<p>ರಾಮನಗರ: ನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ನಗರ ವಿಶಿಷ್ಟ ಬಗೆಯ ವಿದ್ಯುತ್ ದೀಪಗಳಿಂದ ಅಲಂಕೃತವಾಗಿದೆ. <br /> <br /> ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ಮೂರ್ತಿಗೆ ವಿವಿಧ ಬಗೆಯ ಅಲಂಕಾರಗಳಿಂದ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ದೇವಿಯನ್ನು ಪೂಜಿಸುತ್ತಾ ಬಂದಿರುವ ಪದ್ಮನಾಭ ಸಿಂಗ್ ಅವರ ಪುತ್ರ ದೇವಿ ಪ್ರಸಾದ್ ಸಿಂಗ್ ಅವರು ಈ ಸಾರಿಯೂ ಕರಗಧಾರಣೆ ಮಾಡಲಿದ್ದಾರೆ. ಐದು ವರ್ಷಗಳಿಂದ ಅವರೇ ಕರಗಧಾರಣೆ ಮಾಡಿಕೊಂಡು ಬಂದಿದ್ದಾರೆ. ಅವರ ತಂದೆ ಪದ್ಮನಾಭ ಸಿಂಗ್ ಅವರು ಅದಕ್ಕೂ ಹಿಂದೆ 25 ವರ್ಷಗಳ ಕಾಲ ಸತತವಾಗಿ ಕರಗಧಾರಣೆ ಮಾಡಿ ಅಗ್ನಿಕುಂಡ ಪ್ರವೇಶಿಸಿದ್ದಾರೆ.<br /> <br /> ಮಂಗಳವಾರ ರಾತ್ರಿ 10 ಗಂಟೆಗೆ ಹಸಿ ಕರಗವು ದೇವಾಲಯದಿಂದ ಹೊರಟು ದ್ಯಾವರಸೇಗೌಡನದೊಡ್ಡಿಯ ದೇವಾಲಯ ಸೇರಲಿದೆ. ಅಲ್ಲಿ ಕರಗಧಾರಣೆ ಮಾಡಿಕೊಂಡು ಮೆರವಣಿಗೆ ಆರಂಭವಾಗುತ್ತದೆ. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬುಧವಾರ ಬೆಳಿಗ್ಗೆ ಅಗ್ನಿಕೊಂಡ ಪ್ರವೇಶ ಮಾಡುವ ಮೂಲಕ ದೇವಾಲಯವನ್ನು ಸೇರಲಿದೆ. <br /> <br /> ಚಾಮುಂಡೇಶ್ವರಿ ಕರಗದ ದಿನದಂದೇ ನಗರದಲ್ಲಿನ ಸಪ್ತ ಮಾತೃಕೆಗಳ ಕರಗಗಳೂ ನೆರವೇರಲಿವೆ. ಶೆಟ್ಟಿಹಳ್ಳಿ ಬೀದಿಯ ಆದಿಶಕ್ತಿದೇವಿ, ತೋಪ್ಖಾನ್ ಮೊಹಲ್ಲಾದ ಮುತ್ತುಮಾರಮ್ಮ, ಬಾಲಗೇರಿಯ ಬಿಸಿಲುಮಾರಮ್ಮ, ಕೊಲ್ಲಾಪುರದಮ್ಮ, ಭಂಡಾರದಮ್ಮ, ಮಗ್ಗದಕೇರಿ ಮಾರಮ್ಮ ಹಾಗೂ ಐಜೂರಿನ ಆಧಿಪರಾಶಕ್ತಿ ಮಾರಮ್ಮನ ಕರಗಗಳೂ ನಡೆಯಲಿವೆ. <br /> <br /> <strong>ಮನರಂಜನಾ ಕಾರ್ಯಕ್ರಮಗಳು: </strong><br /> ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಸಮಿತಿಯು ಜಿಲ್ಲಾ ಕ್ರೀಡಾಂಗಣದಲ್ಲಿ ಬಾಣ- ಬಿರುಸುಗಳ ಪ್ರದರ್ಶನ ಮತ್ತು ಸಂಗೀತ ರಸಸಂಜೆ ಕಾರ್ಯಕ್ರಮ ಏರ್ಪಡಿಸಿದೆ. ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಸಾರಥ್ಯದಲ್ಲಿ ರಸಸಂಜೆ ಜರುಗಲಿದೆ. ಇದಕ್ಕೆ ಈಗಾಗಲೇ ಆಕರ್ಷ ವೇದಿಕೆಯೂ ಸಜ್ಜಾಗಿದೆ.<br /> <br /> ಕರಗ ಪ್ರಯುಕ್ತ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ವಿವಿಧ ಬಗೆಯ ಆಟಿಕಾ ಸಾಮಗ್ರಿಗಳ ಪ್ರದರ್ಶನ ಏರ್ಪಡಿಸಿದೆ.ಚಾಮುಂಡೇಶ್ವರಿ ಯುವ ಸೇವಾ ಸಮಿತಿಯು ನಗರದ ಅರಳೀಮರ ವೃತ್ತದಲ್ಲಿ ಸಂಜೆ 6 ಗಂಟೆಗೆ ಶ್ರೀನಿವಾಸ್ ಮ್ಯೂಸಿಕ್ ಅಂಡ್ ಮೆಲೋಡಿಸ್ ತಂಡದಿಂದ ರಸ ಸಂಜೆ ಕಾರ್ಯಕ್ರಮ ಹಮ್ಮಿಕೊಂಡಿದೆ.<br /> <br /> ಇದರ ಜೊತೆಗೆ ವಿಡಿಯೊ ಚಿತ್ರೀಕರಣ ಕೂಡ ಮಾಡಲಾಗುತ್ತಿದ್ದು, ಸಾರ್ವಜನಿಕರ ತುರ್ತು ಸಂಪರ್ಕಕಾಗಿ ನಿಯಂತ್ರಣ ಕೊಠಡಿ ಕೂಡ ಸ್ಥಾಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಡಿಎಸ್ಪಿ ರಾಮಕೃಷ್ಣಪ್ಪ, ಇತರೇ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಮನಗರ: ನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ನಗರ ವಿಶಿಷ್ಟ ಬಗೆಯ ವಿದ್ಯುತ್ ದೀಪಗಳಿಂದ ಅಲಂಕೃತವಾಗಿದೆ. <br /> <br /> ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ಮೂರ್ತಿಗೆ ವಿವಿಧ ಬಗೆಯ ಅಲಂಕಾರಗಳಿಂದ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ದೇವಿಯನ್ನು ಪೂಜಿಸುತ್ತಾ ಬಂದಿರುವ ಪದ್ಮನಾಭ ಸಿಂಗ್ ಅವರ ಪುತ್ರ ದೇವಿ ಪ್ರಸಾದ್ ಸಿಂಗ್ ಅವರು ಈ ಸಾರಿಯೂ ಕರಗಧಾರಣೆ ಮಾಡಲಿದ್ದಾರೆ. ಐದು ವರ್ಷಗಳಿಂದ ಅವರೇ ಕರಗಧಾರಣೆ ಮಾಡಿಕೊಂಡು ಬಂದಿದ್ದಾರೆ. ಅವರ ತಂದೆ ಪದ್ಮನಾಭ ಸಿಂಗ್ ಅವರು ಅದಕ್ಕೂ ಹಿಂದೆ 25 ವರ್ಷಗಳ ಕಾಲ ಸತತವಾಗಿ ಕರಗಧಾರಣೆ ಮಾಡಿ ಅಗ್ನಿಕುಂಡ ಪ್ರವೇಶಿಸಿದ್ದಾರೆ.<br /> <br /> ಮಂಗಳವಾರ ರಾತ್ರಿ 10 ಗಂಟೆಗೆ ಹಸಿ ಕರಗವು ದೇವಾಲಯದಿಂದ ಹೊರಟು ದ್ಯಾವರಸೇಗೌಡನದೊಡ್ಡಿಯ ದೇವಾಲಯ ಸೇರಲಿದೆ. ಅಲ್ಲಿ ಕರಗಧಾರಣೆ ಮಾಡಿಕೊಂಡು ಮೆರವಣಿಗೆ ಆರಂಭವಾಗುತ್ತದೆ. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬುಧವಾರ ಬೆಳಿಗ್ಗೆ ಅಗ್ನಿಕೊಂಡ ಪ್ರವೇಶ ಮಾಡುವ ಮೂಲಕ ದೇವಾಲಯವನ್ನು ಸೇರಲಿದೆ. <br /> <br /> ಚಾಮುಂಡೇಶ್ವರಿ ಕರಗದ ದಿನದಂದೇ ನಗರದಲ್ಲಿನ ಸಪ್ತ ಮಾತೃಕೆಗಳ ಕರಗಗಳೂ ನೆರವೇರಲಿವೆ. ಶೆಟ್ಟಿಹಳ್ಳಿ ಬೀದಿಯ ಆದಿಶಕ್ತಿದೇವಿ, ತೋಪ್ಖಾನ್ ಮೊಹಲ್ಲಾದ ಮುತ್ತುಮಾರಮ್ಮ, ಬಾಲಗೇರಿಯ ಬಿಸಿಲುಮಾರಮ್ಮ, ಕೊಲ್ಲಾಪುರದಮ್ಮ, ಭಂಡಾರದಮ್ಮ, ಮಗ್ಗದಕೇರಿ ಮಾರಮ್ಮ ಹಾಗೂ ಐಜೂರಿನ ಆಧಿಪರಾಶಕ್ತಿ ಮಾರಮ್ಮನ ಕರಗಗಳೂ ನಡೆಯಲಿವೆ. <br /> <br /> <strong>ಮನರಂಜನಾ ಕಾರ್ಯಕ್ರಮಗಳು: </strong><br /> ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಸಮಿತಿಯು ಜಿಲ್ಲಾ ಕ್ರೀಡಾಂಗಣದಲ್ಲಿ ಬಾಣ- ಬಿರುಸುಗಳ ಪ್ರದರ್ಶನ ಮತ್ತು ಸಂಗೀತ ರಸಸಂಜೆ ಕಾರ್ಯಕ್ರಮ ಏರ್ಪಡಿಸಿದೆ. ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಸಾರಥ್ಯದಲ್ಲಿ ರಸಸಂಜೆ ಜರುಗಲಿದೆ. ಇದಕ್ಕೆ ಈಗಾಗಲೇ ಆಕರ್ಷ ವೇದಿಕೆಯೂ ಸಜ್ಜಾಗಿದೆ.<br /> <br /> ಕರಗ ಪ್ರಯುಕ್ತ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ವಿವಿಧ ಬಗೆಯ ಆಟಿಕಾ ಸಾಮಗ್ರಿಗಳ ಪ್ರದರ್ಶನ ಏರ್ಪಡಿಸಿದೆ.ಚಾಮುಂಡೇಶ್ವರಿ ಯುವ ಸೇವಾ ಸಮಿತಿಯು ನಗರದ ಅರಳೀಮರ ವೃತ್ತದಲ್ಲಿ ಸಂಜೆ 6 ಗಂಟೆಗೆ ಶ್ರೀನಿವಾಸ್ ಮ್ಯೂಸಿಕ್ ಅಂಡ್ ಮೆಲೋಡಿಸ್ ತಂಡದಿಂದ ರಸ ಸಂಜೆ ಕಾರ್ಯಕ್ರಮ ಹಮ್ಮಿಕೊಂಡಿದೆ.<br /> <br /> ಇದರ ಜೊತೆಗೆ ವಿಡಿಯೊ ಚಿತ್ರೀಕರಣ ಕೂಡ ಮಾಡಲಾಗುತ್ತಿದ್ದು, ಸಾರ್ವಜನಿಕರ ತುರ್ತು ಸಂಪರ್ಕಕಾಗಿ ನಿಯಂತ್ರಣ ಕೊಠಡಿ ಕೂಡ ಸ್ಥಾಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಡಿಎಸ್ಪಿ ರಾಮಕೃಷ್ಣಪ್ಪ, ಇತರೇ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>