<p><strong>ಬೆಂಗಳೂರು:</strong> ಏಷ್ಯಾದಲ್ಲೇ ಪ್ರಸಿದ್ಧಿ ಈಜು ಕೇಂದ್ರ ಎನಿಸಿರುವ ಬಸವನಗುಡಿ ಈಜು ಕೇಂದ್ರವು (ಬಿಎಸಿ) ರಜತಮಹೋತ್ಸವ ಅಂಗವಾಗಿ ಗುರುವಾರ ನಗರದಲ್ಲಿ ಬೇಟನ್ ರಿಲೇ ಆಯೋಜಿಸಿದ್ದು, ಹಾಲಿ ಹಾಗೂ ಮಾಜಿ ಈಜುಪಟುಗಳು ಪಾಲ್ಗೊಳ್ಳಲಿದ್ದಾರೆ.<br /> <br /> ಗುರುವಾರ ಬೆಳಿಗ್ಗೆ ಎಂಟು ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ಬೇಟನ್ ರಿಲೇ ಆರಂಭವಾಗಿ ಬಿಎಸಿಯಲ್ಲಿ ಕೊನೆಗೊಳ್ಳಲಿದೆ. ರಾಷ್ಟ್ರೀಯ ಪದಕ ವಿಜೇತರಾದ ಈ ಕೇಂದ್ರದ ಮೊದಲ ಈಜುಪಟು ಬಿ.ರಮ್ಯಾ ಅವರು ಬೇಟನ್ ರಿಲೇಯ ನೇತೃತ್ವ ವಹಿಸಲಿದ್ದಾರೆ. ಈ ವಿಷಯವನ್ನು ಬಿಎಸಿ ಅಧ್ಯಕ್ಷ ನೀಲಕಂಠರಾವ್ ಜಗದಾಳೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ `ಜ್ಯೋತಿ~ಯನ್ನು ಅನಾವರಣ ಮಾಡಲಾಯಿತು. <br /> <br /> ಬೇಟನ್ ರಿಲೇ ಕಾರ್ಪೊರೇಷನ್ ವೃತ್ತ, ಟೌನ್ಹಾಲ್, ಜೆ.ಸಿ.ರಸ್ತೆ, ಮಿನರ್ವ ವೃತ್ತ, ಸಜ್ಜನರಾವ್ ವೃತ್ತ, ನ್ಯಾಷನಲ್ ಕಾಲೇಜ್ ಮೂಲಕ ಬಿಎಸಿ ತಲುಪಲಿದೆ. ಈ ಸಂದರ್ಭದಲ್ಲಿ ಮಾಜಿ ಹಾಗೂ ಹಾಲಿ ಅಥ್ಲೀಟ್ಗಳು, 400ಕ್ಕೂ ಹೆಚ್ಚು ಈಜುಪಟುಗಳು ಪಾಲ್ಗೊಳ್ಳಲಿದ್ದಾರೆ. <br /> <br /> `ಬೆಳ್ಳಿ ಹಬ್ಬದ ಸಂಭ್ರಮ ನೆನಪಿನಲ್ಲಿ ಉಳಿಯುವಂತೆ ಮಾಡಬೇಕು. ಅದಕ್ಕಾಗಿ ನಾವು ಈಜುಕೊಳವನ್ನು ಮೇಲ್ದರ್ಜೆಗೇರಿಸಲಿದ್ದೇವೆ. ಇದಕ್ಕೆ ಒಟ್ಟು ಆರು ಕೋಟಿ ರೂಪಾಯಿ ಹಣದ ಅಗತ್ಯವಿದೆ. ಮೂರು ಕೋಟಿ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಭರವಸೆ ನೀಡಿದೆ. ಅವರು ಗ್ಯಾಲರಿ ನಿರ್ಮಿಸಿ ಕೊಡಲಿದ್ದಾರೆ. <br /> <br /> ಇನ್ನುಳಿದ 3 ಕೋಟಿಯನ್ನು ನಾವು ಹೊಂದಿಸಬೇಕಾಗಿದೆ. ಈ ಹಣದಲ್ಲಿ ನಾವು 10 ಲೇನ್ ಪೂಲ್ ನಿರ್ಮಿಸಲಿದ್ದೇವೆ. ಎಲ್ಲವೂ ನಾವು ಅಂದುಕೊಂಡಂತೆ ನಡೆದರೆ 2013ರ ಅಂತ್ಯಕ್ಕೆ ಅಂತರರಾಷ್ಟ್ರೀಯ ಈಜುಕೊಳ ತಲೆಎತ್ತಲಿದೆ~ ಎಂದು ಜಗದಾಳೆ ವಿವರಿಸಿದರು. <br /> <br /> `1991ರಲ್ಲಿ ಕಾರ್ಪೊರೇಷನ್ನಿಂದ 30 ವರ್ಷಗಳ ಅವಧಿಗೆ ಭೋಗ್ಯಕ್ಕೆ ಪಡೆದಿದ್ದೇವೆ. ಮತ್ತೆ 20 ವರ್ಷ ಅದನ್ನು ವಿಸ್ತರಿಸಲು ನಾವು ಬಿಬಿಎಂಪಿಯನ್ನು ಕೋರಲಿದ್ದೇವೆ. ಹಾಗೇ, ಈ ಕೇಂದ್ರದಲ್ಲಿ ಹೈಡ್ರೋ ಥೆರಪಿ ವಿಭಾಗವನ್ನು ತೆರೆಯಲು ಯೋಜನೆ ರೂಪಿಸಿದ್ದೇವೆ. ಆದರೆ ಈ ವರ್ಷ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ ಆಯೋಜನೆ ಯೋಜನೆಯನ್ನು ಕೈಬಿಡಲಾಗಿದೆ~ ಎಂದರು. <br /> <br /> `ಫೆಬ್ರುವರಿಯಲ್ಲಿ ನಾವು ಅಂತರ ಬಿಎಸಿ ಚಾಂಪಿಯನ್ಷಿಪ್ ಆಯೋಜಿಸಲಿದ್ದೇವೆ. ಇದಕ್ಕೆ ಬಿಎಸಿ ಪ್ರತಿಭಾ ಶೋಧನಾ ಚಾಂಪಿಯನ್ಷಿಪ್ ಎಂದು ಹೆಸರಿಟ್ಟಿದ್ದೇವೆ. ಇದರಲ್ಲಿ ಚಾಂಪಿಯನ್ ಆಗುವ ಈಜುಪಟುಗಳತ್ತ ಮುಂದಿನ ದಿನಗಳಲ್ಲಿ ಹೆಚ್ಚು ಗಮನ ಹರಿಸಿ ಅವರ ಪ್ರಗತಿಗೆ ಒತ್ತು ನೀಡಲಾಗುವುದು~ ಎಂದು ರಾಷ್ಟ್ರೀಯ ಈಜು ಕೋಚ್ ಕೂಡ ಆಗಿರುವ ಪ್ರದೀಪ್ ಕುಮಾರ್ ನುಡಿದರು. <br /> <br /> ಪತ್ರಿಕಾಗೋಷ್ಠಿಯಲ್ಲಿ ಬಿಎಸಿ ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ರಾಜಣ್ಣ, ಜಂಟಿ ಕಾರ್ಯದರ್ಶಿ ಜಯತೀರ್ಥರಾವ್, ಖಜಾಂಚಿ ಸುಂದರರಾಜ್ ಗುಪ್ತಾ, ಸಮಿತಿ ಸದಸ್ಯರಾದ ರಕ್ಷಿತ್ ಹಾಗೂ ಸತೀಶ್ ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಏಷ್ಯಾದಲ್ಲೇ ಪ್ರಸಿದ್ಧಿ ಈಜು ಕೇಂದ್ರ ಎನಿಸಿರುವ ಬಸವನಗುಡಿ ಈಜು ಕೇಂದ್ರವು (ಬಿಎಸಿ) ರಜತಮಹೋತ್ಸವ ಅಂಗವಾಗಿ ಗುರುವಾರ ನಗರದಲ್ಲಿ ಬೇಟನ್ ರಿಲೇ ಆಯೋಜಿಸಿದ್ದು, ಹಾಲಿ ಹಾಗೂ ಮಾಜಿ ಈಜುಪಟುಗಳು ಪಾಲ್ಗೊಳ್ಳಲಿದ್ದಾರೆ.<br /> <br /> ಗುರುವಾರ ಬೆಳಿಗ್ಗೆ ಎಂಟು ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ಬೇಟನ್ ರಿಲೇ ಆರಂಭವಾಗಿ ಬಿಎಸಿಯಲ್ಲಿ ಕೊನೆಗೊಳ್ಳಲಿದೆ. ರಾಷ್ಟ್ರೀಯ ಪದಕ ವಿಜೇತರಾದ ಈ ಕೇಂದ್ರದ ಮೊದಲ ಈಜುಪಟು ಬಿ.ರಮ್ಯಾ ಅವರು ಬೇಟನ್ ರಿಲೇಯ ನೇತೃತ್ವ ವಹಿಸಲಿದ್ದಾರೆ. ಈ ವಿಷಯವನ್ನು ಬಿಎಸಿ ಅಧ್ಯಕ್ಷ ನೀಲಕಂಠರಾವ್ ಜಗದಾಳೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ `ಜ್ಯೋತಿ~ಯನ್ನು ಅನಾವರಣ ಮಾಡಲಾಯಿತು. <br /> <br /> ಬೇಟನ್ ರಿಲೇ ಕಾರ್ಪೊರೇಷನ್ ವೃತ್ತ, ಟೌನ್ಹಾಲ್, ಜೆ.ಸಿ.