<p>ಮೊಳಕಾಲ್ಮುರು: ನೀರಿನ ಮೂಲ ಸರಿಯಾಗಿ ಗುರುತಿಸದೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ತಾಲ್ಲೂಕಿನ ರಂಗಯ್ಯನದುರ್ಗ ಜಲಾಶಯ ನಿರೀಕ್ಷಿತ ಸೇವೆಯಿಂದ ಪೂರ್ಣವಾಗಿ ವಿಮುಖ ಹಾದಿಯಲ್ಲಿ ಸಾಗುತ್ತಿದೆ.<br /> <br /> 1974–75ರಲ್ಲಿ ಮಾಜಿ ಮುಖ್ಯಮಂತ್ರಿ ದಿ. ಗುಂಡೂರಾವ್ ಅವಧಿಯಲ್ಲಿ ಶಂಕುಸ್ಥಾಪನೆ ಆಗಿರುವ ಈ ಜಲಾಶಯ ನಿರ್ಮಾಣ ಕಾಮಗಾರಿ 40 ವರ್ಷ ಕಳೆದರೂ ಪೂರ್ಣವಾಗಿಲ್ಲ. ಇದರಿಂದ ಜಲಾಶಯಕ್ಕೆ ಸರ್ಕಾರದಿಂದ ಮಂಜೂರಾಗಬೇಕಿದ್ದ ನಿರ್ವಹಣಾ ವೆಚ್ಚಕ್ಕೆ ಕತ್ತರಿ ಬೀಳುವ ಮೂಲಕ ಹಲವು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.<br /> <br /> ಸಣ್ಣ ನೀರಾವರಿ ಇಲಾಖೆ ಮೂಲಗಳ ಪ್ರಕಾರ ಜಲಾಶಯ ಸಾಮರ್ಥ್ಯ 540 ಎಂಎಫ್ಎಸ್ (0.5 ಟಿಎಂಸಿ ), 900 ಮೀಟರ್ ಉದ್ದವಿದ್ದು, 38 ಅಡಿ ಎತ್ತರವಿದೆ. 6,350 ಎಕರೆ ಅಚ್ಚುಕಟ್ಟಿಗೆ ನೀರುಣಿಸುವ ಸಾಮರ್ಥ್ಯ ಹೊಂದಿದೆ.<br /> ಕಾಮಗಾರಿ ಪೂರ್ಣವಾಗಿಲ್ಲ: 40 ವರ್ಷ ಕಳೆಯುತ್ತಾ ಬಂದರೂ ಜಲಾಶಯ ನಿರ್ಮಾಣ ಕಾರ್ಯ ಪೂರ್ಣವಾಗಿಲ್ಲ.<br /> <br /> ಬೆಂಗಳೂರು ಮೂಲದ ಗುತ್ತಿಗೆದಾರರು ಹಣ ಪಾವತಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ<br /> ಪ್ರಕರಣ ದಾಖಲು ಮಾಡಿದ್ದಾರೆ. ಈಗ ಮೂಲ ಗುತ್ತಿಗೆದಾರರು ನಿಧನ ಹೊಂದಿದ್ದಾರೆ. 18.8 ಕಿ.ಮೀ. ಎಡದಂಡೆ ನಾಲೆ ಪೈಕಿ 13 ಕಿ.ಮೀ. ಮಾಡಲಾಗಿದೆ. 14 ಕಿ.ಮೀ. ಬಲದಂಡೆ ಪೈಕಿ 13 ಕಿ.ಮೀ. ಮಾಡಲಾಗಿದೆ ಎಂದು ಎಂಜಿನಿಯರ್ ರಮೇಶ್ ಹೇಳುತ್ತಾರೆ.<br /> <br /> ಜಲಾಶಯ ಪೂರ್ಣ ವರದಿ ಸಲ್ಲಿಸದ ಕಾರಣ ಸರ್ಕಾರದಿಂದ ನಿರ್ವಹಣಾ ವೆಚ್ಚ ಸಹ ನೀಡುತ್ತಿಲ್ಲ. ಜಲಾಶಯಕ್ಕೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಬೀದಿ ದೀಪಗಳು ಹಾಳಾಗಿವೆ. ಗೇಟ್ಗಳನ್ನು ಎತ್ತಿ ಇಳಿಸಲು ಜನರೇಟರ್ ಬಳಸಲಾಗುತ್ತಿದೆ.<br /> <br /> ರಾತ್ರಿ ಕಾವಲುಗಾರ ಇಲ್ಲದ ಕಾರಣ ಹಲವು ಬಾರಿ ರಾತ್ರಿ ವೇಳೆ ನೀರು ಬಿಟ್ಟಿರುವ ಘಟನೆಗಳು ನಡೆದಿವೆ. ಈ ಬಗ್ಗೆ ಪತ್ರ ಬರೆದು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲಾಖೆ ಅಧಿಕಾರಿಗಳು ದೂರುತ್ತಾರೆ.<br /> <br /> ಜಲಾಶಯದಿಂದ ಕುಡಿಯುವ ನೀರಿನ ಸೌಲಭ್ಯ ಪಡೆಯುತ್ತಿರುವ ಕಾರಣ ಮೊಳಕಾಲ್ಮುರು ಪಟ್ಟಣ ಪಂಚಾಯ್ತಿ ಅಥವಾ ಲೋಕೋಪಯೋಗಿ ಇಲಾಖೆ ಸಂಪರ್ಕ ರಸ್ತೆ ನಿರ್ಮಿಸಬಹುದಾಗಿದೆ. ರಸ್ತೆ ಪೂರ್ಣ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಯಾರೊಬ್ಬರೂ ಜಲಾಶಯದತ್ತ ಸುಳಿಯದಂತೆ ಮಾಡಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.<br /> <br /> <strong>ತುಂಬುವುದೇ ಅಪರೂಪ!:</strong> ಸೂಕ್ತ ನೀರಿನ ಮೂಲವಿಲ್ಲದೇ ನಿರ್ಮಿಸಿರುವುರಿಂದ ಜಲಾಶಯ ತುಂಬುವುದೇ ಅಪರೂಪ. 35 ವರ್ಷಗಳಲ್ಲಿ 5–6 ಬಾರಿ ಮಾತ್ರ ತುಂಬಿದೆ. ಜಲಾಶಯಕ್ಕೆ ನೀರು ಬರುವ ಪಾತ್ರದಲ್ಲಿ ಹಲವು ಚೆಕ್ಡ್ಯಾಂ,<br /> ಬ್ಯಾರೇಜ್ ನಿರ್ಮಾಣ ಮಾಡಿರುವುದು ಸಹ ಒತ್ತು ನೀಡಿದೆ. ಈಗ ಚಿಕ್ಕುಂತಿ ಬಳಿ ಮಂಜೂರಾಗಿರುವ ಎರಡು ಬ್ಯಾರೇಜ್ ರದ್ದು ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ ಎಂದು ರಂಗಯ್ಯನದುರ್ಗ ಜಲಾಶಯ ಅಚ್ಚುಕಟ್ಟುದಾರರ ಸಮಿತಿ ಅಧ್ಯಕ್ಷ ಲಕ್ಷ್ಮೀಪತಿ ಹೇಳಿದರು.<br /> <br /> ಜಲಾಶಯಕ್ಕೆ ತುಂಗಭದ್ರಾ ಹಿನ್ನೀರು ಅಥವಾ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನೀರು ಹರಿಸುವ ಸಾಧ್ಯತೆ ಇದೆ. ಆ ಮೂಲಕ ತಾಲ್ಲೂಕಿನ ಅರ್ಧ ಭಾಗದಷ್ಟು ಕೆರೆಗಳನ್ನು ತುಂಬಿಸಬಹುದಾಗಿದೆ. ಈ ನಿಟ್ಟಿನಲ್ಲಿ ರೂಪುರೇಷೆಗಳ ಚರ್ಚೆಗೆ ಶೀಘವೇ ರೈತರ ಸಭೆ ಕರೆದು ಮಾತುಕತೆ ನಡೆಸುವ ಉದ್ದೇಶವಿದೆ ಎಂದರು.