<p>ಕುಷ್ಟಗಿ: ತಾಲ್ಲೂಕಿನ ಕೆ.ಹೊಸೂರು ಗ್ರಾಮದ ರೈತ ಶೇಖರಪ್ಪ ತೆಮ್ಮಿನಾಳ ಬಿ.ಟಿ ತಳಿ ಹತ್ತಿ ಬೆಳೆದು ಸಾಕಷ್ಟು ಹಾನಿಗೆ ಒಳಗಾಗಿದ್ದಾರೆ.<br /> <br /> ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ 8 ಎಕರೆಯಲ್ಲಿ ಈ ಹತ್ತಿ ನಾಟಿ ಮಾಡಿದ್ದು 6 ತಿಂಗಳು ಕಳೆದರೂ ಹತ್ತಿ ಗಿಡಗಳು ಕಾಯಿಕಟ್ಟಿಲ್ಲ. ಬಿತ್ತನೆ ಬೀಜ, ಗೊಬ್ಬರ ಇತರೆ ಎಲ್ಲ ಸೇರಿದರೆ ಖರ್ಚು ₨ 1 ಲಕ್ಷ ದಾಟುತ್ತದೆ. ಅಕ್ಕಪಕ್ಕದಲ್ಲಿ ಇತರೆ ತಳಿ ಹತ್ತಿ ಬೆಳೆದಿರುವ ರೈತರು ಪ್ರಾರಂಭದಲ್ಲೆೇ ಎಕರೆಗೆ ಕನಿಷ್ಠ 3–4 ಕ್ವಿಂಟಲ್ ಹತ್ತಿ ಬಿಡಿಸಿದ್ದಾರೆ. ಆದರೆ ಶೇಖರಪ್ಪ ಅವರ ಹೊಲದಲ್ಲಿ ಮಾತ್ರ ಒಂದು ಕೇಜಿಯಷ್ಟಾದರೂ ಹತ್ತಿ ಸಿಕ್ಕಿಲ್ಲ.<br /> <br /> ಮುದೇನೂರಿನ ವ್ಯಾಪಾರಿ ಬಳಿ ಮಹಿಕೋ ಕಂಪೆನಿಯ ಎಂಆರ್ಸಿ–735 ಬೋಲಗಾರ್ಡ್ ಬಿತ್ತನೆ ಬೀಜವನ್ನು ಖರೀದಿಸಿದ್ದಾರೆ. ಕಂಪೆನಿ ತಜ್ಞರು, ಕೃಷಿ ಇಲಾಖೆ ವಿಜ್ಞಾನಿಗಳ ಮಾರ್ಗದರ್ಶನದಲ್ಲಿಯೇ ಗೊಬ್ಬರ, ಔಷಧ, ಕ್ರಿಮಿನಾಶಕ ನಿರ್ವಹಣೆ ಮಾಡಿದ್ದಾರೆ.<br /> <br /> ‘ಅಧಿಕ ಲಾಭಾ ಆಕೈತೆಂತ ಆಸೆ ಮಾಡೀದ್ವಿ ಆದ್ರ ಬೆಳಿ ನೋಡಿ ಹೊಟ್ಟಿ ತುಂಬಿಕೊಳ್ಳಬೇಕ್ರಿ, ₨1 ಬರಲಿಲ್ಲ, ಬಿಳಿ ಜ್ವಾಳಾ ಬಿತ್ತಿದ್ರ ನೂರು ಚೀಲ ಆಕಿದ್ವು, ಹ್ವಾದವರ್ಷ ಬರಗಾಲಂದ್ರೂ 80 ಕ್ವಿಂಟಲ್ ಜ್ವಾಳ ಬೆಳದಿದ್ವಿ. ಹತ್ತಿಗೆ ಮಾಡಿದ ಸಾಲದ ಬಡ್ಡೀನೂ ಮೈಮ್ಯಾಲೆ ಬರತೈತ್ರಿ’ ಎಂದೆ ರೈತ ಕಳಕಪ್ಪ ತೆಮ್ಮಿನಾಳ, ಸಂಗಪ್ಪ ತೆಮ್ಮಿನಾಳ ನೋವು ತೋಡಿಕೊಂಡರು.<br /> <br /> ‘ರೈತರು ತಡವಾಗಿ ಹೇಳಿದ್ದಾರೆ. ಆದರೂ ಅವರ ದೂರನ್ನು ನೋಂದಣಿ ಮಾಡಿಕೊಂಡು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಜ್ಞರನ್ನು ಪರಿಶೀಲನೆಗೆ ಕಳುಹಿಸುತ್ತೇವೆ’ ಎಂದು ಬಳ್ಳಾರಿ ವಲಯದ ಮಹಿಕೊ ಕಂಪೆನಿಯ ಅಧಿಕಾರಿ ದಿವಾಕರ ಹೇಳುತ್ತಾರೆ.<br /> <br /> ‘ಅಧಿಕೃತ ಮಾಹಿತಿ ನೀಡಿದರೆ ವಿಜ್ಞಾನಿಗಳು ಮತ್ತು ಸಂಬಂಧಿಸಿದ ಕಂಪೆನಿಯ ತಜ್ಞರನ್ನು ಹೊಲಕ್ಕೆ ಕಳುಹಿಸಿ ಮಾಹಿತಿ ತರಿಸಿಕೊಳ್ಳುತ್ತೇವೆ’ ಎಂದು ಕೊಪ್ಪಳ ಕೃಷಿ ಇಲಾಖೆ ಜಂಟಿ ನಿರ್ದೇಶಕ ಪದ್ಮನಯನ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಷ್ಟಗಿ: ತಾಲ್ಲೂಕಿನ ಕೆ.