<p><strong>ಧಾರವಾಡ: </strong>ಸಭೆಯಲ್ಲಿ ಚರ್ಚಿಸಿದ ವಿಷಯವನ್ನು ಅನುಸರಣಾ ವರದಿಯಲ್ಲಿ ಕಾಣಿಸದಿರುವ ಬಗ್ಗೆ ಸೋಮವಾರ ನಡೆದ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆಯಾಗಿ ಇಬ್ಬರು ಸದಸ್ಯರು ಅಧ್ಯಕ್ಷರ ಎದುರು ಧರಣಿ ನಡೆಸಿದ ಪ್ರಸಂಗ ನಡೆಯಿತು. <br /> <br /> ಸಭೆ ಆರಂಭವಾಗುತ್ತಿದ್ದಂತೆ ಜೆಡಿಎಸ್ ಸದಸ್ಯ ಅಮೃತ ದೇಸಾಯಿ, ಕಳೆದ ಜನೆವರಿಯಲ್ಲಿ ನಡೆದ ಸಾಂಆನ್ಯ ಸಭೆಯಲ್ಲಿ ಸಭೆಯ ನಡುವಳಿಕೆ ಮೇಲೆ ತೆಗೆದುಕೊಂಡ ಅನುಸರಣಾ ವರದಿಯನ್ನು ಪರಿಶೀಲಿಸುವುದಾಗಿ ತಿಳಿಸಲಾಗಿದೆ. ಆದರೆ ಅನುಸರಣಾ ವರದಿಯಲ್ಲಿ ವಿಷಯ ಸೇರಿಲ್ಲ. <br /> <br /> ಜಿಪಂ ನೂತನ ಸಭಾಭವನದ ಒಳಾಂಗಣ ವಿನ್ಯಾಸ ಹಾಗೂ ಪೀಠೋಪಕರಣ ಅಳವಡಿಕೆಗೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿರುವ ಆರೋಪವಿದೆ.ಇಂಥ ಗಂಭೀರ ವಿಷಯವನ್ನು ಅನುಸರಣಾ ವರದಿಯಲ್ಲಿ ಕೈಬಿಡುವ ಮೂಲಕ ಸದಸ್ಯರನ್ನು ಕತ್ತಲಲ್ಲಿಡುವ ತಂತ್ರ ನಡೆದಿದೆ ಎಂದು ಆರೋಪಿಸಿದರು. <br /> <br /> ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಅಧ್ಯಕ್ಷರ ಪೀಠದ ಎದುರು ಧರಣಿಗೆ ಮುಂದಾದರು. ಕಾಂಗ್ರೆಸ್ ಪಕ್ಷದ ಸದಸ್ಯೆ ಕಸ್ತೂರಿ ಅಷ್ಟಗಿ ಇದಕ್ಕೆ ದನಿಗೂಡಿಸಿ ಧರಣಿ ಕುಳಿತರು. ಮತ್ತೊಬ್ಬ ಸದಸ್ಯ ಬಿ.ವೈ.ದಾಸನಕೊಪ್ಪ ಕಠಿಣ ಕ್ರಮಕ್ಕೆ ಆಗ್ರಹಿಸಿದರು. <br /> <br /> ಮುಜುಗರಕ್ಕೊಳಗಾದಂತೆ ಕಂಡುಬಂದ ಅಧ್ಯಕ್ಷ ಅಡಿವೆಪ್ಪ ಮನಮಿ ಮತ್ತು ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಪಿ.ಎ.ಮೇಘಣ್ಣವರ ಧರಣಿ ಹಿಂತೆಗೆದು ಕೊಳ್ಳುವಂತೆ ಮಾಡಿದ ಮನವಿ ಪ್ರಯೋಜನವಾಗಲಿಲ್ಲ. ಸದಸ್ಯರು ಕ್ರಮ ತೆಗೆದುಕೊಳ್ಳಲೇಬೇಕು ಎಂದು ಪಟ್ಟು ಹಿಡಿದರು. <br /> <br /> ಸಂಬಂಧಿಸಿದ ಅಧಿಕಾರಿಗಳಿಗೆ ನೋಟೀಸು ನೀಡಿ, ಈ ಕುರಿತು ತನಿಖೆಗೆ ಸಮಿತಿ ರಚನೆ ಮಾಡುಲು ನಿರ್ಧರಿಸಿದ ನಂತರ ಧರಣಿ ಹಿಂದಕ್ಕೆ ಪಡೆಯಲಾಯಿತು. <br /> <br /> ಧರಣಿ ನಂತರ ಕಸ್ತೂರಿ ಅಷ್ಟಗಿ ಅವರು ಜಿಪಂ ಸಹಾಯಕ ಎಂಜನಿಯರಾದ ವಿಜಯ ಹಾಗೂ ಮುಳಗುಂದಮಠ ಅವರನ್ನು ಅಮಾನತು ಮಾಡಲಾ ಗಿತ್ತು. ಆದರೆ ಕೆಲವೇ ದಿನಗಳಲ್ಲಿ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದು ಕಾನೂನು ಪ್ರಕಾರ ಸರಿಯಾಗಿದೆಯೇ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು. <br /> <br /> ಸಿಇಒ ಮೇಘಣ್ಣವರ ಮಾತನಾಡಿ, ಹಳೆ ತೇಗೂರು ಪೈಪ್ಲೈನ್ ಅಳವಡಿಕೆ ಕಾಮಗಾರಿಯಲ್ಲಿ ನ್ಯೂನ್ಯತೆ ಕಂಡು ಅವರನ್ನು ಅಮಾನತುಗೊಳಿಸಲಾಗಿತ್ತು. ಬಳಿಕ ಅವರಿಂದ ಸ್ಪಷ್ಟೀಕರಣ ಪಡೆದು ಪುನಃ ನೇಮಕ ಮಾಡಿಕೊಳ್ಳಲಾಗಿದೆ ಎಂದು ಹೇಳುತ್ತಿದ್ದಂತೆ, ಹಾರಿಕೆ ಉತ್ತರ ನೀಡುವುದು ಸರಿಯಲ್ಲ. <br /> <br /> ಅವರ ಪುನರ್ ನೇಮಕದಲ್ಲಿ `ಒಳ ವ್ಯವಹಾರ~ ನಡೆದಿರುವ ಶಂಕೆ ವ್ಯಕ್ತಪಡಿಸಿದರು. ಅಮೃತ ದೇಸಾಯಿ ಮಧ್ಯ ಪ್ರವೇಶಿಸಿ, ಈ ವಿಷಯವನ್ನು ಸಹ ಈಗಾಗಲೇರಚಿಸಲು ನಿರ್ಧರಿಸಿರುವ ಸಮಿತಿಯಿಂದ ತನಿಖೆಗೊಳಪಡಿಸಬೇಕು ಎಂದರು. ಅಧ್ಯಕ್ಷ ಅಡಿವೆಪ್ಪ ಮನಮಿ ಇದಕ್ಕೆ ಒಪ್ಪಿಗೆ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ: </strong>ಸಭೆಯಲ್ಲಿ ಚರ್ಚಿಸಿದ ವಿಷಯವನ್ನು ಅನುಸರಣಾ ವರದಿಯಲ್ಲಿ ಕಾಣಿಸದಿರುವ ಬಗ್ಗೆ ಸೋಮವಾರ ನಡೆದ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆಯಾಗಿ ಇಬ್ಬರು ಸದಸ್ಯರು ಅಧ್ಯಕ್ಷರ ಎದುರು ಧರಣಿ ನಡೆಸಿದ ಪ್ರಸಂಗ ನಡೆಯಿತು. <br /> <br /> ಸಭೆ ಆರಂಭವಾಗುತ್ತಿದ್ದಂತೆ ಜೆಡಿಎಸ್ ಸದಸ್ಯ ಅಮೃತ ದೇಸಾಯಿ, ಕಳೆದ ಜನೆವರಿಯಲ್ಲಿ ನಡೆದ ಸಾಂಆನ್ಯ ಸಭೆಯಲ್ಲಿ ಸಭೆಯ ನಡುವಳಿಕೆ ಮೇಲೆ ತೆಗೆದುಕೊಂಡ ಅನುಸರಣಾ ವರದಿಯನ್ನು ಪರಿಶೀಲಿಸುವುದಾಗಿ ತಿಳಿಸಲಾಗಿದೆ. ಆದರೆ ಅನುಸರಣಾ ವರದಿಯಲ್ಲಿ ವಿಷಯ ಸೇರಿಲ್ಲ. <br /> <br /> ಜಿಪಂ ನೂತನ ಸಭಾಭವನದ ಒಳಾಂಗಣ ವಿನ್ಯಾಸ ಹಾಗೂ ಪೀಠೋಪಕರಣ ಅಳವಡಿಕೆಗೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿರುವ ಆರೋಪವಿದೆ.