<p>ಸ್ಟಾವ್ಯಾಂಗರ್ (ನಾರ್ವೆ) (ಪಿಟಿಐ): ಭಾರತದ ರಾಯಭಾರ ಕಚೇರಿಯ ನಿರಂತರ ಒತ್ತಡದ ಪರಿಣಾಮವಾಗಿ ಕಳೆದ ವರ್ಷದಿಂದ ಇಲ್ಲಿನ ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಅನಿವಾಸಿ ಭಾರತೀಯ ದಂಪತಿಯ ಇಬ್ಬರು ಮಕ್ಕಳನ್ನು ಅವರ ಚಿಕ್ಕಪ್ಪನ ಸುಪರ್ದಿಗೆ ವಹಿಸುವಂತೆ ನಾರ್ವೆಯ ಸ್ಟಾವ್ಯಾಂಗರ್ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. <br /> <br /> ಭಾವನಾತ್ಮಕ ಸಂಬಂಧಗಳಿಂದಾಗಿ ಅಭಿಜ್ಞಾನ (3) ಹಾಗೂ ಐಶ್ವರ್ಯ (1) ಅವರನ್ನು ಚಿಕ್ಕಪ್ಪನಾದ ಅರುಣಾಭಾಷ ಭಟ್ಟಾಚಾರ್ಯ ಬೆಳೆಸಿದ್ದರು. ಈ ಮಕ್ಕಳ ಕುರಿತು ತಾಯಿ- ತಂದೆಯರ ನಿರ್ಲಕ್ಷವೇ ತಾನು ಮಕ್ಕಳನ್ನು ಪಡೆದು ಬೆಳೆಸಲು ಕಾರಣ ಎಂದು ಚಿಕ್ಕಪ್ಪ ತಿಳಿಸಿದ್ದ. ನಂತರ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿ ಪಾಲನಾ ಕೇಂದ್ರದ ವಶಕ್ಕೆ ಒಪ್ಪಿಸಲಾಗಿತ್ತು. ಪಾಲಕರಿಂದ ಬೇರ್ಪಡಿಸಲಾದ ಈ ಮಕ್ಕಳನ್ನು ಚಿಕ್ಕಪ್ಪ ಚೆನ್ನಾಗಿ ನೋಡಿಕೊಳ್ಳಬೇಕು, ಮಕ್ಕಳನ್ನು ಅವರ ಸ್ವದೇಶವಾದ ಭಾರತಕ್ಕೆ ಕಳುಹಿಸಿಕೊಡಲು ಅಗತ್ಯ ಸಿದ್ಧತೆ ಮಾಡಬೇಕು ಎಂದು ಸೂಚಿಸಲಾಗಿದೆ.<br /> <br /> ಮಕ್ಕಳ ಬಿಡುಗಡೆಗಾಗಿ ಚಿಕ್ಕಪ್ಪ ಹಾಗೂ ನಾರ್ವೆಯ ಮಕ್ಕಳ ಪಾಲಕರು ಹಾಗೂ ಮಕ್ಕಳ ಕಲ್ಯಾಣ ಸೇವೆ (ಸಿಡಬ್ಲ್ಯೂಎಸ್) ವತಿಯಿಂದ ಜಂಟಿಯಾಗಿ ಕೋರ್ಟ್ಗೆ ಮನವಿ ಮಾಡಿಕೊಳ್ಳಲಾಗಿತ್ತು. ಮನವಿ ವಿಚಾರಣೆ ನಡೆಸಿದ ನ್ಯಾಯಾಲಯ ಮಕ್ಕಳ ಬಿಡುಗಡೆಗೆ ಆದೇಶ ನೀಡಿದೆ.