<p>ಬಣ್ಣಹಚ್ಚುವ ವನಿತೆಯರು ಅನೇಕರಿದ್ದಾರೆ. ಬಣ್ಣ ಹಚ್ಚಿಸಿ, ಆಕ್ಷನ್-ಕಟ್ ಹೇಳುವವರು ಮಾತ್ರ ವಿರಳ. ಆ ಹಾದಿಯಲ್ಲಿ ಯಶಸ್ಸು ಕಂಡ ಮೂವರು `ಮೆಟ್ರೊ~ ಜೊತೆ ಮಾತಿಗಿಳಿದಿದ್ದಾರೆ. ತಾವೆದುರಿಸುತ್ತಿರುವ ಸವಾಲುಗಳು, ಉದ್ಯಮದವರ ಪ್ರತಿಕ್ರಿಯೆ, ಸೃಜನಶೀಲತೆಯ ಕಷ್ಟ-ಸುಖವನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಇಂದು ವಿಶ್ವ ಮಹಿಳಾ ದಿನಾಚರಣೆ.<br /> <br /> <strong>ಯಾಕೀ ಸಂಶಯ?</strong><br /> ಸಿನಿಮಾರಂಗದಲ್ಲಿ ಮಹಿಳೆಯಾಗಿ ಎದುರಿಸಿದ ಸವಾಲುಗಳು ಹೆಚ್ಚೇನೂ ಇಲ್ಲ. ಆದರೆ ನಾವು ತೆಗೆದುಕೊಳ್ಳುವ ಸಿನಿಮಾದ ವಿಷಯಗಳನ್ನು ಸಂಶಯದ ದೃಷ್ಟಿಯಿಂದ ನೋಡುವ ಚಾಳಿಯಂತೂ ಇದ್ದೇಇದೆ. `ಸ್ಲಂ ಬಾಲ~ ಮಾಡಿದಾಗ ಇವರಿಗೆ ಭೂಗತಲೋಕದ ಸಂವೇದನೆಗಳೇನು ಗೊತ್ತು? ಎಂದರು.<br /> <br /> ಮಹಿಳೆಯರ ಸೂಕ್ಷ್ಮ ಸಂವೇದನೆಯನ್ನು ಪುಟ್ಟಣ್ಣ ಕಣಗಾಲ್ ಅವರಂಥ ಪುರುಷರು ಯಶಸ್ವಿಯಾಗಿ ಹೇಳಿರುವಾಗ ಮಹಿಳೆಯರಿಗೆ ಪುರುಷರ ಸಂವೇದನೆಯನ್ನು ತೆರೆಮೇಲೆ ತರಲು ಯಾಕೆ ಸಾಧ್ಯವಿಲ್ಲ?<br /> <br /> ನಾವು ಕೂಡ ಅಣ್ಣ-ತಮ್ಮ, ಅಪ್ಪ ಹೀಗೆ ಗಂಡಸರೊಂದಿಗೆ ಬೆರೆತು ಬೆಳೆದಿರುತ್ತೆವೆ. ಅದರಿಂದ ಅಂಥ ತಾರತಮ್ಯವನ್ನು ನಾನು ವಿರೋಧಿಸುತ್ತೇನೆ. `ಕಳ್ಳರ ಸಂತೆ~ಯಂಥ ರಾಜಕೀಯ ವಿಡಂಬನೆ ಇರುವ ಸಿನಿಮಾ ಮಾಡಿದಾಗಲೂ ಅಷ್ಟೇ ಸಂಶಯದಿಂದ ನೋಡಿದರು. ಆದರೆ ದೊಡ್ಡ ದೊಡ್ಡ ಕಲಾವಿದರು ನನ್ನ ಕೆಲಸವನ್ನು ಮೆಚ್ಚಿ ಮಾತನಾಡಿದಾಗ ಸಂತೋಷವಾಯಿತು.