<p><strong>ಬೆಂಗಳೂರು: </strong>`ನಮ್ಮ ಮೆಟ್ರೊ'ದ ಎರಡನೇ ಹಂತದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ನಾರಾಯಣಪುರ ನಿಲ್ದಾಣ ರದ್ದಾಗಿದೆ. ದೊಡ್ಡನೆಕ್ಕುಂದಿ ಕೈಗಾರಿಕಾ ಪ್ರದೇಶದ ನಿಲ್ದಾಣ ಹೊಸದಾಗಿ ಸೇರ್ಪಡೆಯಾಗಿದೆ. ಅದಕ್ಕಾಗಿ ಮೆಟ್ರೊ ಪಥ ಒಂದು ಕಿ.ಮೀ. ವಿಸ್ತರಣೆಯಾಗಿದೆ.<br /> <br /> ಮಾಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ಅವರ ಮನವಿಗೆ ಮನ್ನಣೆ ನೀಡಿದ `ಬೆಂಗಳೂರು ಮೆಟ್ರೊ ರೈಲು ನಿಗಮ'ವು ಪೂರ್ವ-ಪಶ್ಚಿಮ ಕಾರಿಡಾರ್ನಲ್ಲಿ ಮೇಲಿನ ಬದಲಾವಣೆಯನ್ನು ಮಾಡಿದೆ.<br /> <br /> ಲಿಂಬಾವಳಿ ಅವರಿಗೂ ಮೊದಲೇ ಬೈಯಪ್ಪನಹಳ್ಳಿ- ವೈಟ್ಫೀಲ್ಡ್ವರೆಗಿನ ವಿಸ್ತರಣಾ ಮಾರ್ಗದ (15.5 ಕಿ.ಮೀ, 14 ನಿಲ್ದಾಣಗಳು) ಪಥ ಬದಲಾವಣೆ ಮಾಡುವಂತೆ ಸ್ಥಳೀಯ ನಿವಾಸಿಗಳು ಸಲ್ಲಿಸಿದ ಬೇಡಿಕೆಗೆ ನಿಗಮವು ಕಿವಿಗೊಟ್ಟಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಬೇಡಿಕೆಗೆ ಸ್ಪಂದಿಸಿದ್ದರೆ ಅಂತರವೂ ಕಡಿಮೆಯಾಗುತ್ತಿತ್ತು ಎಂಬ ಅಭಿಪ್ರಾಯ ಕೇಳಿಬಂದಿದೆ.<br /> <br /> ಕಳೆದ ಅಕ್ಟೋಬರ್ 4ರಂದು ಮಹದೇವಪುರ ಹಾಗೂ ಹೂಡಿ ಗ್ರಾಮದ ನಿವಾಸಿಗಳು ಮಹದೇವಪುರ ಮುಖ್ಯ ರಸ್ತೆಯ ಬಳಿ ನೇರ ಪಥ ನಿರ್ಮಾಣ ಮಾಡಿ ಗರುಡಾಚಾರ್ಪಾಳ್ಯ, ಹೂಡಿ ವೃತ್ತದ ಮೂಲಕ ವೈಟ್ಫೀಲ್ಡ್ಗೆ ಮೆಟ್ರೊ ತೆರಳಲು ಅನುವು ಮಾಡುವಂತೆ ಮನವಿ ಸಲ್ಲಿಸಿದ್ದರು.<br /> <br /> ಹೂಡಿ ವರೆಗೆ ಮೆಟ್ರೊ ವಿಸ್ತರಿಸುವಂತೆ ಲಿಂಬಾವಳಿ ಒತ್ತಾಯ ಮಾಡಿದ್ದರು. ರಾಜ್ಯ ಸರ್ಕಾರದ ಉನ್ನತ ಅಧಿಕಾರ ಸಮಿತಿ ಜನವರಿ 9ರಂದು ಲಿಂಬಾವಳಿ ಮನವಿಗೆ ಸ್ಪಂದಿಸಿ ಪಥ ಬದಲಾವಣೆಗೆ ಒಪ್ಪಿಗೆ ಸೂಚಿಸಿತ್ತು. <br /> <br /> ಹೂಡಿ ವೃತ್ತದ ವರೆಗೆ ಪಥ ವಿಸ್ತಾರಗೊಂಡು ಬಳಿಕ ಯೂ ಟರ್ನ್ ಪಡೆದುಕೊಂಡು ಹೂಡಿ ಮುಖ್ಯ ರಸ್ತೆ ಮೂಲಕ ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶಕ್ಕೂ ಮುನ್ನ ಮೂಲ ಪಥಕ್ಕೆ ಜೋಡಣೆಯಾಗುವಂತೆ ಬದಲಾವಣೆ ಮಾಡಲಾಗಿದೆ. ಇದರಿಂದಾಗಿ ಬೈಯಪ್ಪನಹಳ್ಳಿ- ವೈಟ್ಫೀಲ್ಡ್ ನಡುವಿನ ಪಥವು 1.039 ಕಿ.