<p><strong>ಬೆಂಗಳೂರು: </strong>ಕಂಪೆನಿಯೊಂದಕ್ಕೆ ನಿವೇಶನ ನೀಡುವ ವಿಷಯದಲ್ಲಿ ಪಕ್ಷಪಾತ ತೋರಿದ ಆರೋಪದ ಅಡಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರು ಲೋಕಾಯುಕ್ತ ಪೊಲೀಸರಿಂದ ವಿಚಾರಣೆಗೆ ಒಳಗಾಗುವ ಸಾಧ್ಯತೆ ಇದೆ.<br /> <br /> ಪಾಷ್ ಸ್ಪೇಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಕಂಪೆನಿಗೆ ಮಂಜೂರಾಗಿರುವ ಭೂಮಿಯನ್ನು ವಶಪಡಿಸಿಕೊಂಡು ಅದನ್ನು ಪ್ರೈಸಾಕ್ ಹೌಸಿಂಗ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ಗೆ ನೀಡಲು ನಿರಾಣಿ ಪ್ರಯತ್ನಿಸುತ್ತಿದ್ದಾರೆ ಎಂದು ಲೋಕಾಯುಕ್ತರಿಗೆ ಸಲ್ಲಿಸಿರುವ ದೂರೊಂದರಲ್ಲಿ ಆರೋಪಿಸಲಾಗಿದೆ.<br /> <br /> ಈ ಭೂಮಿಯನ್ನು 2006ರಲ್ಲಿ ಪಾಷ್ ಸ್ಪೇಸ್ ಕಂಪೆನಿಗೆ ಮಂಜೂರು ಮಾಡಲಾಗಿತ್ತು. ಆದರೆ ಪ್ರೈಸಾಕ್ ಕಂಪೆನಿ ಆಗಸ್ಟ್ 2010ರಲ್ಲಿ ಇದೇ ಭೂಮಿಯಲ್ಲಿ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವಂತೆ ಸರ್ಕಾರವನ್ನು ಕೋರಿತು. ಉನ್ನತ ಮಟ್ಟದ ಸಮಿತಿಯ ನೇತೃತ್ವ ವಹಿಸಿದ್ದ ನಿರಾಣಿ ಅವರು ಪ್ರೈಸಾಕ್ ಕಂಪೆನಿಗೆ ಈ ಜಮೀನು ನೀಡಲು ನಿರಾಕರಿಸಲಿಲ್ಲ.<br /> <br /> ಕಳೆದ ವರ್ಷದ ಅಕ್ಟೋಬರ್ನಲ್ಲೇ ಪಾಷ್ ಕಂಪೆನಿ ಈ ವಿಚಾರದ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸಿತ್ತು. ಆದರೆ ಆರೋಪಿಗಳ ಪಟ್ಟಿಯಲ್ಲಿ ನಿರಾಣಿ ಅವರನ್ನೂ ಸೇರಿಸಬೇಕು ಎಂದು ಪಾಷ್ ಕಂಪೆನಿ ಶುಕ್ರವಾರ (ಸೆ. 2) ಲೋಕಾಯುಕ್ತರನ್ನು ಕೋರಿದೆ.<br /> <br /> `ಕಾನೂನಿನ ಪ್ರಕಾರ ಈ ಭೂಮಿ ನಮಗೆ ಸೇರಿದ್ದು ಎಂಬುದು ನಿರಾಣಿ ಅವರಿಗೆ ತಿಳಿದಿದೆ. ಆದರೂ ಅವರು ಪ್ರೈಸಾಕ್ ಕಂಪೆನಿಯ ಪ್ರಸ್ತಾವವನ್ನು ತಿರಸ್ಕರಿಸಲು ನಿರಾಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿರಾಣಿ ಅವರನ್ನೂ ವಿಚಾರಣೆಗೆ ಒಳಪಡಿಸಬೇಕು ಎಂದು ನಾವು ಲೋಕಾಯುಕ್ತರನ್ನು ಕೋರಿದ್ದೇವೆ. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯೂ ದೊರೆತಿದೆ~ ಎಂದು ಪಾಷ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಆಲಂ ಪಾಷಾ ತಿಳಿಸಿದರು.