<br /> <br /> ನಾನು ಹೆಣ್ಣು ಎಂಬ ದೃಷ್ಟಿಯಿಂದ ನನ್ನನ್ನು ಇಲ್ಲಿ ಕೀಳಾಗಿ ನೋಡಿಲ್ಲ. ಆದರೆ ನಮ್ಮ ಕೆಲಸಕ್ಕೆ ಕೆಲವೊಮ್ಮೆ ಪ್ರೋತ್ಸಾಹ ಕಡಿಮೆ ಎನಿಸುತ್ತದೆ. ಕಮರ್ಷಿಯಲ್ ಸಿನಿಮಾ ಮಾಡಲು ಇವರಿಂದ ಆಗುವುದಿಲ್ಲ ಎಂಬ ಅನುಮಾನ ಎಲ್ಲರಲ್ಲೂ ಇರುತ್ತದೆ. <br /> <br /> ದೊಡ್ಡ ಸ್ಟಾರ್ಗಳು ನಮಗೆ ಡೇಟ್ ಕೊಡಲ್ಲ. ಇಂಥ ತಾರತಮ್ಯಗಳು ಹೋದರೆ ಪುರುಷರಿಗಿಂತ ಹೆಚ್ಚು ಸಾಧಿಸಿ ತೋರುತ್ತೇವೆ. ಇನ್ನು ಇಲ್ಲಿ ನಮ್ಮ ನಡತೆಯ ಮೇಲೆ ಗೌರವ- ಅಗೌರವ ಎಂಬುದು ಅವಲಂಬಿತವಾಗಿರುತ್ತದೆ. <br /> <br /> ನಿರ್ದೇಶನ ಎಂಬುದು ಅಧಿಕ ಸಮಯ ಮತ್ತು ಶಕ್ತಿ ಬೇಡುವ ಕೆಲಸ. ಅದು ನೂರು ಮನಸ್ಸುಗಳಿಗೆ ನಮ್ಮ ಭಾವನೆಯನ್ನು ಅರ್ಥೈಸುವ ಕೆಲಸ. ಅದಕ್ಕೆ ತುಂಬಾ ಎನರ್ಜಿ ಬೇಕು. <br /> <br /> ನಾನು ಇನ್ನು ಸಂಸಾರದ ಬಂಧಕ್ಕೆ ಒಳಪಟ್ಟಿಲ್ಲದ ಕಾರಣ ಅದನ್ನು ತೂಗಿಸಿಕೊಂಡು ಹೋಗುತ್ತಿದ್ದೇನೆ. ಅದರಿಂದ ಹೆಚ್ಚು ಹೆಣ್ಣುಮಕ್ಕಳು ಇತ್ತ ಬರಲು ಮನಸ್ಸು ಮಾಡಿಲ್ಲ ಎನಿಸುತ್ತದೆ. ನನಗಂತೂ ನನ್ನ ಕಲಾವಿದರಿಂದ ಸಂಪೂರ್ಣ ಬೆಂಬಲ ಸಿಕ್ಕಿದೆ.<br /> <br /> ಪರಭಾಷೆಗೆ ಹೋಲಿಸಿದರೆ ಕನ್ನಡದಲ್ಲಿ ನಿರ್ದೇಶಕಿಯರ ಸಂಖ್ಯೆ ಕೊಂಚ ಕಡಿಮೆಯೇ ಎನ್ನಬಹುದು. ಇದು ಅತಿ ಒತ್ತಡದ ಕೆಲಸವಾದರೂ ನಿಯಮಿತವಾಗಿ ಯೋಗ ಮಾಡುವುದರಿಂದ ನನ್ನ ಆರೋಗ್ಯ ಕೆಟ್ಟಿಲ್ಲ.</p>.<p><strong>ಸುಮನಾ ಕಿತ್ತೂರು</strong><br /> <br /> <strong>ಬೇಕು ಎನರ್ಜಿ </strong><br /> ಸವಾಲು ತುಂಬಾನೆ ಇದೆ. ಪುರುಷರಿಗೂ ಅಂಥ ಸವಾಲುಗಳು ಇದೆ ಎನ್ನಬಹುದು. ಸಾಮಾನ್ಯವಾಗಿ ನಿರ್ದೇಶಕರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಆದರೆ ಮಹಿಳೆಯರಿಗೆ ಇವರು ಗಂಭೀರ ಸಿನಿಮಾಗಳನ್ನು ಮಾತ್ರ ಮಾಡಲು ಸರಿ ಎಂಬ ಹಣೆಪಟ್ಟಿ ಕಟ್ಟುತ್ತಾರೆ. <br /> <br /> ಅದು ತಪ್ಪು. ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಎನರ್ಜಿ ಬೇಡುವ ಕೆಲಸ ಇದು. ನನ್ನ ಜೊತೆ ಮೂರು ನಾಲ್ಕು ಜನ ಸಹಾಯಕರು ಕೆಲಸ ಮಾಡಲು ಬಂದು 2-3 ದಿನಕ್ಕೆ ಹೊರಟು ಹೋದರು.<br /> <br /> ಆದರೆ ಸಿನಿಮಾ ನಿರ್ದೇಶನವನ್ನು ಪ್ಯಾಶನ್ ಎಂದುಕೊಂಡು ಬಂದಿರುವ ನನಗೆ ಇದನ್ನು ಬಿಟ್ಟು ಹೋಗಲು ಮನಸ್ಸಿಲ್ಲ. ಅದರಿಂದ ಎಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿರುವೆ. ಸಿನಿಮಾ ಎಂದರೆ ನನಗೆ ದುಡ್ಡು ಒಂದೇ ಅಲ್ಲ.<br /> <br /> ಇದನ್ನು ತುಂಬಾ ಪ್ರೀತಿಯಿಂದ ನಿಭಾಯಿಸುತ್ತಿರುವೆ. ಸಿನಿಮಾರಂಗ ಪುರುಷ ಪ್ರಧಾನ ಉದ್ಯಮ. ಇಲ್ಲಿ ಗ್ಲಾಮರ್ಗೆ ಮಾತ್ರ ಹೆಣ್ಣುಮಕ್ಕಳಿದ್ದಾರೆ. ಪ್ಯಾಶನ್ ಇರುವ ನಿರ್ದೇಶಕಿಯರಿಗೆ ಮಾತ್ರ ಒತ್ತಡಗಳನ್ನು ತೂಗಿಸಿಕೊಂಡು ಹೋಗಲು ಸಾಧ್ಯ.<br /> <br /> ಎಲ್ಲರಿಂದಲೂ ಅದು ಸಾಧ್ಯವಿಲ್ಲ. `ಕ್ರೇಜಿ ಲೋಕ~ ಚಿತ್ರೀಕರಣದ ಸಂದರ್ಭದಲ್ಲಿ ಅನುಮಾನಗಳು ಕಾಡಿದರೆ ರವಿಚಂದ್ರನ್ ಕೇಳಿ ಪರಿಹರಿಸಿಕೊಳ್ಳುತ್ತಿದ್ದರು. ಅವರೆಂದೂ ಸ್ಟಾರ್ ತರ ವರ್ತಿಸಲಿಲ್ಲ. ನಾನು ಕೂಡ ಅವರನ್ನು ಕಲಾವಿದರಂತೆಯೇ ನೋಡಿಕೊಂಡೆ.<br /> <br /> ಒಟ್ಟಾರೆ ನಮ್ಮ ಕೆಲಸದ ಮೇಲೆ ಎಲ್ಲಾ ಅವಲಂಬಿತವಾಗಿರುತ್ತದೆ. ಕೆಲಸ ಚೆನ್ನಾಗಿದ್ದರೆ ಯಾರೂ ಏನೂ ಮಾತನಾಡೊಲ್ಲ. ಇದರಲ್ಲಿ ಒತ್ತಡ ತುಂಬಾ ಇರುತ್ತೆ. ನಾನು ಗರ್ಭಿಣಿಯಾಗಿದ್ದಾಗಲೂ ಆಗುಂಬೆಯಲ್ಲಿ ಚಿತ್ರೀಕರಣ ಮಾಡಿದ್ದೆ ಗೊತ್ತಾ? <br /> <strong> ಕವಿತಾ ಲಂಕೇಶ್</strong><br /> <br /> <strong>ನನಗೆ ಆದ ಅನುಭವವೆಲ್ಲಾ ಒಳ್ಳೆಯದೇ</strong><br /> ಆರಂಭದಲ್ಲಿ ನಟಿಯಾಗಿದ್ದ ಕಾರಣ ಕಲಾವಿದರು ಪರಿಚಯವಾಗಿದ್ದರು. ಅದಕ್ಕೇ ಯಾರಿಂದಲೂ ನನಗೆ ತೊಂದರೆಯಾಗಲಿಲ್ಲ. ನಿರ್ದೇಶಕಿಯಾಗಿ ನನಗೆ ಆಗಿರುವುದೆಲ್ಲಾ ಸಕಾರಾತ್ಮಕ ಅನುಭವವೇ. <br /> <br /> ನಮ್ಮ ಕೆಲಸದ ಬಗ್ಗೆ ಆತ್ಮವಿಶ್ವಾಸ ಇದ್ದರೆ ಯಾರೂ ತೊಂದರೆ ಕೊಡೋಕಾಗಲ್ಲ. ಅರ್ಧಂಬರ್ಧ ಕೆಲಸ ಮಾಡುವವರಿಗೆ ತೊಂದರೆ ಆಗಿಯೇ ಆಗುತ್ತದೆ. <br /> <br /> ಮಹಿಳೆಯರು ಹೆಚ್ಚು ನಿರ್ದೇಶನದತ್ತ ಬರದೇ ಇರಲು ಅದಕ್ಕೆ ಹೆಚ್ಚು ಸಮಯದ ಅಗತ್ಯ ಇರುವುದು ಕಾರಣ ಅನಿಸುತ್ತದೆ. ಒಬ್ಬ ನಟಿ ದಿನದಲ್ಲಿ ಕೆಲವು ಗಂಟೆ ಕೆಲಸ ಮಾಡಿ ಮನೆಗೆ ತೆರಳಿ ಕುಟುಂಬದ ಸೌಖ್ಯ ನೋಡಿಕೊಳ್ಳಬಹುದು. ಆದರೆ ನಿರ್ದೇಶಕಿಗೆ ಆಗಲ್ಲ. <br /> <br /> ಅವಳು ಚಿತ್ರೀಕರಣ ಮುಗಿದ ನಂತರವೂ ಕಲಾವಿದರ ಡೇಟ್ಸ್, ದೃಶ್ಯದ ಬೆಳವಣಿಗೆ ಬಗ್ಗೆ ಚಿಂತಿಸಬೇಕು. ನಿರ್ದೇಶಕಿಯಾಗಲು ಆಸಕ್ತಿಯೂ ಮುಖ್ಯ.<br /> <br /> ಏಕತಾನತೆಯಿಂದ ಬೇಸರ ಬಂದು ನನಗೆ ನಿರ್ದೇಶನದತ್ತ ಆಸಕ್ತಿ ಬಂತು. `ನಮ್ಮಮ್ಮ ಶಾರದೆ~ ಸೆಟ್ನಲ್ಲಿ ಕೆಲವೊಂದು ಭಾವನಾತ್ಮಕ ಸನ್ನಿವೇಶಗಳ ಚಿತ್ರೀಕರಣದಲ್ಲಿ ಕೆಲಸ ಮಾಡಿದೆ.<br /> <br /> ಅದಾದ ನಂತರ `ಚಿ.ಸೌ.ಸಾವಿತ್ರಿ~ ನಿರ್ದೇಶಿಸುವ ಅವಕಾಶ ಸಿಕ್ಕಿತು. ಅದು ಸೂಪರ್ ಹಿಟ್ ಆಯ್ತು. ಇದೀಗ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ನನ್ನ ಗೆಳೆಯ ರಮೇಶ್ ಇಂದಿರಾ ಕೂಡ ಇದೇ ಕ್ಷೇತ್ರದಲ್ಲಿ ಇರುವುದರಿಂದ ನಿರ್ದೇಶನದ ಒತ್ತಡಗಳನ್ನು ನಿಭಾಯಿಸಲು ಸಾಧ್ಯವಾಗಿದೆ.