<p>ರಾಯಪುರ(ಪಿಟಿಐ/ಐಎಎನ್ಎಸ್): ‘ಛತ್ತೀಸಗಡದ ಸುಕ್ಮಾ ಜಿಲ್ಲೆಯ ಗೊಂಡಾರಣ್ಯದಲ್ಲಿ 15 ಯೋಧರನ್ನು ಬಲಿತೆಗೆದುಕೊಂಡ ನಕ್ಸಲೀಯರ ವಿರುದ್ಧ ಸೇಡು ತೀರಿಸಿಕೊಳ್ಳದೇ ಬಿಡುವುದಿಲ್ಲ’ ಎಂದು ಮತ್ತೊಮ್ಮೆ ಶಪಥ ಮಾಡಿರುವ ಕೇಂದ್ರ ಗೃಹ ಸಚಿವ ಸುಶೀಲ್್ ಕುಮಾರ್್ ಶಿಂಧೆ, ರಾಷ್ಟ್ರೀಯ ತನಿಖಾ ತಂಡವು (ಎನ್ಐಎ) ಈ ದಾಳಿಯ ತನಿಖೆ ಮಾಡಲಿದೆ ಎಂದಿದ್ದಾರೆ.<br /> <br /> ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಜಗದಾಳ್ಪುರದ ಪೊಲೀಸ್್ ಪರೇಡ್್ ಮೈದಾನದಲ್ಲಿ ಅಂತಿಮ ನಮನ ಸಲ್ಲಿಸಿದ ಅವರು, ‘ಲೋಕಸಭೆ ಚುನಾವಣೆಗೆ ಅಡ್ಡಿಯುಂಟುಮಾಡಲು ನಕ್ಸಲರು ಈ ಕೃತ್ಯ ಎಸಗಿದ್ದಾರೆ. ಇವರ ಪತ್ತೆಗೆ ಕೇಂದ್ರ ಹಾಗೂ ರಾಜ್ಯದ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಲಿವೆ. ದಾಳಿಕೋರರು ಎಲ್ಲಿದ್ದಾರೆ ಎನ್ನುವುದು ನಮಗೆ ಗೊತ್ತು’ ಎಂದರು.<br /> <br /> ‘2013ರ ಮೇ ತಿಂಗಳಿನಲ್ಲಿ ಛತ್ತೀಸಗಡದಲ್ಲಿ ನಕ್ಸಲರು ಕಾಂಗ್ರೆಸ್ ಮುಖಂಡರನ್ನು ಹತ್ಯೆ ಮಾಡಿದ ಪ್ರಕರಣವನ್ನು ಎನ್ಐಎ ತನಿಖೆಗೆ ಒಳಪಡಿಸಿದ್ದೆವು. ಈಗ ಈ ಪ್ರಕರಣವನ್ನೂ ಎನ್ಐಎ ತನಿಖೆ ಮಾಡಲಿದೆ’ ಎಂದರು.<br /> <br /> ‘ನಕ್ಸಲ್್ ಚಳವಳಿ ದುರ್ಬಲವಾಗುತ್ತಿದೆ. ಅವರಲ್ಲಿ ಅಭದ್ರತೆ ಕಾಡುತ್ತಿದೆ. ಹಾಗಾಗಿ ಇಂಥ ದಾಳಿ ನಡೆಯುತ್ತಿದೆ. ವಿಧಾನಸಭೆ ಚುನಾವಣೆ ವೇಳೆ ಕೂಡ ದಾಳಿ ನಡೆಸಿದ್ದರು. ಆದರೆ ಅದು ವಿಫಲವಾಗಿತ್ತು’ ಎಂದು ಶಿಂಧೆ ಸುದ್ದಿಗಾರರಿಗೆ ತಿಳಿಸಿದರು.<br /> <br /> ಗುಪ್ತಚರ ಮಾಹಿತಿ ಇರಲಿಲ್ಲ: ಸುಕ್ಮಾ ದಲ್ಲಿ ನಕ್ಸಲ್್ ದಾಳಿ ನಡೆಯುವ ಬಗ್ಗೆ ಗುಪ್ತಚರ ಮಾಹಿತಿ ಬಂದಿತ್ತು ಎನ್ನುವ ವರದಿಗಳನ್ನು ಶಿಂಧೆ ಅಲ್ಲಗಳೆದರು.<br /> ‘ಎರಡು–ಮೂರು ಬಾರಿ ಗುಪ್ತಚರ ಮಾಹಿತಿ ಬಂದಿತ್ತು. ಆದರೆ ಅವು ನಿರ್ದಿಷ್ಟ ಮಾಹಿತಿಗಳಾಗಿರಲಿಲ್ಲ’ ಎಂದರು.