<br /> <br /> ಈ ಕುರಿತು ಪ್ರತಿಕ್ರಿಯೆ ನೀಡಿದ ನಿರಾಣಿ, `ಪಾಷ್ ಸ್ಪೇಸ್ ಕಂಪೆನಿಗೆ ನಿಗದಿ ಮಾಡಿದ್ದ ಗಡುವಿನ ಒಳಗೆ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಅದು ಆರೋಪ ಮಾಡುತ್ತಿದೆ~ ಎಂದು ತಿಳಿಸಿದರು.<br /> <br /> `ಆ ಭೂಮಿಯನ್ನು ಯಾವ ಯೋಜನೆಗೆ ನೀಡಲಾಗಿತ್ತೋ ಅದೇ ಯೋಜನೆ ಅಲ್ಲಿ ಅನುಷ್ಠಾನಕ್ಕೆ ಬರಬೇಕು ಎಂಬುದು ನಮ್ಮ ಆಶಯ~ ಎಂದು ಅವರು ಹೇಳಿದರು. ಆದರೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕೆಐಎಡಿಬಿ) ಮತ್ತು ಪಾಷ್ ಕಂಪೆನಿಯ ನಡುವೆ ಆಗಿರುವ ಒಪ್ಪಂದದಲ್ಲಿ ಯೋಜನೆಯ ಅನುಷ್ಠಾನಕ್ಕೆ ನಿರ್ದಿಷ್ಟ ಗಡುವು ವಿಧಿಸಲಾಗಿಲ್ಲ.<br /> <br /> 2003ರಲ್ಲಿ ಪಾಷ್ ಕಂಪೆನಿ ತನ್ನ ಯೋಜನೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತು. `ದೊಡ್ಡತೋಗೂರು ಮತ್ತು ಚಿಕ್ಕತೋಗೂರಿನಲ್ಲಿ ನಾವು ಜಮೀನು ಖರೀದಿ ಮಾಡಿದ್ದೆವು. (ಸರ್ವೆ ಸಂಖ್ಯೆ ಕ್ರಮವಾಗಿ: 133/1, 2, 3, 5, 6 ಮತ್ತು 41/1.) ಆದರೆ ಅಂದಿನ ಸರ್ಕಾರ ಈ ವ್ಯವಹಾರದಲ್ಲಿ ಕೆಐಎಡಿಬಿ ಕೂಡ ಭಾಗಿಯಾಗಬೇಕು ಎಂದು ತೀರ್ಮಾನಿಸಿತು~ ಎಂದು ಪಾಷಾ ಅವರು ತಿಳಿಸಿದರು.<br /> <br /> `ಒಪ್ಪಂದದಲ್ಲಿ ಯಾವುದೇ ಗಡುವು ವಿಧಿಸದ ಕಾರಣ ಪ್ರಕ್ರಿಯೆ ಪೂರ್ಣಗೊಳಿಸಲು ನಾವು ನಮ್ಮ ಭೂಮಿಯನ್ನು ಕೆಐಎಡಿಬಿಗೆ ಹಸ್ತಾಂತರ ಮಾಡಿದೆವು~ ಎಂದು ಪಾಷಾ ಹೇಳಿದರು.<br /> <br /> ಕರ್ನಾಟಕ ಉದ್ಯೋಗ ಮಿತ್ರಕ್ಕೆ ಪಾಷ್ ಕಂಪೆನಿ ಸಂಸ್ಕರಣಾ ಶುಲ್ಕ ಪಾವತಿಸಿದೆ. ಪರಿಗಣಿಸಬಹುದಾದ ಮೊತ್ತ 1,66,01,000 ರೂಪಾಯಿಯನ್ನು ಕೆಐಎಡಿಬಿಗೆ ಪಾವತಿಸಿದೆ.<br /> <br /> ಇದರ ನಂತರ ಕೆಐಎಡಿಬಿ 2004ರ ಡಿಸೆಂಬರ್ ಮತ್ತು 2006ರ ನವೆಂಬರ್ನಲ್ಲಿ ಈ ಭೂಮಿಯನ್ನು ಪಾಷ್ ಕಂಪೆನಿಗೆ ಹಸ್ತಾಂತರ ಮಾಡಿತು. ಈ ಭೂಮಿಯ ಮೇಲೆ ಪಾಷ್ ಕಂಪೆನಿ ಒಡೆತನ ಹೊಂದಿದೆ ಎಂದು ಕೆಐಎಡಿಬಿ ಖಚಿತಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕಂಪೆನಿಯೊಂದಕ್ಕೆ ನಿವೇಶನ ನೀಡುವ ವಿಷಯದಲ್ಲಿ ಪಕ್ಷಪಾತ ತೋರಿದ ಆರೋಪದ ಅಡಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರು ಲೋಕಾಯುಕ್ತ ಪೊಲೀಸರಿಂದ ವಿಚಾರಣೆಗೆ ಒಳಗಾಗುವ ಸಾಧ್ಯತೆ ಇದೆ.