<br /> <br /> ಕೋರ್ಟ್ ಆದೇಶ ಸಂಬಂಧ ಪ್ರತಿಕ್ರಿಯಿಸಿರುವ ಮಕ್ಕಳ ತಂದೆ ಅನುರೂಪ್, ಒಂದು ವರ್ಷದ ನೋವಿಗೆ ಈಗ ಮುಕ್ತಿ ಸಿಕ್ಕಂತಾಗಿದೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸ್ಟಾವ್ಯಾಂಗರ್ (ನಾರ್ವೆ) (ಪಿಟಿಐ): ಭಾರತದ ರಾಯಭಾರ ಕಚೇರಿಯ ನಿರಂತರ ಒತ್ತಡದ ಪರಿಣಾಮವಾಗಿ ಕಳೆದ ವರ್ಷದಿಂದ ಇಲ್ಲಿನ ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಅನಿವಾಸಿ ಭಾರತೀಯ ದಂಪತಿಯ ಇಬ್ಬರು ಮಕ್ಕಳನ್ನು ಅವರ ಚಿಕ್ಕಪ್ಪನ ಸುಪರ್ದಿಗೆ ವಹಿಸುವಂತೆ ನಾರ್ವೆಯ ಸ್ಟಾವ್ಯಾಂಗರ್ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. <br /> <br /> ಭಾವನಾತ್ಮಕ ಸಂಬಂಧಗಳಿಂದಾಗಿ ಅಭಿಜ್ಞಾನ (3) ಹಾಗೂ ಐಶ್ವರ್ಯ (1) ಅವರನ್ನು ಚಿಕ್ಕಪ್ಪನಾದ ಅರುಣಾಭಾಷ ಭಟ್ಟಾಚಾರ್ಯ ಬೆಳೆಸಿದ್ದರು. ಈ ಮಕ್ಕಳ ಕುರಿತು ತಾಯಿ- ತಂದೆಯರ ನಿರ್ಲಕ್ಷವೇ ತಾನು ಮಕ್ಕಳನ್ನು ಪಡೆದು ಬೆಳೆಸಲು ಕಾರಣ ಎಂದು ಚಿಕ್ಕಪ್ಪ ತಿಳಿಸಿದ್ದ. ನಂತರ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿ ಪಾಲನಾ ಕೇಂದ್ರದ ವಶಕ್ಕೆ ಒಪ್ಪಿಸಲಾಗಿತ್ತು. ಪಾಲಕರಿಂದ ಬೇರ್ಪಡಿಸಲಾದ ಈ ಮಕ್ಕಳನ್ನು ಚಿಕ್ಕಪ್ಪ ಚೆನ್ನಾಗಿ ನೋಡಿಕೊಳ್ಳಬೇಕು, ಮಕ್ಕಳನ್ನು ಅವರ ಸ್ವದೇಶವಾದ ಭಾರತಕ್ಕೆ ಕಳುಹಿಸಿಕೊಡಲು ಅಗತ್ಯ ಸಿದ್ಧತೆ ಮಾಡಬೇಕು ಎಂದು ಸೂಚಿಸಲಾಗಿದೆ.<br /> <br /> ಮಕ್ಕಳ ಬಿಡುಗಡೆಗಾಗಿ ಚಿಕ್ಕಪ್ಪ ಹಾಗೂ ನಾರ್ವೆಯ ಮಕ್ಕಳ ಪಾಲಕರು ಹಾಗೂ ಮಕ್ಕಳ ಕಲ್ಯಾಣ ಸೇವೆ (ಸಿಡಬ್ಲ್ಯೂಎಸ್) ವತಿಯಿಂದ ಜಂಟಿಯಾಗಿ ಕೋರ್ಟ್ಗೆ ಮನವಿ ಮಾಡಿಕೊಳ್ಳಲಾಗಿತ್ತು. ಮನವಿ ವಿಚಾರಣೆ ನಡೆಸಿದ ನ್ಯಾಯಾಲಯ ಮಕ್ಕಳ ಬಿಡುಗಡೆಗೆ ಆದೇಶ ನೀಡಿದೆ.<br /> <br /> ಕೋರ್ಟ್ ಆದೇಶ ಸಂಬಂಧ ಪ್ರತಿಕ್ರಿಯಿಸಿರುವ ಮಕ್ಕಳ ತಂದೆ ಅನುರೂಪ್, ಒಂದು ವರ್ಷದ ನೋವಿಗೆ ಈಗ ಮುಕ್ತಿ ಸಿಕ್ಕಂತಾಗಿದೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>