<p><strong>ನವದೆಹಲಿ (ಪಿಟಿಐ): </strong>ಕೇಂದ್ರ ಸರ್ಕಾರ ಮುಂದಿನ ತಿಂಗಳು ಮಂಡಿಸಲಿರುವ ಬಜೆಟ್ ‘ನವೋದ್ಯಮ ಸ್ನೇಹಿ’ (ಸ್ಟಾರ್ಟ್ ಅಪ್) ಆಗಿರಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಶನಿವಾರ ಇಲ್ಲಿ ಸುಳಿವು ನೀಡಿದರು.<br /> <br /> ಸ್ಟಾರ್ಟ್ ಅಪ್ ಆರಂಭಿಸಲು ಪೂರಕವಾದ ತೆರಿಗೆ ಉತ್ತೇಜನಾ ವ್ಯವಸ್ಥೆಯನ್ನು ಬಜೆಟ್ನಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದರು.<br /> ಸ್ಟಾರ್ಟ್ ಅಪ್ ಇಂಡಿಯಾ ಸಮಾವೇಶದಲ್ಲಿ ಮಾತನಾಡಿದ ಅವರು, ಹೊಸ ಉದ್ಯಮಗಳ ಅಗತ್ಯ ಮನಗಂಡಿರುವ ಸರ್ಕಾರ ‘ಉದ್ಯಮ ಸ್ನೇಹಿ ತೆರಿಗೆ ಪದ್ಧತಿ’ ರೂಪಿಸಲು ಈಗಾಗಲೇ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದರು.<br /> <br /> ‘ಲೈಸನ್ಸ್ ರಾಜ್’ (ಪರವಾನಗಿ ಪಡೆಯಲು ಕಿರುಕುಳ) ಪದ್ಧತಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಂತ್ಯ ಹಾಡಿದೆ. ಉದ್ಯಮ ಆರಂಭಕ್ಕೆ ಲೈಸನ್ಸ್ ಪಡೆಯಲು ಉದ್ಯಮಿಗಳು ಹಿಂದಿನಂತೆ ಹರಸಾಹಸ ಮಾಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.<br /> <br /> ಲೈಸನ್ಸ್ ನೀಡಲು ಇದ್ದ ಎಲ್ಲ ಅಡೆತಡೆ ನಿವಾರಿಸಲಾಗಿದೆ. ಹಿಂದೆಂದಿಗಿಂತಲೂ ಸರಳ ಹಾಗೂ ಸುಲಭವಾದ ವಿಧಾನದಲ್ಲಿ ಲೈಸನ್ಸ್ ಪಡೆಯಬಹುದು ಎಂದು ಸಚಿವರು ತಿಳಿಸಿದರು.<br /> <br /> <strong>ಸ್ಟ್ಯಾಂಡ್ ಅಪ್ ಇಂಡಿಯಾ:</strong> ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯ ಜತೆಗೆ ಪರಿಶಿಷ್ಟ ಜಾತಿ, ಪಂಗಡದ ಮಹಿಳಾ ಉದ್ಯಮಿಗಳಿಗೆ ಬ್ಯಾಂಕ್ ಮೂಲಕ ಆರ್ಥಿಕ ನೆರವು ಒದಗಿಸಲು ‘ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆಯನ್ನೂ ಪ್ರತ್ಯೇಕವಾಗಿ ಜಾರಿಗೆ ತರಲಾಗುವುದು ಎಂದು ಅವರು ಘೋಷಿಸಿದರು.<br /> <br /> ‘ಸಾರ್ವಜನಿಕ ಮತ್ತು ಖಾಸಗಿ ರಂಗದ ಬ್ಯಾಂಕ್ಗಳ ಪ್ರತಿ ಶಾಖೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತಲಾ ಒಬ್ಬರು ಮತ್ತು ಒಬ್ಬ ಮಹಿಳೆಗೆ ನೆರವು ನೀಡಬೇಕು’ ಎಂದು ತಿಳಿಸಿದರು.