<br /> <strong> ಶ್ರುತಿ ನಾಯ್ಡು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಣ್ಣಹಚ್ಚುವ ವನಿತೆಯರು ಅನೇಕರಿದ್ದಾರೆ. ಬಣ್ಣ ಹಚ್ಚಿಸಿ, ಆಕ್ಷನ್-ಕಟ್ ಹೇಳುವವರು ಮಾತ್ರ ವಿರಳ. ಆ ಹಾದಿಯಲ್ಲಿ ಯಶಸ್ಸು ಕಂಡ ಮೂವರು `ಮೆಟ್ರೊ~ ಜೊತೆ ಮಾತಿಗಿಳಿದಿದ್ದಾರೆ. ತಾವೆದುರಿಸುತ್ತಿರುವ ಸವಾಲುಗಳು, ಉದ್ಯಮದವರ ಪ್ರತಿಕ್ರಿಯೆ, ಸೃಜನಶೀಲತೆಯ ಕಷ್ಟ-ಸುಖವನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಇಂದು ವಿಶ್ವ ಮಹಿಳಾ ದಿನಾಚರಣೆ.<br /> <br /> <strong>ಯಾಕೀ ಸಂಶಯ?</strong><br /> ಸಿನಿಮಾರಂಗದಲ್ಲಿ ಮಹಿಳೆಯಾಗಿ ಎದುರಿಸಿದ ಸವಾಲುಗಳು ಹೆಚ್ಚೇನೂ ಇಲ್ಲ. ಆದರೆ ನಾವು ತೆಗೆದುಕೊಳ್ಳುವ ಸಿನಿಮಾದ ವಿಷಯಗಳನ್ನು ಸಂಶಯದ ದೃಷ್ಟಿಯಿಂದ ನೋಡುವ ಚಾಳಿಯಂತೂ ಇದ್ದೇಇದೆ. `ಸ್ಲಂ ಬಾಲ~ ಮಾಡಿದಾಗ ಇವರಿಗೆ ಭೂಗತಲೋಕದ ಸಂವೇದನೆಗಳೇನು ಗೊತ್ತು? ಎಂದರು.<br /> <br /> ಮಹಿಳೆಯರ ಸೂಕ್ಷ್ಮ ಸಂವೇದನೆಯನ್ನು ಪುಟ್ಟಣ್ಣ ಕಣಗಾಲ್ ಅವರಂಥ ಪುರುಷರು ಯಶಸ್ವಿಯಾಗಿ ಹೇಳಿರುವಾಗ ಮಹಿಳೆಯರಿಗೆ ಪುರುಷರ ಸಂವೇದನೆಯನ್ನು ತೆರೆಮೇಲೆ ತರಲು ಯಾಕೆ ಸಾಧ್ಯವಿಲ್ಲ?<br /> <br /> ನಾವು ಕೂಡ ಅಣ್ಣ-ತಮ್ಮ, ಅಪ್ಪ ಹೀಗೆ ಗಂಡಸರೊಂದಿಗೆ ಬೆರೆತು ಬೆಳೆದಿರುತ್ತೆವೆ. ಅದರಿಂದ ಅಂಥ ತಾರತಮ್ಯವನ್ನು ನಾನು ವಿರೋಧಿಸುತ್ತೇನೆ. `ಕಳ್ಳರ ಸಂತೆ~ಯಂಥ ರಾಜಕೀಯ ವಿಡಂಬನೆ ಇರುವ ಸಿನಿಮಾ ಮಾಡಿದಾಗಲೂ ಅಷ್ಟೇ ಸಂಶಯದಿಂದ ನೋಡಿದರು. ಆದರೆ ದೊಡ್ಡ ದೊಡ್ಡ ಕಲಾವಿದರು ನನ್ನ ಕೆಲಸವನ್ನು ಮೆಚ್ಚಿ ಮಾತನಾಡಿದಾಗ ಸಂತೋಷವಾಯಿತು.