<p>ದ್ರಾವಿಡ ಭಾಷೆಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ, ತನ್ನತನವನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಭಾಷೆಗಳಲ್ಲಿ ಒಂದು ತುಳು ಭಾಷೆ. ಮೂಲತಃ ಕರಾವಳಿಯವರಾದ ತುಳುವರು ಕಾರ್ಯ ವ್ಯಾಪಕತೆಯಿಂದಾಗಿ ಪರವೂರುಗಳಿಗೆ ಹೋಗುವ ಸಂದರ್ಭಗಳು ಬರತೊಡಗಿದಾಗ, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ತುಳುಕೂಟ ಸ್ಥಾಪನೆ ಅಗತ್ಯವಾಯಿತು. <br /> <br /> ಬೆಂಗಳೂರಿನ ಪ್ರಥಮ ತುಳು ಸಂಘಟನೆಯಾದ ತುಳು ಕೂಟವು 1972 ರಲ್ಲಿ ಪ್ರಾರಂಭವಾಯಿತು. ಈ ಕೂಟ ರಾಜಧಾನಿಯಲ್ಲಿರುವ ತುಳುವರನ್ನು ಸಂಘಟಿಸಿ, ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುಕೂಟ ಭಾನುವಾರ ತುಳು ಸಮ್ಮೇಳನ ಆಯೋಜಿಸಿವೆ. <br /> <br /> ಬೆಳಿಗ್ಗೆ 10ಕ್ಕೆ ಉದ್ಯಮಿ, ಸಾಹಿತಿ ಡಿ.ಕೆ. ಚೌಟ ಅಧ್ಯಕ್ಷತೆಯಲ್ಲಿ ತುಳು ಸಮ್ಮೇಳನ. ಅತಿಥಿಗಳು: ಪಿ. ದಯಾನಂದ ಪೈ, ಪಾಲ್ತಾಡಿ ರಾಮಕೃಷ್ಣ ಆಚಾರ್, ಬಿ. ಚಂದ್ರಹಾಸ ರೈ. ಸಂಗೀತ ನಿರ್ದೇಶಕ ಮನೋಹರ್ ಅವರಿಂದ ‘ಕಡಲ್ದ ಉಡಲ್’ ತುಳು ಸಂಗೀತ ಸೀಡಿ ಲೋಕಾರ್ಪಣೆ.<br /> <br /> ತುಳು ನಾಡಿನ ಚಾರಿತ್ರಿಕ ವ್ಯಕ್ತಿಗಳು, ಚರಿತ್ರೆ ಕುರಿತ ‘ಮದೆಪ್ಪೆರಾವಂದಿನ ತುಳುವೆರ್’ ವಿಚಾರಗೋಷ್ಠಿಯಲ್ಲಿ ಬಾಲಕೃಷ್ಣ ಪುತ್ತಿಗೆ (ಕೋಟಿ-ಚನ್ನಯ್ಯ), ಮುದ್ದು ಮೂಡುಬೆಳ್ಳೆ (ಕಾಂತಾಬಾರೆ-ಬುದಾಬಾರೆ), ಡಾ. ಕೊಯಿರಾ ಬಾಳೆಪುಣಿ (ಮುಗೇರ್ಲು), ಪ್ರಭಾಕರ ಶೆಟ್ಟಿ (ತುಳುನಾಡ ಸಿರಿ), ಸೀತಾರಾಮ ಕುಲಾಲ (ಉಳ್ಳಾಲದ ರಾಣಿ ಅಬ್ಬಕ್ಕ), ಭಾಸ್ಕರ ರೈ ಕುಕ್ಕುವಳ್ಳಿ (ದೇವು ಪೂಂಜ), ಎಸ್. ಆರ್. ಹೆಗ್ಡೆ (ಅಗೋಳಿ ಮಂಜಣ್ಣ) ಹಾಗೂ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ (ಶ್ರೀಮನ್ ಮಧ್ವಾಚಾರ್ಯರು). <br /> <br /> ಸಂಜೆ 4.30ಕ್ಕೆ ಸಮಾರೋಪ. ಅಧ್ಯಕ್ಷತೆ: ತುಳುಕೂಟ ಬೆಂಗಳೂರಿನ ಅಧ್ಯಕ್ಷ ರಮೇಶ್ ಹೆಗ್ಡೆ. ಅತಿಥಿಗಳು: ಧನಂಜಯ ಕುಮಾರ್, ನೆ.ಲ. ನರೇಂದ್ರಬಾಬು, ಎ.ಜೆ. ಶೆಟ್ಟಿ, ಪ್ರಕಾಶ ಶೆಟ್ಟಿ, ಉದಯ ಧರ್ಮಸ್ಥಳ.<br /> <br /> ನಂತರ ಸಾಂಸ್ಕೃತಿಕ ಕಾರ್ಯಕ್ರಮ: ಡಾ. ಕೊಯಿರಾ ಬಾಳೆಪುಣಿ ಕೂಟದವರಿಂದ ತುಳು ನಾಡಿನ ಜಾನಪದ ಕಲೆಗಳಾದ ಕರಂಗೀಲು, ಆಟಿಕಳೆಂಜ ಪ್ರದರ್ಶನ, ರತ್ನಮಾಲಾ ಪುರಂದರ ನೇತೃತ್ವದಲ್ಲಿ ನೇತೃತ್ವದಲ್ಲಿ ವೀಣಾ ರಾಮಚಂದ್ರರಾವ್ ಮಹಿಳಾ ಬಳಗದವರಿಂದ ’ಕೋಟಿ ಚನ್ನಯ’ ಯಕ್ಷಗಾನ, ಶಶಿಧರ ಕೋಟೆ, ರಮೇಶಚಂದ್ರ ಮತ್ತು ಸುರೇಖಾ ಅವರಿಂದ ತುಳು ಗೀತೆ ಗಾಯನ.ಸ್ಥಳ: ಡಾ. ರಾಜಕುಮಾರ್ ಕಲಾಕ್ಷೇತ್ರ, ಆರ್ಟಿಒ ಕಚೇರಿ ಆವರಣ, ರಾಜಾಜಿನಗರ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದ್ರಾವಿಡ ಭಾಷೆಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ, ತನ್ನತನವನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಭಾಷೆಗಳಲ್ಲಿ ಒಂದು ತುಳು ಭಾಷೆ. ಮೂಲತಃ ಕರಾವಳಿಯವರಾದ ತುಳುವರು ಕಾರ್ಯ ವ್ಯಾಪಕತೆಯಿಂದಾಗಿ ಪರವೂರುಗಳಿಗೆ ಹೋಗುವ ಸಂದರ್ಭಗಳು ಬರತೊಡಗಿದಾಗ, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ತುಳುಕೂಟ ಸ್ಥಾಪನೆ ಅಗತ್ಯವಾಯಿತು. <br /> <br /> ಬೆಂಗಳೂರಿನ ಪ್ರಥಮ ತುಳು ಸಂಘಟನೆಯಾದ ತುಳು ಕೂಟವು 1972 ರಲ್ಲಿ ಪ್ರಾರಂಭವಾಯಿತು. ಈ ಕೂಟ ರಾಜಧಾನಿಯಲ್ಲಿರುವ ತುಳುವರನ್ನು ಸಂಘಟಿಸಿ, ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುಕೂಟ ಭಾನುವಾರ ತುಳು ಸಮ್ಮೇಳನ ಆಯೋಜಿಸಿವೆ. <br /> <br /> ಬೆಳಿಗ್ಗೆ 10ಕ್ಕೆ ಉದ್ಯಮಿ, ಸಾಹಿತಿ ಡಿ.