾದ ಬದುಕಿನಿಂದ ಬೆಂಗಳೂರಿನ ಮೂಲನಿವಾಸಿಗಳೇ ಬೇಸತ್ತಿದ್ದಾರೆ. <br /> <br /> ನಿರ್ಮಲ ಪರಿಸರ, ನಿವಾಂತ ವಾತಾವರಣ, ಪರಿಶುದ್ಧ ಹವೆಯಿಂದ ಆ ಮಹಾನಗರ ವಂಚಿತಗೊಂಡಿದೆ. ಇದ್ಯಾವುದೇ ಸಮಸ್ಯೆಯಿಲ್ಲದ ಧಾರವಾಡ, ಪ್ರಧಾನ ಪೀಠಕ್ಕೆ ಹೇಳಿ ಮಾಡಿಸಿದ ಸ್ಥಳ, ಪರ್ಮನೆಂಟ್ ಬದಲು ಪ್ರಧಾನ ಬೆಂಚ್ಗೆ ಒತ್ತಾಯ ಪಡಿಸಲು ಇದು ಯೋಗ್ಯ ಸಮಯ.<br /> <br /> ಹೈಕೋರ್ಟಿನ ಪರ್ಮನೆಂಟ್ ಬೆಂಚ್ಗಳು ರಾಜ್ಯ ರಾಜಧಾನಿಯಲ್ಲೇ ಇರಬೇಕೆಂಬ ಕಡ್ಡಾಯವಿಲ್ಲ. ರಾಜಸ್ತಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಕೇರಳ ಈ ನಾಲ್ಕೂ ರಾಜ್ಯಗಳಲ್ಲಿ ಹೈಕೋರ್ಟ್ ಪ್ರಧಾನ ಬೆಂಚ್ಗಳು ರಾಜಧಾನಿಯಲ್ಲಿಲ್ಲ. ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ಹೈಕೋರ್ಟ್ ಬೆಂಚ್ ಇದೆ. ಆದರೆ ಹೈಕೋರ್ಟಿನ ಪ್ರಧಾನ ಪೀಠ ದೂರದ ಜೋಧಪುರದಲ್ಲಿ. ಇವೆರಡು ಷಹರಗಳ ನಡುವಿನ ಅಂತರ 330 ಕಿಲೋಮೀಟರ್.<br /> <br /> ಉತ್ತರ ಪ್ರದೇಶದ ರಾಜಧಾನಿ ಲಕ್ನೊ. ಆದರೆ ಹೈಕೋರ್ಟಿನ ಪ್ರಧಾನ ಪೀಠ 200 ಕಿಲೋಮೀಟರ್ ಪೂರ್ವಕ್ಕೆ ಇರುವ ಅಲಹಾಬಾದ್ನಲ್ಲಿ. ರಾಜಧಾನಿಯಲ್ಲಿರುವ ಬೆಂಚಿಗೆ ಉತ್ತರಪ್ರದೇಶ ಹೈಕೋರ್ಟ್ ಅಂತ ಕರೆಯುವುದಿಲ್ಲ. ಅದರ ಹೆಸರು ಅಲಹಾಬಾದ್ ಹೈಕೋರ್ಟಿನ ಲಕ್ನೊ ಬೆಂಚ್.<br /> <br /> ಉತ್ತರ ಪ್ರದೇಶ ಭೌಗೋಳಿಕವಾಗಿ ಕರ್ನಾಟಕಕ್ಕಿಂತಲೂ ವಿಶಾಲ ರಾಜ್ಯ. ಆದರೂ ಅಲ್ಲಿ ಎರಡಕ್ಕಿಂತ ಹೆಚ್ಚು ಹೈಕೋರ್ಟ್ ಪೀಠಗಳಿಲ್ಲ. ಅದರಂತೆ ವಿಶಾಲವಾದ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಹೈಕೋರ್ಟಿನ ಯಾವ ಬೆಂಚೂ ಇಲ್ಲ.