<p>ಬೆಂಗಳೂರು: ಮುಂದಿನ ಹತ್ತು ವರ್ಷಗಳಲ್ಲಿ ದೇಶದ ನಗರ ಪ್ರದೇಶಗಳಲ್ಲಿ ವಾಸಿಸುವ ಜನರ ಸಂಖ್ಯೆ 50 ಕೋಟಿಗೆ ತಲುಪುವ ಅಂದಾಜು ಇದೆ. ಅಷ್ಟೊಂದು ಜನರಿಗೆ ಮೂಲಸೌಕರ್ಯಗಳನ್ನು ಒದಗಿಸುವುದು ಸವಾಲಿನ ಕೆಲಸ’ ಎಂದು ನಗರಾಭಿವೃದ್ಧಿ ಸಚಿವ ಎಸ್. ಸುರೇಶ್ಕುಮಾರ್ ಹೇಳಿದರು.<br /> <br /> ನಗರದಲ್ಲಿ ನಡೆದ ಉತ್ತಮ ಪದ್ಧತಿಗಳ ವಿಚಾರಗೋಷ್ಠಿ ಹಾಗೂ ಅತ್ಯುತ್ತಮ ನಗರ ಸ್ಥಳೀಯ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಅವರು ಮಾತನಾಡಿದರು. <br /> <br /> ‘ಬೃಹತ್ ಪ್ರಮಾಣದ ಜನರಿಗೆ ಮೂಲಸೌಕರ್ಯಗಳನ್ನು ಒದಗಿಸಲು ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಯೋಚಿಸಬೇಕಾಗಿದೆ’ ಎಂದು ಅವರು ತಿಳಿಸಿದರು. <br /> <br /> ಬಹುಮಾನ: ಸ್ಥಳೀಯ ನಗರ, ಪಟ್ಟಣ ಸಂಸ್ಥೆಗಳಲ್ಲಿ ಆರೋಗ್ಯಕರ ಸ್ಪರ್ಧೆ ಉಂಟು ಮಾಡಲು ಅತ್ಯುತ್ತಮ ನಗರ, ಸ್ಥಳೀಯ ಸಂಸ್ಥೆಗಳಿಗೆ ಬಹುಮಾನ ನೀಡುವ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಸಚಿವರು ಹೇಳಿದರು. <br /> <br /> ‘ಮುಂದಿನ ವರ್ಷವನ್ನು ‘ನಗರಾಭಿವೃದ್ಧಿ ವರ್ಷ’ ಎಂದು ಆಚರಿಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಮೂಲಸೌಕರ್ಯ ಕಲ್ಪಿಸುವ ಕುರಿತು ಹೊಸ ನೀತಿಯನ್ನು ಅಳವಡಿಸಲಾಗುವುದು’ ಎಂದು ಅವರು ತಿಳಿಸಿದರು. <br /> <br /> ಬಂದರು ಖಾತೆ ಸಚಿವ ಕೃಷ್ಣಪಾಲೇಮಾರ್, ಮುಖ್ಯಮಂತ್ರಿಗಳ ಸಲಹೆಗಾರ (ನಗರ ವ್ಯವಹಾರ) ಡಾ.ಎ. ರವೀಂದ್ರ ಹಾಗೂ ಇತರರು ಉಪಸ್ಥಿತರಿದ್ದರು. <br /> <br /> <strong>ಬಹುಮಾನ ಪುರಸ್ಕೃತ ಸಂಸ್ಥೆಗಳು</strong>: <br /> ಮಹಾನಗರ ಪಾಲಿಕೆ ವಿಭಾಗ: ಮೈಸೂರು (ರೂ 10 ಲಕ್ಷ), ಮಂಗಳೂರು (ರೂ 3 ಲಕ್ಷ), ಬೆಳಗಾವಿ (ರೂ 2 ಲಕ್ಷ).<br /> ನಗರ ಸಭೆ ವಿಭಾಗ: ಉಡುಪಿ (ರೂ 5 ಲಕ್ಷ), ಗೋಕಾಕ (ರೂ 2 ಲಕ್ಷ), ಶಿವಮೊಗ್ಗ (ರೂ 1 ಲಕ್ಷ).