ರಸ್ತೆ, ಮಿನರ್ವ ವೃತ್ತ, ಸಜ್ಜನರಾವ್ ವೃತ್ತ, ನ್ಯಾಷನಲ್ ಕಾಲೇಜ್ ಮೂಲಕ ಬಿಎಸಿ ತಲುಪಲಿದೆ. ಈ ಸಂದರ್ಭದಲ್ಲಿ ಮಾಜಿ ಹಾಗೂ ಹಾಲಿ ಅಥ್ಲೀಟ್ಗಳು, 400ಕ್ಕೂ ಹೆಚ್ಚು ಈಜುಪಟುಗಳು ಪಾಲ್ಗೊಳ್ಳಲಿದ್ದಾರೆ. <br /> <br /> `ಬೆಳ್ಳಿ ಹಬ್ಬದ ಸಂಭ್ರಮ ನೆನಪಿನಲ್ಲಿ ಉಳಿಯುವಂತೆ ಮಾಡಬೇಕು. ಅದಕ್ಕಾಗಿ ನಾವು ಈಜುಕೊಳವನ್ನು ಮೇಲ್ದರ್ಜೆಗೇರಿಸಲಿದ್ದೇವೆ. ಇದಕ್ಕೆ ಒಟ್ಟು ಆರು ಕೋಟಿ ರೂಪಾಯಿ ಹಣದ ಅಗತ್ಯವಿದೆ. ಮೂರು ಕೋಟಿ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಭರವಸೆ ನೀಡಿದೆ. ಅವರು ಗ್ಯಾಲರಿ ನಿರ್ಮಿಸಿ ಕೊಡಲಿದ್ದಾರೆ. <br /> <br /> ಇನ್ನುಳಿದ 3 ಕೋಟಿಯನ್ನು ನಾವು ಹೊಂದಿಸಬೇಕಾಗಿದೆ. ಈ ಹಣದಲ್ಲಿ ನಾವು 10 ಲೇನ್ ಪೂಲ್ ನಿರ್ಮಿಸಲಿದ್ದೇವೆ. ಎಲ್ಲವೂ ನಾವು ಅಂದುಕೊಂಡಂತೆ ನಡೆದರೆ 2013ರ ಅಂತ್ಯಕ್ಕೆ ಅಂತರರಾಷ್ಟ್ರೀಯ ಈಜುಕೊಳ ತಲೆಎತ್ತಲಿದೆ~ ಎಂದು ಜಗದಾಳೆ ವಿವರಿಸಿದರು. <br /> <br /> `1991ರಲ್ಲಿ ಕಾರ್ಪೊರೇಷನ್ನಿಂದ 30 ವರ್ಷಗಳ ಅವಧಿಗೆ ಭೋಗ್ಯಕ್ಕೆ ಪಡೆದಿದ್ದೇವೆ. ಮತ್ತೆ 20 ವರ್ಷ ಅದನ್ನು ವಿಸ್ತರಿಸಲು ನಾವು ಬಿಬಿಎಂಪಿಯನ್ನು ಕೋರಲಿದ್ದೇವೆ. ಹಾಗೇ, ಈ ಕೇಂದ್ರದಲ್ಲಿ ಹೈಡ್ರೋ ಥೆರಪಿ ವಿಭಾಗವನ್ನು ತೆರೆಯಲು ಯೋಜನೆ ರೂಪಿಸಿದ್ದೇವೆ. ಆದರೆ ಈ ವರ್ಷ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ ಆಯೋಜನೆ ಯೋಜನೆಯನ್ನು ಕೈಬಿಡಲಾಗಿದೆ~ ಎಂದರು. <br /> <br /> `ಫೆಬ್ರುವರಿಯಲ್ಲಿ ನಾವು ಅಂತರ ಬಿಎಸಿ ಚಾಂಪಿಯನ್ಷಿಪ್ ಆಯೋಜಿಸಲಿದ್ದೇವೆ. ಇದಕ್ಕೆ ಬಿಎಸಿ ಪ್ರತಿಭಾ ಶೋಧನಾ ಚಾಂಪಿಯನ್ಷಿಪ್ ಎಂದು ಹೆಸರಿಟ್ಟಿದ್ದೇವೆ. ಇದರಲ್ಲಿ ಚಾಂಪಿಯನ್ ಆಗುವ ಈಜುಪಟುಗಳತ್ತ ಮುಂದಿನ ದಿನಗಳಲ್ಲಿ ಹೆಚ್ಚು ಗಮನ ಹರಿಸಿ ಅವರ ಪ್ರಗತಿಗೆ ಒತ್ತು ನೀಡಲಾಗುವುದು~ ಎಂದು ರಾಷ್ಟ್ರೀಯ ಈಜು ಕೋಚ್ ಕೂಡ ಆಗಿರುವ ಪ್ರದೀಪ್ ಕುಮಾರ್ ನುಡಿದರು. <br /> <br /> ಪತ್ರಿಕಾಗೋಷ್ಠಿಯಲ್ಲಿ ಬಿಎಸಿ ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ರಾಜಣ್ಣ, ಜಂಟಿ ಕಾರ್ಯದರ್ಶಿ ಜಯತೀರ್ಥರಾವ್, ಖಜಾಂಚಿ ಸುಂದರರಾಜ್ ಗುಪ್ತಾ, ಸಮಿತಿ ಸದಸ್ಯರಾದ ರಕ್ಷಿತ್ ಹಾಗೂ ಸತೀಶ್ ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>