<p>ಕೊಲಂಬೊ (ಪಿಟಿಐ): ದೇಶದಲ್ಲಿನ ಯುದ್ದ ನಿರಾಶ್ರಿತರಿಗೆ ಕ್ರೀಡಾ ಸಂಕೀರ್ಣ ನಿರ್ಮಿಸುವ ಉದ್ದೇಶ ಹೊಂದಿರುವ ಶ್ರೀಲಂಕಾ ಕ್ರಿಕೆಟ್ನ ದಂತಕಥೆ ಮುತ್ತಯ್ಯ ಮುರುಳೀಧರನ್ ವಿಶ್ವದಾದ್ಯಂತ ಸಂಚರಿಸಿ ನಿಧಿ ಸಂಗ್ರಹಿಸಲು ಚಿಂತನೆ ನಡೆಸಿದ್ದಾರೆ.<br /> <br /> ಟೆಸ್ಟ್ನಲ್ಲಿ 800 ವಿಕೆಟ್ ಹಾಗೂ ಏಕದಿನ ಪಂದ್ಯಗಳಲ್ಲಿ 538 ವಿಕೆಟ್ ಗಳಿಸಿ ವಿಶ್ವದಾಖಲೆ ಸ್ಥಾಪಿಸಿರುವ ಮುರುಳೀಧರನ್ಗೆ ಶ್ರೀಲಂಕಾದ ಉತ್ತರ ಭಾಗದ ಯುದ್ಧ ವಲಯದಲ್ಲಿ ಸಾವಿರಾರು ಮಕ್ಕಳಿಗಾಗಿ ಹೊಸ ಬದುಕು ಕಟ್ಟುವ ಆಸೆ ಮೂಡಿದೆ. <br /> <br /> ‘ಆರ್ಥಿಕವಾಗಿ ನಮ್ಮದು ಹಿಂದುಳಿದ ದೇಶವಾಗಿರಬಹುದು. ಆದರೆ ನಿರಾಶ್ರಿತತರಿಗೆ ಬದುಕು ಕಟ್ಟಿಕೊಡುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಇದೇ ಉದ್ದೇಶವನ್ನಿಟ್ಟುಕೊಂಡು ವಿದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತನಾಡಿ ಅಗತ್ಯವಿರುವ ನಿಧಿಯನ್ನು ಸಂಗ್ರಹಿಸುವ ಉದ್ದೇಶ ನನ್ನದು’ ಎಂದು ಮುರುಳಿ ಹೇಳಿದ್ದಾರೆ.<br /> <br /> ಮುರುಳೀಧರನ್ ತಮ್ಮ ದತ್ತಿ ಪ್ರತಿಷ್ಠಾನದ ವತಿಯಿಂದ ಇದೇ ಮಾದರಿಯ ಮಿಲಿಯನ್ ಡಾಲರ್ನ ಎರಡನೇಯ ಯೋಜನೆಯನ್ನು ಸುನಾಮಿಯಿಂದ ತತ್ತರಿಸಿದ ದಕ್ಷಿಣ ಕರಾವಳಿಯ ಸಿನಿಗಾಮಾ ಗ್ರಾಮದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದಾರೆ.<br /> <br /> ಕೊಲಂಬೊದ ಉತ್ತರಕ್ಕೆ 300 ಕಿ.ಮೀ ದೂರದಲ್ಲಿರುವ ಮನಕುಲಂನಲ್ಲಿ ಒಂದು ಕ್ರೀಡಾ ಕೇಂದ್ರ, ಒಂದು ಶಾಲೆ, ಇಂಗ್ಲೀಷ್ ಮತ್ತು ಐಟಿ ತರಬೇತಿ ಕೇಂದ್ರ ಹಾಗೂ ವೃದ್ದಾಶ್ರಮವನ್ನು ನಿರ್ಮಿಸಲು ಮುರಳೀಧರನ್ ಉದ್ದೇಶಿಸಿದ್ದಾರೆ. ಇದಕ್ಕಾಗಿ ಅವರು ಕ್ರೀಕೆಟ್ ಆಟಗಾರರನ್ನು ಸಂಪರ್ಕಿಸಿ ಸಹಾಯ ಯಾಚಿಸಿರುವುದಾಗಿ ತಿಳಿಸಿದ್ದಾರೆ.<br /> ಕ್ರಿಕೆಟ್ ಏಕತೆಯ ಸಮುದಾಯವಾಗಿದ್ದು, ಕ್ರೀಡೆಯ ಮೂಲಕ ನಾವು ನಮಗಿಂತಲೂ ಕೆಳವರ್ಗದ ಜನರ ಜೀವನ ಮಟ್ಟ ಸುಧಾರಿಸಲು ಚಿಕ್ಕ ಸಹಾಯ ಮಾಡುತ್ತಿರುವುದಾಗಿ 38 ವಯಸ್ಸಿನ ಮುರುಳಿ ಹೇಳಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಲಂಬೊ (ಪಿಟಿಐ): ದೇಶದಲ್ಲಿನ ಯುದ್ದ ನಿರಾಶ್ರಿತರಿಗೆ ಕ್ರೀಡಾ ಸಂಕೀರ್ಣ ನಿರ್ಮಿಸುವ ಉದ್ದೇಶ ಹೊಂದಿರುವ ಶ್ರೀಲಂಕಾ ಕ್ರಿಕೆಟ್ನ ದಂತಕಥೆ ಮುತ್ತಯ್ಯ ಮುರುಳೀಧರನ್ ವಿಶ್ವದಾದ್ಯಂತ ಸಂಚರಿಸಿ ನಿಧಿ ಸಂಗ್ರಹಿಸಲು ಚಿಂತನೆ ನಡೆಸಿದ್ದಾರೆ.