<p><strong>ಹಾಸನ:</strong> ನದಿ ತಿರುವ ಯೋಜನೆ ಸಂಬಂಧ ಸಿದ್ಧವಾಗಿರುವ ಪರಮಶಿವಯ್ಯ ವರದಿ ತಿರಸ್ಕಾರ, ಬಯಲು ಸೀಮೆ ಪ್ರದೇಶಕ್ಕೆ ನೀರು ಪೂರೈಕೆ ಹಾಗೂ ಆ ಪ್ರದೇಶಗಳ ಅಂತರ್ಜಲ ಮಟ್ಟ ಸುಧಾರಣೆಗೆ ಒತ್ತು ನೀಡಲು ಸರ್ಕಾರಕ್ಕೆ ಆಗ್ರಹ.<br /> <br /> ಶನಿವಾರ ಇಲ್ಲಿ ನಡೆದ ಎತ್ತಿನಹಳ್ಳ ಹಾಗೂ ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸುತ್ತಿರುವ ಮಲೆನಾಡು, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಯೋಜನೆ ಪರವಾಗಿರುವ ಬಯಲುಸೀಮೆಯ ಹೋರಾಟಗಾರ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯವಿದು.<br /> <br /> ಪರಮಶಿವಯ್ಯ ವರದಿ ವೈಜ್ಞಾನಿಕವಾಗಿಲ್ಲ. ಅದರಲ್ಲಿ ಲೋಪಗಳಿವೆ ಎಂಬುದು ಎರಡೂ ಕಡೆಯವರಿಗೆ ಮನವರಿಕೆಯಾಗಿದ್ದರಿಂದ ವರದಿ ತಿರಸ್ಕಾರಕ್ಕೆ ಆಗ್ರಹಿಸಲಾಗಿದೆ.ಈ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ವಿಜ್ಞಾನಿಗಳು ಮತ್ತು ಪರಿಸರ ತಜ್ಞರ ಸಮಿತಿಯೊಂದನ್ನು ರಚಿಸಿ ನಿಷ್ಪಕ್ಷ ವರದಿ ಸಿದ್ಧಪಡಿಸಬೇಕು ಎಂಬ ಕುರಿತು ಒಮ್ಮತ ಮೂಡಿದೆ.<br /> <br /> ನೇತ್ರಾವತಿ ತಿರುವು ಯೋಜನೆ ಅಥವಾ ಎತ್ತಿನಹಳ್ಳ ಯೋಜನೆ ಕೈಗೆತ್ತಿಕೊಂಡರೂ, ಅದು ಜಾರಿಗೆ ಬರಲು ದಶಕಗಳಷ್ಟು ಕಾಲ ಬೇಕಾಗಬಹುದು. ಅಲ್ಲಿಯವರೆಗೆ ರಾಜ್ಯದ ಯಾವುದಾದರೂ ಯೋಜನೆಯಿಂದ ಬಯಲುಸೀಮೆ ಭಾಗದ ಜನರಿಗೆ ಕುಡಿಯುವ ನೀರು ಒದಗಿಸಬೇಕು ಎಂದು ಸಭೆ ಆಗ್ರಹಿಸಿದೆ.<br /> <br /> ಅಲ್ಲದೇ, ಬಯಲುಸೀಮೆಗಳಲ್ಲಿ ಅಂತರ್ಜಲ ಹೆಚ್ಚಿಸಲು ವಿಶೇಷ ಯೋಜನೆ ಜಾರಿಮಾಡಬೇಕೆಂಬ ನಿರ್ಣಯ ಕೈಗೊಳ್ಳಲಾಗಿದ್ದು, ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.`ಬಯಲುಸೀಮೆಯ ಐದು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸಲು ದಕ್ಷಿಣಕನ್ನಡ ಜಿಲ್ಲೆಯ ಜನರಾಗಲಿ, ಮಲೆನಾಡಿನ ಜನರಾಗಲಿ ವಿರೋಧ ವ್ಯಕ್ತಪಡಿಸುತ್ತಿಲ್ಲ. ಪರಮಶಿವಯ್ಯ ವರದಿ ಅವೈಜ್ಞಾನಿಕವಾಗಿದೆ.<br /> <br /> ಇದನ್ನು ಜಾರಿಮಾಡಿದರೆ ಹತ್ತುಸಾವಿರ ಹೆಕ್ಟೇರ್ ಅರಣ್ಯ ನಾಶವಾಗುತ್ತದೆ. ಅತಿ ಅಪರೂಪದ ಜೀವ ವೈವಿಧ್ಯ ಹೊಂದಿರುವ ಪಶ್ಚಿಮ ಘಟ್ಟದ ಮೇಲೆ ಇದರಿಂದ ದೊಡ್ಡ ರೀತಿಯ ಪರಿಣಾಮ ಉಂಟಾಗುತ್ತಿದೆ. ಹೇಮಾವತಿ ಜಲಾಶಯದಿಂದಲೇ ಈ ಭಾಗದ ಜನರು ಕಾಡಾನೆಗಳ ಸಮಸ್ಯೆ ಎದುರಿಸುತ್ತಿದ್ದಾರೆ. ಮುಂದೆ ಇನ್ನೂ ಹಲವು ಸಮಸ್ಯೆಗಳಾಗಬಹುದು ಎಂಬ ಆತಂಕ ಮಲೆನಾಡಿನ ಜನರಿಂದ ಕೇಳಿಬಂದಿತು.