ಇಂಥ ಗಂಭೀರ ವಿಷಯವನ್ನು ಅನುಸರಣಾ ವರದಿಯಲ್ಲಿ ಕೈಬಿಡುವ ಮೂಲಕ ಸದಸ್ಯರನ್ನು ಕತ್ತಲಲ್ಲಿಡುವ ತಂತ್ರ ನಡೆದಿದೆ ಎಂದು ಆರೋಪಿಸಿದರು. <br /> <br /> ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಅಧ್ಯಕ್ಷರ ಪೀಠದ ಎದುರು ಧರಣಿಗೆ ಮುಂದಾದರು. ಕಾಂಗ್ರೆಸ್ ಪಕ್ಷದ ಸದಸ್ಯೆ ಕಸ್ತೂರಿ ಅಷ್ಟಗಿ ಇದಕ್ಕೆ ದನಿಗೂಡಿಸಿ ಧರಣಿ ಕುಳಿತರು. ಮತ್ತೊಬ್ಬ ಸದಸ್ಯ ಬಿ.ವೈ.ದಾಸನಕೊಪ್ಪ ಕಠಿಣ ಕ್ರಮಕ್ಕೆ ಆಗ್ರಹಿಸಿದರು. <br /> <br /> ಮುಜುಗರಕ್ಕೊಳಗಾದಂತೆ ಕಂಡುಬಂದ ಅಧ್ಯಕ್ಷ ಅಡಿವೆಪ್ಪ ಮನಮಿ ಮತ್ತು ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಪಿ.ಎ.ಮೇಘಣ್ಣವರ ಧರಣಿ ಹಿಂತೆಗೆದು ಕೊಳ್ಳುವಂತೆ ಮಾಡಿದ ಮನವಿ ಪ್ರಯೋಜನವಾಗಲಿಲ್ಲ. ಸದಸ್ಯರು ಕ್ರಮ ತೆಗೆದುಕೊಳ್ಳಲೇಬೇಕು ಎಂದು ಪಟ್ಟು ಹಿಡಿದರು. <br /> <br /> ಸಂಬಂಧಿಸಿದ ಅಧಿಕಾರಿಗಳಿಗೆ ನೋಟೀಸು ನೀಡಿ, ಈ ಕುರಿತು ತನಿಖೆಗೆ ಸಮಿತಿ ರಚನೆ ಮಾಡುಲು ನಿರ್ಧರಿಸಿದ ನಂತರ ಧರಣಿ ಹಿಂದಕ್ಕೆ ಪಡೆಯಲಾಯಿತು. <br /> <br /> ಧರಣಿ ನಂತರ ಕಸ್ತೂರಿ ಅಷ್ಟಗಿ ಅವರು ಜಿಪಂ ಸಹಾಯಕ ಎಂಜನಿಯರಾದ ವಿಜಯ ಹಾಗೂ ಮುಳಗುಂದಮಠ ಅವರನ್ನು ಅಮಾನತು ಮಾಡಲಾ ಗಿತ್ತು. ಆದರೆ ಕೆಲವೇ ದಿನಗಳಲ್ಲಿ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದು ಕಾನೂನು ಪ್ರಕಾರ ಸರಿಯಾಗಿದೆಯೇ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು. <br /> <br /> ಸಿಇಒ ಮೇಘಣ್ಣವರ ಮಾತನಾಡಿ, ಹಳೆ ತೇಗೂರು ಪೈಪ್ಲೈನ್ ಅಳವಡಿಕೆ ಕಾಮಗಾರಿಯಲ್ಲಿ ನ್ಯೂನ್ಯತೆ ಕಂಡು ಅವರನ್ನು ಅಮಾನತುಗೊಳಿಸಲಾಗಿತ್ತು. ಬಳಿಕ ಅವರಿಂದ ಸ್ಪಷ್ಟೀಕರಣ ಪಡೆದು ಪುನಃ ನೇಮಕ ಮಾಡಿಕೊಳ್ಳಲಾಗಿದೆ ಎಂದು ಹೇಳುತ್ತಿದ್ದಂತೆ, ಹಾರಿಕೆ ಉತ್ತರ ನೀಡುವುದು ಸರಿಯಲ್ಲ. <br /> <br /> ಅವರ ಪುನರ್ ನೇಮಕದಲ್ಲಿ `ಒಳ ವ್ಯವಹಾರ~ ನಡೆದಿರುವ ಶಂಕೆ ವ್ಯಕ್ತಪಡಿಸಿದರು. ಅಮೃತ ದೇಸಾಯಿ ಮಧ್ಯ ಪ್ರವೇಶಿಸಿ, ಈ ವಿಷಯವನ್ನು ಸಹ ಈಗಾಗಲೇರಚಿಸಲು ನಿರ್ಧರಿಸಿರುವ ಸಮಿತಿಯಿಂದ ತನಿಖೆಗೊಳಪಡಿಸಬೇಕು ಎಂದರು. ಅಧ್ಯಕ್ಷ ಅಡಿವೆಪ್ಪ ಮನಮಿ ಇದಕ್ಕೆ ಒಪ್ಪಿಗೆ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>