<br /> <br /> ಎಂ.ಪಿ. ಹೈಕೋರ್ಟಿನ ಪ್ರಧಾನ ಪೀಠ 300 ಕಿಲೋಮೀಟರ್ ಪೂರ್ವಕ್ಕೆ ಇರುವ ಜಬಲ್ಪುರದಲ್ಲಿ. ಇಂದೋರ್ ಮತ್ತು ಗ್ವಾಲಿಯರ್ ಹೀಗೆ ಇನ್ನೂ ಎರಡು ಹೈಕೋರ್ಟ್ ಪೀಠಗಳು ಆ ರಾಜ್ಯದಲ್ಲಿದ್ದು ಸ್ಥಾಪನೆಗೊಂಡಾಗ ಸರ್ಕಿಟ್ ಆಗಿದ್ದ ಅವು ನಂತರ ಪರ್ಮನೆಂಟ್ಗೆ ಬಡ್ತಿ ಪಡೆದವು.<br /> <br /> ಇನ್ನು ಕೇರಳದ ವಿಚಾರ. 1956 ರಲ್ಲಿ ಭಾಷಾವಾರು ರಾಜ್ಯ ಮರುವಿಂಗಡಣೆ ನಂತರ ರೂಪುಗೊಂಡ ಈಗಿನ ಕೇರಳದ ದಕ್ಷಿಣ ತುದಿಯಲ್ಲಿರುವ ತಿರುವನಂತಪುರಂ ರಾಜಧಾನಿಯಾಯಿತಾದರೂ, ಹೈಕೋರ್ಟ್ ಪೀಠ ಅಲ್ಲಿಗೆ ಬರಲಿಲ್ಲ. ತಿರುವಾಂಕೂರು ಅರಸೊತ್ತಿಗೆಯ ಕಾಲದಲ್ಲೇ ಹೈಕೋರ್ಟ್ ಪೀಠ ಪಡೆದ್ದ್ದಿದ ಕೊಚ್ಚಿ ಉರುಫ್ ಎರ್ನಾಕುಲಂ ಈಗಲೂ ಆ ಪೀಠವನ್ನು ಉಳಿಸಿಕೊಂಡಿದೆ.<br /> <br /> ರಾಜಧಾನಿಯಿಂದ ಅದು 200 ಕಿಲೋಮೀಟರ್ ಉತ್ತರದಲ್ಲಿದ್ದರೂ ಕೇರಳದಲ್ಲಿ ಬೇರೆ ಪೀಠ ಸ್ಥಾಪನೆಯಾಗಿಲ್ಲ. 1960ರಲ್ಲಿ ನಿರ್ಮಾಣಗೊಂಡ ಮಹಾರಾಷ್ಟ್ರದಲ್ಲಿ ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾದ ಬಾಂಬೆ ಹೈಕೋರ್ಟ್ ಇದ್ದ ಜಾಗದಲ್ಲೇ ಇದೆ. ಊರ ಹೆಸರು ಬದಲಾಗಿ ಮುಂಬೈ ಆದರೂ ಬಾಂಬೆ ಹೈಕೋರ್ಟಿನ ಹೆಸರು ಹಾಗೇ ಇದೆ.<br /> <br /> ಆ ರಾಜ್ಯದಲ್ಲಿ ನಾಗಪುರ ಮತ್ತು ಔರಂಗಾಬಾದ್ ಅಲ್ಲದೆ ನೆರೆ ರಾಜ್ಯ ಗೋವಾದಲ್ಲಿ ಬಾಂಬೆ ಹೈಕೋರ್ಟಿನ ಬೆಂಚ್ಗಳಿವೆ. ಅವನ್ನು ನಾಗಪೂರ ಹೈಕೋರ್ಟ್ ಅಥವಾ ಔರಂಗಾಬಾದ್ ಹೈಕೋರ್ಟ್ ಅಂತ ಕರೆಯುವುದಿಲ್ಲ. ಗೋವಾ ಸ್ವತಂತ್ರ ರಾಜ್ಯವಾದರೂ ಕೂಡಾ, ಅಲ್ಲಿನ ಹೈಕೋರ್ಟಿಗೆ ಬಾಂಬೆ ಹೈಕೋರ್ಟ್ನ ಗೋವಾ ಬೆಂಚ್ ಅನ್ನುತ್ತಾರೆ.