<br /> <br /> ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿದ್ದ ಸುಂದರರಾವ್ ಹಾಗೂ ಇತರರು ನೇತ್ರಾವತಿ ನದಿಯ ನೀರನ್ನು ಬೇರೆ ಜಿಲ್ಲೆಗಳಿಗೆ ಹರಿಸಿದರೆ ಮೀನುಗಾರಿಕೆ ಉದ್ದಿಮೆ ನಾಶವಾಗುತ್ತದೆ. ಜತೆಗೆ ಪರಿಸರದ ಹಿನ್ನೆಲೆಯಲ್ಲಿ ಇನ್ನೂ ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.<br /> <br /> ಬಯಲುಸೀಮೆಯ ಕಡೆಯಿಂದ ಬಂದಿದ್ದ ಹೋರಾಟಗಾರರು, ಪರಮಶಿವಯ್ಯ ವರದಿಯನ್ನೇ ಆಧಾರವಾಗಿಟ್ಟು, `ಈ ಭಾಗದಲ್ಲಿ ಜೋರಾಗಿ ಮಳೆ ಬೀಳುತ್ತಿದ್ದಾಗ ನಮ್ಮ ಜಿಲ್ಲೆಗಳ ಕೆರೆ ತುಂಬಿಸಿ ಎಂಬುದಷ್ಟೇ ನಮ್ಮ ಬೇಡಿಕೆ. ಇದೇ ಯೋಜನೆ ಬೇಕೆಂದಿಲ್ಲ. ನೀರಿಲ್ಲದೇ ನಾವು ಅನುಭವಿಸುತ್ತಿರುವ ಕಷ್ಟಗಳನ್ನು ಈ ಭಾಗದ ಜನರೂ ಅರ್ಥ ಮಾಡಿಕೊಂಡು ನೀರು ಕೊಡುವ ಉದಾರತೆ ತೋರಬೇಕು~ ಎಂದು ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ನದಿ ತಿರುವ ಯೋಜನೆ ಸಂಬಂಧ ಸಿದ್ಧವಾಗಿರುವ ಪರಮಶಿವಯ್ಯ ವರದಿ ತಿರಸ್ಕಾರ, ಬಯಲು ಸೀಮೆ ಪ್ರದೇಶಕ್ಕೆ ನೀರು ಪೂರೈಕೆ ಹಾಗೂ ಆ ಪ್ರದೇಶಗಳ ಅಂತರ್ಜಲ ಮಟ್ಟ ಸುಧಾರಣೆಗೆ ಒತ್ತು ನೀಡಲು ಸರ್ಕಾರಕ್ಕೆ ಆಗ್ರಹ.<br /> <br /> ಶನಿವಾರ ಇಲ್ಲಿ ನಡೆದ ಎತ್ತಿನಹಳ್ಳ ಹಾಗೂ ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸುತ್ತಿರುವ ಮಲೆನಾಡು, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಯೋಜನೆ ಪರವಾಗಿರುವ ಬಯಲುಸೀಮೆಯ ಹೋರಾಟಗಾರ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯವಿದು.<br /> <br /> ಪರಮಶಿವಯ್ಯ ವರದಿ ವೈಜ್ಞಾನಿಕವಾಗಿಲ್ಲ. ಅದರಲ್ಲಿ ಲೋಪಗಳಿವೆ ಎಂಬುದು ಎರಡೂ ಕಡೆಯವರಿಗೆ ಮನವರಿಕೆಯಾಗಿದ್ದರಿಂದ ವರದಿ ತಿರಸ್ಕಾರಕ್ಕೆ ಆಗ್ರಹಿಸಲಾಗಿದೆ.ಈ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ವಿಜ್ಞಾನಿಗಳು ಮತ್ತು ಪರಿಸರ ತಜ್ಞರ ಸಮಿತಿಯೊಂದನ್ನು ರಚಿಸಿ ನಿಷ್ಪಕ್ಷ ವರದಿ ಸಿದ್ಧಪಡಿಸಬೇಕು ಎಂಬ ಕುರಿತು ಒಮ್ಮತ ಮೂಡಿದೆ.