<p><strong>ಬಾಗಲಕೋಟೆ: </strong>ರಕ್ತ ಉತ್ಪಾದಿಸುವ ಪದಾರ್ಥವಲ್ಲ, ಅದನ್ನು ಒಬ್ಬ ವ್ಯಕ್ತಿಯ ದೇಹದಿಂದ ಪಡೆದು ಇನ್ನೊಬ್ಬ ವ್ಯಕ್ತಿಗೆ ಕೊಡಲಾಗುತ್ತದೆ, ರಕ್ತ ಅತ್ಯಮೂಲ್ಯವಾದ ಜೀವದ್ರವ್ಯವಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಶಾಸಕ ವೀರಣ್ಣ ಚರಂತಿಮಠ ಹೇಳಿದರು.<br /> <br /> ನಗರದ ಹಾನಗಲ್ ಶ್ರಿ ಕುಮಾರೇಶ್ವರ ಆಸ್ಪತ್ರೆಯ ರಕ್ತನಿಧಿ ಭಂಡಾರದಲ್ಲಿ ನೂತನವಾಗಿ ಅಳವಡಿಸಲಾದ ರಕ್ತ ವಿಂಗಡಣಾ ಘಟಕವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ರೂ. 30 ಲಕ್ಷ ವೆಚ್ಚದಲ್ಲಿ `ರಕ್ತ ವಿಂಗಡಣಾ ಘಟಕ~ವನ್ನು ಸ್ಥಾಪಿಸಲಾಗಿದ್ದು, ಉತ್ತರ ಕರ್ನಾಟಕದಲ್ಲಿ ಸ್ಥಾಪನೆಯಾದ ಮೂರನೇ ಘಟಕವಾಗಿದೆ ಎಂದರು.<br /> <br /> ದಾನಿಗಳಿಂದ ಸಂಗ್ರಹಿಸಿದ ರಕ್ತದಲ್ಲಿನ ಕೆಂಪುರಕ್ತ ಕಣ, ಬಿಳಿ ರಕ್ತ ಕಣ ಮತ್ತು ಪ್ಲಾಸ್ಮಾ ಮತ್ತು ಪ್ಲೆಟ್ಲೆಟ್ಗಳನ್ನು `ರಕ್ತ ವಿಂಗಡಣಾ ಘಟಕ~ದಲ್ಲಿ ಬೇರ್ಪಡಿಸಿ ಯಾವ ವ್ಯಕ್ತಿಗೆ ರಕ್ತದ ಯಾವ ಭಾಗದ ಅವಶ್ಯಕತೆ ಇದೆ ಎಂದರಿತು ರಕ್ತ ಕೊಡಲಾಗುತ್ತದೆ, ಇದರಿಂದ ರಕ್ತ ಅನವಶ್ಯಕವಾಗಿ ಹಾಳಾಗುವುದನ್ನು ತಪ್ಪಿಸಬಹುದು ಎಂದು ಹೇಳಿದರು.<br /> <br /> ಈ ಮೊದಲು ದಾನಿಗಳಿಂದ ಸಂಗ್ರಹಿಸಿದ ರಕ್ತವನ್ನು ಯಾವುದೇ ರೀತಿಯ ವಿಂಗಡಣೆ ಮಾಡದೇ ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ಕೊಡಲಾಗುತ್ತಿತ್ತು, ಆದರೆ ಈಗ `ರಕ್ತ ವಿಂಗಡಣಾ ಘಟಕ~ದಿಂದ ರಕ್ತವನ್ನು ಮೂರು ಭಾಗವಾಗಿ ವಿಂಗಡಿಸಿ ಅವಶ್ಯವಿರುವ ಮೂರು ವ್ಯಕ್ತಿಗಳಿಗೆ ಕೊಟ್ಟು ಜೀವ ಉಳಿಸಬಹುದಾಗಿದೆ ಎಂದರು.<br /> <br /> <strong>ಸಿಕ್ಸ್ಟೀನ್ ಸ್ಲೈಸ್ ಸಿಟಿ ಸ್ಕ್ಯಾನ್: </strong>ಆಸ್ಪತ್ರೆಯಲ್ಲಿ ರೂ. 2 ಕೋಟಿ ವೆಚ್ಚದಲ್ಲಿ ಸಿಕ್ಸ್ಟೀನ್ ಸ್ಲೈಸ್ ಸಿಟಿ ಸ್ಕ್ಯಾನ್ ಯಂತ್ರವನ್ನು ಖರೀದಿಸಲಾಗಿದ್ದು, ಈ ಯಂತ್ರದ ಸಹಾಯದಿಂದ ಏಕಕಾಲಕ್ಕೆ ರೋಗಿಯ ದೇಹದ 16 ಎಕ್ಸ್ರೇ ತೆಗೆಯಬಹುದು, ಇದರಿಂದ ರೋಗಿಗೆ ಬಹುಬೇಗ ಚಿಕಿತ್ಸೆ ಕೊಡಬಹುದು ಎಂದರು.