<br /> <br /> ಲೋಕಸಭೆ ಚುನಾವಣೆ ವೇಳೆ ಭದ್ರತಾ ಪಡೆ ನಿಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಒಡಿಶಾ, ಜಾರ್ಖಂಡ್, ಮಹಾರಾಷ್ಟ್ರ, ಆಂಧ್ರಪ್ರದೇಶ ಮಾತ್ರ ವಲ್ಲ, ಕರ್ನಾಟಕ,ತಮಿಳುನಾಡು ರಾಜ್ಯಗಳಿಗೂ ಭದ್ರತಾ ಪಡೆ ನಿಯೋಜಿಸಬೇಕಾಗುತ್ತದೆ. ಅಗತ್ಯವನ್ನು ಮನಗಂಡು ಭದ್ರತೆ ಒದಗಿಸಬೇಕಾಗುತ್ತದೆ’ ಎಂದರು.</p>.<p><strong>12,183 ಬಲಿ</strong><br /> ನವದೆಹಲಿ (ಪಿಟಿಐ): ದೇಶದ 9 ರಾಜ್ಯಗಳಲ್ಲಿ ಕಳೆದ 20 ವರ್ಷಗಳಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ 12,183 ಮಂದಿ ನಕ್ಸಲೀಯರ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ‘ಮೃತರದಲ್ಲಿ 9,471 ನಾಗಕರಿ ಕರು, 2,712 ಕೇಂದ್ರ ಹಾಗೂ ರಾಜ್ಯದ ಭದ್ರತಾ ಸಿಬ್ಬಂದಿ ಇದ್ದಾರೆ’ ಎಂದು ಗೃಹ ಸಚಿವಾಲಯ ಮಾಹಿತು ನೀಡಿದೆ.<br /> <br /> ನಕ್ಸಲ್್ ಅಟ್ಟಹಾಸಕ್ಕೆ ಬಲಿಯಾದವರಲ್ಲಿ ಹೆಚ್ಚಿನವರು ಆಂಧ್ರಪ್ರದೇಶ, ಒಡಿಶಾ, ಉತ್ತರಪ್ರದೇಶ ಹಾಗೂ ಪಶ್ಚಿಮಬಂಗಾಳ ರಾಜ್ಯದವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಪುರ(ಪಿಟಿಐ/ಐಎಎನ್ಎಸ್): ‘ಛತ್ತೀಸಗಡದ ಸುಕ್ಮಾ ಜಿಲ್ಲೆಯ ಗೊಂಡಾರಣ್ಯದಲ್ಲಿ 15 ಯೋಧರನ್ನು ಬಲಿತೆಗೆದುಕೊಂಡ ನಕ್ಸಲೀಯರ ವಿರುದ್ಧ ಸೇಡು ತೀರಿಸಿಕೊಳ್ಳದೇ ಬಿಡುವುದಿಲ್ಲ’ ಎಂದು ಮತ್ತೊಮ್ಮೆ ಶಪಥ ಮಾಡಿರುವ ಕೇಂದ್ರ ಗೃಹ ಸಚಿವ ಸುಶೀಲ್್ ಕುಮಾರ್್ ಶಿಂಧೆ, ರಾಷ್ಟ್ರೀಯ ತನಿಖಾ ತಂಡವು (ಎನ್ಐಎ) ಈ ದಾಳಿಯ ತನಿಖೆ ಮಾಡಲಿದೆ ಎಂದಿದ್ದಾರೆ.<br /> <br /> ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಜಗದಾಳ್ಪುರದ ಪೊಲೀಸ್್ ಪರೇಡ್್ ಮೈದಾನದಲ್ಲಿ ಅಂತಿಮ ನಮನ ಸಲ್ಲಿಸಿದ ಅವರು, ‘ಲೋಕಸಭೆ ಚುನಾವಣೆಗೆ ಅಡ್ಡಿಯುಂಟುಮಾಡಲು ನಕ್ಸಲರು ಈ ಕೃತ್ಯ ಎಸಗಿದ್ದಾರೆ. ಇವರ ಪತ್ತೆಗೆ ಕೇಂದ್ರ ಹಾಗೂ ರಾಜ್ಯದ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಲಿವೆ. ದಾಳಿಕೋರರು ಎಲ್ಲಿದ್ದಾರೆ ಎನ್ನುವುದು ನಮಗೆ ಗೊತ್ತು’ ಎಂದರು.