<br /> <br /> ಪಾಷ್ ಸ್ಪೇಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಕಂಪೆನಿಗೆ ಮಂಜೂರಾಗಿರುವ ಭೂಮಿಯನ್ನು ವಶಪಡಿಸಿಕೊಂಡು ಅದನ್ನು ಪ್ರೈಸಾಕ್ ಹೌಸಿಂಗ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ಗೆ ನೀಡಲು ನಿರಾಣಿ ಪ್ರಯತ್ನಿಸುತ್ತಿದ್ದಾರೆ ಎಂದು ಲೋಕಾಯುಕ್ತರಿಗೆ ಸಲ್ಲಿಸಿರುವ ದೂರೊಂದರಲ್ಲಿ ಆರೋಪಿಸಲಾಗಿದೆ.<br /> <br /> ಈ ಭೂಮಿಯನ್ನು 2006ರಲ್ಲಿ ಪಾಷ್ ಸ್ಪೇಸ್ ಕಂಪೆನಿಗೆ ಮಂಜೂರು ಮಾಡಲಾಗಿತ್ತು. ಆದರೆ ಪ್ರೈಸಾಕ್ ಕಂಪೆನಿ ಆಗಸ್ಟ್ 2010ರಲ್ಲಿ ಇದೇ ಭೂಮಿಯಲ್ಲಿ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವಂತೆ ಸರ್ಕಾರವನ್ನು ಕೋರಿತು. ಉನ್ನತ ಮಟ್ಟದ ಸಮಿತಿಯ ನೇತೃತ್ವ ವಹಿಸಿದ್ದ ನಿರಾಣಿ ಅವರು ಪ್ರೈಸಾಕ್ ಕಂಪೆನಿಗೆ ಈ ಜಮೀನು ನೀಡಲು ನಿರಾಕರಿಸಲಿಲ್ಲ.<br /> <br /> ಕಳೆದ ವರ್ಷದ ಅಕ್ಟೋಬರ್ನಲ್ಲೇ ಪಾಷ್ ಕಂಪೆನಿ ಈ ವಿಚಾರದ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸಿತ್ತು. ಆದರೆ ಆರೋಪಿಗಳ ಪಟ್ಟಿಯಲ್ಲಿ ನಿರಾಣಿ ಅವರನ್ನೂ ಸೇರಿಸಬೇಕು ಎಂದು ಪಾಷ್ ಕಂಪೆನಿ ಶುಕ್ರವಾರ (ಸೆ. 2) ಲೋಕಾಯುಕ್ತರನ್ನು ಕೋರಿದೆ.<br /> <br /> `ಕಾನೂನಿನ ಪ್ರಕಾರ ಈ ಭೂಮಿ ನಮಗೆ ಸೇರಿದ್ದು ಎಂಬುದು ನಿರಾಣಿ ಅವರಿಗೆ ತಿಳಿದಿದೆ. ಆದರೂ ಅವರು ಪ್ರೈಸಾಕ್ ಕಂಪೆನಿಯ ಪ್ರಸ್ತಾವವನ್ನು ತಿರಸ್ಕರಿಸಲು ನಿರಾಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿರಾಣಿ ಅವರನ್ನೂ ವಿಚಾರಣೆಗೆ ಒಳಪಡಿಸಬೇಕು ಎಂದು ನಾವು ಲೋಕಾಯುಕ್ತರನ್ನು ಕೋರಿದ್ದೇವೆ. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯೂ ದೊರೆತಿದೆ~ ಎಂದು ಪಾಷ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಆಲಂ ಪಾಷಾ ತಿಳಿಸಿದರು.