<br /> <br /> <strong>ಡಿಸಿಟಲ್ ಸಬ್ಸ್ಯ್ಟ್ರಾಕ್ಸನ್ ಎಂಜಿಯೋಗ್ರಫಿ:</strong> ರೋಗಿಗಳ ಹಿತದೃಷ್ಟಿಯಿಂದ ಎಚ್ಎಸ್ಕೆ ಆಸ್ಪತ್ರೆಯಲ್ಲಿ ರೂ. 20 ಲಕ್ಷ ವೆಚ್ಚದಲ್ಲಿ `ಡಿಜಿಟಲ್ ಸಬ್ಸ್ಯ್ಟ್ರಾಕ್ಸನ್ ಎಂಜಿಯೋಗ್ರಫಿ~ ಯಂತ್ರವನ್ನು ಖರೀದಿಸಲಾಗಿದೆ ಎಂದ ಅವರು ಈ ಯಂತ್ರದ ಮೂಲಕ ರಕ್ತದ ಮೂಲಕ ರಕ್ತನಾಳಗಳಲ್ಲಿನ ಅತಿ ಸೂಕ್ಷ್ಮ ತೊಂದರೆಗಳನ್ನು ಸುಲಭವಾಗಿ ಗುರುತಿಸಿ ಚಿಕಿತ್ಸೆ ನೀಡುವುದರಿಂದ ಜೀವಹಾನಿಯಾಗುವುದನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು.<br /> <br /> ರೂ. 25 ಲಕ್ಷ ವೆಚ್ಚದಲ್ಲಿ `4ಡಿ ಅಲ್ಟ್ರಾಸೌಂಡ್~ ಯಂತ್ರ ಖರೀದಿಸಲಾಗಿದ್ದು, ಈ ಯಂತ್ರದಿಂದ ಗರ್ಭದಲ್ಲಿರುವ ಮಗುವಿನ ಸೂಕ್ಷ್ಮಾತಿಸೂಕ್ಷ್ಮ ದೈಹಿಕ ತೊಂದರೆಗಳನ್ನು ಪತ್ತೆಹಚ್ಚಬಹುದು. ಗರ್ಭದಲ್ಲಿರುವಾಗಲೇ ಸೂಕ್ತ ಚಿಕಿತ್ಸೆ ನೀಡಿ ಮಗುವಿನ ದೈಹಿಕ ನ್ಯೂನತೆ ಸರಿಪಡಿಸಬಹುದು ಎಂದು ಹೇಳಿದರು.<br /> <br /> <strong>ವೈದ್ಯಕೀಯ ಸೀಟು ಹೆಚ್ಚಳ:</strong><br /> 9ನೇ ವರ್ಷಕ್ಕೆ ಕಾಲಿಡುತ್ತಿರುವ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ 100ರಿಂದ 150 ಎಂಬಿಬಿಎಸ್ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಐಎಂಸಿ ಅನುಮತಿ ಸಿಕ್ಕಿದೆ ಎಂದರು.<br /> <br /> ಮುಂದಿನ ವರ್ಷದಲ್ಲಿ 150ರಿಂದ 250 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಮತ್ತು ಸ್ನಾತಕೋತ್ತರ ವೈದ್ಯಕೀಯ ಪದವಿ ಸೀಟು ಹೆಚ್ಚಳ ಮಾಡಲು ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಕೋರಲಾಗಿದೆ ಎಂದು ತಿಳಿಸಿದರು.<br /> <br /> ಕಾರ್ಯಕ್ರಮದಲ್ಲಿ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ, ಪ್ರಾಚಾರ್ಯ ಡಾ. ಅಶೋಕ ಮಲ್ಲಾಪುರ, ಮಹಾವಿದ್ಯಾಲಯದ ಡೀನ್ ಟಿ.ಎಂ.ಚಂದ್ರಶೇಖರ್, ಡಾ. ಸಿ.