<br /> <br /> ‘2013ರ ಮೇ ತಿಂಗಳಿನಲ್ಲಿ ಛತ್ತೀಸಗಡದಲ್ಲಿ ನಕ್ಸಲರು ಕಾಂಗ್ರೆಸ್ ಮುಖಂಡರನ್ನು ಹತ್ಯೆ ಮಾಡಿದ ಪ್ರಕರಣವನ್ನು ಎನ್ಐಎ ತನಿಖೆಗೆ ಒಳಪಡಿಸಿದ್ದೆವು. ಈಗ ಈ ಪ್ರಕರಣವನ್ನೂ ಎನ್ಐಎ ತನಿಖೆ ಮಾಡಲಿದೆ’ ಎಂದರು.<br /> <br /> ‘ನಕ್ಸಲ್್ ಚಳವಳಿ ದುರ್ಬಲವಾಗುತ್ತಿದೆ. ಅವರಲ್ಲಿ ಅಭದ್ರತೆ ಕಾಡುತ್ತಿದೆ. ಹಾಗಾಗಿ ಇಂಥ ದಾಳಿ ನಡೆಯುತ್ತಿದೆ. ವಿಧಾನಸಭೆ ಚುನಾವಣೆ ವೇಳೆ ಕೂಡ ದಾಳಿ ನಡೆಸಿದ್ದರು. ಆದರೆ ಅದು ವಿಫಲವಾಗಿತ್ತು’ ಎಂದು ಶಿಂಧೆ ಸುದ್ದಿಗಾರರಿಗೆ ತಿಳಿಸಿದರು.<br /> <br /> ಗುಪ್ತಚರ ಮಾಹಿತಿ ಇರಲಿಲ್ಲ: ಸುಕ್ಮಾ ದಲ್ಲಿ ನಕ್ಸಲ್್ ದಾಳಿ ನಡೆಯುವ ಬಗ್ಗೆ ಗುಪ್ತಚರ ಮಾಹಿತಿ ಬಂದಿತ್ತು ಎನ್ನುವ ವರದಿಗಳನ್ನು ಶಿಂಧೆ ಅಲ್ಲಗಳೆದರು.<br /> ‘ಎರಡು–ಮೂರು ಬಾರಿ ಗುಪ್ತಚರ ಮಾಹಿತಿ ಬಂದಿತ್ತು. ಆದರೆ ಅವು ನಿರ್ದಿಷ್ಟ ಮಾಹಿತಿಗಳಾಗಿರಲಿಲ್ಲ’ ಎಂದರು.<br /> <br /> ಲೋಕಸಭೆ ಚುನಾವಣೆ ವೇಳೆ ಭದ್ರತಾ ಪಡೆ ನಿಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಒಡಿಶಾ, ಜಾರ್ಖಂಡ್, ಮಹಾರಾಷ್ಟ್ರ, ಆಂಧ್ರಪ್ರದೇಶ ಮಾತ್ರ ವಲ್ಲ, ಕರ್ನಾಟಕ,ತಮಿಳುನಾಡು ರಾಜ್ಯಗಳಿಗೂ ಭದ್ರತಾ ಪಡೆ ನಿಯೋಜಿಸಬೇಕಾಗುತ್ತದೆ. ಅಗತ್ಯವನ್ನು ಮನಗಂಡು ಭದ್ರತೆ ಒದಗಿಸಬೇಕಾಗುತ್ತದೆ’ ಎಂದರು.</p>.<p><strong>12,183 ಬಲಿ</strong><br /> ನವದೆಹಲಿ (ಪಿಟಿಐ): ದೇಶದ 9 ರಾಜ್ಯಗಳಲ್ಲಿ ಕಳೆದ 20 ವರ್ಷಗಳಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ 12,183 ಮಂದಿ ನಕ್ಸಲೀಯರ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ‘ಮೃತರದಲ್ಲಿ 9,471 ನಾಗಕರಿ ಕರು, 2,712 ಕೇಂದ್ರ ಹಾಗೂ ರಾಜ್ಯದ ಭದ್ರತಾ ಸಿಬ್ಬಂದಿ ಇದ್ದಾರೆ’ ಎಂದು ಗೃಹ ಸಚಿವಾಲಯ ಮಾಹಿತು ನೀಡಿದೆ.<br /> <br /> ನಕ್ಸಲ್್ ಅಟ್ಟಹಾಸಕ್ಕೆ ಬಲಿಯಾದವರಲ್ಲಿ ಹೆಚ್ಚಿನವರು ಆಂಧ್ರಪ್ರದೇಶ, ಒಡಿಶಾ, ಉತ್ತರಪ್ರದೇಶ ಹಾಗೂ ಪಶ್ಚಿಮಬಂಗಾಳ ರಾಜ್ಯದವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>