<p><strong>ಬೆಂಗಳೂರು:</strong> `ಗ್ರಾಮೀಣ ಪ್ರದೇಶದ ಸಾಮಾನ್ಯ ಕುಟುಂಬದಿಂದ ಬಂದ ಪ್ರೊ. ಎಂ.ಎಸ್. ನಂಜುಂಡರಾವ್ ಅವರು ಚಿತ್ರಕಲಾ ಪರಿಷತ್ತನ್ನು ಸ್ಥಾಪಿಸಿ ಅದರ ಅಭಿವೃದ್ಧಿಗೆ ಜೀವನ ಪೂರ್ತಿ ಶ್ರಮಿಸಿದರು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.<br /> <br /> ಪ್ರೊ.ಎಂ.ಎಸ್.ನಂಜುಂಡರಾವ್ ಸ್ಮಾರಕ ಚಾರಿಟಬಲ್ ಟ್ರಸ್ಟ್ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ತು ಪ್ರೊ.ಎಂ.ಎಸ್.ನಂಜುಂಡರಾವ್ ಅವರ 81ನೇ ಜನ್ಮದಿನದ ಅಂಗವಾಗಿ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಅವರ ಜೀವನ ಚರಿತ್ರೆ ಆಧಾರಿತ `ಅನನ್ಯ ಕಲಾಸಾರಥಿ - ನಂಜುಂಡರಾವ್' ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> `ನಂಜುಂಡರಾವ್ ಅವರದು ಕಲಾ ಕುಟುಂಬ. ಅವರ ತಂದೆಯವರೂ ಸಹ ಕಲಾವಿದರಾಗಿದ್ದರು. ಗಾಂಧಿವಾದಿಯಾಗಿದ್ದ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಕೊನೆಯವರೆಗೂ ಸರಳ ಜೀವನ ನಡೆಸಿ ಎಲ್ಲರಿಗೂ ಮಾದರಿಯಾಗಿದ್ದಾರೆ' ಎಂದು ಹೇಳಿದರು.<br /> <br /> ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ, ದೇವರಾಜ್ ಅರಸು, ರಾಮಕೃಷ್ಣ ಹೆಗಡೆ ಸೇರಿದಂತೆ ಹಲವರು ಪರಿಷತ್ತಿನ ಏಳಿಗೆಗೆ ನಂಜುಂಡರಾವ್ ಅವರಿಗೆ ಸಹಕಾರ ನೀಡಿದ್ದರು. ಅವರ ಶ್ರಮದಿಂದಾಗಿ ಪರಿಷತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ ಎಂದು ಅಭಿಪ್ರಾಯಪಟ್ಟರು.<br /> <br /> ವಿದ್ಯಾರ್ಥಿಗಳಿಗೆ, ಕಲಾಸಕ್ತರಿಗೆ ಶಿಕ್ಷಣ ನೀಡಲು ಪರಿಷತ್ತಿನ ವತಿಯಿಂದ ಸ್ಥಾಪನೆಯಾಗಲಿರುವ ಅಂತರರಾಷ್ಟ್ರೀಯ ಕಲಾ ಗ್ಯಾಲರಿಯು ಉತ್ತಮ ಕಾರ್ಯವಾಗಿದೆ. ಪರಿಷತ್ತಿನ ಏಳಿಗೆಗೆ ಅಗತ್ಯವಿರುವ ಸಹಕಾರವನ್ನು ನೀಡಲಾಗುವುದು ಅವರು ಭರವಸೆ ನೀಡಿದರು.<br /> <br /> ರಾಜ್ಯಸಭಾ ಸದಸ್ಯ ಎಸ್.