ಎಸ್. ಪಾಟೀಲ ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು, ವೈದ್ಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ: </strong>ರಕ್ತ ಉತ್ಪಾದಿಸುವ ಪದಾರ್ಥವಲ್ಲ, ಅದನ್ನು ಒಬ್ಬ ವ್ಯಕ್ತಿಯ ದೇಹದಿಂದ ಪಡೆದು ಇನ್ನೊಬ್ಬ ವ್ಯಕ್ತಿಗೆ ಕೊಡಲಾಗುತ್ತದೆ, ರಕ್ತ ಅತ್ಯಮೂಲ್ಯವಾದ ಜೀವದ್ರವ್ಯವಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಶಾಸಕ ವೀರಣ್ಣ ಚರಂತಿಮಠ ಹೇಳಿದರು.<br /> <br /> ನಗರದ ಹಾನಗಲ್ ಶ್ರಿ ಕುಮಾರೇಶ್ವರ ಆಸ್ಪತ್ರೆಯ ರಕ್ತನಿಧಿ ಭಂಡಾರದಲ್ಲಿ ನೂತನವಾಗಿ ಅಳವಡಿಸಲಾದ ರಕ್ತ ವಿಂಗಡಣಾ ಘಟಕವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ರೂ. 30 ಲಕ್ಷ ವೆಚ್ಚದಲ್ಲಿ `ರಕ್ತ ವಿಂಗಡಣಾ ಘಟಕ~ವನ್ನು ಸ್ಥಾಪಿಸಲಾಗಿದ್ದು, ಉತ್ತರ ಕರ್ನಾಟಕದಲ್ಲಿ ಸ್ಥಾಪನೆಯಾದ ಮೂರನೇ ಘಟಕವಾಗಿದೆ ಎಂದರು.<br /> <br /> ದಾನಿಗಳಿಂದ ಸಂಗ್ರಹಿಸಿದ ರಕ್ತದಲ್ಲಿನ ಕೆಂಪುರಕ್ತ ಕಣ, ಬಿಳಿ ರಕ್ತ ಕಣ ಮತ್ತು ಪ್ಲಾಸ್ಮಾ ಮತ್ತು ಪ್ಲೆಟ್ಲೆಟ್ಗಳನ್ನು `ರಕ್ತ ವಿಂಗಡಣಾ ಘಟಕ~ದಲ್ಲಿ ಬೇರ್ಪಡಿಸಿ ಯಾವ ವ್ಯಕ್ತಿಗೆ ರಕ್ತದ ಯಾವ ಭಾಗದ ಅವಶ್ಯಕತೆ ಇದೆ ಎಂದರಿತು ರಕ್ತ ಕೊಡಲಾಗುತ್ತದೆ, ಇದರಿಂದ ರಕ್ತ ಅನವಶ್ಯಕವಾಗಿ ಹಾಳಾಗುವುದನ್ನು ತಪ್ಪಿಸಬಹುದು ಎಂದು ಹೇಳಿದರು.<br /> <br /> ಈ ಮೊದಲು ದಾನಿಗಳಿಂದ ಸಂಗ್ರಹಿಸಿದ ರಕ್ತವನ್ನು ಯಾವುದೇ ರೀತಿಯ ವಿಂಗಡಣೆ ಮಾಡದೇ ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ಕೊಡಲಾಗುತ್ತಿತ್ತು, ಆದರೆ ಈಗ `ರಕ್ತ ವಿಂಗಡಣಾ ಘಟಕ~ದಿಂದ ರಕ್ತವನ್ನು ಮೂರು ಭಾಗವಾಗಿ ವಿಂಗಡಿಸಿ ಅವಶ್ಯವಿರುವ ಮೂರು ವ್ಯಕ್ತಿಗಳಿಗೆ ಕೊಟ್ಟು ಜೀವ ಉಳಿಸಬಹುದಾಗಿದೆ ಎಂದರು.<br /> <br /> <strong>ಸಿಕ್ಸ್ಟೀನ್ ಸ್ಲೈಸ್ ಸಿಟಿ ಸ್ಕ್ಯಾನ್: </strong>ಆಸ್ಪತ್ರೆಯಲ್ಲಿ ರೂ. 2 ಕೋಟಿ ವೆಚ್ಚದಲ್ಲಿ ಸಿಕ್ಸ್ಟೀನ್ ಸ್ಲೈಸ್ ಸಿಟಿ ಸ್ಕ್ಯಾನ್ ಯಂತ್ರವನ್ನು ಖರೀದಿಸಲಾಗಿದ್ದು, ಈ ಯಂತ್ರದ ಸಹಾಯದಿಂದ ಏಕಕಾಲಕ್ಕೆ ರೋಗಿಯ ದೇಹದ 16 ಎಕ್ಸ್ರೇ ತೆಗೆಯಬಹುದು, ಇದರಿಂದ ರೋಗಿಗೆ ಬಹುಬೇಗ ಚಿಕಿತ್ಸೆ ಕೊಡಬಹುದು ಎಂದರು.