<p><strong>ಬೆಂಗಳೂರು</strong>: `ಹೃದಯದಿಂದ, ನಿರ್ಮಲವಾಗಿ ಬರುವ ನಗು ಮನುಷ್ಯನ ಆರೋಗ್ಯ ಮತ್ತು ಸೌಂದರ್ಯವನ್ನು ವೃದ್ಧಿಸುತ್ತದೆ' ಎಂದು ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ ಗುರೂಜಿ ಹೇಳಿದರು.<br /> <br /> `ಯಶಸ್ವಿ ಕಲಾವಿದರ' ತಂಡವು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಏರ್ಪಡಿಸಿದ್ದ `ಸಂಸಾರದಲ್ಲಿ ಸರಿಗಮ' ಹಾಸ್ಯ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಹಾಸ್ಯ ಪ್ರಜ್ಞೆ ಮತ್ತು ನಗು ಎಲ್ಲರಲ್ಲಿಯೂ ಬೇಕು. ನಗು ಎಲ್ಲ ಕಾಯಿಲೆಗಳಿಗೆ ದಿವ್ಯ ಔಷಧಿಯಾಗಿದೆ. ಆದರೆ, ಇಂದಿನವರು ಹೆಚ್ಚು ನಗುವುದೇ ಇಲ್ಲ. ವ್ಯಸನದಲ್ಲಿಯೇ ತಮ್ಮ ಇಡೀ ಜೀವನವನ್ನು ಕಳೆದು ಬಿಡುತ್ತಾರೆ' ಎಂದು ಹೇಳಿದರು.<br /> <br /> `ಸಿನಿಮಾ ಆರಂಭವಾದಾಗಿನಿಂದ ನಾಟಕಗಳು ಕಡಿಮೆಯಾಗಿವೆ ಎಂಬ ಆರೋಪವಿದೆ. ಆದರೆ, ಕೆಲವು ಹಾಸ್ಯ ಮತ್ತು ಸಾಮಾಜಿಕ ನಾಟಕಗಳು ತಮ್ಮ ಅಸ್ತಿತ್ವವನ್ನು ಇಂದಿಗೂ ಉಳಿಸಿಕೊಂಡು ಬಂದಿವೆ' ಎಂದರು.<br /> <br /> ಹಿರಿಯ ನಟಿ ಜಯಂತಿ ಮಾತನಾಡಿ, `ನಮ್ಮಲ್ಲಿನ ಎಲ್ಲ ಕಷ್ಟಗಳನ್ನು ಮರೆತು ಮನದುಂಬಿ ನಕ್ಕು ಬಿಡಬೇಕು. ಆಗ, ಮನಸ್ಸಿನ ಭಾರವೆಲ್ಲ ಕಡಿಮೆಯಾಗಿ ಬದುಕು ಹಸನಾಗುತ್ತದೆ' ಎಂದು ಹೇಳಿದರು.`ಸಂಸಾರದಲ್ಲಿ ಸರಿಗಮ' ಹಾಸ್ಯ ನಾಟಕದ 1297 ನೇ ಯಶಸ್ವಿ ಪ್ರದರ್ಶನವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: `ಹೃದಯದಿಂದ, ನಿರ್ಮಲವಾಗಿ ಬರುವ ನಗು ಮನುಷ್ಯನ ಆರೋಗ್ಯ ಮತ್ತು ಸೌಂದರ್ಯವನ್ನು ವೃದ್ಧಿಸುತ್ತದೆ' ಎಂದು ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ ಗುರೂಜಿ ಹೇಳಿದರು.<br /> <br /> `ಯಶಸ್ವಿ ಕಲಾವಿದರ' ತಂಡವು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಏರ್ಪಡಿಸಿದ್ದ `ಸಂಸಾರದಲ್ಲಿ ಸರಿಗಮ' ಹಾಸ್ಯ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಹಾಸ್ಯ ಪ್ರಜ್ಞೆ ಮತ್ತು ನಗು ಎಲ್ಲರಲ್ಲಿಯೂ ಬೇಕು. ನಗು ಎಲ್ಲ ಕಾಯಿಲೆಗಳಿಗೆ ದಿವ್ಯ ಔಷಧಿಯಾಗಿದೆ. ಆದರೆ, ಇಂದಿನವರು ಹೆಚ್ಚು ನಗುವುದೇ ಇಲ್ಲ. ವ್ಯಸನದಲ್ಲಿಯೇ ತಮ್ಮ ಇಡೀ ಜೀವನವನ್ನು ಕಳೆದು ಬಿಡುತ್ತಾರೆ' ಎಂದು ಹೇಳಿದರು.<br /> <br /> `ಸಿನಿಮಾ ಆರಂಭವಾದಾಗಿನಿಂದ ನಾಟಕಗಳು ಕಡಿಮೆಯಾಗಿವೆ ಎಂಬ ಆರೋಪವಿದೆ. ಆದರೆ, ಕೆಲವು ಹಾಸ್ಯ ಮತ್ತು ಸಾಮಾಜಿಕ ನಾಟಕಗಳು ತಮ್ಮ ಅಸ್ತಿತ್ವವನ್ನು ಇಂದಿಗೂ ಉಳಿಸಿಕೊಂಡು ಬಂದಿವೆ' ಎಂದರು.<br /> <br /> ಹಿರಿಯ ನಟಿ ಜಯಂತಿ ಮಾತನಾಡಿ, `ನಮ್ಮಲ್ಲಿನ ಎಲ್ಲ ಕಷ್ಟಗಳನ್ನು ಮರೆತು ಮನದುಂಬಿ ನಕ್ಕು ಬಿಡಬೇಕು. ಆಗ, ಮನಸ್ಸಿನ ಭಾರವೆಲ್ಲ ಕಡಿಮೆಯಾಗಿ ಬದುಕು ಹಸನಾಗುತ್ತದೆ' ಎಂದು ಹೇಳಿದರು.`ಸಂಸಾರದಲ್ಲಿ ಸರಿಗಮ' ಹಾಸ್ಯ ನಾಟಕದ 1297 ನೇ ಯಶಸ್ವಿ ಪ್ರದರ್ಶನವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>