ಎಂ.ಕೃಷ್ಣ ಮಾತನಾಡಿ, `ನಂಜುಂಡರಾವ್ ಅವರೊಂದಿಗೆ ನನಗೆ ಸುಮಾರು ಐದು ದಶಕಗಳಿಗೂ ಹೆಚ್ಚಿನ ಒಡನಾಟವಿತ್ತು. ತಮ್ಮ ಕುಟುಂಬಕ್ಕೂ ಹೆಚ್ಚಿನ ಪ್ರಾಶಸ್ತ್ಯ ನೀಡದೆ ಪರಿಷತ್ತಿನ ಸರ್ವತೋಮುಖ ಅಭಿವೃದ್ಧಿಗೆ ಅವರು ದುಡಿದಿದ್ದಾರೆ' ಎಂದು ಶ್ಲಾಘಿಸಿದರು.<br /> <br /> `ದೇವರಾಜ್ ಅರಸು ಸಚಿವ ಸಂಪುಟದಲ್ಲಿ ನಾನು ಕೈಗಾರಿಕಾ ಸಚಿವನಾಗಿದ್ದ ಸಂದರ್ಭದಲ್ಲಿ ಈಗ ಪರಿಷತ್ತು ಇರುವ ಜಾಗವನ್ನು ಸರ್ಕಾರಿ ಅಧಿಕಾರಿಗಳ ವಾಹನ ಚಾಲಕರಿಗೆ ಸಮುಚ್ಚಯ ನಿರ್ಮಾಣ ಮಾಡಲು ನೀಡುವ ಪ್ರಸ್ತಾವನೆ ಕ್ಯಾಬಿನೆಟ್ನಲ್ಲಿ ಮಂಡನೆಯಾಗುವುದರಲ್ಲಿತ್ತು. ಆಗ ನನ್ನ ಬಳಿ ಬಂದ ನಂಜುಂಡರಾವ್ ಆ ಜಾಗ ಕೈತಪ್ಪಿದರೆ ಹೇಗೆ ಪರಿಷತ್ತಿನ ಏಳಿಗೆಗೆ ಮಾರಕವಾಗಲಿದೆ ಎಂಬುದನ್ನು ವಿವರಿಸಿದರು. ನಂತರ ಇದನ್ನು ಅರಸು ಅವರ ಗಮನಕ್ಕೆ ತರಲಾಯಿತು. ಲೋಕೋಪಯೋಗಿ ಸಚಿವರಾಗಿದ್ದ ರಂಗನಾಥ್ ಅವರ ಸಹಕಾರದಿಂದ ಆ ಜಾಗವನ್ನು ಪರಿಷತ್ತಿಗೆ ನೀಡಲಾಯಿತು. ಇದು ನಂಜುಂಡರಾವ್ ಅವರು ಪರಿಷತ್ತಿನ ಬಗೆಗೆ ಹೊಂದಿದ್ದ ಕಾಳಜಿಗೆ ಸಾಕ್ಷಿ' ಎಂದು ವಿವರಿಸಿದರು.<br /> <br /> <strong>ಕಲಾವಿದರಿಗೆ ಪಾಠ</strong>: ಕೃತಿಯ ಪ್ರಧಾನ ಸಂಪಾದಕಿ ನಾಗಲಕ್ಷ್ಮಿ ಮಾತನಾಡಿ, `ಕಲೆ, ಪರಿಷತ್ತಿನ ಏಳಿಗೆಗೆ ಅವರಿಗಿದ್ದ ಬದ್ಧತೆ ಇಂದಿನ ಯುವ ಕಲಾವಿದರಿಗೆ ಪಾಠವಿದ್ದಂತೆ. ಅವರ ಶಿಷ್ಯರು, ಬಂಧುಗಳು, ಒಡನಾಡಿಗಳು, ಸಹೋದ್ಯೋಗಿಗಳು ಸೇರಿದಂತೆ ಸುಮಾರು 60ಕ್ಕೂ ಅಧಿಕ ಮಂದಿಯನ್ನು ಸಂದರ್ಶಿಸಿ ಕೃತಿಯನ್ನು ಸಂಪಾದಿಸಲಾಗಿದೆ' ಎಂದು ಹೇಳಿದರು.<br /> <br /> ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಎಂ.ಎಸ್. ಲಕ್ಷ್ಮೀಶ, ಕಾರ್ಯದರ್ಶಿ ಎಸ್.ಎನ್.ರವಿಶಂಕರ್, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ.ಡಿ.ಕೆ.