ಮೀ. ಹಿಗ್ಗಲಿದೆ. ಒಂದು ಕಿ.ಮೀ.ಗೆ ಆಗುವ ಸರಾಸರಿ ವೆಚ್ಚ 175 ಕೋಟಿ ರೂಪಾಯಿ.<br /> <br /> ಕೆ.ಆರ್.ಪುರ ಹಾಗೂ ಮಹದೇವಪುರ ನಿಲ್ದಾಣದ ನಡುವೆ ನಾರಾಯಣಪುರ ನಿಲ್ದಾಣ ಸ್ಥಾಪನೆ ಮಾಡುವುದರಿಂದ ಹೆಚ್ಚು ಕಟ್ಟಡಗಳು ನೆಲಸಮ ಆಗಲಿವೆ ಹಾಗೂ ಅಧಿಕ ಪ್ರಮಾಣದ ಭೂ ಒತ್ತುವರಿ ಆಗಲಿದೆ ಎಂದು ಲಿಂಬಾವಳಿ ಪ್ರತಿಪಾದಿಸಿದ್ದರು.<br /> <br /> `ನಾವು ಮೆಟ್ರೊ ಮಾರ್ಗವನ್ನು ಕಡಿಮೆ ಮಾಡಿ ಎಂದು ಮನವಿ ಸಲ್ಲಿಸಿದ್ದೆವು. ಆದರೆ, ಈಗ ಮಾರ್ಗ ವಿಸ್ತರಣೆಯಾಗಿದೆ. ಅದರಲ್ಲೂ ಮೆಟ್ರೊ ಜಾಗದಲ್ಲಿ ಯೂ ಶೇಪ್ ಪಥ ಹೊಸ ವಿಚಾರ' ಎಂದು ಸ್ಥಳೀಯ ನಿವಾಸಿಗಳು ಆಘಾತ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ನಮ್ಮ ಮೆಟ್ರೊ'ದ ಎರಡನೇ ಹಂತದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ನಾರಾಯಣಪುರ ನಿಲ್ದಾಣ ರದ್ದಾಗಿದೆ. ದೊಡ್ಡನೆಕ್ಕುಂದಿ ಕೈಗಾರಿಕಾ ಪ್ರದೇಶದ ನಿಲ್ದಾಣ ಹೊಸದಾಗಿ ಸೇರ್ಪಡೆಯಾಗಿದೆ. ಅದಕ್ಕಾಗಿ ಮೆಟ್ರೊ ಪಥ ಒಂದು ಕಿ.ಮೀ. ವಿಸ್ತರಣೆಯಾಗಿದೆ.<br /> <br /> ಮಾಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ಅವರ ಮನವಿಗೆ ಮನ್ನಣೆ ನೀಡಿದ `ಬೆಂಗಳೂರು ಮೆಟ್ರೊ ರೈಲು ನಿಗಮ'ವು ಪೂರ್ವ-ಪಶ್ಚಿಮ ಕಾರಿಡಾರ್ನಲ್ಲಿ ಮೇಲಿನ ಬದಲಾವಣೆಯನ್ನು ಮಾಡಿದೆ.<br /> <br /> ಲಿಂಬಾವಳಿ ಅವರಿಗೂ ಮೊದಲೇ ಬೈಯಪ್ಪನಹಳ್ಳಿ- ವೈಟ್ಫೀಲ್ಡ್ವರೆಗಿನ ವಿಸ್ತರಣಾ ಮಾರ್ಗದ (15.5 ಕಿ.ಮೀ, 14 ನಿಲ್ದಾಣಗಳು) ಪಥ ಬದಲಾವಣೆ ಮಾಡುವಂತೆ ಸ್ಥಳೀಯ ನಿವಾಸಿಗಳು ಸಲ್ಲಿಸಿದ ಬೇಡಿಕೆಗೆ ನಿಗಮವು ಕಿವಿಗೊಟ್ಟಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಬೇಡಿಕೆಗೆ ಸ್ಪಂದಿಸಿದ್ದರೆ ಅಂತರವೂ ಕಡಿಮೆಯಾಗುತ್ತಿತ್ತು ಎಂಬ ಅಭಿಪ್ರಾಯ ಕೇಳಿಬಂದಿದೆ.