<br /> <br /> ಅನುದಾನ ವ್ಯರ್ಥ: ಜಲಸಂವರ್ಧನ ಯೋಜನೆಯಲ್ಲಿ ಕೋಟ್ಯಂತರ ವೆಚ್ಚದಲ್ಲಿ ಅಂತರ್ಜಲ ಸಂರಕ್ಷಣೆ ಕಾರ್ಯಗಳನ್ನು ಮಾಡಲಾಗಿದೆ. ಆದರೆ, ಜಿಗನಿಹಳ್ಳ ಪಾತ್ರದಲ್ಲಿ ಮರಳು ಮಾಫಿಯಾ ಇದಕ್ಕೆ ಎಳ್ಳುನೀರು ಬಿಡುತ್ತಿದೆ. ಗುತ್ತಿಗೆದಾರರು, ಅಧಿಕಾರಿಗಳು, ಜನಪ್ರತಿನಿಧಿಗಳು ಶಾಮೀಲಾಗಿ ಅಂತರ್ಜಲ ಮಟ್ಟ ಕುಸಿಯುವಂತೆ ಮಾಡುತ್ತಿದ್ದಾರೆ ಎಂದು ಲಕ್ಷ್ಮೀಪತಿ ದೂರಿದರು.<br /> <br /> ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿಗಳು ಇತ್ತ ಗಮನಹರಿಸಿ ಜಲಾಶಯಕ್ಕೆ ಮೂಲಸೌಕರ್ಯ ಕಲ್ಪಿಸಲು ಮುಂದಾಗುವ ಜತೆಗೆ ನೀರಿನ ಮೂಲ ಸರ್ವೇ ಕೆಲಸಕ್ಕೆ ಮುಂದಾಗಬೇಕಾದ ಅವಶ್ಯಕತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೊಳಕಾಲ್ಮುರು: ನೀರಿನ ಮೂಲ ಸರಿಯಾಗಿ ಗುರುತಿಸದೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ತಾಲ್ಲೂಕಿನ ರಂಗಯ್ಯನದುರ್ಗ ಜಲಾಶಯ ನಿರೀಕ್ಷಿತ ಸೇವೆಯಿಂದ ಪೂರ್ಣವಾಗಿ ವಿಮುಖ ಹಾದಿಯಲ್ಲಿ ಸಾಗುತ್ತಿದೆ.<br /> <br /> 1974–75ರಲ್ಲಿ ಮಾಜಿ ಮುಖ್ಯಮಂತ್ರಿ ದಿ. ಗುಂಡೂರಾವ್ ಅವಧಿಯಲ್ಲಿ ಶಂಕುಸ್ಥಾಪನೆ ಆಗಿರುವ ಈ ಜಲಾಶಯ ನಿರ್ಮಾಣ ಕಾಮಗಾರಿ 40 ವರ್ಷ ಕಳೆದರೂ ಪೂರ್ಣವಾಗಿಲ್ಲ. ಇದರಿಂದ ಜಲಾಶಯಕ್ಕೆ ಸರ್ಕಾರದಿಂದ ಮಂಜೂರಾಗಬೇಕಿದ್ದ ನಿರ್ವಹಣಾ ವೆಚ್ಚಕ್ಕೆ ಕತ್ತರಿ ಬೀಳುವ ಮೂಲಕ ಹಲವು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.<br /> <br /> ಸಣ್ಣ ನೀರಾವರಿ ಇಲಾಖೆ ಮೂಲಗಳ ಪ್ರಕಾರ ಜಲಾಶಯ ಸಾಮರ್ಥ್ಯ 540 ಎಂಎಫ್ಎಸ್ (0.5 ಟಿಎಂಸಿ ), 900 ಮೀಟರ್ ಉದ್ದವಿದ್ದು, 38 ಅಡಿ ಎತ್ತರವಿದೆ. 