<br /> <br /> <strong>ಸವಾಲುಗಳ ನಡುವೆ ಸಾಧನೆ ತಂದ ಸಮಾಧಾನ:</strong> ವಿಶ್ವದ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತಕ್ಕೆ ತನ್ನದೇ ಆದ ಇತಿಮಿತಿಯಲ್ಲಿ ಹಲವಾರು ಸಮಸ್ಯೆಗಳಿವೆ. ಇಡೀ ವಿಶ್ವವೇ ಆರ್ಥಿಕ ಹಿಂಜರಿತದಿಂದ ತತ್ತರಿಸಿರುವಾಗ ಭಾರತದ ಆರ್ಥಿಕ ಸಾಧನೆ ಕಂಡು ಸಮಾಧಾನ ಪಟ್ಟುಕೊಳ್ಳಬೇಕಾದ ಸ್ಥಿತಿ ಇದೆ ಎಂದು ಜೇಟ್ಲಿ ಹೇಳಿದರು.<br /> <br /> ‘ಜಾಗತಿಕ ಅರ್ಥ ವ್ಯವಸ್ಥೆಯ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಯಾವ ಹೊತ್ತಿನಲ್ಲಿ ಏನಾಗುತ್ತದೆ ಎಂದು ಹೇಳಲಾಗದು’ ಎಂದರು.<br /> <br /> ‘ಈ ಮೊದಲಾದರೆ ಹತ್ತು ವರ್ಷಗಳಿಗೊಮ್ಮೆ ಆರ್ಥಿಕ ದುಸ್ಥಿತಿ ನಿರ್ಮಾಣವಾಗುತ್ತಿತ್ತು . ಈಗ ಒಂದೇ ದಿನದಲ್ಲಿ ಎರಡು ಬಾರಿ ಅಂಥ ಆತಂಕಕಾರಿ ಸ್ಥಿತಿ ನಿರ್ಮಾಣವಾಗುತ್ತಿದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.<br /> <br /> ಹಣಕಾಸು ಸಚಿವ ಹೇಳಿದ್ದು<br /> * ‘ಉದ್ಯಮ ಸ್ನೇಹಿ ತೆರಿಗೆ ಪದ್ಧತಿ’ ರೂಪಿಸಲು ಅಗತ್ಯ ಸಿದ್ಧತೆ<br /> * ಪ್ರತಿಯೊಂದು ಬ್ಯಾಂಕ್ ಶಾಖೆಯಿಂದ ಕನಿಷ್ಠ ಒಬ್ಬ ಮಹಿಳೆ ಮತ್ತು ಪರಿಶಿಷ್ಟರೊಬ್ಬರಿಗೆ ಸ್ಟ್ಯಾಂಡ್ ಅಪ್ ಯೋಜನೆಯ ಅಡಿ ಸಾಲ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಕೇಂದ್ರ ಸರ್ಕಾರ ಮುಂದಿನ ತಿಂಗಳು ಮಂಡಿಸಲಿರುವ ಬಜೆಟ್ ‘ನವೋದ್ಯಮ ಸ್ನೇಹಿ’ (ಸ್ಟಾರ್ಟ್ ಅಪ್) ಆಗಿರಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಶನಿವಾರ ಇಲ್ಲಿ ಸುಳಿವು ನೀಡಿದರು.<br /> <br /> ಸ್ಟಾರ್ಟ್ ಅಪ್ ಆರಂಭಿಸಲು ಪೂರಕವಾದ ತೆರಿಗೆ ಉತ್ತೇಜನಾ ವ್ಯವಸ್ಥೆಯನ್ನು ಬಜೆಟ್ನಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದರು.<br /> ಸ್ಟಾರ್ಟ್ ಅಪ್ ಇಂಡಿಯಾ ಸಮಾವೇಶದಲ್ಲಿ ಮಾತನಾಡಿದ ಅವರು, ಹೊಸ ಉದ್ಯಮಗಳ ಅಗತ್ಯ ಮನಗಂಡಿರುವ ಸರ್ಕಾರ ‘ಉದ್ಯಮ ಸ್ನೇಹಿ ತೆರಿಗೆ ಪದ್ಧತಿ’ ರೂಪಿಸಲು ಈಗಾಗಲೇ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದರು.<br /> <br /> ‘ಲೈಸನ್ಸ್ ರಾಜ್’ (ಪರವಾನಗಿ ಪಡೆಯಲು ಕಿರುಕುಳ) ಪದ್ಧತಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಂತ್ಯ ಹಾಡಿದೆ. ಉದ್ಯಮ ಆರಂಭಕ್ಕೆ ಲೈಸನ್ಸ್ ಪಡೆಯಲು ಉದ್ಯಮಿಗಳು ಹಿಂದಿನಂತೆ ಹರಸಾಹಸ ಮಾಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.