ಚೌಟ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಗ್ರಾಮೀಣ ಪ್ರದೇಶದ ಸಾಮಾನ್ಯ ಕುಟುಂಬದಿಂದ ಬಂದ ಪ್ರೊ. ಎಂ.ಎಸ್. ನಂಜುಂಡರಾವ್ ಅವರು ಚಿತ್ರಕಲಾ ಪರಿಷತ್ತನ್ನು ಸ್ಥಾಪಿಸಿ ಅದರ ಅಭಿವೃದ್ಧಿಗೆ ಜೀವನ ಪೂರ್ತಿ ಶ್ರಮಿಸಿದರು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.<br /> <br /> ಪ್ರೊ.ಎಂ.ಎಸ್.ನಂಜುಂಡರಾವ್ ಸ್ಮಾರಕ ಚಾರಿಟಬಲ್ ಟ್ರಸ್ಟ್ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ತು ಪ್ರೊ.ಎಂ.ಎಸ್.ನಂಜುಂಡರಾವ್ ಅವರ 81ನೇ ಜನ್ಮದಿನದ ಅಂಗವಾಗಿ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಅವರ ಜೀವನ ಚರಿತ್ರೆ ಆಧಾರಿತ `ಅನನ್ಯ ಕಲಾಸಾರಥಿ - ನಂಜುಂಡರಾವ್' ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> `ನಂಜುಂಡರಾವ್ ಅವರದು ಕಲಾ ಕುಟುಂಬ. ಅವರ ತಂದೆಯವರೂ ಸಹ ಕಲಾವಿದರಾಗಿದ್ದರು. ಗಾಂಧಿವಾದಿಯಾಗಿದ್ದ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಕೊನೆಯವರೆಗೂ ಸರಳ ಜೀವನ ನಡೆಸಿ ಎಲ್ಲರಿಗೂ ಮಾದರಿಯಾಗಿದ್ದಾರೆ' ಎಂದು ಹೇಳಿದರು.<br /> <br /> ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ, ದೇವರಾಜ್ ಅರಸು, ರಾಮಕೃಷ್ಣ ಹೆಗಡೆ ಸೇರಿದಂತೆ ಹಲವರು ಪರಿಷತ್ತಿನ ಏಳಿಗೆಗೆ ನಂಜುಂಡರಾವ್ ಅವರಿಗೆ ಸಹಕಾರ ನೀಡಿದ್ದರು. ಅವರ ಶ್ರಮದಿಂದಾಗಿ ಪರಿಷತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ ಎಂದು ಅಭಿಪ್ರಾಯಪಟ್ಟರು.<br /> <br /> ವಿದ್ಯಾರ್ಥಿಗಳಿಗೆ, ಕಲಾಸಕ್ತರಿಗೆ ಶಿಕ್ಷಣ ನೀಡಲು ಪರಿಷತ್ತಿನ ವತಿಯಿಂದ ಸ್ಥಾಪನೆಯಾಗಲಿರುವ ಅಂತರರಾಷ್ಟ್ರೀಯ ಕಲಾ ಗ್ಯಾಲರಿಯು ಉತ್ತಮ ಕಾರ್ಯವಾಗಿದೆ. ಪರಿಷತ್ತಿನ ಏಳಿಗೆಗೆ ಅಗತ್ಯವಿರುವ ಸಹಕಾರವನ್ನು ನೀಡಲಾಗುವುದು ಅವರು ಭರವಸೆ ನೀಡಿದರು.<br /> <br /> ರಾಜ್ಯಸಭಾ ಸದಸ್ಯ ಎಸ್.