<br /> <br /> ಟೆಸ್ಟ್ನಲ್ಲಿ 800 ವಿಕೆಟ್ ಹಾಗೂ ಏಕದಿನ ಪಂದ್ಯಗಳಲ್ಲಿ 538 ವಿಕೆಟ್ ಗಳಿಸಿ ವಿಶ್ವದಾಖಲೆ ಸ್ಥಾಪಿಸಿರುವ ಮುರುಳೀಧರನ್ಗೆ ಶ್ರೀಲಂಕಾದ ಉತ್ತರ ಭಾಗದ ಯುದ್ಧ ವಲಯದಲ್ಲಿ ಸಾವಿರಾರು ಮಕ್ಕಳಿಗಾಗಿ ಹೊಸ ಬದುಕು ಕಟ್ಟುವ ಆಸೆ ಮೂಡಿದೆ. <br /> <br /> ‘ಆರ್ಥಿಕವಾಗಿ ನಮ್ಮದು ಹಿಂದುಳಿದ ದೇಶವಾಗಿರಬಹುದು. ಆದರೆ ನಿರಾಶ್ರಿತತರಿಗೆ ಬದುಕು ಕಟ್ಟಿಕೊಡುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಇದೇ ಉದ್ದೇಶವನ್ನಿಟ್ಟುಕೊಂಡು ವಿದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತನಾಡಿ ಅಗತ್ಯವಿರುವ ನಿಧಿಯನ್ನು ಸಂಗ್ರಹಿಸುವ ಉದ್ದೇಶ ನನ್ನದು’ ಎಂದು ಮುರುಳಿ ಹೇಳಿದ್ದಾರೆ.<br /> <br /> ಮುರುಳೀಧರನ್ ತಮ್ಮ ದತ್ತಿ ಪ್ರತಿಷ್ಠಾನದ ವತಿಯಿಂದ ಇದೇ ಮಾದರಿಯ ಮಿಲಿಯನ್ ಡಾಲರ್ನ ಎರಡನೇಯ ಯೋಜನೆಯನ್ನು ಸುನಾಮಿಯಿಂದ ತತ್ತರಿಸಿದ ದಕ್ಷಿಣ ಕರಾವಳಿಯ ಸಿನಿಗಾಮಾ ಗ್ರಾಮದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದಾರೆ.<br /> <br /> ಕೊಲಂಬೊದ ಉತ್ತರಕ್ಕೆ 300 ಕಿ.ಮೀ ದೂರದಲ್ಲಿರುವ ಮನಕುಲಂನಲ್ಲಿ ಒಂದು ಕ್ರೀಡಾ ಕೇಂದ್ರ, ಒಂದು ಶಾಲೆ, ಇಂಗ್ಲೀಷ್ ಮತ್ತು ಐಟಿ ತರಬೇತಿ ಕೇಂದ್ರ ಹಾಗೂ ವೃದ್ದಾಶ್ರಮವನ್ನು ನಿರ್ಮಿಸಲು ಮುರಳೀಧರನ್ ಉದ್ದೇಶಿಸಿದ್ದಾರೆ. ಇದಕ್ಕಾಗಿ ಅವರು ಕ್ರೀಕೆಟ್ ಆಟಗಾರರನ್ನು ಸಂಪರ್ಕಿಸಿ ಸಹಾಯ ಯಾಚಿಸಿರುವುದಾಗಿ ತಿಳಿಸಿದ್ದಾರೆ.<br /> ಕ್ರಿಕೆಟ್ ಏಕತೆಯ ಸಮುದಾಯವಾಗಿದ್ದು, ಕ್ರೀಡೆಯ ಮೂಲಕ ನಾವು ನಮಗಿಂತಲೂ ಕೆಳವರ್ಗದ ಜನರ ಜೀವನ ಮಟ್ಟ ಸುಧಾರಿಸಲು ಚಿಕ್ಕ ಸಹಾಯ ಮಾಡುತ್ತಿರುವುದಾಗಿ 38 ವಯಸ್ಸಿನ ಮುರುಳಿ ಹೇಳಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>