<p><strong>ಕೆಂಗೇರಿ: </strong> `ಯಾರೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರೂ ಅಧಿಕಾರ ನಿರೀಕ್ಷಿಸದೆ ನಿಷ್ಠೆಯಿಂದ ದುಡಿದಾಗ ಉನ್ನತ ಸ್ಥಾನಗಳು ಅರಸಿಕೊಂಡು ಬರುತ್ತವೆ~ ಎಂದು ಶಾಸಕ ಎಂ.ಕೃಷ್ಣಪ್ಪ ಅಭಿಪ್ರಾಯಪಟ್ಟರು. <br /> <br /> ಮಾಗಡಿ ರಸ್ತೆಯ ಕಾವೇರಿಪುರ ರಾಜೀವ್ನಗರದ ಬಿಡಿಎ ಬಡಾವಣೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಂಡ ನಂತರ ಅವರು ಮಾತನಾಡಿದರು.<br /> <br /> `ಕಾಂಗ್ರೆಸ್ ಸಿದ್ದಾಂತ ನಂಬಿ ಪಕ್ಷ ಸೇರುವವರಿಗೆ ಸದಾ ಸ್ವಾಗತ ಕೋರಲಾಗುವುದು. ಪಕ್ಷದಲ್ಲಿ ಉತ್ತಮ ಸಂಘಟನೆ ಮಾಡಿದವರಿಗೆ ಉನ್ನತ ಸ್ಥಾನ ದೊರಕಿಸಿ ಕೊಡಲಾಗುತ್ತದೆ~ ಎಂದರು.<br /> <br /> ಶಾಸಕ ಪ್ರಿಯಾಕೃಷ್ಣ, ಪಾಲಿಕೆ ಮಾಜಿ ಸದಸ್ಯ ಬಿ.ಕೃಷ್ಣಪ್ಪ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಪ್ಪ, ಮುಖಂಡ ಲಕ್ಷ್ಮಣ್ಗೌಡ, ಸಂಪತ್ ಇತರರು ಹಾಜರಿದ್ದರು.<br /> <br /> ಮುನೇಶ್ವರ ನಗರ ಬಡಾವಣೆ, ಕನಕನಗರ, ಪಟ್ಟೇಗಾರಪಾಳ್ಯ ಸೇರಿದಂತೆ ಹಲವಾರು ಬಡಾವಣೆಗಳ ಕಾರ್ಯಕರ್ತರಾದ ಅಶೋಕ್, ಮಂಜು, ವೇಲು, ಶಮೀರ್ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಂಗೇರಿ: </strong> `ಯಾರೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರೂ ಅಧಿಕಾರ ನಿರೀಕ್ಷಿಸದೆ ನಿಷ್ಠೆಯಿಂದ ದುಡಿದಾಗ ಉನ್ನತ ಸ್ಥಾನಗಳು ಅರಸಿಕೊಂಡು ಬರುತ್ತವೆ~ ಎಂದು ಶಾಸಕ ಎಂ.ಕೃಷ್ಣಪ್ಪ ಅಭಿಪ್ರಾಯಪಟ್ಟರು. <br /> <br /> ಮಾಗಡಿ ರಸ್ತೆಯ ಕಾವೇರಿಪುರ ರಾಜೀವ್ನಗರದ ಬಿಡಿಎ ಬಡಾವಣೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಂಡ ನಂತರ ಅವರು ಮಾತನಾಡಿದರು.<br /> <br /> `ಕಾಂಗ್ರೆಸ್ ಸಿದ್ದಾಂತ ನಂಬಿ ಪಕ್ಷ ಸೇರುವವರಿಗೆ ಸದಾ ಸ್ವಾಗತ ಕೋರಲಾಗುವುದು. ಪಕ್ಷದಲ್ಲಿ ಉತ್ತಮ ಸಂಘಟನೆ ಮಾಡಿದವರಿಗೆ ಉನ್ನತ ಸ್ಥಾನ ದೊರಕಿಸಿ ಕೊಡಲಾಗುತ್ತದೆ~ ಎಂದರು.<br /> <br /> ಶಾಸಕ ಪ್ರಿಯಾಕೃಷ್ಣ, ಪಾಲಿಕೆ ಮಾಜಿ ಸದಸ್ಯ ಬಿ.ಕೃಷ್ಣಪ್ಪ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಪ್ಪ, ಮುಖಂಡ ಲಕ್ಷ್ಮಣ್ಗೌಡ, ಸಂಪತ್ ಇತರರು ಹಾಜರಿದ್ದರು.<br /> <br /> ಮುನೇಶ್ವರ ನಗರ ಬಡಾವಣೆ, ಕನಕನಗರ, ಪಟ್ಟೇಗಾರಪಾಳ್ಯ ಸೇರಿದಂತೆ ಹಲವಾರು ಬಡಾವಣೆಗಳ ಕಾರ್ಯಕರ್ತರಾದ ಅಶೋಕ್, ಮಂಜು, ವೇಲು, ಶಮೀರ್ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>