ಎಂ.ಕೃಷ್ಣ ಮಾತನಾಡಿ, `ನಂಜುಂಡರಾವ್ ಅವರೊಂದಿಗೆ ನನಗೆ ಸುಮಾರು ಐದು ದಶಕಗಳಿಗೂ ಹೆಚ್ಚಿನ ಒಡನಾಟವಿತ್ತು. ತಮ್ಮ ಕುಟುಂಬಕ್ಕೂ ಹೆಚ್ಚಿನ ಪ್ರಾಶಸ್ತ್ಯ ನೀಡದೆ ಪರಿಷತ್ತಿನ ಸರ್ವತೋಮುಖ ಅಭಿವೃದ್ಧಿಗೆ ಅವರು ದುಡಿದಿದ್ದಾರೆ' ಎಂದು ಶ್ಲಾಘಿಸಿದರು.<br /> <br /> `ದೇವರಾಜ್ ಅರಸು ಸಚಿವ ಸಂಪುಟದಲ್ಲಿ ನಾನು ಕೈಗಾರಿಕಾ ಸಚಿವನಾಗಿದ್ದ ಸಂದರ್ಭದಲ್ಲಿ ಈಗ ಪರಿಷತ್ತು ಇರುವ ಜಾಗವನ್ನು ಸರ್ಕಾರಿ ಅಧಿಕಾರಿಗಳ ವಾಹನ ಚಾಲಕರಿಗೆ ಸಮುಚ್ಚಯ ನಿರ್ಮಾಣ ಮಾಡಲು ನೀಡುವ ಪ್ರಸ್ತಾವನೆ ಕ್ಯಾಬಿನೆಟ್ನಲ್ಲಿ ಮಂಡನೆಯಾಗುವುದರಲ್ಲಿತ್ತು. ಆಗ ನನ್ನ ಬಳಿ ಬಂದ ನಂಜುಂಡರಾವ್ ಆ ಜಾಗ ಕೈತಪ್ಪಿದರೆ ಹೇಗೆ ಪರಿಷತ್ತಿನ ಏಳಿಗೆಗೆ ಮಾರಕವಾಗಲಿದೆ ಎಂಬುದನ್ನು ವಿವರಿಸಿದರು. ನಂತರ ಇದನ್ನು ಅರಸು ಅವರ ಗಮನಕ್ಕೆ ತರಲಾಯಿತು. ಲೋಕೋಪಯೋಗಿ ಸಚಿವರಾಗಿದ್ದ ರಂಗನಾಥ್ ಅವರ ಸಹಕಾರದಿಂದ ಆ ಜಾಗವನ್ನು ಪರಿಷತ್ತಿಗೆ ನೀಡಲಾಯಿತು. ಇದು ನಂಜುಂಡರಾವ್ ಅವರು ಪರಿಷತ್ತಿನ ಬಗೆಗೆ ಹೊಂದಿದ್ದ ಕಾಳಜಿಗೆ ಸಾಕ್ಷಿ' ಎಂದು ವಿವರಿಸಿದರು.<br /> <br /> <strong>ಕಲಾವಿದರಿಗೆ ಪಾಠ</strong>: ಕೃತಿಯ ಪ್ರಧಾನ ಸಂಪಾದಕಿ ನಾಗಲಕ್ಷ್ಮಿ ಮಾತನಾಡಿ, `ಕಲೆ, ಪರಿಷತ್ತಿನ ಏಳಿಗೆಗೆ ಅವರಿಗಿದ್ದ ಬದ್ಧತೆ ಇಂದಿನ ಯುವ ಕಲಾವಿದರಿಗೆ ಪಾಠವಿದ್ದಂತೆ. ಅವರ ಶಿಷ್ಯರು, ಬಂಧುಗಳು, ಒಡನಾಡಿಗಳು, ಸಹೋದ್ಯೋಗಿಗಳು ಸೇರಿದಂತೆ ಸುಮಾರು 60ಕ್ಕೂ ಅಧಿಕ ಮಂದಿಯನ್ನು ಸಂದರ್ಶಿಸಿ ಕೃತಿಯನ್ನು ಸಂಪಾದಿಸಲಾಗಿದೆ' ಎಂದು ಹೇಳಿದರು.<br /> <br /> ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಎಂ.ಎಸ್. ಲಕ್ಷ್ಮೀಶ, ಕಾರ್ಯದರ್ಶಿ ಎಸ್.ಎನ್.ರವಿಶಂಕರ್, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ.ಡಿ.ಕೆ.ಚೌಟ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>