6,350 ಎಕರೆ ಅಚ್ಚುಕಟ್ಟಿಗೆ ನೀರುಣಿಸುವ ಸಾಮರ್ಥ್ಯ ಹೊಂದಿದೆ.<br /> ಕಾಮಗಾರಿ ಪೂರ್ಣವಾಗಿಲ್ಲ: 40 ವರ್ಷ ಕಳೆಯುತ್ತಾ ಬಂದರೂ ಜಲಾಶಯ ನಿರ್ಮಾಣ ಕಾರ್ಯ ಪೂರ್ಣವಾಗಿಲ್ಲ.<br /> <br /> ಬೆಂಗಳೂರು ಮೂಲದ ಗುತ್ತಿಗೆದಾರರು ಹಣ ಪಾವತಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ<br /> ಪ್ರಕರಣ ದಾಖಲು ಮಾಡಿದ್ದಾರೆ. ಈಗ ಮೂಲ ಗುತ್ತಿಗೆದಾರರು ನಿಧನ ಹೊಂದಿದ್ದಾರೆ. 18.8 ಕಿ.ಮೀ. ಎಡದಂಡೆ ನಾಲೆ ಪೈಕಿ 13 ಕಿ.ಮೀ. ಮಾಡಲಾಗಿದೆ. 14 ಕಿ.ಮೀ. ಬಲದಂಡೆ ಪೈಕಿ 13 ಕಿ.ಮೀ. ಮಾಡಲಾಗಿದೆ ಎಂದು ಎಂಜಿನಿಯರ್ ರಮೇಶ್ ಹೇಳುತ್ತಾರೆ.<br /> <br /> ಜಲಾಶಯ ಪೂರ್ಣ ವರದಿ ಸಲ್ಲಿಸದ ಕಾರಣ ಸರ್ಕಾರದಿಂದ ನಿರ್ವಹಣಾ ವೆಚ್ಚ ಸಹ ನೀಡುತ್ತಿಲ್ಲ. ಜಲಾಶಯಕ್ಕೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಬೀದಿ ದೀಪಗಳು ಹಾಳಾಗಿವೆ. ಗೇಟ್ಗಳನ್ನು ಎತ್ತಿ ಇಳಿಸಲು ಜನರೇಟರ್ ಬಳಸಲಾಗುತ್ತಿದೆ.<br /> <br /> ರಾತ್ರಿ ಕಾವಲುಗಾರ ಇಲ್ಲದ ಕಾರಣ ಹಲವು ಬಾರಿ ರಾತ್ರಿ ವೇಳೆ ನೀರು ಬಿಟ್ಟಿರುವ ಘಟನೆಗಳು ನಡೆದಿವೆ. ಈ ಬಗ್ಗೆ ಪತ್ರ ಬರೆದು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲಾಖೆ ಅಧಿಕಾರಿಗಳು ದೂರುತ್ತಾರೆ.<br /> <br /> ಜಲಾಶಯದಿಂದ ಕುಡಿಯುವ ನೀರಿನ ಸೌಲಭ್ಯ ಪಡೆಯುತ್ತಿರುವ ಕಾರಣ ಮೊಳಕಾಲ್ಮುರು ಪಟ್ಟಣ ಪಂಚಾಯ್ತಿ ಅಥವಾ ಲೋಕೋಪಯೋಗಿ ಇಲಾಖೆ ಸಂಪರ್ಕ ರಸ್ತೆ ನಿರ್ಮಿಸಬಹುದಾಗಿದೆ. ರಸ್ತೆ ಪೂರ್ಣ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಯಾರೊಬ್ಬರೂ ಜಲಾಶಯದತ್ತ ಸುಳಿಯದಂತೆ ಮಾಡಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.