<br /> <br /> ಇವೆಲ್ಲವನ್ನು ನೋಡಿದಾಗ, ಪರ್ಮನೆಂಟ್ ಬೆಂಚ್ ಸಲುವಾಗಿ ಬಡಿದಾಡುವ ಬದಲು ಹೈಕೋರ್ಟಿನ ಪ್ರಧಾನ ಪೀಠಕ್ಕಾಗಿ ಪ್ರಯತ್ನಿಸಬೇಕು. ಜೊತೆಗೆ ಸುಪ್ರೀಂಕೋರ್ಟ್ನ ದಕ್ಷಿಣ ಭಾರತ ಪೀಠವನ್ನೂ ಧಾರವಾಡದಲ್ಲೇ ಸ್ಥಾಪಿಸುವಂತೆ ಹಟ ಹಿಡಿಯಬೇಕು. <br /> <br /> ಯಾಕೆಂದರೆ ಧಾರವಾಡದಂಥ ನಿವಾಂತ ಪರಿಸರ ಮತ್ತು ಕಾಯ್ದೆ ವ್ಯಾಸಂಗವೂ ಸೇರಿ ಅನೇಕ ರಂಗಗಳಲ್ಲಿ ಹೆಸರುಗಳಿಸಿ ಮುಂಚೂಣಿಯಲ್ಲಿರುವ, ಮಹಾನಗರಗಳ ವ್ಯಾಧಿಗಳಿಂದ ದೂರವಿರುವ ಈ ಪಟ್ಟಣ ಸುಪ್ರಿಂ ಪೀಠಕ್ಕೆ ಇಡೀ ದಕ್ಷಿಣ ಭಾರತದಲ್ಲೇ ಯೋಗ್ಯ ಮತ್ತು ಕೇಂದ್ರ ಸ್ಥಳ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ ಹೈಕೋರ್ಟ್ ಬೆಂಚ್ (ಪೀಠ) ಸ್ಥಾಪನೆಯ ದಿವಸವಾದ ಜುಲೈ 4 ರಂದು ಉತ್ತರ ಕರ್ನಾಟಕದವರು ಹಿರಿಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಅವರನ್ನು ನೆನಪಿಸಿಕೊಳ್ಳಬೇಕು. ಅವರ ಧೀಮಂತಿಕೆಯಿಂದಾಗಿಯೇ ಇಲ್ಲಿ ಹೈಕೋರ್ಟ್ ಬೆಂಚ್ ಸ್ಥಾಪನೆಯಾಯ್ತು ಎಂಬುದನ್ನು ಮರೆಯಬಾರದು.<br /> <br /> ಪದೋನ್ನತಿ ಪಡೆದು ಸುಪ್ರೀಮ್ ಕೋರ್ಟಿಗೆ ಹೋಗುವ ಮೊದಲು ಅಂದರೆ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ಹುದ್ದೆಯನ್ನು ಬಿಟ್ಟುಕೊಡುವ ವೇಳೆ ಸಿರಿಯಾಕ್ ಜೋಸೆಫ್ ಅವರು ಈ ಭಾಗದ ದಶಕಗಳ ಒತ್ತಾಯದ ಕಡೆ ಗಮನ ಕೊಟ್ಟು ಹೈಕೋರ್ಟ್ ಬೆಂಚ್ ಸ್ಥಾಪಿಸಲೇಬೇಕು ಎಂಬ ಗಟ್ಟಿ ತೀರ್ಮಾನ ತೆಗೆದು ಕೊಂಡಿದ್ದರಿಂದಲೇ, ಈ ಭಾಗದವರ ಬೆಂಗಳೂರಿಗೆ ಎಡತಾಕುವ ತ್ರಾಸು ಕೊನೆಗೊಂಡಿತು. <br /> <br /> ಉತ್ತರ ಕರ್ನಾಟಕದವರು ಈಗಿರುವ ಸರ್ಕಿಟ್ ಬದಲು `ಪರ್ಮನೆಂಟ್ ಬೆಂಚ್~ಗೆ (ಕಾಯಂ ಪೀಠ) ಬೇಡಿಕೆಯಿಟ್ಟಿದ್ದಾರೆ ಎಂಬುದು ಇತ್ತೀಚಿನ ಸುದ್ದಿ. ಸರ್ಕಿಟ್ (ಸಂಚಾರಿ) ಮತ್ತು ಪರ್ಮನೆಂಟ್ ಬೆಂಚ್ ನಡುವೆ ಬಹಳ ಅಂತರವಿಲ್ಲ. <br /> <br /> ಕಂಪೆನಿ, ಪರಿಸರ, ಸಾರ್ವಜನಿಕ ಹಿತಾಸಕ್ತಿ ಇವೇ ಮೊದಲಾದ ಕೆಲವೇ ಕೆಲವು ಪ್ರಕರಣಗಳಿಗೆ ಸಂಬಂಧಿಸಿದ ಖಟ್ಲೆಗಳನ್ನು ಬಿಟ್ಟರೆ ಬಹುತೇಕ ಎಲ್ಲ ನಮೂನೆಯ ಖಟ್ಲೆಗಳನ್ನು ಸರ್ಕಿಟ್ ಬೆಂಚ್ನಲ್ಲೇ ದಾಖಲು ಮಾಡಿ ನ್ಯಾಯ ನಿರ್ಣಯ ಪಡೆಯಬಹುದು.<br /> <br /> ಕಂಪೆನಿ, ಪರಿಸರ, ಸಾರ್ವಜನಿಕ ಹಿತಾಸಕ್ತಿ ಮುಂತಾದ ವಿಷಯಗಳ ಮೇಲಿನ ಪ್ರಕರಣಗಳನ್ನು ಬೆಂಗಳೂರಿನ ಪ್ರಧಾನ ಪೀಠದಲ್ಲೇ ದಾಖಲಿಸಬೇಕಾಗುತ್ತದೆ ಮತ್ತು ಅವುಗಳ ವಿಚಾರಣೆ ಮತ್ತು ನ್ಯಾಯ ನಿರ್ಣಯ ಅಲ್ಲೇ ನಡೆಯುತ್ತದೆ.<br /> <br /> ಈಗಿನ ಸರ್ಕಿಟ್ ಹೋಗಿ ಪರ್ಮನೆಂಟ್ ಬೆಂಚ್ ಆದಮೇಲೂ ಇದಕ್ಕೆ ಧಾರವಾಡ ಹೈಕೋರ್ಟ್ ಅಂತ ಕರೆಯುವುದಿಲ್ಲ. ಈಗಿರುವ ಹೆಸರಿನಲ್ಲಿ `ಸರ್ಕಿಟ್~ ಮಾಯವಾಗಿ ಕರ್ನಾಟಕ ಹೈಕೋರ್ಟಿನ ಧಾರವಾಡ ಬೆಂಚ್ ಅಂತ ನಾಮಕರಣವಾಗುತ್ತದೆ. <br /> <br /> ಪರ್ಮನೆಂಟ್ ಬೆಂಚ್ ಬಂದರೂ ಕೂಡಾ ಇಲ್ಲಿ ಸ್ವತಂತ್ರ ಮುಖ್ಯ ನ್ಯಾಯಾಧೀಶರ ನೇಮಕ ಆಗುವುದಿಲ್ಲ. ಯಾಕೆಂದರೆ ಬೆಂಚ್ಗಳು ಒಂದಕ್ಕಿಂತ ಹೆಚ್ಚಿದ್ದರೂ ಒಂದು ರಾಜ್ಯಕ್ಕೆ ಒಬ್ಬರೇ ಮುಖ್ಯ ನ್ಯಾಯಾಧೀಶರು. ಈ ಹಿನ್ನೆಲೆಯಲ್ಲಿ ಪರ್ಮನೆಂಟ್ ಬೆಂಚ್ಗೆ ಒತ್ತಾಯ ಮಾಡುವ ಬದಲು ಬೆಂಗಳೂರಿನಲ್ಲಿರುವ ಪ್ರಧಾನ ಪೀಠವನ್ನೇ ಇಲ್ಲಿಗೆ ಸ್ಥಳಾಂತರಿಸಲು ಒತ್ತಾಯ ಪಡಿಸುವುದು ಹೆಚ್ಚು ಸೂಕ್ತ. <br /> <br /> ಬೆಂಗಳೂರು ಇವತ್ತು ಕೇವಲ ಕರ್ನಾಟಕ ರಾಜಧಾನಿಯಾಗಿ ಉಳಿದಿಲ್ಲ. ಐ.ಟಿ. ಕೈಗಾರಿಕೆ ವಿಸ್ತಾರಗೊಂಡಂತೆ ಹೊರ ರಾಜ್ಯ - ರಾಷ್ಟ್ರಗಳ ಜನರು ವಲಸೆ ಬಂದು ಇಲ್ಲೇ ಠಿಕಾಣಿ ಹೂಡಿದ್ದಾರೆ. ಸದಾ ಗಡಿಬಿಡಿ, ಒತ್ತಡ, ಗೊಂದಲ, ಹೆಚ್ಚುತ್ತಿರುವ ಅಪರಾಧಗಳು, ಮಲಿನತೆಯಿಂದ ವಿಪರೀತ ಯಾತನೆಗೀಡಾದ ಬದುಕಿನಿಂದ ಬೆಂಗಳೂರಿನ ಮೂಲನಿವಾಸಿಗಳೇ ಬೇಸತ್ತಿದ್ದಾರೆ. <br /> <br /> ನಿರ್ಮಲ ಪರಿಸರ, ನಿವಾಂತ ವಾತಾವರಣ, ಪರಿಶುದ್ಧ ಹವೆಯಿಂದ ಆ ಮಹಾನಗರ ವಂಚಿತಗೊಂಡಿದೆ. ಇದ್ಯಾವುದೇ ಸಮಸ್ಯೆಯಿಲ್ಲದ ಧಾರವಾಡ, ಪ್ರಧಾನ ಪೀಠಕ್ಕೆ ಹೇಳಿ ಮಾಡಿಸಿದ ಸ್ಥಳ, ಪರ್ಮನೆಂಟ್ ಬದಲು ಪ್ರಧಾನ ಬೆಂಚ್ಗೆ ಒತ್ತಾಯ ಪಡಿಸಲು ಇದು ಯೋಗ್ಯ ಸಮಯ.<br /> <br /> ಹೈಕೋರ್ಟಿನ ಪರ್ಮನೆಂಟ್ ಬೆಂಚ್ಗಳು ರಾಜ್ಯ ರಾಜಧಾನಿಯಲ್ಲೇ ಇರಬೇಕೆಂಬ ಕಡ್ಡಾಯವಿಲ್ಲ. ರಾಜಸ್ತಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಕೇರಳ ಈ ನಾಲ್ಕೂ ರಾಜ್ಯಗಳಲ್ಲಿ ಹೈಕೋರ್ಟ್ ಪ್ರಧಾನ ಬೆಂಚ್ಗಳು ರಾಜಧಾನಿಯಲ್ಲಿಲ್ಲ. ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ಹೈಕೋರ್ಟ್ ಬೆಂಚ್ ಇದೆ. ಆದರೆ ಹೈಕೋರ್ಟಿನ ಪ್ರಧಾನ ಪೀಠ ದೂರದ ಜೋಧಪುರದಲ್ಲಿ. ಇವೆರಡು ಷಹರಗಳ ನಡುವಿನ ಅಂತರ 330 ಕಿಲೋಮೀಟರ್.<br /> <br /> ಉತ್ತರ ಪ್ರದೇಶದ ರಾಜಧಾನಿ ಲಕ್ನೊ. ಆದರೆ ಹೈಕೋರ್ಟಿನ ಪ್ರಧಾನ ಪೀಠ 200 ಕಿಲೋಮೀಟರ್ ಪೂರ್ವಕ್ಕೆ ಇರುವ ಅಲಹಾಬಾದ್ನಲ್ಲಿ. ರಾಜಧಾನಿಯಲ್ಲಿರುವ ಬೆಂಚಿಗೆ ಉತ್ತರಪ್ರದೇಶ ಹೈಕೋರ್ಟ್ ಅಂತ ಕರೆಯುವುದಿಲ್ಲ. ಅದರ ಹೆಸರು ಅಲಹಾಬಾದ್ ಹೈಕೋರ್ಟಿನ ಲಕ್ನೊ ಬೆಂಚ್.<br /> <br /> ಉತ್ತರ ಪ್ರದೇಶ ಭೌಗೋಳಿಕವಾಗಿ ಕರ್ನಾಟಕಕ್ಕಿಂತಲೂ ವಿಶಾಲ ರಾಜ್ಯ. ಆದರೂ ಅಲ್ಲಿ ಎರಡಕ್ಕಿಂತ ಹೆಚ್ಚು ಹೈಕೋರ್ಟ್ ಪೀಠಗಳಿಲ್ಲ. ಅದರಂತೆ ವಿಶಾಲವಾದ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಹೈಕೋರ್ಟಿನ ಯಾವ ಬೆಂಚೂ ಇಲ್ಲ.<br /> <br /> ಎಂ.ಪಿ. ಹೈಕೋರ್ಟಿನ ಪ್ರಧಾನ ಪೀಠ 300 ಕಿಲೋಮೀಟರ್ ಪೂರ್ವಕ್ಕೆ ಇರುವ ಜಬಲ್ಪುರದಲ್ಲಿ. ಇಂದೋರ್ ಮತ್ತು ಗ್ವಾಲಿಯರ್ ಹೀಗೆ ಇನ್ನೂ ಎರಡು ಹೈಕೋರ್ಟ್ ಪೀಠಗಳು ಆ ರಾಜ್ಯದಲ್ಲಿದ್ದು ಸ್ಥಾಪನೆಗೊಂಡಾಗ ಸರ್ಕಿಟ್ ಆಗಿದ್ದ ಅವು ನಂತರ ಪರ್ಮನೆಂಟ್ಗೆ ಬಡ್ತಿ ಪಡೆದವು.<br /> <br /> ಇನ್ನು ಕೇರಳದ ವಿಚಾರ. 1956 ರಲ್ಲಿ ಭಾಷಾವಾರು ರಾಜ್ಯ ಮರುವಿಂಗಡಣೆ ನಂತರ ರೂಪುಗೊಂಡ ಈಗಿನ ಕೇರಳದ ದಕ್ಷಿಣ ತುದಿಯಲ್ಲಿರುವ ತಿರುವನಂತಪುರಂ ರಾಜಧಾನಿಯಾಯಿತಾದರೂ, ಹೈಕೋರ್ಟ್ ಪೀಠ ಅಲ್ಲಿಗೆ ಬರಲಿಲ್ಲ. ತಿರುವಾಂಕೂರು ಅರಸೊತ್ತಿಗೆಯ ಕಾಲದಲ್ಲೇ ಹೈಕೋರ್ಟ್ ಪೀಠ ಪಡೆದ್ದ್ದಿದ ಕೊಚ್ಚಿ ಉರುಫ್ ಎರ್ನಾಕುಲಂ ಈಗಲೂ ಆ ಪೀಠವನ್ನು ಉಳಿಸಿಕೊಂಡಿದೆ.