<br /> <br /> ಲೈಸನ್ಸ್ ನೀಡಲು ಇದ್ದ ಎಲ್ಲ ಅಡೆತಡೆ ನಿವಾರಿಸಲಾಗಿದೆ. ಹಿಂದೆಂದಿಗಿಂತಲೂ ಸರಳ ಹಾಗೂ ಸುಲಭವಾದ ವಿಧಾನದಲ್ಲಿ ಲೈಸನ್ಸ್ ಪಡೆಯಬಹುದು ಎಂದು ಸಚಿವರು ತಿಳಿಸಿದರು.<br /> <br /> <strong>ಸ್ಟ್ಯಾಂಡ್ ಅಪ್ ಇಂಡಿಯಾ:</strong> ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯ ಜತೆಗೆ ಪರಿಶಿಷ್ಟ ಜಾತಿ, ಪಂಗಡದ ಮಹಿಳಾ ಉದ್ಯಮಿಗಳಿಗೆ ಬ್ಯಾಂಕ್ ಮೂಲಕ ಆರ್ಥಿಕ ನೆರವು ಒದಗಿಸಲು ‘ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆಯನ್ನೂ ಪ್ರತ್ಯೇಕವಾಗಿ ಜಾರಿಗೆ ತರಲಾಗುವುದು ಎಂದು ಅವರು ಘೋಷಿಸಿದರು.<br /> <br /> ‘ಸಾರ್ವಜನಿಕ ಮತ್ತು ಖಾಸಗಿ ರಂಗದ ಬ್ಯಾಂಕ್ಗಳ ಪ್ರತಿ ಶಾಖೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತಲಾ ಒಬ್ಬರು ಮತ್ತು ಒಬ್ಬ ಮಹಿಳೆಗೆ ನೆರವು ನೀಡಬೇಕು’ ಎಂದು ತಿಳಿಸಿದರು.<br /> <br /> <strong>ಸವಾಲುಗಳ ನಡುವೆ ಸಾಧನೆ ತಂದ ಸಮಾಧಾನ:</strong> ವಿಶ್ವದ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತಕ್ಕೆ ತನ್ನದೇ ಆದ ಇತಿಮಿತಿಯಲ್ಲಿ ಹಲವಾರು ಸಮಸ್ಯೆಗಳಿವೆ. ಇಡೀ ವಿಶ್ವವೇ ಆರ್ಥಿಕ ಹಿಂಜರಿತದಿಂದ ತತ್ತರಿಸಿರುವಾಗ ಭಾರತದ ಆರ್ಥಿಕ ಸಾಧನೆ ಕಂಡು ಸಮಾಧಾನ ಪಟ್ಟುಕೊಳ್ಳಬೇಕಾದ ಸ್ಥಿತಿ ಇದೆ ಎಂದು ಜೇಟ್ಲಿ ಹೇಳಿದರು.<br /> <br /> ‘ಜಾಗತಿಕ ಅರ್ಥ ವ್ಯವಸ್ಥೆಯ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಯಾವ ಹೊತ್ತಿನಲ್ಲಿ ಏನಾಗುತ್ತದೆ ಎಂದು ಹೇಳಲಾಗದು’ ಎಂದರು.<br /> <br /> ‘ಈ ಮೊದಲಾದರೆ ಹತ್ತು ವರ್ಷಗಳಿಗೊಮ್ಮೆ ಆರ್ಥಿಕ ದುಸ್ಥಿತಿ ನಿರ್ಮಾಣವಾಗುತ್ತಿತ್ತು . ಈಗ ಒಂದೇ ದಿನದಲ್ಲಿ ಎರಡು ಬಾರಿ ಅಂಥ ಆತಂಕಕಾರಿ ಸ್ಥಿತಿ ನಿರ್ಮಾಣವಾಗುತ್ತಿದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.<br /> <br /> ಹಣಕಾಸು ಸಚಿವ ಹೇಳಿದ್ದು<br /> * ‘ಉದ್ಯಮ ಸ್ನೇಹಿ ತೆರಿಗೆ ಪದ್ಧತಿ’ ರೂಪಿಸಲು ಅಗತ್ಯ ಸಿದ್ಧತೆ<br /> * ಪ್ರತಿಯೊಂದು ಬ್ಯಾಂಕ್ ಶಾಖೆಯಿಂದ ಕನಿಷ್ಠ ಒಬ್ಬ ಮಹಿಳೆ ಮತ್ತು ಪರಿಶಿಷ್ಟರೊಬ್ಬರಿಗೆ ಸ್ಟ್ಯಾಂಡ್ ಅಪ್ ಯೋಜನೆಯ ಅಡಿ ಸಾಲ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>