<br /> ಪಟ್ಟಣ ಪುರಸಭೆ/ಪಟ್ಟಣ ಪಂಚಾಯಿತಿ ವಿಭಾಗ: ಕುಂದಾಪುರ (ರೂ 3 ಲಕ್ಷ), ಕೊಪ್ಪ (ರೂ 75 ಸಾವಿರ), ಕಾರ್ಕಳ (ರೂ 25 ಸಾವಿರ).<br /> <br /> ಇತರೆ ಬಹುಮಾನಗಳು; ನಗರಸಭೆಯ ಕಾರ್ಯಚಟುವಟಿಕೆಗಳ ಗಣಕೀಕರಣಕ್ಕಾಗಿ ಪೌರಾಡಳಿತ ನಿರ್ದೇಶನಾಲಯದ ಮುನಿಸಿಪಲ್ ರಿಫಾರ್ಮಸ್ ಸೆಲ್, ರೆವಿನ್ಯೂ ಬಿಲ್ಲಿಂಗ್ ವ್ಯವಸ್ಥೆ ಕುಂದಾಪುರ (ರೂ 3 ಲಕ್ಷ), ಕೊಪ್ಪ (ರೂ 75 ಸಾವಿರ), ಕಾರ್ಕಳ (ರೂ 25 ಸಾವಿರ).<br /> <br /> ಇತರೆ ಬಹುಮಾನಗಳು: ನಗರಸಭೆಯ ಕಾರ್ಯಚಟುವಟಿಕೆಗಳ ಗಣಕೀಕರಣಕ್ಕಾಗಿ ಪೌರಾಡಳಿತ ನಿರ್ದೇಶನಾಲಯದ ಸ್ಥಳಿಯಾಡಳಿತ ಸುಧಾರಣಾ ಘಟಕ, ಕಂದಾಯ ಬಿಲ್ಲಿಂಗ್ ವ್ಯವಸ್ಥೆಗೆ ಕರ್ನಾಟಕ ರಾಜ್ಯ ಪೊಲೀಸ್ ಗೃಹನಿರ್ಮಾಣ ನಿಗಮಕ್ಕೆ ಬಹುಮಾನ ದೊರೆತಿದೆ.<br /> <br /> ಸಮುದಾಯ ಪಾಲ್ಗೊಳ್ಳುವಿಕೆ ನಿಧಿ (ಸಿಪಿಎಫ್) ಉಪಯೋಗಿಸಿದ್ದಕ್ಕಾಗಿ ಮೈಸೂರು ಮಹಾನಗರ ಪಾಲಿಕೆಗೆ, ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಿದ್ದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ, ಕಟ್ಟಡ ನಿರ್ಮಾಣ ನಕ್ಷೆ ಅನುಮೋದನೆ ನಿರ್ವಹಣೆ ವ್ಯವಸ್ಥೆಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ, ನೀರಿನ ದರ ಪದ್ಧತಿ ಕುರಿತು ಅಳವಡಿಸಲಾದ ಕ್ರಮಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ನಗರ ಜಲಪೂರೈಕೆ ಮತ್ತು ಒಳಚರಂಡಿ ಮಂಡಳಿಗೆ ಬಹುಮಾನ ನೀಡಲಾಗಿದೆ. <br /> <br /> ಮಳೆ ನೀರು ಸಂಗ್ರಹಕ್ಕಾಗಿ ಚಿತ್ರದುರ್ಗ ನಗರಸಭೆಗೆ, ವರಮಾನವಿಲ್ಲದ ನೀರನ್ನು ಉಳಿಸಲು ಕ್ರಮಕೈಗೊಂಡಿದ್ದಕ್ಕಾಗಿ ಕುಂದಾಪುರ ನಗರಸಭೆಗೆ, ಘನತ್ಯಾಜ್ಯ ನಿರ್ವಹಿಸಿದ್ದಕ್ಕಾಗಿ ಕುಂದಾಪುರ ನಗರಸಭೆಗೆ, ಕಾರವಾರ ನಗರಸಭೆಗೆ, ಸಂಕೇಶ್ವರ ಪುರಸಭೆಗೆ, ಪರಿಶಿಷ್ಟರಿಗೆ ಶೌಚಾಲಯ ಕಟ್ಟಿಸಿಕೊಟ್ಟಿದ್ದಕ್ಕಾಗಿ ಹಿರೇಕೆರೂರು ಪುರಸಭೆಗೆ ಬಹುಮಾನ ನೀಡಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಮುಂದಿನ ಹತ್ತು ವರ್ಷಗಳಲ್ಲಿ ದೇಶದ ನಗರ ಪ್ರದೇಶಗಳಲ್ಲಿ ವಾಸಿಸುವ ಜನರ ಸಂಖ್ಯೆ 50 ಕೋಟಿಗೆ ತಲುಪುವ ಅಂದಾಜು ಇದೆ. ಅಷ್ಟೊಂದು ಜನರಿಗೆ ಮೂಲಸೌಕರ್ಯಗಳನ್ನು ಒದಗಿಸುವುದು ಸವಾಲಿನ ಕೆಲಸ’ ಎಂದು ನಗರಾಭಿವೃದ್ಧಿ ಸಚಿವ ಎಸ್. ಸುರೇಶ್ಕುಮಾರ್ ಹೇಳಿದರು.<br /> <br /> ನಗರದಲ್ಲಿ ನಡೆದ ಉತ್ತಮ ಪದ್ಧತಿಗಳ ವಿಚಾರಗೋಷ್ಠಿ ಹಾಗೂ ಅತ್ಯುತ್ತಮ ನಗರ ಸ್ಥಳೀಯ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಅವರು ಮಾತನಾಡಿದರು. <br /> <br /> ‘ಬೃಹತ್ ಪ್ರಮಾಣದ ಜನರಿಗೆ ಮೂಲಸೌಕರ್ಯಗಳನ್ನು ಒದಗಿಸಲು ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಯೋಚಿಸಬೇಕಾಗಿದೆ’ ಎಂದು ಅವರು ತಿಳಿಸಿದರು. <br /> <br /> ಬಹುಮಾನ: ಸ್ಥಳೀಯ ನಗರ, ಪಟ್ಟಣ ಸಂಸ್ಥೆಗಳಲ್ಲಿ ಆರೋಗ್ಯಕರ ಸ್ಪರ್ಧೆ ಉಂಟು ಮಾಡಲು ಅತ್ಯುತ್ತಮ ನಗರ, ಸ್ಥಳೀಯ ಸಂಸ್ಥೆಗಳಿಗೆ ಬಹುಮಾನ ನೀಡುವ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಸಚಿವರು ಹೇಳಿದರು. <br /> <br /> ‘ಮುಂದಿನ ವರ್ಷವನ್ನು ‘ನಗರಾಭಿವೃದ್ಧಿ ವರ್ಷ’ ಎಂದು ಆಚರಿಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಮೂಲಸೌಕರ್ಯ ಕಲ್ಪಿಸುವ ಕುರಿತು ಹೊಸ ನೀತಿಯನ್ನು ಅಳವಡಿಸಲಾಗುವುದು’ ಎಂದು ಅವರು ತಿಳಿಸಿದರು. <br /> <br /> ಬಂದರು ಖಾತೆ ಸಚಿವ ಕೃಷ್ಣಪಾಲೇಮಾರ್, ಮುಖ್ಯಮಂತ್ರಿಗಳ ಸಲಹೆಗಾರ (ನಗರ ವ್ಯವಹಾರ) ಡಾ.ಎ. ರವೀಂದ್ರ ಹಾಗೂ ಇತರರು ಉಪಸ್ಥಿತರಿದ್ದರು. <br /> <br /> <strong>ಬಹುಮಾನ ಪುರಸ್ಕೃತ ಸಂಸ್ಥೆಗಳು</strong>: <br /> ಮಹಾನಗರ ಪಾಲಿಕೆ ವಿಭಾಗ: ಮೈಸೂರು (ರೂ 10 ಲಕ್ಷ), ಮಂಗಳೂರು (ರೂ 3 ಲಕ್ಷ), ಬೆಳಗಾವಿ (ರೂ 2 ಲಕ್ಷ).<br /> ನಗರ ಸಭೆ ವಿಭಾಗ: ಉಡುಪಿ (ರೂ 5 ಲಕ್ಷ), ಗೋಕಾಕ (ರೂ 2 ಲಕ್ಷ), ಶಿವಮೊಗ್ಗ (ರೂ 1 ಲಕ್ಷ).