<br /> <br /> <strong>ಡಿಸಿಟಲ್ ಸಬ್ಸ್ಯ್ಟ್ರಾಕ್ಸನ್ ಎಂಜಿಯೋಗ್ರಫಿ:</strong> ರೋಗಿಗಳ ಹಿತದೃಷ್ಟಿಯಿಂದ ಎಚ್ಎಸ್ಕೆ ಆಸ್ಪತ್ರೆಯಲ್ಲಿ ರೂ. 20 ಲಕ್ಷ ವೆಚ್ಚದಲ್ಲಿ `ಡಿಜಿಟಲ್ ಸಬ್ಸ್ಯ್ಟ್ರಾಕ್ಸನ್ ಎಂಜಿಯೋಗ್ರಫಿ~ ಯಂತ್ರವನ್ನು ಖರೀದಿಸಲಾಗಿದೆ ಎಂದ ಅವರು ಈ ಯಂತ್ರದ ಮೂಲಕ ರಕ್ತದ ಮೂಲಕ ರಕ್ತನಾಳಗಳಲ್ಲಿನ ಅತಿ ಸೂಕ್ಷ್ಮ ತೊಂದರೆಗಳನ್ನು ಸುಲಭವಾಗಿ ಗುರುತಿಸಿ ಚಿಕಿತ್ಸೆ ನೀಡುವುದರಿಂದ ಜೀವಹಾನಿಯಾಗುವುದನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು.<br /> <br /> ರೂ. 25 ಲಕ್ಷ ವೆಚ್ಚದಲ್ಲಿ `4ಡಿ ಅಲ್ಟ್ರಾಸೌಂಡ್~ ಯಂತ್ರ ಖರೀದಿಸಲಾಗಿದ್ದು, ಈ ಯಂತ್ರದಿಂದ ಗರ್ಭದಲ್ಲಿರುವ ಮಗುವಿನ ಸೂಕ್ಷ್ಮಾತಿಸೂಕ್ಷ್ಮ ದೈಹಿಕ ತೊಂದರೆಗಳನ್ನು ಪತ್ತೆಹಚ್ಚಬಹುದು. ಗರ್ಭದಲ್ಲಿರುವಾಗಲೇ ಸೂಕ್ತ ಚಿಕಿತ್ಸೆ ನೀಡಿ ಮಗುವಿನ ದೈಹಿಕ ನ್ಯೂನತೆ ಸರಿಪಡಿಸಬಹುದು ಎಂದು ಹೇಳಿದರು.<br /> <br /> <strong>ವೈದ್ಯಕೀಯ ಸೀಟು ಹೆಚ್ಚಳ:</strong><br /> 9ನೇ ವರ್ಷಕ್ಕೆ ಕಾಲಿಡುತ್ತಿರುವ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ 100ರಿಂದ 150 ಎಂಬಿಬಿಎಸ್ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಐಎಂಸಿ ಅನುಮತಿ ಸಿಕ್ಕಿದೆ ಎಂದರು.<br /> <br /> ಮುಂದಿನ ವರ್ಷದಲ್ಲಿ 150ರಿಂದ 250 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಮತ್ತು ಸ್ನಾತಕೋತ್ತರ ವೈದ್ಯಕೀಯ ಪದವಿ ಸೀಟು ಹೆಚ್ಚಳ ಮಾಡಲು ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಕೋರಲಾಗಿದೆ ಎಂದು ತಿಳಿಸಿದರು.<br /> <br /> ಕಾರ್ಯಕ್ರಮದಲ್ಲಿ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ, ಪ್ರಾಚಾರ್ಯ ಡಾ. ಅಶೋಕ ಮಲ್ಲಾಪುರ, ಮಹಾವಿದ್ಯಾಲಯದ ಡೀನ್ ಟಿ.ಎಂ.ಚಂದ್ರಶೇಖರ್, ಡಾ. ಸಿ.ಎಸ್. ಪಾಟೀಲ ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು, ವೈದ್ಯರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>