<p><strong>ಕೊಣನೂರು: </strong>ಹೆಗ್ಗಡಿಹಳ್ಳಿ ಮತ್ತು ಮುದಗನೂರು ಗ್ರಾಮದ ನಡುವೆ ಎರಡು ದಶಕ ಹಿಂದೆ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿ ಹೋದ ಹಳ್ಳದ ಕಿರು ಸೇತುವೆ ಮರು ನಿರ್ಮಾಣದ ಕನಸು ನನಸಾಗದೇ ಮರೀಚಿಕೆಯಾಗಿಯೇ ಉಳಿದಿದೆ.<br /> <br /> ಇದರಿಂದಾಗಿ ಎರಡು ಗ್ರಾಮಗಳ ನಡುವೆ ಹಿಂದೆ ಇದ್ದ ಸಂಪರ್ಕ ಈಗ ಇಲ್ಲವಾಗಿದೆ. ಒಂದೊಮ್ಮೆ ಜನರು ಹಳ್ಳದ ಮಾರ್ಗವಾಗಿ ಸಂಚರಿಸಲು ಹೊರಟರೆ ತೊಂದರೆ ಅನುಭವಿಸ ಬೇಕಾಗುತ್ತದೆ ಎಂದು ಗ್ರಾಮಸ್ಥರು ನುಡಿಯುತ್ತಾರೆ.<br /> <br /> ಮಲ್ಲಿಪಟ್ಟಣ ಹೋಬಳಿಯ ಹೆಗ್ಗಡಿಹಳ್ಳಿ ಮತ್ತು ಮುದಗನೂರು ಅವಳಿ ಗ್ರಾಮಗಳಿದ್ದಂತೆ. ಆದರೆ ಈ ಗ್ರಾಮಗಳ ನಡುವೆ ಸಂಪರ್ಕ ರಸ್ತೆಯೇ ಇಲ್ಲ. ಸುಮಾರು 20 ವರ್ಷಗಳ ಹಿಂದೆ ಪ್ರವಾಹ ಬಂದು ಈ ಗ್ರಾಮಗಳ ನಡುವೆ ಇದ್ದ ಚಲುವನಗದ್ದೆಹಳ್ಳದ ಸಮೀಪ ಕಲ್ಲಿನಿಂದ ಕಟ್ಟಿದ್ದ ಪುರಾತನ ಕಾಲದ ಸೇತುವೆ ಕೊಚ್ಚಿ ಹೋಗಿದೆ. ಆಗಿನಿಂದ ಇಂದಿನವರೆಗೆ ಈ ಸೇತುವೆ ದುರಸ್ತಿ ಮಾಡುವ ಗೋಜಿಗೆ ಜಿಲ್ಲಾ ಪಂಚಾ ಯಿತಿ ಯಾಗಲಿ ಇಲ್ಲವೇ ಲೋಕೋಪ ಯೋಗಿ ಇಲಾಖೆಯಾಗಲಿ ತಲೆಕೆಡಿಸಿ ಕೊಂಡಿಲ್ಲ. ಹೀಗಾಗಿ ಮಳೆಗಾಲ ಬಂತೆಂದರೆ ಈ ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಳ್ಳುತ್ತದೆ.<br /> <br /> ಬೇಸಿಗೆ ಕಾಲದಲ್ಲಿ ಮಾತ್ರ ಒಂದು ಊರಿನಿಂದ ಗ್ರಾಮಸ್ಥರು ನೇರವಾಗಿ ಸಂಚರಿಸಬಹುದು. ಮಳೆಗಾಲ ಬಂತೆಂದರೆ 10 ಕಿ.ಮೀ. ಸುತ್ತಿ ಬಳಸಿ ಹೋಗಬೇಕಾಗುತ್ತದೆ. ಕಿರಿದಾದ ಸೇತುವೆ ನಿರ್ಮಿಸಿ ರಸ್ತೆ ಸಂಪರ್ಕ ಕಲ್ಪಿಸಿದರೆ ಎರಡು ಗ್ರಾಮಗಳಿಗಿರುವ ಅಂತರ ಕೇವಲ 2 ಕಿ.ಮೀ. ಮಾತ್ರ. ಮುದಗನೂರು ಗ್ರಾಮಸ್ಥರಲ್ಲದೇ ಜೋಗಿ ಹೊಸಹಳ್ಳಿ, ಬೈಚನಹಳ್ಳಿ ಕಾವಲು, ಅಂಬಿಗೌಡನಹಳ್ಳಿ, ಅಲ್ಲಾಪಟ್ಟಣ ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ, ಹಾಲಿನ ಡೈರಿಗೆ ಹೆಗ್ಗಡಿಹಳ್ಳಿಗೆ ಬರಬೇಕಾಗಿದೆ. ಆದರೆ ಸಂಪರ್ಕ ರಸ್ತೆ ಇಲ್ಲದೇ ಸುತ್ತಿ ಬಳಸಿ ಹೆಗ್ಗಡಿಹಳ್ಳಿಗೆ ಬಂದು ಹೋಗುತ್ತಾರೆ. <br /> <br /> ಈ ಹಳ್ಳದ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ಕಾಲುದಾರಿ ಸಂಪೂರ್ಣವಾಗಿ ಹದಗೆಟ್ಟಿದ್ದು, ಪಾದಚಾರಿಗಳೂ ಓಡಾ ಡದಷ್ಟು ಮಟ್ಟಿಗೆ ಕೆಸರು ಗದ್ದೆಯಾಗಿದೆ. ಈ ಕಚ್ಚಾ ರಸ್ತೆಯಲ್ಲಿ ಹೋಗುವ ದ್ವಿಚಕ್ರ ವಾಹನ ಸವರಾರರು ಸ್ವಲ್ಪ ಎಚ್ಚರ ತಪ್ಪಿದರೆ ಕೆರೆ ಇಲ್ಲವೇ ಹಳ್ಳದ ಗದ್ದೆಗೆ ಉರುಳಿ ಅಪಾಯ ತಂದುಕೊಳ್ಳ ಬೇಕಾಗುತ್ತದೆ. ಕಾಲಿಟ್ಟರೆ ಜಾರಿ ಬೀಳುವ ಪ್ರಪಾತದ ಹಳ್ಳ ದಾಟಲು ಅಸಾಧ್ಯವಾಗಿದೆ.<br /> <br /> ಮುದಗನೂರು- ಹೆಗ್ಗಡಿಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸಿದರೆ ಸಾವಿರಾರು ನಾಗರಿಕರಿಗೆ, ಹಳ್ಳದಿಂದ ಆಚೆ ಇರುವ ರೈತಾಪಿ ವರ್ಗದ ಜನರ ಓಡಾಟಕ್ಕೆ ಬಹಳ ಅನುಕೂಲ ವಾಗಲಿದೆ. ಹಾಗಾಗಿ ಕ್ಷೇತ್ರದ ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಣನೂರು: </strong>ಹೆಗ್ಗಡಿಹಳ್ಳಿ ಮತ್ತು ಮುದಗನೂರು ಗ್ರಾಮದ ನಡುವೆ ಎರಡು ದಶಕ ಹಿಂದೆ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿ ಹೋದ ಹಳ್ಳದ ಕಿರು ಸೇತುವೆ ಮರು ನಿರ್ಮಾಣದ ಕನಸು ನನಸಾಗದೇ ಮರೀಚಿಕೆಯಾಗಿಯೇ ಉಳಿದಿದೆ.<br /> <br /> ಇದರಿಂದಾಗಿ ಎರಡು ಗ್ರಾಮಗಳ ನಡುವೆ ಹಿಂದೆ ಇದ್ದ ಸಂಪರ್ಕ ಈಗ ಇಲ್ಲವಾಗಿದೆ. ಒಂದೊಮ್ಮೆ ಜನರು ಹಳ್ಳದ ಮಾರ್ಗವಾಗಿ ಸಂಚರಿಸಲು ಹೊರಟರೆ ತೊಂದರೆ ಅನುಭವಿಸ ಬೇಕಾಗುತ್ತದೆ ಎಂದು ಗ್ರಾಮಸ್ಥರು ನುಡಿಯುತ್ತಾರೆ.<br /> <br /> ಮಲ್ಲಿಪಟ್ಟಣ ಹೋಬಳಿಯ ಹೆಗ್ಗಡಿಹಳ್ಳಿ ಮತ್ತು ಮುದಗನೂರು ಅವಳಿ ಗ್ರಾಮಗಳಿದ್ದಂತೆ. ಆದರೆ ಈ ಗ್ರಾಮಗಳ ನಡುವೆ ಸಂಪರ್ಕ ರಸ್ತೆಯೇ ಇಲ್ಲ. ಸುಮಾರು 20 ವರ್ಷಗಳ ಹಿಂದೆ ಪ್ರವಾಹ ಬಂದು ಈ ಗ್ರಾಮಗಳ ನಡುವೆ ಇದ್ದ ಚಲುವನಗದ್ದೆಹಳ್ಳದ ಸಮೀಪ ಕಲ್ಲಿನಿಂದ ಕಟ್ಟಿದ್ದ ಪುರಾತನ ಕಾಲದ ಸೇತುವೆ ಕೊಚ್ಚಿ ಹೋಗಿದೆ. ಆಗಿನಿಂದ ಇಂದಿನವರೆಗೆ ಈ ಸೇತುವೆ ದುರಸ್ತಿ ಮಾಡುವ ಗೋಜಿಗೆ ಜಿಲ್ಲಾ ಪಂಚಾ ಯಿತಿ ಯಾಗಲಿ ಇಲ್ಲವೇ ಲೋಕೋಪ ಯೋಗಿ ಇಲಾಖೆಯಾಗಲಿ ತಲೆಕೆಡಿಸಿ ಕೊಂಡಿಲ್ಲ. ಹೀಗಾಗಿ ಮಳೆಗಾಲ ಬಂತೆಂದರೆ ಈ ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಳ್ಳುತ್ತದೆ.<br /> <br /> ಬೇಸಿಗೆ ಕಾಲದಲ್ಲಿ ಮಾತ್ರ ಒಂದು ಊರಿನಿಂದ ಗ್ರಾಮಸ್ಥರು ನೇರವಾಗಿ ಸಂಚರಿಸಬಹುದು. ಮಳೆಗಾಲ ಬಂತೆಂದರೆ 10 ಕಿ.ಮೀ. ಸುತ್ತಿ ಬಳಸಿ ಹೋಗಬೇಕಾಗುತ್ತದೆ. ಕಿರಿದಾದ ಸೇತುವೆ ನಿರ್ಮಿಸಿ ರಸ್ತೆ ಸಂಪರ್ಕ ಕಲ್ಪಿಸಿದರೆ ಎರಡು ಗ್ರಾಮಗಳಿಗಿರುವ ಅಂತರ ಕೇವಲ 2 ಕಿ.ಮೀ. ಮಾತ್ರ. ಮುದಗನೂರು ಗ್ರಾಮಸ್ಥರಲ್ಲದೇ ಜೋಗಿ ಹೊಸಹಳ್ಳಿ, ಬೈಚನಹಳ್ಳಿ ಕಾವಲು, ಅಂಬಿಗೌಡನಹಳ್ಳಿ, ಅಲ್ಲಾಪಟ್ಟಣ ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ, ಹಾಲಿನ ಡೈರಿಗೆ ಹೆಗ್ಗಡಿಹಳ್ಳಿಗೆ ಬರಬೇಕಾಗಿದೆ. ಆದರೆ ಸಂಪರ್ಕ ರಸ್ತೆ ಇಲ್ಲದೇ ಸುತ್ತಿ ಬಳಸಿ ಹೆಗ್ಗಡಿಹಳ್ಳಿಗೆ ಬಂದು ಹೋಗುತ್ತಾರೆ. <br /> <br /> ಈ ಹಳ್ಳದ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ಕಾಲುದಾರಿ ಸಂಪೂರ್ಣವಾಗಿ ಹದಗೆಟ್ಟಿದ್ದು, ಪಾದಚಾರಿಗಳೂ ಓಡಾ ಡದಷ್ಟು ಮಟ್ಟಿಗೆ ಕೆಸರು ಗದ್ದೆಯಾಗಿದೆ. ಈ ಕಚ್ಚಾ ರಸ್ತೆಯಲ್ಲಿ ಹೋಗುವ ದ್ವಿಚಕ್ರ ವಾಹನ ಸವರಾರರು ಸ್ವಲ್ಪ ಎಚ್ಚರ ತಪ್ಪಿದರೆ ಕೆರೆ ಇಲ್ಲವೇ ಹಳ್ಳದ ಗದ್ದೆಗೆ ಉರುಳಿ ಅಪಾಯ ತಂದುಕೊಳ್ಳ ಬೇಕಾಗುತ್ತದೆ. ಕಾಲಿಟ್ಟರೆ ಜಾರಿ ಬೀಳುವ ಪ್ರಪಾತದ ಹಳ್ಳ ದಾಟಲು ಅಸಾಧ್ಯವಾಗಿದೆ.<br /> <br /> ಮುದಗನೂರು- ಹೆಗ್ಗಡಿಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸಿದರೆ ಸಾವಿರಾರು ನಾಗರಿಕರಿಗೆ, ಹಳ್ಳದಿಂದ ಆಚೆ ಇರುವ ರೈತಾಪಿ ವರ್ಗದ ಜನರ ಓಡಾಟಕ್ಕೆ ಬಹಳ ಅನುಕೂಲ ವಾಗಲಿದೆ. ಹಾಗಾಗಿ ಕ್ಷೇತ್ರದ ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>