ಹೊಸೂರು ಗ್ರಾಮದ ರೈತ ಶೇಖರಪ್ಪ ತೆಮ್ಮಿನಾಳ ಬಿ.ಟಿ ತಳಿ ಹತ್ತಿ ಬೆಳೆದು ಸಾಕಷ್ಟು ಹಾನಿಗೆ ಒಳಗಾಗಿದ್ದಾರೆ.<br /> <br /> ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ 8 ಎಕರೆಯಲ್ಲಿ ಈ ಹತ್ತಿ ನಾಟಿ ಮಾಡಿದ್ದು 6 ತಿಂಗಳು ಕಳೆದರೂ ಹತ್ತಿ ಗಿಡಗಳು ಕಾಯಿಕಟ್ಟಿಲ್ಲ. ಬಿತ್ತನೆ ಬೀಜ, ಗೊಬ್ಬರ ಇತರೆ ಎಲ್ಲ ಸೇರಿದರೆ ಖರ್ಚು ₨ 1 ಲಕ್ಷ ದಾಟುತ್ತದೆ. ಅಕ್ಕಪಕ್ಕದಲ್ಲಿ ಇತರೆ ತಳಿ ಹತ್ತಿ ಬೆಳೆದಿರುವ ರೈತರು ಪ್ರಾರಂಭದಲ್ಲೆೇ ಎಕರೆಗೆ ಕನಿಷ್ಠ 3–4 ಕ್ವಿಂಟಲ್ ಹತ್ತಿ ಬಿಡಿಸಿದ್ದಾರೆ. ಆದರೆ ಶೇಖರಪ್ಪ ಅವರ ಹೊಲದಲ್ಲಿ ಮಾತ್ರ ಒಂದು ಕೇಜಿಯಷ್ಟಾದರೂ ಹತ್ತಿ ಸಿಕ್ಕಿಲ್ಲ.<br /> <br /> ಮುದೇನೂರಿನ ವ್ಯಾಪಾರಿ ಬಳಿ ಮಹಿಕೋ ಕಂಪೆನಿಯ ಎಂಆರ್ಸಿ–735 ಬೋಲಗಾರ್ಡ್ ಬಿತ್ತನೆ ಬೀಜವನ್ನು ಖರೀದಿಸಿದ್ದಾರೆ. ಕಂಪೆನಿ ತಜ್ಞರು, ಕೃಷಿ ಇಲಾಖೆ ವಿಜ್ಞಾನಿಗಳ ಮಾರ್ಗದರ್ಶನದಲ್ಲಿಯೇ ಗೊಬ್ಬರ, ಔಷಧ, ಕ್ರಿಮಿನಾಶಕ ನಿರ್ವಹಣೆ ಮಾಡಿದ್ದಾರೆ.<br /> <br /> ‘ಅಧಿಕ ಲಾಭಾ ಆಕೈತೆಂತ ಆಸೆ ಮಾಡೀದ್ವಿ ಆದ್ರ ಬೆಳಿ ನೋಡಿ ಹೊಟ್ಟಿ ತುಂಬಿಕೊಳ್ಳಬೇಕ್ರಿ, ₨1 ಬರಲಿಲ್ಲ, ಬಿಳಿ ಜ್ವಾಳಾ ಬಿತ್ತಿದ್ರ ನೂರು ಚೀಲ ಆಕಿದ್ವು, ಹ್ವಾದವರ್ಷ ಬರಗಾಲಂದ್ರೂ 80 ಕ್ವಿಂಟಲ್ ಜ್ವಾಳ ಬೆಳದಿದ್ವಿ. ಹತ್ತಿಗೆ ಮಾಡಿದ ಸಾಲದ ಬಡ್ಡೀನೂ ಮೈಮ್ಯಾಲೆ ಬರತೈತ್ರಿ’ ಎಂದೆ ರೈತ ಕಳಕಪ್ಪ ತೆಮ್ಮಿನಾಳ, ಸಂಗಪ್ಪ ತೆಮ್ಮಿನಾಳ ನೋವು ತೋಡಿಕೊಂಡರು.<br /> <br /> ‘ರೈತರು ತಡವಾಗಿ ಹೇಳಿದ್ದಾರೆ. ಆದರೂ ಅವರ ದೂರನ್ನು ನೋಂದಣಿ ಮಾಡಿಕೊಂಡು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಜ್ಞರನ್ನು ಪರಿಶೀಲನೆಗೆ ಕಳುಹಿಸುತ್ತೇವೆ’ ಎಂದು ಬಳ್ಳಾರಿ ವಲಯದ ಮಹಿಕೊ ಕಂಪೆನಿಯ ಅಧಿಕಾರಿ ದಿವಾಕರ ಹೇಳುತ್ತಾರೆ.<br /> <br /> ‘ಅಧಿಕೃತ ಮಾಹಿತಿ ನೀಡಿದರೆ ವಿಜ್ಞಾನಿಗಳು ಮತ್ತು ಸಂಬಂಧಿಸಿದ ಕಂಪೆನಿಯ ತಜ್ಞರನ್ನು ಹೊಲಕ್ಕೆ ಕಳುಹಿಸಿ ಮಾಹಿತಿ ತರಿಸಿಕೊಳ್ಳುತ್ತೇವೆ’ ಎಂದು ಕೊಪ್ಪಳ ಕೃಷಿ ಇಲಾಖೆ ಜಂಟಿ ನಿರ್ದೇಶಕ ಪದ್ಮನಯನ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>