<br /> <br /> <strong>ತುಂಬುವುದೇ ಅಪರೂಪ!:</strong> ಸೂಕ್ತ ನೀರಿನ ಮೂಲವಿಲ್ಲದೇ ನಿರ್ಮಿಸಿರುವುರಿಂದ ಜಲಾಶಯ ತುಂಬುವುದೇ ಅಪರೂಪ. 35 ವರ್ಷಗಳಲ್ಲಿ 5–6 ಬಾರಿ ಮಾತ್ರ ತುಂಬಿದೆ. ಜಲಾಶಯಕ್ಕೆ ನೀರು ಬರುವ ಪಾತ್ರದಲ್ಲಿ ಹಲವು ಚೆಕ್ಡ್ಯಾಂ,<br /> ಬ್ಯಾರೇಜ್ ನಿರ್ಮಾಣ ಮಾಡಿರುವುದು ಸಹ ಒತ್ತು ನೀಡಿದೆ. ಈಗ ಚಿಕ್ಕುಂತಿ ಬಳಿ ಮಂಜೂರಾಗಿರುವ ಎರಡು ಬ್ಯಾರೇಜ್ ರದ್ದು ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ ಎಂದು ರಂಗಯ್ಯನದುರ್ಗ ಜಲಾಶಯ ಅಚ್ಚುಕಟ್ಟುದಾರರ ಸಮಿತಿ ಅಧ್ಯಕ್ಷ ಲಕ್ಷ್ಮೀಪತಿ ಹೇಳಿದರು.<br /> <br /> ಜಲಾಶಯಕ್ಕೆ ತುಂಗಭದ್ರಾ ಹಿನ್ನೀರು ಅಥವಾ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನೀರು ಹರಿಸುವ ಸಾಧ್ಯತೆ ಇದೆ. ಆ ಮೂಲಕ ತಾಲ್ಲೂಕಿನ ಅರ್ಧ ಭಾಗದಷ್ಟು ಕೆರೆಗಳನ್ನು ತುಂಬಿಸಬಹುದಾಗಿದೆ. ಈ ನಿಟ್ಟಿನಲ್ಲಿ ರೂಪುರೇಷೆಗಳ ಚರ್ಚೆಗೆ ಶೀಘವೇ ರೈತರ ಸಭೆ ಕರೆದು ಮಾತುಕತೆ ನಡೆಸುವ ಉದ್ದೇಶವಿದೆ ಎಂದರು.<br /> <br /> ಅನುದಾನ ವ್ಯರ್ಥ: ಜಲಸಂವರ್ಧನ ಯೋಜನೆಯಲ್ಲಿ ಕೋಟ್ಯಂತರ ವೆಚ್ಚದಲ್ಲಿ ಅಂತರ್ಜಲ ಸಂರಕ್ಷಣೆ ಕಾರ್ಯಗಳನ್ನು ಮಾಡಲಾಗಿದೆ. ಆದರೆ, ಜಿಗನಿಹಳ್ಳ ಪಾತ್ರದಲ್ಲಿ ಮರಳು ಮಾಫಿಯಾ ಇದಕ್ಕೆ ಎಳ್ಳುನೀರು ಬಿಡುತ್ತಿದೆ. ಗುತ್ತಿಗೆದಾರರು, ಅಧಿಕಾರಿಗಳು, ಜನಪ್ರತಿನಿಧಿಗಳು ಶಾಮೀಲಾಗಿ ಅಂತರ್ಜಲ ಮಟ್ಟ ಕುಸಿಯುವಂತೆ ಮಾಡುತ್ತಿದ್ದಾರೆ ಎಂದು ಲಕ್ಷ್ಮೀಪತಿ ದೂರಿದರು.<br /> <br /> ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿಗಳು ಇತ್ತ ಗಮನಹರಿಸಿ ಜಲಾಶಯಕ್ಕೆ ಮೂಲಸೌಕರ್ಯ ಕಲ್ಪಿಸಲು ಮುಂದಾಗುವ ಜತೆಗೆ ನೀರಿನ ಮೂಲ ಸರ್ವೇ ಕೆಲಸಕ್ಕೆ ಮುಂದಾಗಬೇಕಾದ ಅವಶ್ಯಕತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>