<br /> <br /> ರಾಜಧಾನಿಯಿಂದ ಅದು 200 ಕಿಲೋಮೀಟರ್ ಉತ್ತರದಲ್ಲಿದ್ದರೂ ಕೇರಳದಲ್ಲಿ ಬೇರೆ ಪೀಠ ಸ್ಥಾಪನೆಯಾಗಿಲ್ಲ. 1960ರಲ್ಲಿ ನಿರ್ಮಾಣಗೊಂಡ ಮಹಾರಾಷ್ಟ್ರದಲ್ಲಿ ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾದ ಬಾಂಬೆ ಹೈಕೋರ್ಟ್ ಇದ್ದ ಜಾಗದಲ್ಲೇ ಇದೆ. ಊರ ಹೆಸರು ಬದಲಾಗಿ ಮುಂಬೈ ಆದರೂ ಬಾಂಬೆ ಹೈಕೋರ್ಟಿನ ಹೆಸರು ಹಾಗೇ ಇದೆ.<br /> <br /> ಆ ರಾಜ್ಯದಲ್ಲಿ ನಾಗಪುರ ಮತ್ತು ಔರಂಗಾಬಾದ್ ಅಲ್ಲದೆ ನೆರೆ ರಾಜ್ಯ ಗೋವಾದಲ್ಲಿ ಬಾಂಬೆ ಹೈಕೋರ್ಟಿನ ಬೆಂಚ್ಗಳಿವೆ. ಅವನ್ನು ನಾಗಪೂರ ಹೈಕೋರ್ಟ್ ಅಥವಾ ಔರಂಗಾಬಾದ್ ಹೈಕೋರ್ಟ್ ಅಂತ ಕರೆಯುವುದಿಲ್ಲ. ಗೋವಾ ಸ್ವತಂತ್ರ ರಾಜ್ಯವಾದರೂ ಕೂಡಾ, ಅಲ್ಲಿನ ಹೈಕೋರ್ಟಿಗೆ ಬಾಂಬೆ ಹೈಕೋರ್ಟ್ನ ಗೋವಾ ಬೆಂಚ್ ಅನ್ನುತ್ತಾರೆ.<br /> <br /> ಇವೆಲ್ಲವನ್ನು ನೋಡಿದಾಗ, ಪರ್ಮನೆಂಟ್ ಬೆಂಚ್ ಸಲುವಾಗಿ ಬಡಿದಾಡುವ ಬದಲು ಹೈಕೋರ್ಟಿನ ಪ್ರಧಾನ ಪೀಠಕ್ಕಾಗಿ ಪ್ರಯತ್ನಿಸಬೇಕು. ಜೊತೆಗೆ ಸುಪ್ರೀಂಕೋರ್ಟ್ನ ದಕ್ಷಿಣ ಭಾರತ ಪೀಠವನ್ನೂ ಧಾರವಾಡದಲ್ಲೇ ಸ್ಥಾಪಿಸುವಂತೆ ಹಟ ಹಿಡಿಯಬೇಕು. <br /> <br /> ಯಾಕೆಂದರೆ ಧಾರವಾಡದಂಥ ನಿವಾಂತ ಪರಿಸರ ಮತ್ತು ಕಾಯ್ದೆ ವ್ಯಾಸಂಗವೂ ಸೇರಿ ಅನೇಕ ರಂಗಗಳಲ್ಲಿ ಹೆಸರುಗಳಿಸಿ ಮುಂಚೂಣಿಯಲ್ಲಿರುವ, ಮಹಾನಗರಗಳ ವ್ಯಾಧಿಗಳಿಂದ ದೂರವಿರುವ ಈ ಪಟ್ಟಣ ಸುಪ್ರಿಂ ಪೀಠಕ್ಕೆ ಇಡೀ ದಕ್ಷಿಣ ಭಾರತದಲ್ಲೇ ಯೋಗ್ಯ ಮತ್ತು ಕೇಂದ್ರ ಸ್ಥಳ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>