<br /> ಪಟ್ಟಣ ಪುರಸಭೆ/ಪಟ್ಟಣ ಪಂಚಾಯಿತಿ ವಿಭಾಗ: ಕುಂದಾಪುರ (ರೂ 3 ಲಕ್ಷ), ಕೊಪ್ಪ (ರೂ 75 ಸಾವಿರ), ಕಾರ್ಕಳ (ರೂ 25 ಸಾವಿರ).<br /> <br /> ಇತರೆ ಬಹುಮಾನಗಳು; ನಗರಸಭೆಯ ಕಾರ್ಯಚಟುವಟಿಕೆಗಳ ಗಣಕೀಕರಣಕ್ಕಾಗಿ ಪೌರಾಡಳಿತ ನಿರ್ದೇಶನಾಲಯದ ಮುನಿಸಿಪಲ್ ರಿಫಾರ್ಮಸ್ ಸೆಲ್, ರೆವಿನ್ಯೂ ಬಿಲ್ಲಿಂಗ್ ವ್ಯವಸ್ಥೆ ಕುಂದಾಪುರ (ರೂ 3 ಲಕ್ಷ), ಕೊಪ್ಪ (ರೂ 75 ಸಾವಿರ), ಕಾರ್ಕಳ (ರೂ 25 ಸಾವಿರ).<br /> <br /> ಇತರೆ ಬಹುಮಾನಗಳು: ನಗರಸಭೆಯ ಕಾರ್ಯಚಟುವಟಿಕೆಗಳ ಗಣಕೀಕರಣಕ್ಕಾಗಿ ಪೌರಾಡಳಿತ ನಿರ್ದೇಶನಾಲಯದ ಸ್ಥಳಿಯಾಡಳಿತ ಸುಧಾರಣಾ ಘಟಕ, ಕಂದಾಯ ಬಿಲ್ಲಿಂಗ್ ವ್ಯವಸ್ಥೆಗೆ ಕರ್ನಾಟಕ ರಾಜ್ಯ ಪೊಲೀಸ್ ಗೃಹನಿರ್ಮಾಣ ನಿಗಮಕ್ಕೆ ಬಹುಮಾನ ದೊರೆತಿದೆ.<br /> <br /> ಸಮುದಾಯ ಪಾಲ್ಗೊಳ್ಳುವಿಕೆ ನಿಧಿ (ಸಿಪಿಎಫ್) ಉಪಯೋಗಿಸಿದ್ದಕ್ಕಾಗಿ ಮೈಸೂರು ಮಹಾನಗರ ಪಾಲಿಕೆಗೆ, ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಿದ್ದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ, ಕಟ್ಟಡ ನಿರ್ಮಾಣ ನಕ್ಷೆ ಅನುಮೋದನೆ ನಿರ್ವಹಣೆ ವ್ಯವಸ್ಥೆಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ, ನೀರಿನ ದರ ಪದ್ಧತಿ ಕುರಿತು ಅಳವಡಿಸಲಾದ ಕ್ರಮಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ನಗರ ಜಲಪೂರೈಕೆ ಮತ್ತು ಒಳಚರಂಡಿ ಮಂಡಳಿಗೆ ಬಹುಮಾನ ನೀಡಲಾಗಿದೆ. <br /> <br /> ಮಳೆ ನೀರು ಸಂಗ್ರಹಕ್ಕಾಗಿ ಚಿತ್ರದುರ್ಗ ನಗರಸಭೆಗೆ, ವರಮಾನವಿಲ್ಲದ ನೀರನ್ನು ಉಳಿಸಲು ಕ್ರಮಕೈಗೊಂಡಿದ್ದಕ್ಕಾಗಿ ಕುಂದಾಪುರ ನಗರಸಭೆಗೆ, ಘನತ್ಯಾಜ್ಯ ನಿರ್ವಹಿಸಿದ್ದಕ್ಕಾಗಿ ಕುಂದಾಪುರ ನಗರಸಭೆಗೆ, ಕಾರವಾರ ನಗರಸಭೆಗೆ, ಸಂಕೇಶ್ವರ ಪುರಸಭೆಗೆ, ಪರಿಶಿಷ್ಟರಿಗೆ ಶೌಚಾಲಯ ಕಟ್ಟಿಸಿಕೊಟ್ಟಿದ್ದಕ್ಕಾಗಿ ಹಿರೇಕೆರೂರು ಪುರಸಭೆಗೆ ಬಹುಮಾನ ನೀಡಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>