<br /> <br /> ನಾನು ಹೆಣ್ಣು ಎಂಬ ದೃಷ್ಟಿಯಿಂದ ನನ್ನನ್ನು ಇಲ್ಲಿ ಕೀಳಾಗಿ ನೋಡಿಲ್ಲ. ಆದರೆ ನಮ್ಮ ಕೆಲಸಕ್ಕೆ ಕೆಲವೊಮ್ಮೆ ಪ್ರೋತ್ಸಾಹ ಕಡಿಮೆ ಎನಿಸುತ್ತದೆ. ಕಮರ್ಷಿಯಲ್ ಸಿನಿಮಾ ಮಾಡಲು ಇವರಿಂದ ಆಗುವುದಿಲ್ಲ ಎಂಬ ಅನುಮಾನ ಎಲ್ಲರಲ್ಲೂ ಇರುತ್ತದೆ. <br /> <br /> ದೊಡ್ಡ ಸ್ಟಾರ್ಗಳು ನಮಗೆ ಡೇಟ್ ಕೊಡಲ್ಲ. ಇಂಥ ತಾರತಮ್ಯಗಳು ಹೋದರೆ ಪುರುಷರಿಗಿಂತ ಹೆಚ್ಚು ಸಾಧಿಸಿ ತೋರುತ್ತೇವೆ. ಇನ್ನು ಇಲ್ಲಿ ನಮ್ಮ ನಡತೆಯ ಮೇಲೆ ಗೌರವ- ಅಗೌರವ ಎಂಬುದು ಅವಲಂಬಿತವಾಗಿರುತ್ತದೆ. <br /> <br /> ನಿರ್ದೇಶನ ಎಂಬುದು ಅಧಿಕ ಸಮಯ ಮತ್ತು ಶಕ್ತಿ ಬೇಡುವ ಕೆಲಸ. ಅದು ನೂರು ಮನಸ್ಸುಗಳಿಗೆ ನಮ್ಮ ಭಾವನೆಯನ್ನು ಅರ್ಥೈಸುವ ಕೆಲಸ. ಅದಕ್ಕೆ ತುಂಬಾ ಎನರ್ಜಿ ಬೇಕು. <br /> <br /> ನಾನು ಇನ್ನು ಸಂಸಾರದ ಬಂಧಕ್ಕೆ ಒಳಪಟ್ಟಿಲ್ಲದ ಕಾರಣ ಅದನ್ನು ತೂಗಿಸಿಕೊಂಡು ಹೋಗುತ್ತಿದ್ದೇನೆ. ಅದರಿಂದ ಹೆಚ್ಚು ಹೆಣ್ಣುಮಕ್ಕಳು ಇತ್ತ ಬರಲು ಮನಸ್ಸು ಮಾಡಿಲ್ಲ ಎನಿಸುತ್ತದೆ. ನನಗಂತೂ ನನ್ನ ಕಲಾವಿದರಿಂದ ಸಂಪೂರ್ಣ ಬೆಂಬಲ ಸಿಕ್ಕಿದೆ.<br /> <br /> ಪರಭಾಷೆಗೆ ಹೋಲಿಸಿದರೆ ಕನ್ನಡದಲ್ಲಿ ನಿರ್ದೇಶಕಿಯರ ಸಂಖ್ಯೆ ಕೊಂಚ ಕಡಿಮೆಯೇ ಎನ್ನಬಹುದು. ಇದು ಅತಿ ಒತ್ತಡದ ಕೆಲಸವಾದರೂ ನಿಯಮಿತವಾಗಿ ಯೋಗ ಮಾಡುವುದರಿಂದ ನನ್ನ ಆರೋಗ್ಯ ಕೆಟ್ಟಿಲ್ಲ.</p>.<p><strong>ಸುಮನಾ ಕಿತ್ತೂರು</strong><br /> <br /> <strong>ಬೇಕು ಎನರ್ಜಿ </strong><br /> ಸವಾಲು ತುಂಬಾನೆ ಇದೆ. ಪುರುಷರಿಗೂ ಅಂಥ ಸವಾಲುಗಳು ಇದೆ ಎನ್ನಬಹುದು. ಸಾಮಾನ್ಯವಾಗಿ ನಿರ್ದೇಶಕರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಆದರೆ ಮಹಿಳೆಯರಿಗೆ ಇವರು ಗಂಭೀರ ಸಿನಿಮಾಗಳನ್ನು ಮಾತ್ರ ಮಾಡಲು ಸರಿ ಎಂಬ ಹಣೆಪಟ್ಟಿ ಕಟ್ಟುತ್ತಾರೆ. <br /> <br /> ಅದು ತಪ್ಪು. ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಎನರ್ಜಿ ಬೇಡುವ ಕೆಲಸ ಇದು. ನನ್ನ ಜೊತೆ ಮೂರು ನಾಲ್ಕು ಜನ ಸಹಾಯಕರು ಕೆಲಸ ಮಾಡಲು ಬಂದು 2-3 ದಿನಕ್ಕೆ ಹೊರಟು ಹೋದರು.<br /> <br /> ಆದರೆ ಸಿನಿಮಾ ನಿರ್ದೇಶನವನ್ನು ಪ್ಯಾಶನ್ ಎಂದುಕೊಂಡು ಬಂದಿರುವ ನನಗೆ ಇದನ್ನು ಬಿಟ್ಟು ಹೋಗಲು ಮನಸ್ಸಿಲ್ಲ. ಅದರಿಂದ ಎಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿರುವೆ. ಸಿನಿಮಾ ಎಂದರೆ ನನಗೆ ದುಡ್ಡು ಒಂದೇ ಅಲ್ಲ.<br /> <br /> ಇದನ್ನು ತುಂಬಾ ಪ್ರೀತಿಯಿಂದ ನಿಭಾಯಿಸುತ್ತಿರುವೆ. ಸಿನಿಮಾರಂಗ ಪುರುಷ ಪ್ರಧಾನ ಉದ್ಯಮ. ಇಲ್ಲಿ ಗ್ಲಾಮರ್ಗೆ ಮಾತ್ರ ಹೆಣ್ಣುಮಕ್ಕಳಿದ್ದಾರೆ. ಪ್ಯಾಶನ್ ಇರುವ ನಿರ್ದೇಶಕಿಯರಿಗೆ ಮಾತ್ರ ಒತ್ತಡಗಳನ್ನು ತೂಗಿಸಿಕೊಂಡು ಹೋಗಲು ಸಾಧ್ಯ.<br /> <br /> ಎಲ್ಲರಿಂದಲೂ ಅದು ಸಾಧ್ಯವಿಲ್ಲ. `ಕ್ರೇಜಿ ಲೋಕ~ ಚಿತ್ರೀಕರಣದ ಸಂದರ್ಭದಲ್ಲಿ ಅನುಮಾನಗಳು ಕಾಡಿದರೆ ರವಿಚಂದ್ರನ್ ಕೇಳಿ ಪರಿಹರಿಸಿಕೊಳ್ಳುತ್ತಿದ್ದರು. ಅವರೆಂದೂ ಸ್ಟಾರ್ ತರ ವರ್ತಿಸಲಿಲ್ಲ. ನಾನು ಕೂಡ ಅವರನ್ನು ಕಲಾವಿದರಂತೆಯೇ ನೋಡಿಕೊಂಡೆ.<br /> <br /> ಒಟ್ಟಾರೆ ನಮ್ಮ ಕೆಲಸದ ಮೇಲೆ ಎಲ್ಲಾ ಅವಲಂಬಿತವಾಗಿರುತ್ತದೆ. ಕೆಲಸ ಚೆನ್ನಾಗಿದ್ದರೆ ಯಾರೂ ಏನೂ ಮಾತನಾಡೊಲ್ಲ. ಇದರಲ್ಲಿ ಒತ್ತಡ ತುಂಬಾ ಇರುತ್ತೆ. ನಾನು ಗರ್ಭಿಣಿಯಾಗಿದ್ದಾಗಲೂ ಆಗುಂಬೆಯಲ್ಲಿ ಚಿತ್ರೀಕರಣ ಮಾಡಿದ್ದೆ ಗೊತ್ತಾ? <br /> <strong> ಕವಿತಾ ಲಂಕೇಶ್</strong><br /> <br /> <strong>ನನಗೆ ಆದ ಅನುಭವವೆಲ್ಲಾ ಒಳ್ಳೆಯದೇ</strong><br /> ಆರಂಭದಲ್ಲಿ ನಟಿಯಾಗಿದ್ದ ಕಾರಣ ಕಲಾವಿದರು ಪರಿಚಯವಾಗಿದ್ದರು. ಅದಕ್ಕೇ ಯಾರಿಂದಲೂ ನನಗೆ ತೊಂದರೆಯಾಗಲಿಲ್ಲ. ನಿರ್ದೇಶಕಿಯಾಗಿ ನನಗೆ ಆಗಿರುವುದೆಲ್ಲಾ ಸಕಾರಾತ್ಮಕ ಅನುಭವವೇ. <br /> <br /> ನಮ್ಮ ಕೆಲಸದ ಬಗ್ಗೆ ಆತ್ಮವಿಶ್ವಾಸ ಇದ್ದರೆ ಯಾರೂ ತೊಂದರೆ ಕೊಡೋಕಾಗಲ್ಲ. ಅರ್ಧಂಬರ್ಧ ಕೆಲಸ ಮಾಡುವವರಿಗೆ ತೊಂದರೆ ಆಗಿಯೇ ಆಗುತ್ತದೆ. <br /> <br /> ಮಹಿಳೆಯರು ಹೆಚ್ಚು ನಿರ್ದೇಶನದತ್ತ ಬರದೇ ಇರಲು ಅದಕ್ಕೆ ಹೆಚ್ಚು ಸಮಯದ ಅಗತ್ಯ ಇರುವುದು ಕಾರಣ ಅನಿಸುತ್ತದೆ. ಒಬ್ಬ ನಟಿ ದಿನದಲ್ಲಿ ಕೆಲವು ಗಂಟೆ ಕೆಲಸ ಮಾಡಿ ಮನೆಗೆ ತೆರಳಿ ಕುಟುಂಬದ ಸೌಖ್ಯ ನೋಡಿಕೊಳ್ಳಬಹುದು. ಆದರೆ ನಿರ್ದೇಶಕಿಗೆ ಆಗಲ್ಲ. <br /> <br /> ಅವಳು ಚಿತ್ರೀಕರಣ ಮುಗಿದ ನಂತರವೂ ಕಲಾವಿದರ ಡೇಟ್ಸ್, ದೃಶ್ಯದ ಬೆಳವಣಿಗೆ ಬಗ್ಗೆ ಚಿಂತಿಸಬೇಕು. ನಿರ್ದೇಶಕಿಯಾಗಲು ಆಸಕ್ತಿಯೂ ಮುಖ್ಯ.<br /> <br /> ಏಕತಾನತೆಯಿಂದ ಬೇಸರ ಬಂದು ನನಗೆ ನಿರ್ದೇಶನದತ್ತ ಆಸಕ್ತಿ ಬಂತು. `ನಮ್ಮಮ್ಮ ಶಾರದೆ~ ಸೆಟ್ನಲ್ಲಿ ಕೆಲವೊಂದು ಭಾವನಾತ್ಮಕ ಸನ್ನಿವೇಶಗಳ ಚಿತ್ರೀಕರಣದಲ್ಲಿ ಕೆಲಸ ಮಾಡಿದೆ.<br /> <br /> ಅದಾದ ನಂತರ `ಚಿ.ಸೌ.ಸಾವಿತ್ರಿ~ ನಿರ್ದೇಶಿಸುವ ಅವಕಾಶ ಸಿಕ್ಕಿತು. ಅದು ಸೂಪರ್ ಹಿಟ್ ಆಯ್ತು. ಇದೀಗ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ನನ್ನ ಗೆಳೆಯ ರಮೇಶ್ ಇಂದಿರಾ ಕೂಡ ಇದೇ ಕ್ಷೇತ್ರದಲ್ಲಿ ಇರುವುದರಿಂದ ನಿರ್ದೇಶನದ ಒತ್ತಡಗಳನ್ನು ನಿಭಾಯಿಸಲು ಸಾಧ್ಯವಾಗಿದೆ.<br /> <strong> ಶ್ರುತಿ ನಾಯ್ಡು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>