<br /> <br /> ಕಳೆದ ಅಕ್ಟೋಬರ್ 4ರಂದು ಮಹದೇವಪುರ ಹಾಗೂ ಹೂಡಿ ಗ್ರಾಮದ ನಿವಾಸಿಗಳು ಮಹದೇವಪುರ ಮುಖ್ಯ ರಸ್ತೆಯ ಬಳಿ ನೇರ ಪಥ ನಿರ್ಮಾಣ ಮಾಡಿ ಗರುಡಾಚಾರ್ಪಾಳ್ಯ, ಹೂಡಿ ವೃತ್ತದ ಮೂಲಕ ವೈಟ್ಫೀಲ್ಡ್ಗೆ ಮೆಟ್ರೊ ತೆರಳಲು ಅನುವು ಮಾಡುವಂತೆ ಮನವಿ ಸಲ್ಲಿಸಿದ್ದರು.<br /> <br /> ಹೂಡಿ ವರೆಗೆ ಮೆಟ್ರೊ ವಿಸ್ತರಿಸುವಂತೆ ಲಿಂಬಾವಳಿ ಒತ್ತಾಯ ಮಾಡಿದ್ದರು. ರಾಜ್ಯ ಸರ್ಕಾರದ ಉನ್ನತ ಅಧಿಕಾರ ಸಮಿತಿ ಜನವರಿ 9ರಂದು ಲಿಂಬಾವಳಿ ಮನವಿಗೆ ಸ್ಪಂದಿಸಿ ಪಥ ಬದಲಾವಣೆಗೆ ಒಪ್ಪಿಗೆ ಸೂಚಿಸಿತ್ತು. <br /> <br /> ಹೂಡಿ ವೃತ್ತದ ವರೆಗೆ ಪಥ ವಿಸ್ತಾರಗೊಂಡು ಬಳಿಕ ಯೂ ಟರ್ನ್ ಪಡೆದುಕೊಂಡು ಹೂಡಿ ಮುಖ್ಯ ರಸ್ತೆ ಮೂಲಕ ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶಕ್ಕೂ ಮುನ್ನ ಮೂಲ ಪಥಕ್ಕೆ ಜೋಡಣೆಯಾಗುವಂತೆ ಬದಲಾವಣೆ ಮಾಡಲಾಗಿದೆ. ಇದರಿಂದಾಗಿ ಬೈಯಪ್ಪನಹಳ್ಳಿ- ವೈಟ್ಫೀಲ್ಡ್ ನಡುವಿನ ಪಥವು 1.039 ಕಿ.ಮೀ. ಹಿಗ್ಗಲಿದೆ. ಒಂದು ಕಿ.ಮೀ.ಗೆ ಆಗುವ ಸರಾಸರಿ ವೆಚ್ಚ 175 ಕೋಟಿ ರೂಪಾಯಿ.<br /> <br /> ಕೆ.ಆರ್.ಪುರ ಹಾಗೂ ಮಹದೇವಪುರ ನಿಲ್ದಾಣದ ನಡುವೆ ನಾರಾಯಣಪುರ ನಿಲ್ದಾಣ ಸ್ಥಾಪನೆ ಮಾಡುವುದರಿಂದ ಹೆಚ್ಚು ಕಟ್ಟಡಗಳು ನೆಲಸಮ ಆಗಲಿವೆ ಹಾಗೂ ಅಧಿಕ ಪ್ರಮಾಣದ ಭೂ ಒತ್ತುವರಿ ಆಗಲಿದೆ ಎಂದು ಲಿಂಬಾವಳಿ ಪ್ರತಿಪಾದಿಸಿದ್ದರು.<br /> <br /> `ನಾವು ಮೆಟ್ರೊ ಮಾರ್ಗವನ್ನು ಕಡಿಮೆ ಮಾಡಿ ಎಂದು ಮನವಿ ಸಲ್ಲಿಸಿದ್ದೆವು. ಆದರೆ, ಈಗ ಮಾರ್ಗ ವಿಸ್ತರಣೆಯಾಗಿದೆ. ಅದರಲ್ಲೂ ಮೆಟ್ರೊ ಜಾಗದಲ್ಲಿ ಯೂ ಶೇಪ್ ಪಥ ಹೊಸ ವಿಚಾರ' ಎಂದು ಸ್ಥಳೀಯ ನಿವಾಸಿಗಳು ಆಘಾತ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>