<br /> <br /> ಈ ಕುರಿತು ಪ್ರತಿಕ್ರಿಯೆ ನೀಡಿದ ನಿರಾಣಿ, `ಪಾಷ್ ಸ್ಪೇಸ್ ಕಂಪೆನಿಗೆ ನಿಗದಿ ಮಾಡಿದ್ದ ಗಡುವಿನ ಒಳಗೆ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಅದು ಆರೋಪ ಮಾಡುತ್ತಿದೆ~ ಎಂದು ತಿಳಿಸಿದರು.<br /> <br /> `ಆ ಭೂಮಿಯನ್ನು ಯಾವ ಯೋಜನೆಗೆ ನೀಡಲಾಗಿತ್ತೋ ಅದೇ ಯೋಜನೆ ಅಲ್ಲಿ ಅನುಷ್ಠಾನಕ್ಕೆ ಬರಬೇಕು ಎಂಬುದು ನಮ್ಮ ಆಶಯ~ ಎಂದು ಅವರು ಹೇಳಿದರು. ಆದರೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕೆಐಎಡಿಬಿ) ಮತ್ತು ಪಾಷ್ ಕಂಪೆನಿಯ ನಡುವೆ ಆಗಿರುವ ಒಪ್ಪಂದದಲ್ಲಿ ಯೋಜನೆಯ ಅನುಷ್ಠಾನಕ್ಕೆ ನಿರ್ದಿಷ್ಟ ಗಡುವು ವಿಧಿಸಲಾಗಿಲ್ಲ.<br /> <br /> 2003ರಲ್ಲಿ ಪಾಷ್ ಕಂಪೆನಿ ತನ್ನ ಯೋಜನೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತು. `ದೊಡ್ಡತೋಗೂರು ಮತ್ತು ಚಿಕ್ಕತೋಗೂರಿನಲ್ಲಿ ನಾವು ಜಮೀನು ಖರೀದಿ ಮಾಡಿದ್ದೆವು. (ಸರ್ವೆ ಸಂಖ್ಯೆ ಕ್ರಮವಾಗಿ: 133/1, 2, 3, 5, 6 ಮತ್ತು 41/1.) ಆದರೆ ಅಂದಿನ ಸರ್ಕಾರ ಈ ವ್ಯವಹಾರದಲ್ಲಿ ಕೆಐಎಡಿಬಿ ಕೂಡ ಭಾಗಿಯಾಗಬೇಕು ಎಂದು ತೀರ್ಮಾನಿಸಿತು~ ಎಂದು ಪಾಷಾ ಅವರು ತಿಳಿಸಿದರು.<br /> <br /> `ಒಪ್ಪಂದದಲ್ಲಿ ಯಾವುದೇ ಗಡುವು ವಿಧಿಸದ ಕಾರಣ ಪ್ರಕ್ರಿಯೆ ಪೂರ್ಣಗೊಳಿಸಲು ನಾವು ನಮ್ಮ ಭೂಮಿಯನ್ನು ಕೆಐಎಡಿಬಿಗೆ ಹಸ್ತಾಂತರ ಮಾಡಿದೆವು~ ಎಂದು ಪಾಷಾ ಹೇಳಿದರು.<br /> <br /> ಕರ್ನಾಟಕ ಉದ್ಯೋಗ ಮಿತ್ರಕ್ಕೆ ಪಾಷ್ ಕಂಪೆನಿ ಸಂಸ್ಕರಣಾ ಶುಲ್ಕ ಪಾವತಿಸಿದೆ. ಪರಿಗಣಿಸಬಹುದಾದ ಮೊತ್ತ 1,66,01,000 ರೂಪಾಯಿಯನ್ನು ಕೆಐಎಡಿಬಿಗೆ ಪಾವತಿಸಿದೆ.<br /> <br /> ಇದರ ನಂತರ ಕೆಐಎಡಿಬಿ 2004ರ ಡಿಸೆಂಬರ್ ಮತ್ತು 2006ರ ನವೆಂಬರ್ನಲ್ಲಿ ಈ ಭೂಮಿಯನ್ನು ಪಾಷ್ ಕಂಪೆನಿಗೆ ಹಸ್ತಾಂತರ ಮಾಡಿತು. ಈ ಭೂಮಿಯ ಮೇಲೆ ಪಾಷ್ ಕಂಪೆನಿ ಒಡೆತನ ಹೊಂದಿದೆ ಎಂದು ಕೆಐಎಡಿಬಿ ಖಚಿತಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>