<p>ಬೆಂಗಳೂರು: `ಈ ಸಲದ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎನ್ನುವ ಕನಸಿದೆ. ನಿರೀಕ್ಷೆಯಿದೆ. ಆದರೆ ಒತ್ತಡವಿಲ್ಲ~ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಕರ್ನಾಟಕದ ಕ್ರಿಕೆಟಿಗ ಎಸ್. ಅರವಿಂದ್ ಹೇಳಿದರು.<br /> <br /> ಮೊದಲ ಗೆಲುವಿನ ಹುಮ್ಮಸ್ಸಿನಲ್ಲಿರುವ ಆರ್ಸಿಬಿ ತಂಡದ ಕೆಲ ಆಟಗಾರರು ಭಾನುವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) `ಬಿ~ ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ತೊಡಗಿದ್ದರು. <br /> <br /> ಈ ವೇಳೆ ಮಾತನಾಡಿದ `ಬರ್ತಡೇ ಬಾಯ್~ ಅರವಿಂದ್, `ಆರ್ ವಿನಯ್ ಕುಮಾರ್ ತಂಡಕ್ಕೆ ಮರಳಿರುವುದು ತುಂಬಾ ಖುಷಿ ನೀಡಿದೆ. ಅನೇಕ ಸಲ ನಾನು ಅವರಿಂದ ಸಲಹೆ ಪಡೆದಿದ್ದೇನೆ. ತಂಡದಲ್ಲಿ ನನ್ನ ಸ್ಥಾನವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ಯಾವುದೇ ಜವಾಬ್ದಾರಿ ಲಭಿಸಿದರೂ, ಅದನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ~ ಎಂದು ಅವರು ಹೇಳಿದರು.<br /> <br /> ಭಾನುವಾರ 28ನೇ ವರ್ಷಕ್ಕೆ ಕಾಲಿಟ್ಟ ಅರವಿಂದ್ ತಂಡದ ಗೆಳೆಯರೊಂದಿಗೆ ಜನ್ಮದಿನದ ಸಂಭ್ರಮ ಆಚರಿಸಿಕೊಂಡರು. ಕೇಕ್ ಕತ್ತರಿಸಿ, ಎಡಗೈ ಬೌಲರ್ನ ಮುಖಕ್ಕೆ ಕೇಕ್ ಹಚ್ಚಿ ಗೆಳೆಯರು ಸಂಭ್ರಮಿಸಿದರು.</p>.<p>`ನೋವಿನಿಂದ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ನೆಟ್ನಲ್ಲಿಯೂ ಉತ್ತಮವಾಗಿ ಅಭ್ಯಾಸ ಮಾಡುತ್ತಿದ್ದೇನೆ~ ಎಂದು ಈ ಆಟಗಾರ ಹೇಳಿದರು. ಕಳೆದ ಸಲದ ರಣಜಿ ಋತುವಿನ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಮೊಣಕಾಲು ನೋವಿನ ಗಾಯಕ್ಕೆ ಅರವಿಂದ್ ತುತ್ತಾಗಿದ್ದರು. ಕಳೆದ ಸಲದ ಐಪಿಎಲ್ನಲ್ಲಿ 13 ಪಂದ್ಯಗಳಿಂದ 21 ವಿಕೆಟ್ ಪಡೆದು ಮಿಂಚಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ಈ ಸಲದ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎನ್ನುವ ಕನಸಿದೆ. ನಿರೀಕ್ಷೆಯಿದೆ. ಆದರೆ ಒತ್ತಡವಿಲ್ಲ~ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಕರ್ನಾಟಕದ ಕ್ರಿಕೆಟಿಗ ಎಸ್. ಅರವಿಂದ್ ಹೇಳಿದರು.<br /> <br /> ಮೊದಲ ಗೆಲುವಿನ ಹುಮ್ಮಸ್ಸಿನಲ್ಲಿರುವ ಆರ್ಸಿಬಿ ತಂಡದ ಕೆಲ ಆಟಗಾರರು ಭಾನುವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) `ಬಿ~ ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ತೊಡಗಿದ್ದರು. <br /> <br /> ಈ ವೇಳೆ ಮಾತನಾಡಿದ `ಬರ್ತಡೇ ಬಾಯ್~ ಅರವಿಂದ್, `ಆರ್ ವಿನಯ್ ಕುಮಾರ್ ತಂಡಕ್ಕೆ ಮರಳಿರುವುದು ತುಂಬಾ ಖುಷಿ ನೀಡಿದೆ. ಅನೇಕ ಸಲ ನಾನು ಅವರಿಂದ ಸಲಹೆ ಪಡೆದಿದ್ದೇನೆ. ತಂಡದಲ್ಲಿ ನನ್ನ ಸ್ಥಾನವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ಯಾವುದೇ ಜವಾಬ್ದಾರಿ ಲಭಿಸಿದರೂ, ಅದನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ~ ಎಂದು ಅವರು ಹೇಳಿದರು.<br /> <br /> ಭಾನುವಾರ 28ನೇ ವರ್ಷಕ್ಕೆ ಕಾಲಿಟ್ಟ ಅರವಿಂದ್ ತಂಡದ ಗೆಳೆಯರೊಂದಿಗೆ ಜನ್ಮದಿನದ ಸಂಭ್ರಮ ಆಚರಿಸಿಕೊಂಡರು. ಕೇಕ್ ಕತ್ತರಿಸಿ, ಎಡಗೈ ಬೌಲರ್ನ ಮುಖಕ್ಕೆ ಕೇಕ್ ಹಚ್ಚಿ ಗೆಳೆಯರು ಸಂಭ್ರಮಿಸಿದರು.</p>.<p>`ನೋವಿನಿಂದ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ನೆಟ್ನಲ್ಲಿಯೂ ಉತ್ತಮವಾಗಿ ಅಭ್ಯಾಸ ಮಾಡುತ್ತಿದ್ದೇನೆ~ ಎಂದು ಈ ಆಟಗಾರ ಹೇಳಿದರು. ಕಳೆದ ಸಲದ ರಣಜಿ ಋತುವಿನ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಮೊಣಕಾಲು ನೋವಿನ ಗಾಯಕ್ಕೆ ಅರವಿಂದ್ ತುತ್ತಾಗಿದ್ದರು. ಕಳೆದ ಸಲದ ಐಪಿಎಲ್ನಲ್ಲಿ 13 ಪಂದ್ಯಗಳಿಂದ 21 ವಿಕೆಟ್ ಪಡೆದು ಮಿಂಚಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>