<br /> <br /> ನೇತ್ರಾವತಿ ತಿರುವು ಯೋಜನೆ ಅಥವಾ ಎತ್ತಿನಹಳ್ಳ ಯೋಜನೆ ಕೈಗೆತ್ತಿಕೊಂಡರೂ, ಅದು ಜಾರಿಗೆ ಬರಲು ದಶಕಗಳಷ್ಟು ಕಾಲ ಬೇಕಾಗಬಹುದು. ಅಲ್ಲಿಯವರೆಗೆ ರಾಜ್ಯದ ಯಾವುದಾದರೂ ಯೋಜನೆಯಿಂದ ಬಯಲುಸೀಮೆ ಭಾಗದ ಜನರಿಗೆ ಕುಡಿಯುವ ನೀರು ಒದಗಿಸಬೇಕು ಎಂದು ಸಭೆ ಆಗ್ರಹಿಸಿದೆ.<br /> <br /> ಅಲ್ಲದೇ, ಬಯಲುಸೀಮೆಗಳಲ್ಲಿ ಅಂತರ್ಜಲ ಹೆಚ್ಚಿಸಲು ವಿಶೇಷ ಯೋಜನೆ ಜಾರಿಮಾಡಬೇಕೆಂಬ ನಿರ್ಣಯ ಕೈಗೊಳ್ಳಲಾಗಿದ್ದು, ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.`ಬಯಲುಸೀಮೆಯ ಐದು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸಲು ದಕ್ಷಿಣಕನ್ನಡ ಜಿಲ್ಲೆಯ ಜನರಾಗಲಿ, ಮಲೆನಾಡಿನ ಜನರಾಗಲಿ ವಿರೋಧ ವ್ಯಕ್ತಪಡಿಸುತ್ತಿಲ್ಲ. ಪರಮಶಿವಯ್ಯ ವರದಿ ಅವೈಜ್ಞಾನಿಕವಾಗಿದೆ.<br /> <br /> ಇದನ್ನು ಜಾರಿಮಾಡಿದರೆ ಹತ್ತುಸಾವಿರ ಹೆಕ್ಟೇರ್ ಅರಣ್ಯ ನಾಶವಾಗುತ್ತದೆ. ಅತಿ ಅಪರೂಪದ ಜೀವ ವೈವಿಧ್ಯ ಹೊಂದಿರುವ ಪಶ್ಚಿಮ ಘಟ್ಟದ ಮೇಲೆ ಇದರಿಂದ ದೊಡ್ಡ ರೀತಿಯ ಪರಿಣಾಮ ಉಂಟಾಗುತ್ತಿದೆ. ಹೇಮಾವತಿ ಜಲಾಶಯದಿಂದಲೇ ಈ ಭಾಗದ ಜನರು ಕಾಡಾನೆಗಳ ಸಮಸ್ಯೆ ಎದುರಿಸುತ್ತಿದ್ದಾರೆ. ಮುಂದೆ ಇನ್ನೂ ಹಲವು ಸಮಸ್ಯೆಗಳಾಗಬಹುದು ಎಂಬ ಆತಂಕ ಮಲೆನಾಡಿನ ಜನರಿಂದ ಕೇಳಿಬಂದಿತು.<br /> <br /> ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿದ್ದ ಸುಂದರರಾವ್ ಹಾಗೂ ಇತರರು ನೇತ್ರಾವತಿ ನದಿಯ ನೀರನ್ನು ಬೇರೆ ಜಿಲ್ಲೆಗಳಿಗೆ ಹರಿಸಿದರೆ ಮೀನುಗಾರಿಕೆ ಉದ್ದಿಮೆ ನಾಶವಾಗುತ್ತದೆ. ಜತೆಗೆ ಪರಿಸರದ ಹಿನ್ನೆಲೆಯಲ್ಲಿ ಇನ್ನೂ ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.<br /> <br /> ಬಯಲುಸೀಮೆಯ ಕಡೆಯಿಂದ ಬಂದಿದ್ದ ಹೋರಾಟಗಾರರು, ಪರಮಶಿವಯ್ಯ ವರದಿಯನ್ನೇ ಆಧಾರವಾಗಿಟ್ಟು, `ಈ ಭಾಗದಲ್ಲಿ ಜೋರಾಗಿ ಮಳೆ ಬೀಳುತ್ತಿದ್ದಾಗ ನಮ್ಮ ಜಿಲ್ಲೆಗಳ ಕೆರೆ ತುಂಬಿಸಿ ಎಂಬುದಷ್ಟೇ ನಮ್ಮ ಬೇಡಿಕೆ. ಇದೇ ಯೋಜನೆ ಬೇಕೆಂದಿಲ್ಲ. ನೀರಿಲ್ಲದೇ ನಾವು ಅನುಭವಿಸುತ್ತಿರುವ ಕಷ್ಟಗಳನ್ನು ಈ ಭಾಗದ ಜನರೂ ಅರ್ಥ ಮಾಡಿಕೊಂಡು ನೀರು ಕೊಡುವ ಉದಾರತೆ ತೋರಬೇಕು~ ಎಂದು ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>