ಕೆ. ಚೌಟ ಅಧ್ಯಕ್ಷತೆಯಲ್ಲಿ ತುಳು ಸಮ್ಮೇಳನ. ಅತಿಥಿಗಳು: ಪಿ. ದಯಾನಂದ ಪೈ, ಪಾಲ್ತಾಡಿ ರಾಮಕೃಷ್ಣ ಆಚಾರ್, ಬಿ. ಚಂದ್ರಹಾಸ ರೈ. ಸಂಗೀತ ನಿರ್ದೇಶಕ ಮನೋಹರ್ ಅವರಿಂದ ‘ಕಡಲ್ದ ಉಡಲ್’ ತುಳು ಸಂಗೀತ ಸೀಡಿ ಲೋಕಾರ್ಪಣೆ.<br /> <br /> ತುಳು ನಾಡಿನ ಚಾರಿತ್ರಿಕ ವ್ಯಕ್ತಿಗಳು, ಚರಿತ್ರೆ ಕುರಿತ ‘ಮದೆಪ್ಪೆರಾವಂದಿನ ತುಳುವೆರ್’ ವಿಚಾರಗೋಷ್ಠಿಯಲ್ಲಿ ಬಾಲಕೃಷ್ಣ ಪುತ್ತಿಗೆ (ಕೋಟಿ-ಚನ್ನಯ್ಯ), ಮುದ್ದು ಮೂಡುಬೆಳ್ಳೆ (ಕಾಂತಾಬಾರೆ-ಬುದಾಬಾರೆ), ಡಾ. ಕೊಯಿರಾ ಬಾಳೆಪುಣಿ (ಮುಗೇರ್ಲು), ಪ್ರಭಾಕರ ಶೆಟ್ಟಿ (ತುಳುನಾಡ ಸಿರಿ), ಸೀತಾರಾಮ ಕುಲಾಲ (ಉಳ್ಳಾಲದ ರಾಣಿ ಅಬ್ಬಕ್ಕ), ಭಾಸ್ಕರ ರೈ ಕುಕ್ಕುವಳ್ಳಿ (ದೇವು ಪೂಂಜ), ಎಸ್. ಆರ್. ಹೆಗ್ಡೆ (ಅಗೋಳಿ ಮಂಜಣ್ಣ) ಹಾಗೂ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ (ಶ್ರೀಮನ್ ಮಧ್ವಾಚಾರ್ಯರು). <br /> <br /> ಸಂಜೆ 4.30ಕ್ಕೆ ಸಮಾರೋಪ. ಅಧ್ಯಕ್ಷತೆ: ತುಳುಕೂಟ ಬೆಂಗಳೂರಿನ ಅಧ್ಯಕ್ಷ ರಮೇಶ್ ಹೆಗ್ಡೆ. ಅತಿಥಿಗಳು: ಧನಂಜಯ ಕುಮಾರ್, ನೆ.ಲ. ನರೇಂದ್ರಬಾಬು, ಎ.ಜೆ. ಶೆಟ್ಟಿ, ಪ್ರಕಾಶ ಶೆಟ್ಟಿ, ಉದಯ ಧರ್ಮಸ್ಥಳ.<br /> <br /> ನಂತರ ಸಾಂಸ್ಕೃತಿಕ ಕಾರ್ಯಕ್ರಮ: ಡಾ. ಕೊಯಿರಾ ಬಾಳೆಪುಣಿ ಕೂಟದವರಿಂದ ತುಳು ನಾಡಿನ ಜಾನಪದ ಕಲೆಗಳಾದ ಕರಂಗೀಲು, ಆಟಿಕಳೆಂಜ ಪ್ರದರ್ಶನ, ರತ್ನಮಾಲಾ ಪುರಂದರ ನೇತೃತ್ವದಲ್ಲಿ ನೇತೃತ್ವದಲ್ಲಿ ವೀಣಾ ರಾಮಚಂದ್ರರಾವ್ ಮಹಿಳಾ ಬಳಗದವರಿಂದ ’ಕೋಟಿ ಚನ್ನಯ’ ಯಕ್ಷಗಾನ, ಶಶಿಧರ ಕೋಟೆ, ರಮೇಶಚಂದ್ರ ಮತ್ತು ಸುರೇಖಾ ಅವರಿಂದ ತುಳು ಗೀತೆ ಗಾಯನ.ಸ್ಥಳ: ಡಾ. ರಾಜಕುಮಾರ್ ಕಲಾಕ್ಷೇತ್ರ, ಆರ್ಟಿಒ ಕಚೇರಿ ಆವರಣ, ರಾಜಾಜಿನಗರ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>